ಈ ಬ್ಲಾಗ್ ಅನ್ನು ಹುಡುಕಿ

ಸೋಮವಾರ, ಆಗಸ್ಟ್ 12, 2019








ಮುಳುಗಿದ ಮನುಜ

ಮತ್ತೆ ಮತ್ತೆ ನಾಡಿನಲ್ಲಿ
ಇದೋ ತಿರುಗಿ ನಾಡಿಯಲ್ಲಿ
ಶೋಕ ತುಂಬಿ ಬಂದಿದೆ
ಕೊರಳ ತೇವ ಬತ್ತಿ ಇಂದು
ಕಣ್ಣೀರಲಿ ಕೋಟಿ ಕಥೆಯ ನಾಡಿದೆ

ಕಳೆದ ಬಾರಿ ಕೂರ್ಗಿನಲ್ಲಿ
ಕೇರಳಾದ ಕಡಲಿನಲ್ಲಿ
ಇನ್ನೂ ಜೀವ ನಡುಕವಿದೆ
ಮತ್ತೆ ಶಾಪ ಮೂಡಿದೆ

ಅತ್ತ ಕೃಷ್ಣೆ, ಇತ್ತ ತುಂಗೆ
ಜಲಾಶಯದಿ ಜೋಲಿಯಾಟ
ನೇತ್ರಾವತಿಯ ರೌದ್ರ ರೂಪ
ಕುಮಾರ ಧಾರ, ಫಲ್ಗುಣಿ
ಉಕ್ಕಿ ಹರಿದ ಕಂಬನಿ

ತಿಳಿದವರು ಗಂಟು ಕಟ್ಟಿ
ಊರನೂರ ಸೇರಿ ಬದುಕಿ
ಉಳಿದರು, ಕಣ್ಣೀರ ತಳೆದರು
ತಿಳಿಯದವರ ಗೋಳು ಇದು
ನಾಡು ತುಂಬಾ ದಾನಿ ಬೀಡು
ಇದೋ ಕಲ್ಯಾಣ ನೋಡು
ಪರಿಹಾರ ಪಂಜರ, ಸಾಗುತಿದೆ ಜನಸಾಗರ

ನದಿಯ ಬಳಿಗೆ ಹೋದವರು
ನದಿಯೇ ಬಳಿಗೆ ಬಂದಿದೆ
ಆನಾಗರೀಕತೆಯಿಂದ
ನಾಗರೀಕತೆಗೆ ಹೆಜ್ಜೆ ದನಿಯು ಹೀಗಿದೆ

ಕೈಗಾರೀಕತೆ ಕಟ್ಟಿದೆವು
ಕಂಪನಿಯನೇ ನೆಟ್ಟೆವು
ದುಡಿತದೊಳಗೆ ಜ್ಞಾನ ತುಂಬಿ
ಸೋಮಾರಿಯ ಬದುಕ ನಂಬಿ
ದಾಸರಾಗಿ ದಾಸ್ಯಹೊಂದಿ
ನಮ್ಮ ನಾಡ ಮರೆತೆವು

ಭೂಮಿಯನ್ನು ಕಟ್ಟುವಂತ
ಹರಿವ ನೀರ ಹರಿಸುವಂತ
ಬೆಳಕಿನಿಂದ ಬೆಳಕು ತಂದು
ಕೊಳಕಿನಿಂದ ಫಲವ ಬೆಳೆದು
ಕೆಸರಿನೆಸರ ಬಸಿರಿಗಿಡೆ
ಜ್ಞಾನ ನಮಗೆ ಬೇಕಿದೆ
ಕಣ್ಣು ತೆರೆವ ಮಣ್ಣಿನರಿವು
ಇದೋ ಇಲ್ಲಿ ಮೂಡಿದೆ - ಅಂಕುರ ೧೧+೦೮= ೧೯

ಕಾಮೆಂಟ್‌ಗಳಿಲ್ಲ: