ಈ ಬ್ಲಾಗ್ ಅನ್ನು ಹುಡುಕಿ

ಶುಕ್ರವಾರ, ಆಗಸ್ಟ್ 23, 2019

ಮೆಚ್ಚುವ ಕಾರ್ಯವಿದು











ಶ್ರದ್ಧೆ ಎಂದರೆ ಥಿಯರಿಗಳ ಮೂಲಕ ಕಲಿಯುವುದಲ್ಲ.
ಶ್ರದ್ಧೆಯು ನಮ್ಮೊಳಗಿನ ಶಕ್ತಿಗೆ ನೀಡುವ ಕ್ರಿಯಾಶೀಲತೆ.
ಈ ಶ್ರದ್ಧೆಯು ನಮಗೆ ಸ್ಫೂರ್ತಿಯನ್ನು, ಆತ್ಮತೃಪ್ತಿಯನ್ನು ಕೆಲವೊಮ್ಮೆ ಗೌರವ ಹಾಗೂ ಲಾಭವನ್ನು ನೀಡುತ್ತದೆ.
ಇಂತಹ ಒಂದು ಉದಾಹರಣೆಯನ್ನು ಗಮನಿಸೋಣ.
ನಮ್ಮ ಕಾಲೇಜಿನಲ್ಲಿ ಇಂದು ಮತ್ತು ನಾಳೆ (ದಿನಾಂಕ೨೩ ಮತ್ತು ೨೪ ಆಗಸ್ಟ್ ೨೦೧೯) ರಂಗ ಶಿಕ್ಷಣ ಕಾರ್ಯಗಾರ ನಡೆಯುತ್ತಿದೆ. ಡಾ. ಪವಿತ್ರ ಎಂಬ ರಂಗಶಿಕ್ಷಕರು ಸುಮಾರು ಹದಿನೈದು ವರ್ಷಗಳಿಂದಲೂ ಪ್ರತಿವರ್ಷ ಈ ಮೆಚ್ಚುಗೆಯ ತರಬೇತಿ ಕಾರ್ಯ ನಡೆಸಿಕೊಡುತ್ತಿದ್ದಾರೆ.
ಇದರಲ್ಲಿ ಇಂದು MASKMAKING ಎಂಬ ತರಬೇತಿಯನ್ನು ಹತ್ತು ನಿಮಿಷದಲ್ಲಿ ಹೇಳಿಕೊಟ್ಟರು. ಎಂಟು ತಂಡಗಳ ರಚನೆಯಲ್ಲಿ ನಮ್ಮ ರಂಗತರಬೇತಿಯ ವಿದ್ಯಾರ್ಥಿಗಳು ತಮ್ಮ ಪ್ರಯೋಗ ಪ್ರಾರಂಭಿಸಿದರು. ಮುಖವಾಡಗಳ ರಚನೆ ತಯಾರಾಯಿತು. ಪ್ರತಿ ತಂಡವೂ ಉತ್ತಮ ಕಲಿಕೆಯನ್ನು ಪ್ರದರ್ಶನ ಮಾಡಿದವು.
ಮುಖವಾಡ ರಚನೆಗೆ ಒಳಗಾದ ವಿದ್ಯಾರ್ಥಿಗಳು ತಮ್ಮ ಮುಖದ ಆಕೃತಿಯನ್ನು ತುಂಬಾ ಖುಷಿಯಿಂದ ಮನೆಗೆ ಕೊಂಡೊಯ್ದರು.
ಇವರಲ್ಲಿ ವಾಣಿಜ್ಯ ವಿಭಾಗದ ಶ್ರೀಮಂತ್ ಎಂಬ ವಿದ್ಯಾರ್ಥಿ‌ ಕೂಡ ಒಬ್ಬ. ಈತನ ಶ್ರದ್ಧೆಯನ್ನು ಮೆಚ್ಚಲೇಬೇಕು.
ನಾವು ಹೇಳಿದ ಕೀ ಪಾಯಿಂಟ್ ಬಳಸಿ ಇದಕ್ಕೆ ಬೇಕಾದ ಆಕೃತಿ ನೀಡಬಹುದು ಎಂಬ ಸಲಹೆಯ ಮೇರೆಗೆ ಮನೆಗೆ ಹೋಗಿ ಮೂರು ಗಂಟೆಗಳ ಕಾಲ ಶ್ರದ್ದೆಯಿಂದ ಈ ಮುಖಾಕೃತಿಗೆ ಹೊಸ ರೂಪನೀಡಿದ್ದಾನೆ. ಬೆಂಗಳೂರಿನವ ಕರಾವಳಿಯ ಕಲೆಯನ್ನು ಅನುಕರಿಸುವುದು ಎಂದರೆ ಸುಲಭವಲ್ಲ. ಶ್ರದ್ದೆ ಇದ್ದರೆ ಎಲ್ಲವೂ ಸುಲಭ ಎಂಬುದಕ್ಕೆ ಸಾಕ್ಷಿಯಾಗಿ ಯಕ್ಷಗಾನದ ದೇವರೂಪವನ್ನು ರಚಿಸಿರುವ ಕಲೆಯು ಅಮೋಘವಾಗಿದೆ. ಈತನ ಶ್ರದ್ಧೆಯು ಎಲ್ಲರಿಗೂ ಬಂದರೆ ಮನೆ-ಮನ, ನಾಡು, ದೇಶ ಮುಂದುವರೆಯುತ್ತವೆ. ಈತನಲ್ಲಿ ಈ ಶ್ರದ್ಧೆ ಮುಂದುವರೆಯಲಿ ಎಂಬುದೇ ಇಲ್ಲಿನ ಆಶಯ. ಸಮಯ ಎಲ್ಲರಿಗೂ ಒಂದೇ ಆದರೆ ಅದರ ನಿರ್ವಹಣೆಯ ಜಾಗೃತಿಯಲ್ಲಿ ನಮ್ಮ ಅಭಿವೃದ್ಧಿ ಇರುತ್ತದೆ.

ದಿನಾಂಕ 23-09-2019


ಕಾಮೆಂಟ್‌ಗಳಿಲ್ಲ: