ಈ ಬ್ಲಾಗ್ ಅನ್ನು ಹುಡುಕಿ

ಸೋಮವಾರ, ಜುಲೈ 4, 2022

ಸಹೃದಯತೆ ಎಂದರೆ ಇವರೇ ನೆನಪಾಗುವುದು





ಹೌದು, ಸಹೃದಯತೆ ಎಂದಾಕ್ಷಣ ಇವರ ವ್ಯಕ್ತಿತ್ವ ನೆನಪಾಗುತ್ತದೆ. ಒಂದೊಂದು ಗುಣಕ್ಕೂ ಒಬ್ಬೊಬ್ಬರು ನಮ್ಮ ಮನಸ್ಸು ತುಂಬಿರುತ್ತಾರೆ. ಹೆಸರು ರಘು ಹಾಲೂರು ಎಂದಷ್ಟೇ ಗೊತ್ತಿತ್ತು. ಹಿರಿಯರು, ಜ್ಞಾನಿಗಳು ಎಲ್ಲಕ್ಕಿಂತ ಮಿಗಿಲಾಗಿ ಸಹೃದಯಿ. ಮೊನ್ನೆ ಬುಕ್ ಬ್ರಹ್ಮ ನಡೆಸಿದ ಸಂದರ್ಶನ ನೋಡಿದಾಗ ತಿಳಿಯಿತು ಇವರ ಹೆಸರು ರಘುನಂದನ ಹಾಲೂರು ಅಂತ.

ಲೋಕದಲ್ಲಿ ಇಷ್ಟವಾಗುವವರು ಸಾವಿರಾರು ಜನ ಇರಬಹುದು. ಈ ಇಷ್ಟಗಳಿಗೆ ಹಲವು‌ ಕಾರಣ ಇರುತ್ತವೆ.

ಈ ಲೋಕದಲ್ಲಿ ಮೊದಲಿಗೆ ಸ್ವಾರ್ಥ.

ನಂತರ‌ ಇರೋದೇ ನಿಸ್ವಾರ್ಥ.. 

ಇಂತಹ ಜಗತ್ತಿನಲ್ಲಿ ಸಾವಿರಾರು ಜನರು ಉತ್ತಮರು ನಿಸ್ವಾರ್ಥದ ನೆಲೆಯಲ್ಲಿ ಇದ್ದಾರೆ. ಆದರೆ ಅಲ್ಪ ಪ್ರಮಾಣದಲ್ಲಿ ಇರುವ ಸ್ವಾರ್ಥದ ಜನರ ಲೆಕ್ಕಾಚಾರದಲ್ಲಿ ಸಹೃದಯತೆಯು ಮುಖ್ಯ ವಾಹಿನಿಯಲ್ಲಿ ಕಾಣುತ್ತಿಲ್ಲ. 

ಸಹೃದಯತೆಯಲ್ಲಿ ರಘು ಆಲೂರ ಹೆಸರು ಏಕೆ  ಮುಖ್ಯ ಅಂದರೆ ಅವರ ಕನ್ನಡ ಪ್ರೀತಿ, ಕನ್ನಡ ಸೇವೆ, ಎಲ್ಲಕ್ಕಿಂತಲೂ ಆಪ್ತತೆ.

ಅಮೇರಿಕಾದಲ್ಲಿ ಇದ್ದರೂ ಕೇವಲ ಅಭಿಮಾನದ ಕನ್ನಡಿಗರಾಗದೆ, ಸಾಕಷ್ಟು ಕನ್ನಡ ಸೇವೆ ಮಾಡುತ್ತಿರುವ ಸಹೃದಯ ಕಾರ್ಯದಿಂದ ಮುಖ್ಯ ಅನಿಸುತ್ತಾರೆ.

ಅವರ ಕನ್ನಡಸೇವೆ ಕುರಿತು ಇಲ್ಲಿ ಬರಹವೇನೂ ನೀಡಲಾರೆ. ಏಕೆಂದರೆ ಎಲ್ಲವನ್ನೂ ಅವರ ಮಾತಲ್ಲೇ ಕೇಳಬಹುದು. ಬುಕ್ ಬ್ರಹ್ಮ ಅವರು ಸೆರೆಹಿಡಿದ್ದಿದ್ದಾರೆ.

ನನಗೆ ಮುಖ್ಯ ಅನಿಸಿದ್ದು...

ಟೋಸ್ಟ್ ಮಾಸ್ಟರ್ ಮೂಲಕ ವಾಕ್ಪಟುಗಳು ಕ್ಲಬ್ ನಿರ್ವಹಿಸುವ ಕಾರ್ಯದ ಮೂಲಕ..



ನಮ್ಮ ಸತ್ಯಣ್ಣನ ಮಾತು ಕೇಳಲು ಅದರ ಆನ್ಲೈನ್ ಕಾರ್ಯಕ್ರಮಕ್ಕೆ ಪ್ರವೇಶ ಪಡೆದ ನನಗೆ ಅದರ ಕಾರ್ಯವೈಖರಿ ತುಂಬಾ ಇಷ್ಟವಾಯಿತು. ಅವರ ಆಪ್ತತೆಯಲ್ಲಿ ನಾನೂ ಒಬ್ಬನಾದೆ. ಇದರಲ್ಲಿ ಎರಡು ಮಾದರಿಯ ಕಾರ್ಯಕ್ರಮ ನಡೆಯುತ್ತವೆ. ಒಂದು ವಾರ ಕನ್ನಡ ಅತಿಥಿಗಳಿಂದ ಒಂದು ಮುಖ್ಯ ವಿಚಾರ ಸಂವಾದ. ಮತ್ತೊಂದು ವಾರ ಇವರದೇ ಆಪ್ತರಿಂದ ಭಾಷಾ ಪ್ರಧಾನ ಹರಟೆ.

ಈ ಹರಟೆಯಲ್ಲಿ ಇವರ ನಿಯಮ ಚೆಂದ ಇರುತ್ತೆ.

ವಿಷಯ, ಭಾಷೆ, ಉಚ್ಛಾರಣೆ, ಪದಪ್ರಯೋಗ, ಸಮಯಪಾಲನೆ ... ಇತ್ಯಾದಿ

ಹೀಗೆ ವಿಂಗಡಿಸಿಕೊಂಡು ಎಲ್ಲವನ್ನೂ ಲೆಕ್ಕ ಹಾಕಿ ತಿದ್ದಿ ತೀಡಿ ಎಷ್ಟು ಮಜವಾಗಿ ನಮ್ಮ ಭಾಷೆಯನ್ನು ದುಡಿಸುತ್ತಾರೆ ಎಂದರೆ ಕನ್ನಡ ಮೇಷ್ಟ್ರುಗಳೂ ಕೂಡ ಈ ಕಾರ್ಯ ಮಾಡುತ್ತಿಲ್ಲ.

ಅಲ್ಲಿ ಗಾದೆ, ಒಗಟು, ನಾಣ್ನುಡಿ, ಸಿನಿಮಾ(ಹಳೆಯ), ಭಾಷಾಂತರ ಮೊದಲಾದ ಮಾದರಿಗಳು ಬಂದು ಹೋಗುತ್ತವೆ.

ಅಂತರಾಷ್ಟ್ರೀಯವಾಗಿ ಟೋಸ್ಟ್ ಮಾಸ್ಟರ್ ನ ಸಾವಿರಾರು ಕ್ಲಬ್ ಗಳಲ್ಲಿ ಮೊದಲಿಗೆ ಭಾರತೀಯ ಅದರಲ್ಲೂ ಕನ್ನಡದಲ್ಲಿ ಇಂತಹ ಪ್ರಯೋಗ ಮಾಡುತ್ತಿರುವುದು ಹಿರಿಮೆ ಅನಿಸಿತು. ಒಬ್ಬರಿಗೊಬ್ಬರು ಹಿತಮಿತ ವಾಕ್ಪಟುಗಳೇ, ನುಡಿ, ನಡೆ- ಸದ್ಭಾವಗಳ ಗಣಿ ಇವರು ಅನಿಸಿತು. ಅದರೊಳಗಿನ ಪ್ರತಿಯೊಬ್ಬರೂ ಅರ್ಥಪೂರ್ಣ ಕಾರ್ಯ ಮಾಡುತ್ತಿದ್ದಾರೆ ಅನಿಸಿತು. ಇದು ನಮ್ಮ ಚಿಕ್ಕಮಗಳೂರಿನ ರಘುನಂದನ ಹಾಲೂರು(ರಘು ಹಾಲೂರು) ಇವರ ಒಂದು ಚಿಕ್ಕ ಕಾರ್ಯವನ್ನು ಕಂಡಾಗ ಅನಿಸಿದ್ದು.. 

ಮೊನ್ನೆ ಅಮೇರಿಕಾದಿಂದ ಬೆಂಗಳೂರಿಗೆ ಬಂದಾಗ ನಮ್ಮನ್ನೆಲ್ಲಾ ಭೇಟಿಯಾದರು. ಪರದೆಯಲ್ಲಿ ಕಂಡ ಮುಖದ ಮನೋ ಮಧುರತೆ ಹಾಗೇ ಇತ್ತು. ಇನ್ನೂ ಹೆಚ್ಚಿನ ಗುಣವಿತ್ತು. ಹಳೆಯ ಆಪ್ತರು ಅನಿಸಿತು. ನನಗಿಂತ ತುಂಬಾ ಹಿರಿಯವರಾದರೂ ಯಾವುದೇ ಅಂತರವಿಲ್ಲದೆ ಹತ್ತಿರವಾಗುತ್ತಾರೆ. ಭಾಷೆ ಕುರಿತು ಒಂದಿಷ್ಟು ಮಾತಾಡಿದೆವು. ಅಣಕು ರಾಮನಾಥ್ ಅವರ ಮನೆಯ ಸಾಹಿತ್ಯ ಗೋಷ್ಠಿಗೆ ಸೇತುವೆ ಮಾಡಿ ತುರ್ತು ಕಾರ್ಯ ನಿಮಿತ್ತ ನಿರ್ಮಿಸಿದೆ. ಕಂಡದ್ದು ಅರ್ಧ ತಾಸಾದರೂ ಒಡನಾಟ ಮೂರ್ನಾಲ್ಕು ವರ್ಷದಷ್ಟು ಹಳೆಯದು.


ಇವರು ಕಾಣಿಸಿದ್ದು.. ಇಷ್ಟೇ ಆದರೂ, ಕಾಣಿಸಿದಿರುವ ಹಲವು ಇವರ ಆಪ್ತರು ಇವರಷ್ಟೇ ಶ್ರೇಷ್ಠರು ಅನಿಸಿತು. ಇಂತಹ ಹಲವು ಸಮಾಜಮುಖಿ ಕಾರ್ಯಗಳ ಪಟ್ಟಿಯೇ ಇದೆ. ಎಲ್ಲವನ್ನೂ ಕೇಳಿದ್ದೇನೆ, ಕಾಣುವ, ಸಾಧ್ಯವಾದಷ್ಟು ನಮ್ಮಂತೆ ಅಳವಡಿಸಿಕೊಳ್ಳುವ ಹಂಬಲವೂ ಇದೆ. ಧನ್ಯೋಸ್ಮಿ ಇವರ ಕಾರ್ಯವಿಶಾಲತೆಗೆ.

ಇವರ ಕ್ಲಬ್ ನಲ್ಲಿ ಇರುವವರು ಹಾಗೂ ವಾರಕ್ಕೊಮ್ಮೆ ಭಾನುವಾರ ರಾತ್ರಿ ಒಬ್ಬತ್ತು, ಹತ್ತಕ್ಕೆ ಏರ್ಪಡುವ ಕಾರ್ಯಕ್ರಮದ ಲಿಂಕು ಇದು.

Officers and members:

Anil Shekhar

Anil Joshi-Treasurer

Ashok-President

Chandra

Chanaveer 

Chetan

Mahadesh-Secretary

Prasad-SAA

Raghu-VPE

Shailaja

Shiva-VPM

Suma

Sumanth-VPPR

Club Name : Vakpatugalu 

Club Number : 01259423

District: 101

Division : C

Area : C5

For weekly session:

https://us02web.zoom.us/j/81055934461

ರಘುನಂದನ ಹಾಲೂರ ಅವರ ಸಂದರ್ಶನ - ಬುಕ್ ಬ್ರಹ್ಮ

https://youtu.be/qmTrvUrsO-4