ಈ ಬ್ಲಾಗ್ ಅನ್ನು ಹುಡುಕಿ

ಬುಧವಾರ, ಅಕ್ಟೋಬರ್ 26, 2022

ವಿಶ್ವ ಕವಿ

 















ವಿಶ್ವ ಕವಿ

ಎಣೆದ ಬಲೆಯೇ

ಸಾವಿನ ಸೆಲೆಯು

ವಿಜ್ಞಾನ ಹೇಳುತ್ತಿತ್ತು.

ಬಲೆಯನ್ನು ಬಲಿಸದೇ

ಒಲಿಸಿಕೊಳ್ಳುವ ಕಲೆಯ

ಕಾವ್ಯ ಹಾಡುತ್ತಿತ್ತು.


ನೆಲದ ಕಥೆಯನು ನೆನಸಿ

ಹೊರಲೋಕದ ಬೆಳಕನು ಬೆರಸಿ

ಮಣ್ಣಿನ ಮೂರ್ತಿಯನು

ಮಿದ್ದು, ತನ್ನ ನೋವನು ಬರೆದ

ಕವಿಗೆ ಕಾವ್ಯವೆಲ್ಲವೂ ಗೀತ


ಲೋಕದ ನೋವು, ತನಗೆ ಸುತ್ತಿದೆ

ಎಳೆಎಳೆಯನು ಜೀವತಂತಾಗಿ ಹಾಡುವೆ.

ನಾನು ಕವಿಯು, ಬೇಂದ್ರೆ ಬರಿ ಮಾಸ್ತರ

ಬದುಕಿದನು ಕವಿಯು ಅನಂತಕಾಲ


ಬೆಳಕಿನ ದಿನದಂದೇ, 

ಬೆಳಕಾಗಿ ಉಳಿದವಗೆ 

ಸಾವು ನಿರ್ಭಯ ವ್ಯಾಖ್ಯಾನ

ಉಳಿವು ಒಲವಣತೆಯ 

ಜೀವ ಸಖ್ಯತಾಣ.


- ಅಂಕುರ