ಈ ಬ್ಲಾಗ್ ಅನ್ನು ಹುಡುಕಿ

ಶನಿವಾರ, ಫೆಬ್ರವರಿ 8, 2020

ಕೀರ್ತನೆಗಳು

ನಿನ್ನ ಧ್ಯಾನವ ಮಾಡುತ್ತಾ...
-ಶ್ರೀ ವ್ಯಾಸರಾಯರು

ನಿನ್ನ ಧ್ಯಾನವನ್ನು ಮಾಡುತ್ತಿದ್ದರೂ ನನ್ನ ಮನಸ್ಸು ಬೇರೆ ಬೇರೆ ವಿಚಾರಗಳ ಕಡೆಗೆ ಆಸಕ್ತಿ ತೋರುತ್ತಿದೆ. ನಿನ್ನ ಕುರಿತು ನನ್ನ ಭಕ್ತಿ ಕಡಿಮೆ ಆಗುತ್ತಿದೆ ಆದ್ದರಿಂದ ಈ ಮನಸ್ಸನ್ನು ಬೇರೆಕಡೆಗೆ ಸೆಳೆಯದಂತೆ ಕರುಣಿಸು ಸಿರಿಕೃಷ್ಣರಾಯ ಎಂದು ಶ್ರೀವ್ಯಾಸರಾಯರು ಹಾಡುತ್ತಿದ್ದಾರೆ.

ಮನಸ್ಸನ್ನು ಕೇಂದ್ರೀಕರಿಸಿ ನಮ್ಮ ಗುರಿಯನ್ನು ತಲುಪುವ ಕುರಿತು ಈ ಕೀರ್ತನೆ ತಿಳಿಸುತ್ತದೆ.

ಗಂಡನು ಪ್ರಿಯನಾಗಿದ್ದರೂ ಬೇರೆ ಪುರುಷನನ್ನು ಇಷ್ಟ ಪಡುವಂತ ಕೆಟ್ಟ ಮನಸ್ಸು ನೀಡಬೇಡ.
ಕಿವಿಗೆ ಹಿತವಾದ ಒಳ್ಳೆಯ ಜೀವನ ಸಂದೇಶಗಳಂತಹ ತತ್ವಗಳಿದ್ದರೂ ಕೆಟ್ಟ ವಿಚಾರಗಳ ಕಡೆಗೆ ಈ ಮನಸ್ಸು ಸೆಳೆಯುತ್ತಿದೆ. ಮತ್ತೆ ಹಿತನುಡಿಗಳ ಕಡೆಗೆ ವಾಲಿಸು ನನ್ನ ಮನಸ್ಸುನ್ನು ಎಂದು ನಮ್ಮ ಚಂಚಲತೆಯನ್ನು ಸರಿಪಡಿಕೊಳ್ಳುವ ಕುರಿತು ಹೇಳುತ್ತಿದ್ದಾರೆ.

ನಿತ್ಯವೂ ಶ್ರೇಷ್ಠವಾದ ಆಹಾರ ಸೇವಿಸುತ್ತಿದ್ದರೂ ಈ ಮನಸ್ಸು ಹೆಂಡವನ್ನು ಚಿಂತಿಸಿ ಆಸೆಪಡುವಂತೆ, ಆನೆಯು ಶ್ರೇಷ್ಠನದಿಯಲ್ಲಿ ಸ್ನಾನಮಾಡಿ ಬಂದು ತುಂಬಾ ಆನಂದದಿಂದ ಕೆಸರನ್ನು ಮೈಮೇಲೆ ಎರಚಿಕೊಳ್ಳುವಂತೆ ಉತ್ತಮವಾದ ನಮ್ಮ ಗುಣವನ್ನು, ಮನಸ್ಸನ್ನು ಕೆಟ್ಟ ಆಲೋಚನೆ ಮೂಲಕ ಹಾಳು ಮಾಡಿಕೊಳ್ಳುತ್ತಿದ್ದೇವೆ. ಇದನ್ನು ನಿಯಂತ್ರಣ ಮಾಡುವ ಮೂಲಕ ನಮ್ಮ ಶ್ರೇಷ್ಠತೆ ಉಳಿಸಿಕೊಳ್ಳಬೇಕಿದೆ.

ಶ್ರೇಷ್ಠನಾದ ಗುಣಪೂರ್ಣನಾದ ಸಿರಿ ಕೃಷ್ಣರಾಯನೇ ನಿನ್ನ ಜೋಡಿಪಾದಗಳ ಧ್ಯಾನಿಸುತ್ತಲೇ ನನ್ನ ಮನಸ್ಸು ಚಂಚಲವಾಗದಂತೆ ಕರುಣಿಸಿ ಸ್ಥಿರಗೊಳಿಸು ಎಂದು ಶ್ರೀ ವ್ಯಾಸರಾಯರು ತಿಳಿಸಿದ್ದಾರೆ.


ಬೆಳಗುತಿದೆ ಬೆಳಗುತಿದೆ ಭಾನುವಿನ ಬೆಳಕು
- ತಿಮ್ಮಪ್ಪ ದಾಸ

ಬೆಳಕು - ಜ್ಞಾನ


ಸೂರ್ಯನ ಬೆಳಕು ಸರ್ವವನ್ನು ಹೊಳೆಯುಂತೆ ಮಾಡುತ್ತಾ ಬೆಳಗುತಿದೆ.

ಈ ಬೆಳಕು ಅಮಿತಾಂಡಕೋಟಿ ಎಂದರೆ ಅಳತೆಗೆ ಮೀರಿದ ಪ್ರಕಾಶವನ್ನು ಬೆಳಗುವಂತಹ ಬೆಳಕಾಗಿದೆ. ವಿಶ್ವವ್ಯಾಪಿ ಅಣುವಿನಿಂದ ಆಕಾಶದ ತನಕ ಎಲ್ಲಕ್ಕೂ ಬೆಳಕು ನೀಡುತ್ತಿದ್ದಾನೆ ಸೂರ್ಯ.

ಕತ್ತಲೆಯ ಗುಂಪುಗಳ ಇಲ್ಲವಾಗಿಸುವಂತಹ ಬೆಳಕು. ಅಂದರೆ ಬೆಳಕು ಇಲ್ಲಿ ಜ್ಞಾನದ ಸಂಕೇತ. ಅಜ್ಞಾನವನ್ನು ದೂರಮಾಡಲು ಜ್ಞಾನದ ಬೆಳಕು ಬೇಕು.
ಬೆಳಕು ಒಳ್ಳೆಯ ಮನಸ್ಸಿನ ರೂಪವಾಗಿ, ನಿರ್ಮಲ ಆಲೋಚನೆಯ ನೀಡುವ, ಶೋಭಿಸುವ ರೂಪದಲ್ಲಿ ಬೆಳಕು ಬರುತ್ತದೆ. ಜ್ಞಾನಿ ಯಾವಾಗಲೂ ತೇಜಸ್ಸು ತುಂಬಿರುತ್ತಾನೆ.

ಪರಸ್ಪರ ಮನೆಮನೆಗಳ, ಮನಮನಗಳ ಎದುರಾಗಿ, ಜೊತಯಾಗಿ ಬೆಳಕು ವಿಶ್ವಾಸ ತುಂಬುತ್ತದೆ.
ತಪಸ್ಸಿನಂತೆ ಕಲಿತವರ ಮನಸ್ಸಿನಲ್ಲಿ ಮುಖ್ಯ ಪಾತ್ರದಲ್ಲಿ ಬೆಳಕು ಎಂದರೆ ಜ್ಞಾನ ಕಾಣುತ್ತದೆ.
ಈ ಜ್ಞಾನವೆಂಬ ಬೆಳಕು ದೇವತೆಗಳು ತಾವೇ ಸಂಪಾದಿಸಿದ ಶ್ರೇಷ್ಠತೆಯಂತೆ ವಿಶೇಷವಾದುದು.
ಈ ಬೆಳಕಿಗೆ ಅಂತ್ಯವೂ, ಪ್ರಾರಂಭವೂ ಇರುವುದಿಲ್ಲ.

ಈ ಬೆಳಕು ನಮ್ಮಿಂದ ಹಲವು ಕಾರ್ಯಗಳನ್ನು ಮಾಡಿಸುತ್ತದೆ. ಅಷ್ಟೇ ಅಲ್ಲದೆ ಕಮಲದಂತೆ ಕಾರ್ಯದ ಮೂಲಕ ನಮ್ಮ ಕಶ್ಮಲತೆಯನ್ನು ಕಳೆದು ನಿರ್ಮಲವಾಗಿಸುತ್ತದೆ.
ಆಕಾಶದಂತೆ ಅಪರಿಮಿತ ದೂರದಲ್ಲಿ ನಮ್ಮ ಆಲೋಚನೆಗೂ ಮೀರಿ ಬಹು ಎತ್ತರದಲ್ಲಿ ಸದಾ ಶೋಭಿಸುತ್ತದೆ ಈ ಬೆಳಕು. ಈ ಜಗತ್ತಿನ ಸರ್ವ ಚಲನೆಯನ್ನು ನಮ್ಮ ಕಣ್ಣಿನ ಮೂಲಕ ಕಾಣಿಸುತ್ತದೆ. ಅರಿವುಂಟುಮಾಡುತ್ತದೆ.  ಜ್ಞಾನವೂ ಕೂಡ ಹೀಗೆ ಶ್ರೇಷ್ಠ.

ಯಾವುದೇ ಕಾರ್ಯಕ್ಕೆ ಬೆಳಕು ಕಾರಣವಾಗಿ ಕಾಣುತ್ತದೆ. ಈ ಭೂಮಿಯ ಜೀವಿಗಳಲ್ಲೇ ಅಡಗಿ ಯಾರನ್ನೂ ಮೀರದೆ ಜೊತೆಯಾಗಿರುತ್ತದೆ. ಬೆಳಕು ಮೂರು ಲೋಕಕ್ಕೂ ಪಾಪಗಳ ಅಳಿಸಿ ಮುಕ್ತಿ ನೀಡುತ್ತಾ ಸುಖವನ್ನು  ತರುತ್ತದೆ. ಪಾರಮಾರ್ಥಿಕವಾದ ಪರಬ್ರಹ್ಮ ಅಂದರೆ ಸರ್ವವನ್ನೂ ಶ್ರೇಷ್ಠವಾಗಿ ವಿಚಾರಮಾಡುವಂತಹ ದ್ದು ಈ ಬೆಳಕು ಎಂದರೆ ಜ್ಞಾನ ಎಂದರ್ಥ.

ಶ್ರೇಷ್ಠತೆಯಲ್ಲಿ ಪರಿಶುದ್ಧವಾಗಿ ನಮ್ಮ ಪಾಪಗಳನ್ನು ಅಂದರೆ ತಪ್ಪುಗಳನ್ನು ಇಲ್ಲವಾಗಿಸುವ(ನಾಶಮಾಡುವ) ಬೆಳಕು.
ಯಾರು ಈ ಜ್ಞಾನಕ್ಕೆ (ಬೆಳಕು) ಶರಣಾಗುವರೋ ಕಾಯುತ್ತಾ ಸುಲಭವಾದ ಸುಖವನ್ನು ನೀಡುತ್ತದೆ.
ತಿಮ್ಮಪ್ಪದಾಸರು ತಮ್ಮ ಕೀರ್ತನೆಯ ಅಂಕಿತ ದೇವರಾದ ತಿರುಪತಿಯ ವಾಸಿ ವರದ ವೆಂಕಟರಮಣನ ಹೆಸರಿನ ಉಚ್ಚಾರವೇ ಈ ಸೂರ್ಯನ ಬೆಳಕು ಎಂದಿದ್ದಾರೆ. ಅಂದರೆ ನಮ್ಮ ಭಕ್ತಿಯು ನಮ್ಮ ಸರ್ವಕಾರ್ಯಗಳಲ್ಲೂ ನಾವು ನಂಬುವ ದೇವರ ಮೇಲೆ ಎಷ್ಟು ಇರುತ್ತದೆಯೋ ಅಷ್ಟೇ ಪ್ರಮಾಣದಲ್ಲಿ ಇದ್ದರೆ ಎಲ್ಲಾ ಜ್ಞಾನಗಳು ಬೆಳಕಿನಂತೆ ಲಭಿಸುತ್ತವೆ. ಬದುಕನ್ನು ಬೆಳಗುತ್ತವೆ.






ವ್ಯಾಸರಾಯರ ಕುರಿತು ಮಾಹಿತಿ


ಸಂಪಾದಿಸಿ

ಜನ್ಮಸ್ಥಳ - ಮೈಸೂರು ಜಿಲ್ಲೆಯ ಬನ್ನೂರು. ವ್ಯಾಸರಾಯರ ತಂದೆ ರಾಮಾಚಾರ್ಯರು ಮತ್ತು ತಾಯಿಯ ಹೆಸರು ಸೀತಾಬಾಯಿ. ವ್ಯಾಸರಾಯರ ಪೂರ್ವಾಶ್ರಮದ ಹೆಸರು ಯತಿರಾಜ. ಅಬ್ಬೂರಿನ ಬ್ರಹ್ಮಣ್ಯತೀರ್ಥರಿಂದ ಸನ್ಯಾಸ ದೀಕ್ಷೆ ಸ್ವೀಕರಿಸಿದರೆಂದು ತಿಳಿದುಬರುತ್ತದೆ. ವ್ಯಾಸರಾಯರು ವಿಜಯ ನಗರ ಸಾಮ್ರಾಜ್ಯಕ್ಕೆ ರಾಜಗುರುಗಳಾಗಿದ್ದರು. ಮಠಾಧಿಪತಿಗಳಾಗಿ ಒಂದೆಡೆಗೆ ರಾಜಗುರುಗಳು ಎನ್ನಿಸಿದ್ದರೆ, ಮತ್ತೊಂದೆಡೆ ಧರ್ಮೋಪದೇಶಕರೂ ಆಗಿದ್ದರು. ಸಾಳುವ ನರಸಿಂಹನ ಆಳ್ವಿಕೆಯ ಕಾಲದಿಂದ, ಅಚ್ಚುತರಾಯನ ಆಳ್ವಿಕೆಯವರೆಗೆ, ಸುಮಾರು ಅರವತ್ತು ವರ್ಷಗಳ ಕಾಲ ಸಕಲ ರಾಜಮಹಾರಾಜರಿಂದ ಸನ್ಮಾನಿಸಲ್ಪಟ್ಟಿದ್ದರು. ವಿಜಯನಗರದ ಪ್ರಖ್ಯಾತ ದೊರೆಯೆನಿಸಿದ್ದ ಕೃಷ್ಣದೇವರಾಯನು ವ್ಯಾಸರಾಯರನ್ನು ಗುರುಗಳಾಗಿ ಸ್ವೀಕರಿಸಿದ್ದನೆಂದು ತಿಳಿದುಬಂದಿದೆ.

ಕಾಲವಾದ ಸ್ಥಳ ಮತ್ತು ದಿನಸಂಪಾದಿಸಿ

ವ್ಯಾಸರಾಯರು ೧೫೪೮ , ಫಾಲ್ಗುಣ ಮಾಸದ ಚತುರ್ಧಿ ದಿನದಂದು, ಹಂಪೆ ಯಲ್ಲಿ ಕಾಲವಾದರು. ಇವರ ಬೃಂದಾವನವು ಆನೆಗೊಂದಿಯ ಸಮೀಪವಿರುವ ತುಂಗಭದ್ರಾ ದ್ವೀಪದಲ್ಲಿದೆ. ಈ ಸ್ಥಳವನ್ನು ನವ ಬೃಂದಾವನ ಎಂದು ಕರೆಯಲಾಗುತ್ತದೆ.

ಕೃತಿಗಳುಸಂಪಾದಿಸಿ

ದಾಸಸಾಹಿತ್ಯ ಪರಂಪರೆಯನ್ನು ಶ್ರೀಪಾದರಾಜರ ತರುವಾಯ ಬೆಳೆಸಿದವರೆಂದರೆ ವ್ಯಾಸರಾಯರು. ಈವರೆಗೆ ವ್ಯಾಸರಾಯರು ರಚಿಸಿರುವ ೧೧೯ ಕೀರ್ತನೆಗಳು ಲಭ್ಯವಾಗಿವೆ. ಇದರಲ್ಲಿ ಉಗಾಭೋಗಗಳು ಸೇರಿವೆ. ಅಂಕಿತ ಪ್ರಧಾನ ಪಧ್ಧತಿ ಇವರಿಂದಲೇ ಪ್ರಾರಂಭವಾಯಿತು. ಶ್ರೀಕೃಷ್ಣ ಎಂಬುದು ವ್ಯಾಸರಾಯರ ಅಂಕಿತ. 



ಶಿಶುನಾಳ ಶರೀಫರು ತತ್ವಪದಗಳ ರೂವಾರಿ.

ಜನನಸಂಪಾದಿಸಿ

ಶಿಶುನಾಳ ಶರೀಫರು ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಶಿಶುವಿನಹಾಳ ಗ್ರಾಮದಲ್ಲಿ ಕ್ರಿ.ಶ. ೧೮೧೯ ಮಾರ್ಚ ೭ರಂದು ಜನಿಸಿದರು. ಇವರ ತಂದೆ ದೇವಕಾರ ಮನೆತನದ ಇಮಾಮ ಹಜರತ ಸಾಹೇಬರು ಹಾಗು ತಾಯಿ ಹಜ್ಜೂಮಾ. ಇವರ ಪೂರ್ಣ ಹೆಸರು ಮಹಮ್ಮದ ಶರೀಫ. ಮುಲ್ಕಿ ಪರೀಕ್ಷೆ ಪಾಸು ಮಾಡಿದ ಬಳಿಕ ಶರೀಫರು ಕೆಲ ಕಾಲ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರೆಂದು ಕೆಲಸ ಮಾಡಿದರು.

ವಿದ್ಯಾಭ್ಯಾಸಸಂಪಾದಿಸಿ

ಆದರೆ ಮುಂದೆ ಈ ಕೆಲಸವನ್ನು ಬಿಟ್ಟು ಬಿಟ್ಟರು. ಈ ಸಮಯದಲ್ಲಿ ಶರೀಫರಿಗೆ ಕಳಸದ ಗುರು ಗೋವಿಂದಭಟ್ಟರಿಂದ ಅನುಗ್ರಹವಾಯಿತು. ಮಗನು ಕೆಲಸವನ್ನು ಬಿಟ್ಟು ಆಧ್ಯ್ಶಾತ್ಮಚಿಂತನೆಯಲ್ಲಿ ತೊಡಗಿಸಿಕೊಂಡದ್ದರಿಂದ ಶರೀಫರ ತಂದೆ ತಾಯಿ ಅವರಿಗೆ ಕುಂದಗೋಳ ನಾಯಕ ಮನೆತನದ ಫಾತಿಮಾ ಎಂಬ ಕನ್ಯೆಯೊಂದಿಗೆ ಮದುವೆ ಮಾಡಿದರು.
ಕೆಲವು ಸಮಯದ ನಂತರ ಇವರಿಗೆ ಒಂದು ಹೆಣ್ಣು ಮಗು ಜನಿಸಿತು. ದುರ್ದೈವದಿಂದ ಕೆಲವು ತಿಂಗಳುಗಳಲ್ಲಿ ಹೆಂಡತಿ ತೀರಿಕೊಂಡರು. ಶರೀಫರಿಗೆ ಜೀವನದಲ್ಲಿ ಬೇಸರವಾದರೂ, ದೇವರಲ್ಲಿ ನಂಬಿಕೆ ಉಳಿದಿತ್ತು. ಶರೀಫರು ಆ ಬಳಿಕ ತಮ್ಮ ಜೀವನವನ್ನು ಆಧ್ಯಾತ್ಮಸಾಧನೆಗೆ ಮುಡಿಪಿಟ್ಟರು. ತಾಳ್ಮೆಯಿಂದ ಸಜ್ಜನರ ಹಾಗೂ ವಿದ್ಯಾವಂತರ ಸಹವಾಸದಲ್ಲಿಯೇ ಕಾಲ ಕಳೆಯುತ್ತಾ ಬಂದರು. ತಮಗೆ ಸರಿಯಾಗಿ ಮಾರ್ಗದರ್ಶನ ನೀಡುವಂತಹ ಗುರುವಿಗಾಗಿ ಅವರು ಊರೂರು ಅಲೆದರು.
ಕೊನೆಗೆ ಗೋವಿಂದಭಟ್ಟ ಎಂಬ ಗುರುವಿನಲ್ಲಿ ಸರಿಯಾದ ಮಾರ್ಗದರ್ಶನ ದೊರೆಯಿತು. ಯಾವುದೇ ಮತತ ಬಗ್ಗೆ ಮೂಡನಂಬಿಕೆ ಇಲ್ಲದ ಈ ಗುರುಗಳು ಶರೀಫರಿಗೆ ತುಂಬಾ ಮೆಚ್ಚುಗೆಯಾದರು. ಗುರುಶಿಷ್ಯರಿಬ್ಬರೂ ಮಸೀದಿಗಳಿಗೆ, ದೇವಾಲಯಗಳಿಗೆ ಸಂದರ್ಶನಕ್ಕಾಗಿ ಹೊರಟರು. ಶರೀಫರು ಅನೇಕ ಹಾಡುಗಳನ್ನು ರಚಿಸಿ ಹಾಡಿದರು. ಈ ಗುರುಗಳ ಜೊತೆಗೆ ನವಲಗುಂದದ ನಾಗಲಿಂಗಮತಿ ಮತ್ತು ಗಂಗೆಯ ಮಡಿವಾಳಪ್ಪ ಎಂಬುವರು ಸಹ ಶರೀಫರ ಮೇಲೆ ಹೆಚ್ಚಿನ ಪರಿಣಾಮ ಬೀರಿದರು.
ಶರೀಫರು ಹಾಡಿದ ಪದಗಳು ಧಾರವಾಡ ಜಿಲ್ಲೆಯ ಆಡುಭಾಷೆಯ ಶೈಲಿಯಲ್ಲಿವೆ. ಈ ಪದಗಳಲ್ಲಿ ಕೆಲವು ದೇವತಾಸ್ತುತಿಯ ಪದಗಳಾದರೆ, ಇನ್ನು ಕೆಲವು ಪದಗಳು ತತ್ವಬೋಧನೆಯ ಪದಗಳಾಗಿವೆ.ಹೆಚ್ಚಿನ ಪದಗಳು ಕನ್ನಡದಲ್ಲಿ ಇದ್ದರೂ ಸಹ ಕೆಲವು ಪದಗಳು ಉರ್ದು ಭಾಷೆಯಲ್ಲಿವೆ.
ಹೊಸಗನ್ನಡ ಅರುಣೋದಯ ಸಾಹಿತ್ಯದ ಮುಂಬೆಳಗಿನ ಕಾಲದಲ್ಲಿ ತಮ್ಮ ಅನುಭಾವಕಾವ್ಯದ ಹೊಂಗಿರಣವೊಂದನ್ನು ಹಾಯಿಸಿದ ಪ್ರಸಿದ್ಧ ಅನುಭಾವಿ ಕವಿ. ಇವರ ಮೊದಲಿನ ಹೆಸರು ಮಹಮ್ಮದ್ ಶರೀಫ್. ಶಿಗ್ಗಾವಿ ತಾಲ್ಲೂಕಿನ ಶಿಶುವಿನಾಳ ಇವರ ಜನ್ಮಸ್ಥಳ. 1819 ಮಾರ್ಚ್ 7 ರಂದು ಜನಿಸಿದರು. ಕನ್ನಡ ಮುಲ್ಕೀ ಪರೀಕ್ಷೆಯವರೆಗೆ ಓದಿದ ಇವರು, ಆರಂಭದಲ್ಲಿ ಕೆಲಕಾಲ ಹಳ್ಳಿಯ ಶಾಲೆಯೊಂದರಲ್ಲಿ ಶಿಕ್ಷಕರಾಗಿದ್ದರಾದರೂ ಬೇಗನೆ ಅದರ ಹಂಗು ಹರಿದುಕೊಂಡು ಆಧ್ಯಾತ್ಮಸಾಧನೆಗೆ ತಮ್ಮನ್ನು ಸಮರ್ಪಿಸಿ ಕೊಂಡರು.
ಅಭಿಜಾತ ಕಲಾವಿದರಾಗಿದ್ದ ಶಿಶುನಾಳರು ಚಿಕ್ಕಂದಿನಲ್ಲಿಯೇ ಹಳ್ಳಿಯ ಜಾತ್ರೆ ಉತ್ಸವಗಳಲ್ಲಿ ಶರಣರ ವಚನಗಳನ್ನೂ ಅನುಭಾವ ಪದಗಳನ್ನೂ ಹಾಡುತ್ತ, ಬಹುರೂಪಿಗಳ ಹಾಗೆ ವಿವಿಧ ವೇಷ ಹಾಕುತ್ತ, ಬಗೆಬಗೆಯ ಬಯಲಾಟಗಳಲ್ಲಿ ಪಾತ್ರವಹಿಸುತ್ತ ತಮ್ಮ ಕಲೆಗಾರಿಕೆಯನ್ನು ಜನಮನದ ವಿಲಾಸ-ವಿಕಾಸಗಳಿಗೆ ಮುಡಿಪಿಡಲು ಮೊದಲುಮಾಡಿದರು. ಮೊಹರಂ ಪರ್ವ ಸಮಯದಲ್ಲಿ ತಲೆ ಎತ್ತುವ ಕರ್ಬಲಾ ಮೇಳಗಳಿಗಾಗಿ ರಿವಾಯತ್ ಪದ ರಚಿಸಿಕೊಟ್ಟರು, ಲಾವಣಿಗಳನ್ನೂ ಬರೆದರು. ಹೀಗೆ ನಿಧಾನವಾಗಿ ಸಾಹಿತ್ಯಪಥದಲ್ಲಿ ತಮ್ಮ ಹೆಜ್ಜೆ ಮೂಡಿಸಿ, ಮುಂದಿನ ಸೃಷ್ಟಿಗೆ ಅಗತ್ಯ ವಾದ ಪೂರ್ವಸಿದ್ಧತೆ ಮಾಡಿಕೊಂಡರು. ಕಳಸದ ಗುರುಗೋವಿಂದ ಭಟ್ಟರು, ಅಂಕಲಗಿಯ ಅಡವಿ ಸ್ವಾಮಿಗಳು, ಗರಗದ ಮಡಿವಾಳಪ್ಪ ನವರು, ನವಿಲುಗುಂದದ ನಾಗಲಿಂಗಪ್ಪನವರು, ಹುಬ್ಬಳ್ಳಿಯ ಸಿದ್ಧಾರೂಢ ಸ್ವಾಮಿಗಳು ಮುಂತಾದ ಸಮಕಾಲೀನ ಸಾಧುಸತ್ಪುರುಷರ ಸಾನ್ನಿಧ್ಯ, ಸಂಸರ್ಗಗಳಿಂದ ಅನುಭಾವಿಯಾಗಿ ಮಾಗಿದರು.
ಕನ್ನಡ ಸಂಸ್ಕಂತಿಯ ಸರ್ವಧರ್ಮಸಹಿಷ್ಣುಭಾವ ಮತ್ತು ಆಧ್ಯಾತ್ಮಿಕ ಪರಂಪರೆಯ ಸರ್ವಸಮನ್ವಯ ಅನುಭಾವ ಸಂಪತ್ತನ್ನು ಅರಗಿಸಿಕೊಂಡು ಇವರು ರಚಿಸಿದ ಅನುಭವ ಪದಗಳು ಆಪ್ತವಾದ ಕಳಕಳಿಗೆ ನೆಲೆ ಯಾಗಿವೆ. ಹಳ್ಳಿಯ ಬಾಳಿನ ದಿನದಿನದ ಬದುಕಿನಲ್ಲಿ ತಮ್ಮ ಕಣ್ಮನಗಳನ್ನು ಸೆಳೆದ ಒಂದೊಂದು ಸನ್ನಿವೇಶ-ಸಂಗತಿ, ವಸ್ತು-ವ್ಯಕ್ತಿ, ಪಶು-ಪಕ್ಷಿ ಮೊದಲಾದವುಗಳನ್ನೇ ಒಂದು ರೂಪಕವನ್ನಾಗಿಯೋ ದೃಷ್ಟಾಂತವ ನ್ನಾಗಿಯೋ ಪ್ರತಿಮೆಯನ್ನಾಗಿಯೋ ಮಾಡಿಕೊಂಡು ಅವುಗಳಲ್ಲಿ ತಮ್ಮ ಅನುಭವದ ಬೆಳಕು ಮತ್ತು ಅನುಭಾವದ ಬೆಳಗನ್ನು ವರ್ಣಮಯವಾಗಿ ಹೇಳಿದ್ದಾರೆ. ತಮ್ಮ ಜೀವಮಾನದುದ್ದಕ್ಕೂ ಇವರು ಬರೆದ ಹಾಡು, ಒರೆದ ಪಾಡು ಒಂದೇ ಆಗಿದೆ. ಬೋಧ ಒಂದೇ, ಬ್ರಹ್ಮನಾದ ಒಂದೇ ಎಂಬುದು ಅವರ ಬೀಜಮಂತ್ರವಾಗಿದ್ದು ನಡಿಯೊ ದೇವರ ಚಾಕರಿಗೆ, ಮುಕ್ತಿಗೊಡೆಯ ಖಾದರ ಲಿಂಗ ನೆಲಸಿರ್ಪ ಗಿರಿಗೆ ಎಂಬುದು ಇವರು ತಮ್ಮ ಮನಕ್ಕೂ ಜನಕ್ಕೂ ಕೊಟ್ಟ ಜೀವಾಳದ ಕರೆಯಾಗಿದೆ. ಇವರ ದೃಷ್ಟಿಯಲ್ಲಿ ಸನಾತನ ವೈದಿಕ ಮತ ಎತ್ತಿಹಿಡಿಯುವ ಬ್ರಹ್ಮತತ್ತ್ವ, ತಮ್ಮ ಪರಿಸರದಲ್ಲಿ ಪ್ರಭಾವಕಾರಿಯಾಗಿದ್ದ ವೀರಶೈವ ಮತದ ಲಿಂಗತತ್ತ್ವ ಹಾಗೂ ತಮ್ಮ ಮನೆತನಕ್ಕೆ ಪೂಜ್ಯವಾಗಿದ್ದ ಹುಲಗೂರ ಖಾದರಶಾ ಸಾಧುವಿನ ಸಮಾಧಿತತ್ತ್ವ-ಇವೆಲ್ಲವೂ ಮೂಲತಃ ಒಂದೇ. ಇದರಿಂದಾಗಿ ಇವರು ಸರ್ವಧರ್ಮಸಮನ್ವಯದ ಉಜ್ಜ್ವಲ ಮೂರ್ತಿಯಾಗಿ ಹಿಂದು-ಮುಸ್ಲಿಮ್ ಬಾಂಧವ್ಯದ ಧವಲಕೀರ್ತಿಯಾಗಿ ಉತ್ತರ ಭಾರತದ ಮಹಾತ್ಮ ಕಬೀರರಂತೆ ಉತ್ತರ ಕರ್ನಾಟಕದ ಭಾಗದಲ್ಲಿ ಜನಮನದ ಗದ್ದುಗೆ ಏರಿದರು. ಇದಲ್ಲದೆ ತಮ್ಮ ಅಭಿವ್ಯಕ್ತಿಯಲ್ಲಿ ಅಳವಡಿಸಿಕೊಂಡ ಜನಪದ ಭಾಷೆಯ ಸೊಗಡು-ಗತ್ತು, ಗ್ರಾಮೀಣ ಸಂಗೀತದ ಲಯ-ಲಾಸ್ಯಗಳಿಂದಾಗಿಯೂ ಇವರು ಜನಮನವನ್ನು ಸೂರೆಗೊಂಡರು. ಹೀಗೆ ಆಧ್ಯಾತ್ಮಿಕ ಸಾಧನೆಯ ಸಿದ್ಧಿಯನ್ನು ಮುಟ್ಟಿದಮೇಲೆ ತಮ್ಮಲ್ಲಿ ಬಂದವರಿಗೆ ಧರ್ಮನೀತಿ ಬೋಧೆ ಮಾಡಲೆಂದು ಇವರು ತಮ್ಮ ಮನೆ ಹತ್ತಿರದಲ್ಲಿ ಕುಳಿತುಕೊಳ್ಳುತ್ತಿದ್ದ ಕಟ್ಟೆಯೊಂದು ಇಂದಿಗೂ ಇದ್ದು ಬೋಧಪೀಠ ಎಂಬುದಾಗಿ ಪೂಜಿಸಲ್ಪಡುತ್ತದೆ.