ಈ ಬ್ಲಾಗ್ ಅನ್ನು ಹುಡುಕಿ

ಶನಿವಾರ, ಮೇ 20, 2023

ಮೆಟ್ರೋ ಕಥನ - ೫೨

 ಮೆಟ್ರೋ ಕಥನ - ೫೨


ಚೆನ್ನನು ಇತ್ತೀಚೆಗೆ ಟೀವಿಯನ್ನು ಗಂಭೀರವಾಗಿ ನೋಡುತ್ತಾನೆ. ಜೊತೆಯಾಗುವ ನಾಲ್ಕಾರು ಜನಕ್ಕೆ ಅವರು ಹೀಗೆ ಮಾಡಿದರು, ಇವರು ಹೀಗೆ ಮಾಡಿದರು ಎಂದು ಹೇಳುತ್ತಿದ್ದಾನೆ. ಇವರೇ ಮಂತ್ರಿ, ಮುಖ್ಯಮಂತ್ರಿ ಆಗಿದ್ದರೆ ಚೆಂದವೆಂದು ಸಲಹೆ ನೀಡುತ್ತಾನೆ. ಉಚಿತ ಯೋಜನೆಗಳು ಸರಿ, ಸರಿಯಲ್ಲ, ಹಣ ಎಲ್ಲಿಂದ ತರುವರು! ಏನೇನೋ ತಲೆಗೊಂದು ಪ್ರಶ್ನೆಗಳ ತಂದು ದಿನ ತಳ್ಳುತ್ತಾನೆ. ದುರಂತವೆಂದರೆ, ಚೆನ್ನನ ಅಭಿಪ್ರಾಯಕ್ಕಾಗಿ ಅಧಿಕಾರದಲ್ಲಿ ಯಾರೂ ಕಾಯುವುದಿಲ್ಲ. ಕಾದಿದ್ದು ಅವನ ಮೇವಿಲ್ಲದಿದ್ದರೂ ಹಾಲು ನೀಡುತ್ತಾ ಹಂಬಲಿಸುವ ಹಸು, ನೀರಿಲ್ಲದೆ ನೆರಳಾದ ತೆಂಗು, ಬೇಸಿಗೆಯ ತಣಿಸುವ ಮಾವು, ಕೂಲಿಯಂತೆ ದುಡಿವ ಹೆಂಡತಿ, ಓದಲಾಗದೆ ಹಾಳಾಗುತ್ತಿರುವ ಮಕ್ಕಳು. 

ಚೆನ್ನನು ಯಜಮಾನ, ಅವನಿಗೆ ಮರ್ಯಾದೆ ಮುಖ್ಯ. ಮರ್ಯಾದೆಗಾಗಿ ಅವನು ಎಲ್ಲಾ ಮನೆಯಲ್ಲೂ ಕಾಣುತ್ತಿದ್ದಾನೆ.



- ಅಂಕುರ

ಮೆಟ್ರೋ ಕಥನ - ೫೧

 ಮೆಟ್ರೋ ಕಥನ - ೫೧


ಕಾಡು ಹರಟೆಯ ಸ್ನೇಹಗಳು ಕೈಯಲ್ಲಿ ಸಿಗರೇಟು, ಚಹಾ, ಕಾಫಿಯಿಡಿದು ಕುಡಿಯುತ್ತಾ, ಕೆಲವರು ತಂಬಾಕು ಜಗಿಯುತ್ತಾ, ದೊಡ್ಡ ದೊಡ್ಡ ವಿಚಾರಗಳೊಂದಿಗೆ ಕಾಲಹರಣ ಮಾಡುತ್ತಿರುವ ಯುವಸಮೂಹವು ಎಲ್ಲೆಲ್ಲೂ ಕಾಣುತ್ತವೆ. 

ಆದರೆ, 

ರೂಪಾಯಿ ನಾಣ್ಯದಿಂದ ಹಿಡಿದು, ಸೌಧಗಳನ್ನು ನಿರ್ಮಿಸುವ ಯಾರೂ ಕೂಡ ಕಾಣಿಸಿಕೊಳ್ಳದೆ ಚಿಕ್ಕ ಚಿಕ್ಕ ಹೊಸ ನಿರ್ಮಿತಿಗಳ ಸೃಷ್ಟಿಸುತ್ತಲೇ ಇದ್ದಾರೆ. ವಿಜ್ಞಾನಿಯೊಬ್ಬರು ದೆವ್ವ ಮತ್ತು ದೇವರಿಗೆ ಈ ರೀತಿಯಲ್ಲಿ ಉದಾಹರಣೆ ನೀಡಿದರು.


- ಅಂಕುರ