ಈ ಬ್ಲಾಗ್ ಅನ್ನು ಹುಡುಕಿ

ಸೋಮವಾರ, ಅಕ್ಟೋಬರ್ 3, 2016

@4
ರನ್ನ ಕವಿ ಪ್ರಶಸ್ತಿ
ಪ್ರಸ್ತುತ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಗೊಳಿಸಿರುವ ಈ ಕೃತಿಯನ್ನು 1928ರ ಕಾಲಘಟ್ಟದಲ್ಲಿ ಮೈಸೂರಿನ ವಿಶ್ವವಿದ್ಯಾಲಯ ಸಂಘ ಪ್ರಕಟಗೊಳಿಸಿತ್ತು. ಈ ಕೃತಿಗೆ ತನ್ನದೇ ಆದ ಐತಿಹಾಸಿಕ ಮಹತ್ವವಿದೆ. ಒಬ್ಬ ಕವಿಯನ್ನು ಕುರಿತು ಹಲವು ಸಾಹಿತ್ಯ ವಿದ್ವಾಂಸರು ಲೇಖನಗಳನ್ನು ರಚಿಸಿ ಮೊದಲಬಾರಿಗೆ ಕವಿ ಹಾಗೂ ಕೃತಿ ಕೇಂದ್ರಿತ ವಿಮರ್ಶೆಯನ್ನು ಮಂಡಿಸಿದ್ದಾರೆ. ಅಂತಹ ಅಧ್ಯಯನಕ್ಕೆ ಒಳಗಾದ ಕನ್ನಡದ ಮೊದಲ ಕವಿ ರನ್ನನಾಗಿದ್ದಾನೆ. ಪಂಪ ಕವಿ ಕುರಿತು ಇದೇ ಮಾರ್ಗದಲ್ಲಿ ಮುಳಿಯ ತಿಮ್ಮಪ್ಪಯ್ಯ 1938ರಲ್ಲಿ ನಾಡೋಜ ಪಂಪ ಕೃತಿ ಹೊರತಂದರು.  ಮುಖ್ಯವಾಗಿ ಕೃತಿ ವಿಮರ್ಶೆ ನೀಡುವುದು  ಇಲ್ಲಿನ ಉದ್ದೇಶವಲ್ಲ. ಮುಖ್ಯವಾಗಿ ರನ್ನಕವಿ ಪ್ರಶಸ್ತಿ ಕೃತಿಗೆ ಬರೆದಿರುವ ಮುನ್ನುಡಿ ಬರಹ ಶತಮಾನಕೂ ಸಲ್ಲುವ ಸಾಹಿತ್ಯ ವ್ಯಾಖ್ಯಾನವನ್ನು ಬಿ.ಎಂ.ಶ್ರೀ ಕಂಠಯ್ಯ ನೀಡಿದ್ದಾರೆ. ವಿಮರ್ಶೆ ಎಂದರೇನು?, ವಿಮರ್ಶಕನು ಯಾವ ಜ್ಞಾನವನ್ನು ಹೊಂದಿರಬೇಕು?, ಸಾಹಿತ್ಯ ಸೃಷ್ಠಿಗೆ ಇರಬೇಕಾದ ಭಾಷಾ ಚಿಂತನೆ., ಉತ್ತಮ ಸಾಹಿತ್ಯ ಗುರ್ತಿಸುವಲ್ಲಿ ವಿಮರ್ಶಕನ ಪಾತ್ರ, ಈ ಅಂಶಗಳು ಚರ್ಚೆಯಾಗಿವೆ. “ಕನ್ನಡ ಕಾವ್ಯ ರಾಶಿಯನ್ನು ಹೊರಕ್ಕೆ ತಂದು ಹೆಮ್ಮೆಪಟ್ಟದ್ದಾಯಿತು. ಈಗ ಬೇಕಾಗಿರುವುದು ಅದರ ಯೋಗ್ಯತೆಯನ್ನು ಗೊತ್ತು ಮಾಡುವ ವಿಮರ್ಶೆ. ಜಳ್ಳನ್ನು ತೂರಿ, ಕಾಳನ್ನು ತುಂಬಿಕೊಳ್ಳಬೇಕಾಗಿದೆ ಈಗ, ಸಾಹಿತ್ಯ ಕಲಾ ಪುತ್ರರ ಆತ್ಮ ಪುಷ್ಟಿಗಾಗಿ”.
(ಕೃತಿ ಕುರಿತ ಅಧ್ಯಯನ ನನ್ನ ‘ವಿಮರ್ಶೆಯ ಕಾವು’ ಲೇಖನದಲ್ಲಿ ತಿಳಿಯಬಹುದು)

 ಕೈಬುಟ್ಟಿಯ ಕ ನಸುಗಳು


ವಿನಃ ನಾಯಕ
      ವಿನಾಯಕನನ್ನು ದೇವರಿಗೆಲ್ಲಾ ಮೊದಲ ಪೂಜಿತನೆಂದುನೆಂದು ಧರ್ಮ ರೂಪಿಸಿಕೊಂಡಿದ್ದೇವೆ. ಅಂತೆಯೇ ವರ್ಷಕ್ಕೊಮ್ಮೆ ತಾಯಿ ಮಗನ ಪೂಜಿಸಿ ಹರ್ಷ ಪಡುತ್ತೇವೆ.
     ಅತ್ಯಂತ ಹೆಚ್ಚಾಗಿ ಸಮಾನ ಭಕ್ತಿ, ಶ್ರದ್ಧೆ ಪಡೆಯುವ ದೇವರು ವಿನಾಯಕನೇ ಇರಬೇಕು. ಆದರೇ ಕಡುಕಷ್ಟವಯ್ಯಾ ನಿನ್ನ ಆರಾಧನೆಯೆಂದು ಒಂದು, ಮೂರು, ಐದು, ಹನ್ನೊಂದು ಮತ್ತೆ ಊರಿನ ಭಕ್ತರು ಕಾಣಿಕೆ ಹೆಚ್ಚಿದಂತೆ ಬೆಸಸಂಖ್ಯೆಯ ದಿನದೂಡಿ ಸಂಭ್ರಮಿಸಿ, ಕೆಲವು ಕಡೆ ಆಟ, ಹಾಡು ಎಂದಾದರೆ ಮತ್ತೆ ಅದೇ ಮಹನೀಯರು ಸಿನಿಮಾ ಹಾಡಿಗೆ ಹುಚ್ಚರಂತೆ ಒನ್ಸಮೋರ್ ತೆಲುಗು ಅನ್ನುವ, ನಿದ್ರೆಯ ಪಾನಂಧತೆಯಲ್ಲೇ ನೀರಿನೊಳಗೆ ಗಣಪತಿ ಬಪ್ಪ ಮೋರಿ ಯಾ ಅನ್ನುವ ಭಕ್ತರ ಬೇಡಿದ್ದನೇ ಕೊಡುವ ಈ ವಿನಾಯಕ ವಿನಃ ನಾಯಕನೇ ಇರಬೇಕು. ಎ. ಎನ್ ಮೂರ್ತಿರಾವ್ ದೇವರು ಕೃತಿ ರಚಿಸಿದ್ದು ಸಾರ್ಥಕವೇ? ಅದನ್ನು ಓದಿ ಚೆಂದ ಈ ಚಂದ ಲೈಫ್ ಅನ್ನುಕೊಂಡವರ ಅವರವರ ವಿನಾಯಕನೇ ಕಾಪಡಬೇಕು.
ತಿಲಕ್ ಅವರಿಗೆ ಕಾಲಜ್ಞಾನ ತಿಳಿದಿದ್ದರೆ ಸ್ವಾತಂತ್ರ್ಯ ಸಂಘಟನೆಗೆ ಬೇರೆಯೇ ಯೋಚಿಸುತ್ತಿದ್ದರು ಅಲ್ಲವೇ!
ಗುರುಸಮಾಜ ಪರಿವರ್ತನ
       ಸಂವಿಧಾನದ ಪೀಠಿಕೆಯಲ್ಲೇ ಜಾತ್ಯಾತೀತ ಘೋಷಿಸಿಕೊಂಡ ಸರ್ವಧರ್ಮ ಅಭಿವೃದ್ಧಿಶೀಲ ಭಾರತೀಯರು ನಾವು.
ಜಾತಿ ಕಾಲಂ ಇಲ್ಲದ ಯಾವುದಾದರೂ ಅಪ್ಲಿಕೇಷನ್ ಉಂಟೇ! ಜಾತಿ ಸಂಬಂಧ ಅನ್ನೋ ಕರಳು ಜೀವಾತ್ಮಕ ಒಗ್ಗಟ್ಟಿನ ಸಂಕೇತವಾಗಿ ಪರಂಪರೆಯಿಂದ ಬಂದಿರೊದು ಸಹಜ.
ಜಾತಿ ನಾಶವಾಯಿತು
ತೊಡುವ ವೇಷವಾಯಿತು
ಅನ್ನೋ ತರಾ ತರಗತಿ ಗುರುಗಳ ಬದುಕು ಕೂಡ. ಜಾತಿ ಧರ್ಮದ ಆಚೆ ನಿಂತು ಯೋಚಿಸೋ ಪಾಠಗಳನ್ನೇ ಭ್ರಮಾಪತಂಗಗಳಿಗೆ ರಸವತ್ತಾಗಿ ಉಣಬಡಿಸೊ ಗುರುಗಳು ‘ಎಸ್ಸಿ ಎಸ್ಟಿಯರೋ ಸ್ವಲ್ಪ ಎದ್ದು ನಿಲ್ರಪ್ಪಾ ನಿಮ್ಮ ಲಿಸ್ಟ್ ಬರಕೋಬೇಕು’ ಅನ್ನೋ ಜ್ಯಾತ್ಯತೀತತೆ ಗುರುವೃತ್ತಿ ಸಮೀಕ್ಷೆ ಫಾರಂ ಹೊತ್ತು ಮನೆ ಮನೆ ಅಲೆದು ಜಾತಿ ಆದಾಯ ಬರೆದು ಸುಸ್ತಾದವರ ಕಥೆಯನ್ನಾದರೂ ಪಠ್ಯ ಮಾಡಬಾರದೆ!
ಜಾತಿನೂ ಕೆಲವರಿಗೆ ಲಾಭ ಮಾಡೋದಾದ್ರೆ ಬಲಿ ಆಗೋ ಪ್ರಾಣಿ ಯಾವುದಾದ್ರೆನು.. ಅಲ್ಲವೇ!
ಆತ್ಮ -ಜ್ಞಾನ
      ಆತ್ಮ ಎಂಬ ವಿಚಾರ ಒಂದು ಪಂಥಕ್ಕೆ ಅನ್ನುವ ಮಾತಾಗಿದೆ. ಸದಾ ವೃತ್ತಿಯಲ್ಲೆ ತೊಡಗಿ ಆ ಜಂಜಾಟಕ್ಕೆ ಲೀನವಾದವರ ಮುಂದೆ ಇದೊಂದು ಒಣ ಹರಟೆ. ಆದರೆ ಅವರ ಬದುಕೆ ನಿಜವಾದ ಆತ್ಮಜ್ಞಾನ ಅಂತ ತಿಳಿಸೋದು ಹೇಗೆ! ನಮ್ಮ ಭಾಷಣಕಾರರು ವೇದಿಕೆಯಲ್ಲೇ ಚಿಂತಿಸೋದು ಆದ್ರೆ ಆತ ಇಲ್ಲಿಗೆ ಬರಲಾರ.
ಸಿನಿಮಾ ಹಿಂದೆ
      ಸಿನಿಮಾ ಅನ್ನೋ ಬಣ್ಣದ ಲೋಕದ ಹಿಂದೆ ಸಾವಿರಾರು ಜನ ಪರಿಶ್ರಮ ಇದೆ ಅಂತ ಎಲ್ಲರಿಗೂ ಗೊತ್ತಾಗಬಹುದು. ಆದ್ರೆ ಅವರ್ಯಾರು ಮುಖ್ಯ ಆಗ್ಲೇಯಿಲ್ಲ. ಕೆಲವರು ಕಾಣ್ತಾರೆ ಕೆಲವರು ಕಾಣೋಲ್ಲ. ಇವರೆಲ್ಲಾ ಕಾವಲುಗಾರ ಇದ್ದಾಂಗೆ ದೇಶ ಆಗ್ಲಿ ಮನೆ ಆಗ್ಲಿ. ಬಿ.ಎಂ ಪುಟ್ಟಯ್ಯ ಗುರುಗಳು ಪಾಠದಲ್ಲಿ ಹೇಳಿದ್ದು ನೆನಪಿದೆ ರಾಜನ ಹೊತ್ತು ಕುದುರೆ ಬರುತ್ತೆ ಹೊರೆತು ರಾಜ ಎಂದಿಗೂ ಬರಲಾರ ಅವನು ಕುಳಿತಿರುತ್ತಾನೆ. ಸಮಾಜದ ರಚನೆಯೇ ಹೀಗೆ ಕಾಣುತ್ತೆ ಅನಿಸುತ್ತದೆ.
ಭಾಷೆ
     ನಾವು ಕಲಿಯುವ ಭಾಷೆಗೆ ಇದೇ ಸರಿಯಾದ ಉತ್ತರ ಅಂತ ಹೇಳಿಕೊಂಡು ಬರಲಾಗುತ್ತಿದೆ. ನಾವು ಕೊದುವ ಹೆಸರು, ಸಂಖೇತ, ಕಾರ್ಯ ಇದೆಲ್ಲಾ ನಾವು ಗ್ರಹಿಸಿರೋ ರೀತಿ ಅಲ್ಲವೆ, ಇದು ತಿಳಿದಿದ್ದರೂ ಪರಂಪರೆಯಂತೆ ಮುಂದುವರೆಸುತ್ತಿದ್ದೇವೆ. ಗ್ರಹಿಕಯಲ್ಲೇ ವಿಶ್ವದ ವಿಶ್ವಾಸ ಗಳಿಸೋ ಅದಷ್ಟೋ ಅಂಧರ ಗ್ರಹಿಕೆಗಳಿಗೆ ನಮ್ಮ ಕಲ್ಪನಾ ಭ್ರಮೆಗಳನ್ನೇ ಹೇರುತ್ತಿದ್ದೇವೆ ಅನಿಸುವುದಿಲ್ಲವೇ. ಬದಲಿ ಯೋಚಿಸಬಹುದು ಅನಿಸಿದರೂ ಅದು ಕೂಡ ಅಮುಖ್ಯ ಅನಿಸಬಹುದು ಎಕೆಂದರೆ ಕಾರ್ಯ ಮುಖ್ಯವೇ ಹೊರೆತು ವಸ್ತು.ವ್ಯಕ್ತಿ.ಹೆಸರು ಇವೆಲ್ಲಾ ಈ ಅಲೋಚನೆಯಲ್ಲಿ ಶೂನ್ಯ ಆಗಬಹುದು.
ಮಗುವಿನ ಆಯ್ಕೆ
      ಮಕ್ಕಳ ಆಯ್ಕೆಯ ಸ್ವಾತಂತ್ರವನ್ನು ನಾವು ದೊಡ್ಡವರು, ತಿಳಿದವರು, ಏನೇನೆಲ್ಲಾ ಭಾವನೆಗಳೊಂದಿಗೆ ಕಿತ್ತುಕೊಂಡು ನಮ್ಮ ಭ್ರಮೆಗಳನ್ನೆ ಹೇರುತ್ತಿದ್ದೇವೆ ಅನಿಸುತ್ತದೆ. ಮಕ್ಕಳು ತಮಗಿಷ್ಟದ ಹೆಸರು, ಧರ್ಮ-ಜಾತಿ, ಬದುಕುಗಳನ್ನು ಸಮಾಜಮುಖಿಯಾಗಿ ಪ್ರೌಢವಾಸ್ಥೆಯ ನಂತರ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ ನೀಡಬಹುದಲ್ಲವೇ.. ಮನುಷ್ಯ ಪ್ರಾಣಿ ಬಿಟ್ಟು ಉಳಿದೆಲ್ಲಾ ಪ್ರಾಣಿಗಳು ಸಾಮಾನ್ಯವಾಗಿ ನೀಡಿರಬಹುದೆನಿಸುತ್ತದೆ. ಆದರೆ ಇತ ಮನುಷ್ಯ, ಸೃಷ್ಠಿಕರ್ತ ಅಷ್ಟಾದರೂ ಹಕ್ಕು ಬೇಡವೆ! ಹೀಗೂ ಅನಿಸಬಹುದು. ಕೆಲವರಿಗೆ ಇದು ಕರ್ತವ್ಯ.. ಹಲವರಿಗಿದು ಸಮಾಜ ಪ್ರಕ್ರಿಯೆ ಸತ್ಯ ಯಾವುದೋ ಇರಬೇಕು. ತಮ್ಮ ಹೆಸರನ್ನೂ ಮಕ್ಕಳ ಹೆಸರಿನೊಂದಿಗೆ ಪರಂಪರೆಯಂತೆ ಮುಂದುವರೆಸುವಾಗ ಅದೆಷ್ಟು ದಿನ ಈ ಬಾಲಲೀಲೆಯನ್ನು ಹೊತ್ತು ಸಾಗಬೇಕೋ ಈ ಮಕ್ಕಳು!.
ಕೃತಿ
     ಇದೊಂದು ಶಾಶ್ವತ ರೂಪ. ವಿಶ್ವಾಸದ ವಿಶ್ವ. ಬರಹ, ದನಿ ನೋಟ ರೂಪಗಳು ಬೇರೆ ಇರಬಹುದು. ಜಗತ್ತಿನಲ್ಲಿ ಯಾವುದು ಪೂರ್ಣ ಕೃತಿ ಅಲ್ಲ ಅನಿಸಬಹುದು. ಆದರೆ ಆ ಕ್ಷಣಕ್ಕೆ ಪೂರ್ಣವಾಗಿ ಒಪ್ಪಿಕೊಳ್ಳುತ್ತೇವೆ. ಅದಕ್ಕೆ ನಂಬಿಕೆ, ಸತ್ಯ, ತೃಪ್ತಿ ಎನೆಲ್ಲಾ ಭಾವ ಕೀಲಿಕೈಗಳನ್ನು ರಿಪೇರಿ ಮಾಡಿರುತ್ತೇವೆ. ಹಾಗದ್ರೆ ಅಪೂರ್ಣ ಇರಬಹುದಾದುದು ಅದು ಕೊರತೆ, ನೋವು ಈ ಹೆಸರುಗಳನ್ನು ಪಡೆದಿರಬಹುದು. ಅಯ್ಯೋ! ದೇವರೇ ಅಪೂರ್ಣ. ನಾಸ್ತಿಕ ಜಗತ್ತು ನಾನು ನನ್ನಾಸೆಯೇ ಅಪೂರ್ಣ. ಇದು ಶ್ಲೋಕದಿಂದಲೇ ಅರ್ಥವಾಗಬೇಕು ಎಂದೇನು ಅಲ್ಲ, ಅನಕ್ಷರಸ್ಥನಾಗಿಯೂ ಈ ವಿಚಾರದಲ್ಲಿ ಉತ್ತಮವಾಗಿ ಮಾತನಾಡಬಹುದು.
ಜ್ಞಾನಂ ವಿಜ್ಞಾನಂ  
ಶೋಧನೆಯ ಸರಿಗಮದಲ್ಲಿರುವ ವಿಜ್ಞಾನವೇ ತನ್ನ ಪರಿಧಿಗಳನ್ನು ಬದಲಾವಣೆಯೊಂದಿಗೆ ಒಪ್ಪಿಸುತ್ತಾ, ಒಪ್ಪಿಕೊಳ್ಳುತ್ತಾ ತಾತ್ಕಾಲಿಕ ಸತ್ಯಗಳನ್ನು ಸಮನ್ವಯಗೊಳಿಸುತ್ತಿದೆ. ಶಾಸ್ತ್ರವೆಂಬುದು ಈಗಾಗಲೇ ಗುರಿಮುಟ್ಟಿರುವ ಅಂತಿಮ ಫಲಶೃತಿಯಲ್ಲಿ ನಾನ ವೇಷಗಳಲ್ಲಿ ಜನರಿಗೆ ದರ್ಶನವಾಗುತ್ತಿದೆ. ಶಾಸ್ತ್ರವೂ ಸುಳ್ಳಿನ ಕಂತೆಯೆಂದು ಶಾಸ್ತ್ರಕ್ಕೆ ತಿಳಿದು ದೇವರು, ದೆವ್ವ, ಗೌರವ-ನಂಬಿಕೆಗಳ ಭಯದಲ್ಲೇ ಸಮಾಜವನ್ನು ನಿಯಂತ್ರಿಸುತ್ತಿದೆ. ಇದು ಅಕ್ಷರದ ಕೊರತೆಯಲ್ಲ. ಬಾವಿಯೊಳಗಿನ ಕಪ್ಪೆಗಳ ಗುರುಕುಲ ತಂತ್ರ ! ಹಾಗಾದರೆ ವಿಜ್ಞಾನವನ್ನು ಒಪ್ಪಿಕೊಳ್ಳಬೇಕೆ, ಇಲ್ಲ ಶಾಸ್ತ್ರ ಸಾರುವುದೆಲ್ಲಾ ಸತ್ಯವೇ! ಉತ್ತರ ಹುಡುಕಾಡಿದರೆ ಯೋಚಿಸಬೇಕು ಎಂಬುವವರೆ ಜಾಸ್ತಿ ! ಇವರಿಗೆ ಸಾಮಾನ್ಯವಾಗಿ ಭಯವೇ ಬುನಾದಿ ಇಲ್ಲವೇ ಭದ್ರ.