ಈ ಬ್ಲಾಗ್ ಅನ್ನು ಹುಡುಕಿ

ಬುಧವಾರ, ಮೇ 15, 2019

                               ಬೇರು ತೇರು

ಬೇರು ತೇರು

ಸಂಪಾದನೆ : ಮಂಜುನಾಥ ಡಿ. ಎಸ್.
ರವಿಶಂಕರ ಎ.ಕೆ.
ಅನಿತ ಕೆ.ವಿ.

ಪ್ರಕಾಶನ : ಸಾಧನಕೇರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ (ರಿ)., ಬೆಂಗಳೂರು.

ಬೆಲೆ : ೨೨೦ರೂಗಳು


'ಬೇರು ತೇರು' 

ಇದೊಂದು ಅಪೂರ್ವ ಕೃತಿಯಾಗಿದೆ. ಕನ್ನಡ ಸಾಹಿತ್ಯದ ಪ್ರಾರಂಭದ ಗದ್ಯ ಬರಹಗಾರರಲ್ಲಿ ಕುವೆಂಪು ಹಾಗೂ ಬೇಂದ್ರೆ ಪ್ರಮುಖರು. ಇವರ ಗದ್ಯ ಸಾಹಿತ್ಯವನ್ನು ಅಧ್ಯಯನ ಮಾಡುವ ಮೂಲಕ ಸಂಶೋಧನಾ ಲೇಖನಗಳನ್ನು ಕರ್ನಾಟಕ ಹಾಗೂ ಹೊರರಾಜ್ಯಗಳ ವಿವಿಧ ಕಾಲೇಜು, ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು, ಸಂಶೋಧಕರು ರಚಿಸಿದ್ದಾರೆ.
ಇದರಲ್ಲಿರುವ ಲೇಖನಗಳ ರಚನೆಯಲ್ಲಿ ಕುವೆಂಪು ಬೇಂದ್ರೆ ಅವರು ರಚಿಸಿದ ನಾಟಕ, ಕಥೆ, ಭಾಷಣ, ಲೇಖನ, ಕಾದಂಬರಿ, ಮೀಮಾಂಸೆ, ವಿಮರ್ಶಾತ್ಮಕ ಕೃತಿಗಳನ್ನು ಲೇಖಕರು ಅನುಲಕ್ಷಿಸಿದ್ದಾರೆ. ಈ ಕೃತಿಯನ್ನು ಮಂಜುನಾಥ ಡಿ. ಎಸ್., ರವಿಶಂಕರ ಎ.ಕೆ., ಅನಿತ ಕೆ.ವಿ ಸಂಪಾದಿಸಿದ್ದಾರೆ.
ಸಾಧನಕೇರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಪ್ರಕಟಿಸಿದ ಮೊದಲ ಕೃತಿ ಇದು.

ಕನ್ನಡ ಸಾಹಿತ್ಯದಲ್ಲಿ ಕುವೆಂಪು ಬೇಂದ್ರೆ ಅವರ ಗದ್ಯಸಾಹಿತ್ಯದ ಅಧ್ಯಯನಕ್ಕೆ ಮೀಸಲಾದ ಮೊದಲ ಕೃತಿ.

ದಿನಾಂಕ ೧೧,೧೨ ಮೇ ೨೦೧೯ ರಂದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳಿಯಲ್ಲಿ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಬೇರು ತೇರು ಕೃತಿಯು ಬಿಡುಗಡೆಗೊಂಡು ಅಧಿವೇಶನಗಳ ರೂಪದಲ್ಲಿ ಚರ್ಚಿಸಲಾಯಿತು. ವಿವಿಧ ವಿಷಯ ತಜ್ಞರು ಈ ಕೃತಿ ಕುರಿತು ವಿಚಾರಗಳನ್ನು ಮಂಡಿಸಿದರು.

ಕಾರ್ಯಕ್ರಮದ ಚಿತ್ರಗಳು

















ಕಾಮೆಂಟ್‌ಗಳಿಲ್ಲ: