ಈ ಬ್ಲಾಗ್ ಅನ್ನು ಹುಡುಕಿ

ಭಾನುವಾರ, ಸೆಪ್ಟೆಂಬರ್ 2, 2018

ಕೃಷ್ಣ ರಾಧೆಯರ ಕಥೆಯು..

ಕೃಷ್ಣನೆಂದರೆ ಪ್ರೇಮ
ರಾಧೆಯದರ ಭಾವ
ಮನುಜರೋಲಿಕೆಯ
ದೇಹವಿಲ್ಲ, ದಾಹ ಮೊದಲಿಲ್ಲ!

ಕೊಳಲದೋ ಜಗದನಿಯು
ಸವಿದಳು ಮನದನ್ನೆ
ಶೃಂಗಾರ ಮೋಹದಲಿ
ಹುಟ್ಟಿದನು ಕಾಮ
ರತಿಯ ರಮಣಾಂಕಿತದಿ

ನವಿಲು ಚಿತ್ರದ ನಗುವೆ
ಕುಂಚದೊಳಗಿನ ಒಲವೆ
ನೋಟದೊಳಗಿನ ಕೂಟ
ಚಿತ್ತಾರ ಬರೆದ ಚೈತ್ರ ಸಾರ

ಕೃಷ್ಣನೆಂದರೆ ಗೊಂಬೆ
ರಾಧೆಯೊಳು ನೀ ಕಾಂಬೆ
ನನ್ನೊಳಗೆ ನೀ ನಂಬೆ
ಅಂಬಿಗನು ನಾನು
ಜಗದ ಸಂಸಾರದಲಿ- ಅಂಕುರ

ಕಾಮೆಂಟ್‌ಗಳಿಲ್ಲ: