ಈ ಬ್ಲಾಗ್ ಅನ್ನು ಹುಡುಕಿ

ಮೆಚ್ಚುವ ಕಾರ್ಯವಿದು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಮೆಚ್ಚುವ ಕಾರ್ಯವಿದು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಗುರುವಾರ, ಅಕ್ಟೋಬರ್ 24, 2024

ಪ್ರಧಾನ ಕನ್ನಡ ಸೇವಕ ಪಿ.ವಿ. ನಾರಾಯಣ ಅವರು

ಹಿರಿಯ ವಿದ್ವಾಂಸರಾದ ಪಿ.ವಿ ನಾರಾಯಣ ನಮ್ಮ ನಡುವಿನ ಸಜ್ಜನರು. ಇವರು ಪ್ರಾಧ್ಯಾಪಕರಾಗಿ, ಸಾಹಿತಿಯಾಗಿ, ವಿದ್ವಾಂಸರಾಗಿ ನೀಡಿದ ಸೇವೆ ಅನನ್ಯ. 

ಇವರ ಕುರಿತು ಕಣಜ ಸಾಕಷ್ಟು ಮಾಹಿತಿಯನ್ನು ನೀಡುತ್ತದೆ.

ಪಿ.ವಿ.ನಾರಾಯಣ ಅವರ ಪರಿಚಯ







(ಚಿತ್ರ : ಪ್ರಜಾವಾಣಿ)




ಇವರಲ್ಲಿ ಗಮನಿಸಬಹುದಾದ ಗುಣಗಳು

ದಣಿವರಿಯದ ಪ್ರಧಾನರಾಗಿ ಶ್ರಮಿಸುತ್ತಿರುವುದು

ಹಳಗನ್ನಡ ಹಾಗೂ ಶಾಸ್ತ್ರ ಸಾಹಿತ್ಯ ಕುರಿತ ಬೋಧನೆ

ಸರಳತೆ

ಸಮಯ ನಿರ್ವಹಣೆ ಹಾಗೂ ಬದುಕಿನ ಶಿಸ್ತು


ಇವರ ನಲವತ್ತೆಂಟು ಕೃತಿಗಳು ಉಚಿತ ಓದುವಿಗೆ ಲಭ್ಯ ಇರುವುದು ಕನ್ನಡ ಸಾಹಿತ್ಯದ ಹಿರಿಮೆ. ಬರಹಗಳೇ ಮಾರಾಟದ ಬಂಡವಾಳವಾಗಿರುವ ಕಾಲದಲ್ಲಿ ಎಲ್ಲದನ್ನೂ ಸಮಾಜಕ್ಕೆ ಅರ್ಪಿಸಿರುವ ಹಲವು ಸಹೃದಯರಲ್ಲಿ ಇವರು ಕೂಡ ವಿಶ್ವಮಾನ್ಯರು.

ಇವರ ಕೃತಿಗಳು ಈ ಲಿಂಕ್ ಮೂಲಕ ಲಭ್ಯ ಇವೆ.

ಪಿ.ವಿ. ನಾರಾಯಣ ಅವರ ಕೃತಿಗಳು

ಸಂಚಯದಲ್ಲಿ ಕೃತಿಗಳು ಉಚಿತ ಓದುವಿಗಾಗಿ


ಓದುಗರು ಈ ಸಾಹಿತ್ಯ ಭಂಡಾರವನ್ನು ಮುಕ್ತವಾಗಿ ಬಳಸುತ್ತಾ, ಜ್ಞಾನ ಹೆಚ್ಚಿಸಿಕೊಳ್ಳಬಹುದು.

ಸೋಮವಾರ, ಅಕ್ಟೋಬರ್ 21, 2024

ಕೆಲಸವಿಲ್ಲದವರು

 ಕೆಲಸವಿಲ್ಲದವರು

(PHOTO From Wikipedia)

ನಿಜಕ್ಕೂ ಕರಾಳಯುಗದಲ್ಲಿ ಬದುಕುತ್ತಿದ್ದೇನೆ ನಾನು!

ಮುಗ್ಧತೆಯ ಮಾತುಗಳು ನಗೆಪಾಟಲಾಗಿವೆ.

ತಿದ್ದಿ ಅಂದಗೊಳಿಸಿದ ಹುಬ್ಬುಗಳ

ಹಿಂದೆ ಅ-ಸಂವೇದನೆಯು ಅಡಗಿ ಕುಳಿತಿದೆ.

ಭೀಕರ ವರದಿಗಳು ನಮಗೇನೂ ಗೊತ್ತೇಯಿಲ್ಲ

ಎಂಬತೆ ಮುಖದ ಮೇಲೆ ನಗುವು ಸುಳಿದಾಡುತ್ತಿದೆ.

ಬರ್ಟಾಲ್ಟ್ ಬ್ರೆಕ್ಟ್ (೧೯೩೭-೩೮)

ನಾವು ಯಾವುದನ್ನು ಯೋಚಿಸುತ್ತೇವೆಯೋ ಅದನ್ನು ಗಳಿಸಲು ಮಾಡುವ ಎಲ್ಲಾ ತಂತ್ರಗಳೇ ನಮ್ಮ ಸೋಲುಗಳು. ಈ ಸೋಲನ್ನೇ ಇಂದು ಅಭಿವೃದ್ಧಿ ಹಾಗೂ ವ್ಯವಹಾರವೆಂದು ಭಾವಿಸಿದ್ದೇವೆ. ಇಲ್ಲಿ ನಮ್ಮ ಗೆಲವು ಮಾತ್ರ ನಮ್ಮ ಕಣ್ಣಿನ ಮುಂದೆ ಇರುತ್ತದೆ. ಆದರೆ ಸುತ್ತಲೂ ಸೋಲುಗಳ ಶವದಿಂದ ನಮ್ಮ ಗೆಲುವಿನ ನೈಜತೆಯನ್ನು ತಿಳಿಯುವುದೇ ಇಲ್ಲ. ಇಂತಹ ನೈಜತೆಯ ಬೆಳಕೇ ಯೌವನದ ಪಾತ್ರಗಳು.

ಪ್ರತಿಯೊಬ್ಬರೂ ಜೀವನದಲ್ಲಿ ಹಂಬಲಿಸುವ ವಯಸ್ಸೆಂದರೆ ಅದುವೇ ಯೌವನ. ಆದರೆ ಅದೇ ಸಮಸ್ಯೆ ಎಂದರೆ ಒಪ್ಪುವುದಾದರೂ ಹೇಗೆ? ಈ ಒಪ್ಪಿಗೆಯ ಹಿಂದೆ ಸಮಸ್ಯೆಗಳನ್ನೆ ಚೆಲ್ಲಿಕೊಂಡು ಕುಳಿತಾಗ ಸಾಹಸಗಳೆಲ್ಲಾ ಗೌಣವಾಗುತ್ತವೆ. ಸೈನ್ಯದಲ್ಲಿ ಯೌವನಕ್ಕೆ ಮಾತ್ರ ಅವಕಾಶ. ಯೌವನ ಮೀರಿದ ಪ್ರತಿಯೊಬ್ಬರೂ ನಿವೃತ್ತರು. ಜಗತ್ತನ್ನೇ ಕಾಪಾಡುವ ಮೊದಲ ಹುದ್ದೆಯಾದ ಸೈನ್ಯದಲ್ಲಿಯೇ ಯುವ ಮನಸ್ಸುಗಳಿಗೆ ಸರಿಯಾದ ವ್ಯಾಖ್ಯಾನವಿದೆ.

ಕೆಲಸವಿಲ್ಲದವರುಎಂಬ ಕಣ್ಣೋಟವು ಸಮಾಜದಲ್ಲಿ ಯೌವನದಲ್ಲಿರುವ ಪ್ರತಿಯೊಬ್ಬರಿಗೂ ಬೀರುತ್ತದೆ. ಕಂಡ ತಕ್ಷಣವೇ ಓದಿದ್ದು ಮುಗೀತಾ, ಏನ್ ಕೆಲಸ ಮಾಡ್ತಾ ಇದ್ದೀಯಾ, ಹೀಗಾದರೆ ಜೀವನಕ್ಕೆ ಹೇಗೆ?’ ಈ ಎಲ್ಲಾ ಪ್ರಶ್ನೆಗಳು ಪ್ರತಿಹೆಜ್ಜೆಯಲ್ಲೂ ಕಾಡುತ್ತವೆ. ಪುರುಷರಿಗಾದರೆ ಈ ಪ್ರಶ್ನೆಗಳು ಆಯ್ಕೆಯಿಲ್ಲದ ಸೂಚನೆಗಳು. ಮಹಿಳೆಗಾದರೆ ಇಷ್ಟು ಪ್ರಶ್ನೆಗಳೇ ಇಲ್ಲದೇ ಒಂದು ಜೈಲು ವಾಸಕ್ಕಾಗಿ ಸಕಲ ಸಿದ್ಧತೆಗಳು. ಅಂದರೆ ಒಂದು ಗಂಡು ನೋಡಿ ಮದುವೆ ಮಾಡಿದರಾಯಿತು. ಮದುವೆಯಾದರಾಯಿತು ಅಂದರೆ ಎಲ್ಲಾ ಮುಗಿಯಿತು.

ಯೌವನವೆಂದರೆ ಕೆಲಸವಿಲ್ಲದ ವಯಸ್ಸೆಂದು ಭಾವಿಸುವುದಾದರೂ ಹೇಗೆ? ಮನೆಯ ಎಲ್ಲಾ ಕೆಲಸಗಳು ಲೆಕ್ಕವಿಲ್ಲದೆ ಮಾಡುವವರು ಯಾರು? ತಾನು ಶಾಲೆಯಿಂದ ಕಾಪಾಡಿಕೊಂಡೋ, ಕಿತ್ತಾಡಿಕೊಂಡೊ ಬಂದತಹ ಸ್ನೇಹಿತರನ್ನೆಲ್ಲಾ ದಿನನಿತ್ಯ ವಿಚಾರಿಸಿಕೊಂಡು ಕಾಪಾಡುವವರು ಯಾರು? ಇವರು ಸಾಲುವುದಿಲ್ಲವೆಂದು ಜಾಲತಾಣಗಳಲ್ಲಿ ಜಾಲಾಡಿ ಹೊಸ ಸ್ನೇಹಿತರನ್ನು ಸಂಪಾದಿಸುವವರು ಯಾರು? ಈ ಸಂಪಾದಿಸಿದ ಸ್ನೇಹಿತರ ಕಷ್ಟ-ಸುಖಗಳಿಗಾಗಿ ಮಾಡುವ ಸಾಹಸಗಳು ಅಷ್ಟಿಷ್ಟೇ. ಇದೆಲ್ಲವನ್ನೂ ಕೆಲಸವೆಂದು ಏಕೆ ಪರಿಗಣಿಸಿಲ್ಲ. ಅಂದರೆ ನಮ್ಮಲ್ಲಿ ಕೆಲಸವೆಂದರೆ ಸಂಬಳವಿರಬೇಕು. ಹಣದಿಂದ ಅಳೆಯುವುದು, ಹಣಕ್ಕಾಗಿ ದುಡಿಯುವುದು ಮಾತ್ರ ಕೆಲಸವೆಂದು ಭಾವಿಸಲಾಗಿದೆ.

      ಈ ವಿಚಾರವನ್ನು ಸೂಕ್ಷ್ಮವಾಗಿ ನೋಡಿದರೆ ಪ್ರೀತಿಯನ್ನು ಈ ಜಗತ್ತಿನಲ್ಲಿ ಕಾಮವನ್ನಾಗಿ ಪರಿವರ್ತಿಸಿ ಅದರ ಮೌಲ್ಯವನ್ನು ನಾಶಗೊಳಿಸಲಾಗಿದೆ. ಕೆಲಸವಿಲ್ಲದವರು ಎಂದು ಕರೆಯುವ ಪ್ರತಿಯೊಬ್ಬರೂ ಈ ಪ್ರೀತಿಯ ಕಾರ್ಯಗಳನ್ನು ಮಾಡುತ್ತಿರುತ್ತಾರೆ. ಅದಕ್ಕೆ ಸರಿಯಾದ ಪೋಷಣೆ ದೊರೆತರೆ ಆಲದ ಮರವೂ ಆಗಬಹುದು. ಜಗತ್ತನ್ನೇ ವಿಶ್ವಾಸದ ಅಡಿಯಲ್ಲಿ ಬಿಳಲು ಬಿಟ್ಟು ನೆರಳಾಗಬಹುದು. ಬರಿ ಋಣಾತ್ಮಕ ಘೋಷಣೆಯಿಂದ ಹಣೆಪಟ್ಟಿ ಕಟ್ಟಿದರೆ ಸತ್ಯದ ಜಾಗದಲ್ಲೆಲ್ಲಾ ಸುಳ್ಳುಗಳು ಸಹಜವಾಗುತ್ತವೆ. ಪ್ರೀತಿಯು ಕೇವಲ ಕಾಮವಾಗುತ್ತದೆ. ತನ್ನ ಅಗತ್ಯವನ್ನು ಸದಾ ಆಸೆಪಡುತ್ತದೆ. ತೃಪ್ತಿಯಿಲ್ಲದ ಅತೃಪ್ತಿಯಲ್ಲಿ ಸದಾ ಹಂಬಲಹೊಂದುತ್ತದೆ.

ಮಾರ್ಗದಲ್ಲಿ ನಿಮ್ಮ ಜಗತ್ತಿನಲ್ಲಿರುವ ಕೆಲಸವಿಲ್ಲದವರನ್ನು. ಗಮನಿಸಿ. ಅವರಿಗೆ ಪ್ರೀತಿ ತುಂಬಿ, ಅವರ ಕೆಲಸಗಳನ್ನು ಗೌರವಿಸಿ, ಪೋಷಿಸಿ, ಸರಿಯಾದ ರೂಪಕೊಡಿ. ಇದು ಸರಿಯಿಲ್ಲವೆಂದು ಹೇಳುವುದಕ್ಕಿಂತ, ಇದರಲ್ಲಿ ಸರಿಯಾದ ದಾರಿಯಿದು ಎಂದು ತೋರಿದರೆ ಅವರಿಂದ ಕಾಣುವ ಬೆಳಕು ನಿಮ್ಮಿಂದ ಪ್ರಕಾಶವಾಗಿ ಜಗತ್ತನ್ನು ಬೆಳಗುತ್ತದೆ.

-ಅಂಕುರ ೧೧-೧೨-೨೦೨೦

ಶುಕ್ರವಾರ, ಆಗಸ್ಟ್ 23, 2019

ಮೆಚ್ಚುವ ಕಾರ್ಯವಿದು











ಶ್ರದ್ಧೆ ಎಂದರೆ ಥಿಯರಿಗಳ ಮೂಲಕ ಕಲಿಯುವುದಲ್ಲ.
ಶ್ರದ್ಧೆಯು ನಮ್ಮೊಳಗಿನ ಶಕ್ತಿಗೆ ನೀಡುವ ಕ್ರಿಯಾಶೀಲತೆ.
ಈ ಶ್ರದ್ಧೆಯು ನಮಗೆ ಸ್ಫೂರ್ತಿಯನ್ನು, ಆತ್ಮತೃಪ್ತಿಯನ್ನು ಕೆಲವೊಮ್ಮೆ ಗೌರವ ಹಾಗೂ ಲಾಭವನ್ನು ನೀಡುತ್ತದೆ.
ಇಂತಹ ಒಂದು ಉದಾಹರಣೆಯನ್ನು ಗಮನಿಸೋಣ.
ನಮ್ಮ ಕಾಲೇಜಿನಲ್ಲಿ ಇಂದು ಮತ್ತು ನಾಳೆ (ದಿನಾಂಕ೨೩ ಮತ್ತು ೨೪ ಆಗಸ್ಟ್ ೨೦೧೯) ರಂಗ ಶಿಕ್ಷಣ ಕಾರ್ಯಗಾರ ನಡೆಯುತ್ತಿದೆ. ಡಾ. ಪವಿತ್ರ ಎಂಬ ರಂಗಶಿಕ್ಷಕರು ಸುಮಾರು ಹದಿನೈದು ವರ್ಷಗಳಿಂದಲೂ ಪ್ರತಿವರ್ಷ ಈ ಮೆಚ್ಚುಗೆಯ ತರಬೇತಿ ಕಾರ್ಯ ನಡೆಸಿಕೊಡುತ್ತಿದ್ದಾರೆ.
ಇದರಲ್ಲಿ ಇಂದು MASKMAKING ಎಂಬ ತರಬೇತಿಯನ್ನು ಹತ್ತು ನಿಮಿಷದಲ್ಲಿ ಹೇಳಿಕೊಟ್ಟರು. ಎಂಟು ತಂಡಗಳ ರಚನೆಯಲ್ಲಿ ನಮ್ಮ ರಂಗತರಬೇತಿಯ ವಿದ್ಯಾರ್ಥಿಗಳು ತಮ್ಮ ಪ್ರಯೋಗ ಪ್ರಾರಂಭಿಸಿದರು. ಮುಖವಾಡಗಳ ರಚನೆ ತಯಾರಾಯಿತು. ಪ್ರತಿ ತಂಡವೂ ಉತ್ತಮ ಕಲಿಕೆಯನ್ನು ಪ್ರದರ್ಶನ ಮಾಡಿದವು.
ಮುಖವಾಡ ರಚನೆಗೆ ಒಳಗಾದ ವಿದ್ಯಾರ್ಥಿಗಳು ತಮ್ಮ ಮುಖದ ಆಕೃತಿಯನ್ನು ತುಂಬಾ ಖುಷಿಯಿಂದ ಮನೆಗೆ ಕೊಂಡೊಯ್ದರು.
ಇವರಲ್ಲಿ ವಾಣಿಜ್ಯ ವಿಭಾಗದ ಶ್ರೀಮಂತ್ ಎಂಬ ವಿದ್ಯಾರ್ಥಿ‌ ಕೂಡ ಒಬ್ಬ. ಈತನ ಶ್ರದ್ಧೆಯನ್ನು ಮೆಚ್ಚಲೇಬೇಕು.
ನಾವು ಹೇಳಿದ ಕೀ ಪಾಯಿಂಟ್ ಬಳಸಿ ಇದಕ್ಕೆ ಬೇಕಾದ ಆಕೃತಿ ನೀಡಬಹುದು ಎಂಬ ಸಲಹೆಯ ಮೇರೆಗೆ ಮನೆಗೆ ಹೋಗಿ ಮೂರು ಗಂಟೆಗಳ ಕಾಲ ಶ್ರದ್ದೆಯಿಂದ ಈ ಮುಖಾಕೃತಿಗೆ ಹೊಸ ರೂಪನೀಡಿದ್ದಾನೆ. ಬೆಂಗಳೂರಿನವ ಕರಾವಳಿಯ ಕಲೆಯನ್ನು ಅನುಕರಿಸುವುದು ಎಂದರೆ ಸುಲಭವಲ್ಲ. ಶ್ರದ್ದೆ ಇದ್ದರೆ ಎಲ್ಲವೂ ಸುಲಭ ಎಂಬುದಕ್ಕೆ ಸಾಕ್ಷಿಯಾಗಿ ಯಕ್ಷಗಾನದ ದೇವರೂಪವನ್ನು ರಚಿಸಿರುವ ಕಲೆಯು ಅಮೋಘವಾಗಿದೆ. ಈತನ ಶ್ರದ್ಧೆಯು ಎಲ್ಲರಿಗೂ ಬಂದರೆ ಮನೆ-ಮನ, ನಾಡು, ದೇಶ ಮುಂದುವರೆಯುತ್ತವೆ. ಈತನಲ್ಲಿ ಈ ಶ್ರದ್ಧೆ ಮುಂದುವರೆಯಲಿ ಎಂಬುದೇ ಇಲ್ಲಿನ ಆಶಯ. ಸಮಯ ಎಲ್ಲರಿಗೂ ಒಂದೇ ಆದರೆ ಅದರ ನಿರ್ವಹಣೆಯ ಜಾಗೃತಿಯಲ್ಲಿ ನಮ್ಮ ಅಭಿವೃದ್ಧಿ ಇರುತ್ತದೆ.

ದಿನಾಂಕ 23-09-2019