ಈ ಬ್ಲಾಗ್ ಅನ್ನು ಹುಡುಕಿ

ಶನಿವಾರ, ಜೂನ್ 3, 2023

ಮೆಟ್ರೋ ಕಥನ - ೭೧

 ಮೆಟ್ರೋ ಕಥನ - ೭೧


ಅಂದನು ಮುಂಗಾರಿನ ಹೆಸರಲ್ಲಿ ಮಳೆ ಬಿದ್ದ ನೆಲದಲ್ಲಿ, ಖುಷಿಯಿಂದ ಬೀಜಗಳನ್ನು ಬಿತ್ತಿದನು. ದಿನವಿಡೀ ಶ್ರಮವನ್ನು, ಬೀಜಗಳ ಹಸಿವನ್ನು, ರಾತ್ರಿಯ ಮಳೆಯು ತೇಲಿಸಿತ್ತು. ಕಳೆದೆಂಟು ದಿನದಲ್ಲಿ ಹುಟ್ಟಿದ್ದು ಬರಿಕಸವು, ಅಂದನಿಗೆ ಇದು ಹೊಸತೇನೂ ಅಲ್ಲ. ಮತ್ತೆ ಹೊಲವನ್ನು ಹದ ಮಾಡಿ ಬಿತ್ತಿದನು. ಹಠದಂತೆ ಬಂದ ಮಳೆಯು ಮತ್ತೆ ನಾಶದ ಯುದ್ಧ ಮಾಡಿತು. ರೈತನಾದ ಅಂದನಿಗೆ ತಾಳ್ಮೆ ಇದೆ, ಬೇಸರಿಸದೆ ಹಿಂಗಾರು ಮಳೆಗಾಗಿ ಈಗ ಹೊಲವನ್ನು ಹದ ಮಾಡುತ್ತಿದ್ದಾನೆ.

- ಅಂಕುರ

ಮೆಟ್ರೋ ಕಥನ - ೭೦

 ಮೆಟ್ರೋ ಕಥನ - ೭೦


ನೀಲಗಿರಿ ಮರವೊಂದು ತಾನೆಷ್ಟು ಎತ್ತರಕ್ಕೆ ಹೋಗುವುದೋ, ಬೇರುಗಳನ್ನು ಅಷ್ಟೇ ಆಳವಾಗಿ ನೆಲಕ್ಕಿಳಿಸುವ ಪರಿಯಲ್ಲಿ ವಿಜ್ಞಾನದ ಸಿದ್ಧಾಂತವಿದೆ. ಸಂಶೋಧಕನ ಈ ಪತ್ತೇಪರಿಗೆ ರೈತನೊಬ್ಬ ಈ ನೀಲಗಿರಿ ಇದ್ರೆ ಭೂಮಿಯೆಲ್ಲಾ ಬರಡಾಗುತ್ತೆ, ಆದ್ರೆ ಜೌಗು ನೆಲ ಇದ್ರೆ ನೀರು ನಿಲ್ಲಲ್ಲ  ಸ್ವಾಮಿ, ಸೊಳ್ಳೆ ಜೊತೆಗೆ ಸಾಕಷ್ಟು ಈ ಬೆಳೆ ಕೀಟ ಬರಲ್ಲ ಸ್ವಾಮಿ ಒಂತರಾ ಒಳ್ಳೆದೇ ಈ ಮರ ಎಂದನು. ವಿಜ್ಞಾನಿಗೆ ಕುತೂಹಲ ಹೆಚ್ಚಾಗಿ ಅಧ್ಯಯನಗಳನ್ನ ಹುಡುಕಿದಾಗ ಇದೇ ಉತ್ತರವಿತ್ತು.


- ಅಂಕುರ