ಈ ಬ್ಲಾಗ್ ಅನ್ನು ಹುಡುಕಿ

ಗುರುವಾರ, ಮೇ 18, 2023

ಮೆಟ್ರೋ ಕಥನ - ೫೦

 ಮೆಟ್ರೋ ಕಥನ - ೫೦



ಅಂದು,

ಕಾಡು ಬಯಲಿನ ನಡುವೆ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ನೂರಾರು ಮೈಲಿ ಸಾಗುತ್ತಿದ್ದ ಕಾಲವದು. ರಸ್ತೆ ಪಕ್ಕ ಸಾಲು ಮರಗಳ ನೆರಳು. ಅಲ್ಲಲ್ಲೆ ನೀರು, ಮಜ್ಜಿಗೆಗಳ ಅರವಟ್ಟಿಗೆಯನ್ನಿಡುತ್ತಿದ್ದ ಪುಟ್ಟ ಹಳ್ಳಿಗಳು. ಕೊರತೆಯೇ ತುಂಬಿರುವ ಕಾಲದಲ್ಲಿ ಎಲ್ಲರಿಗೂ ಆತ್ಮತೃಪ್ತಿ ಇತ್ತು. 

ಇಂದು, 

ಅದೇ ರಸ್ತೆ, ಅದೇ ನೆರಳು, ಅದೇ ಪಾನಕಗಳಿಗೆ ಹಣಕೊಟ್ಟು ವೇಗವಾಗಿ ಕಾಲದ ಹಿಂದೆ ತೃಪ್ತಿಗಾಗಿ ಓಡುತ್ತಿದ್ದೇವೆ.


ಅಂದು,

ತಿನ್ನಲು ಸಮಯವಿತ್ತು,

ಅನ್ನ ವಿರಲಿಲ್ಲ.

ಇಂದು, 

ಅನ್ನವಿದೆ

ತಿನ್ನಲು ಸಮಯವಿಲ್ಲ.

ಅಂದನಿಗೆ ಸಾಧು ಹೇಳಿದ ಈ ನುಡಿಗಳಲ್ಲಿ ತೃಪ್ತಿ - ಆತ್ಮತೃಪ್ತಿಯ ಸರಳ ಸಾರವಿತ್ತು.


- ಅಂಕುರ

ಕಾಮೆಂಟ್‌ಗಳಿಲ್ಲ: