ಈ ಬ್ಲಾಗ್ ಅನ್ನು ಹುಡುಕಿ

ಗುರುವಾರ, ಮೇ 18, 2023

ಮೆಟ್ರೋ ಕಥನ - ೪೮

 ಮೆಟ್ರೋ ಕಥನ - ೪೮


ಸುನಾಮಿಯು ಆವರಿಸಿ, ಜನ ತಮ್ಮ ಸ್ಥಳಗಳನ್ನು ಬಿಟ್ಟು ಸಾಗುತ್ತಿದ್ದರು. ಕೆಲವರು ದೋಣಿಯಲ್ಲಿ, ತೆಪ್ಪದಲ್ಲಿ, ಈಜುತ್ತಾ ಹೀಗೆ ಒಬ್ಬೊಬ್ಬರೂ ಒಂದೊಂದು ನಂಬಿಕೆಯ ಬೆನ್ನತ್ತಿದ್ದರು. ವೃದ್ಧನೊಬ್ಬನು ದೇವಿ, ಆಂಜನೇಯ, ರಾಮ, ಮಂಜುನಾಥ ಎಂದು ದೇವರ ಪೋಟೋಗಳನ್ನು ಭದ್ರವಾಗಿ ಹಿಡಿದು ನಡದೇ ಹೋಗುತ್ತಿದ್ದನು. ಎಲ್ಲರೂ ಆತನನ್ನು ದಡ್ಡ, ಅತಿ ಆಸ್ತಿಕ, ಮೂರ್ಖ ಎಂದೆಲ್ಲಾ ತಲೆಗೊಂದು ನುಡಿದರು. ಆದರೆ ಆತ ಹಿಡಿದದ್ದು ಬರಿ ಪೋಟೋ ಅಲ್ಲ. ಅದು ಸದಾ ಧೈರ್ಯ ತುಂಬುವ ನಂಬಿಕೆಯಾಗಿತ್ತು. ಅದೇ  ರೀತಿಯಲ್ಲಿ ಎಲ್ಲರೂ ಏನನ್ನಾದರೂ ಒಂದೊಂದು ಹಿಡಿದಿದ್ದರು. ಇದನ್ನು ಅರ್ಥೈಸಲು ಕಷ್ಟವಾಗಿತ್ತು. ಏಕೆಂದರೆ ಅವರ ಕುರಿತು ಅವರಿಗೆ ಸರಿಯಾದ ನಂಬಿಕೆ ಇರಲಿಲ್ಲ.


- ಅಂಕುರ

ಕಾಮೆಂಟ್‌ಗಳಿಲ್ಲ: