ಈ ಬ್ಲಾಗ್ ಅನ್ನು ಹುಡುಕಿ

ಮಂಗಳವಾರ, ಅಕ್ಟೋಬರ್ 14, 2025

ಮಾವುತ

 






ಮಾವುತನೆ ಮಹಾರಾಜ

ಒಂದು ದಿನಕ್ಕಾದರೂ..

ಮಾಡಬಹುದೇ ಸವಾರಿ

ಎಷ್ಟು ಅಧಿಕಾರವಿದ್ದರೂ..!


ಸಿಗಬಹುದೇ ಯೋಗ

ಭಕ್ತಿಯ ಭಂಡಾರವಿದ್ದರೂ

ದೇವರ ಪದತಲದಲ್ಲಿ

ಕೂರುವುದು ಉತ್ಸವವಿದ್ದರೂ


ದೇವರಾದರೂ ಚಿನ್ನಚೌಕದಲ್ಲಿ

ಅಂಬಾರಿಯನ್ನು ಹೊತ್ತರೂ

ಮಾವುತನೇ ಸ್ವತಂತ್ರ

ಕೋಟಿ ಕಣ್ಣುಗಳೆದುರು


ಬೆಲೆಯಿಲ್ಲ ನೆಲೆಯಿಲ್ಲ

ಬಡವನಂತಿದ್ದರೂ

ಕೃಷ್ಣನೂ ಸಾರಥಿಯೇ

ಲೋಕ ಕಲ್ಯಾಣಕ್ಕಾದರೂ..


- ಅಂಕುರ