ಈ ಬ್ಲಾಗ್ ಅನ್ನು ಹುಡುಕಿ

ಸೋಮವಾರ, ಜುಲೈ 24, 2017

    ರಂಗಭೂಮಿಯೆಂಬ ವಿಶ್ವರೂಪಕ 





ರಂಗಭೂಮಿ ಇಂದು ಶ್ರೀಮಂತಗೊಂಡಿದೆ. ಆಸ್ವಾದಿಸುವ ಪ್ರೇಕ್ಷಕನನ್ನು, ಸಮೃದ್ದಿಯ ವಿನ್ಯಾಸದೊಂದಿಗೆ ನಟನೆಯನ್ನು ಹೊಂದಿರುವ ಪ್ರಸ್ತುತ ಕಾಲಘಟ್ಟದ ಕಲೆಯಾಗಿದೆ. ಸಾಹಿತ್ಯ ಅಧ್ಯಯನ ಸ್ವರೂಪಿಯಾದ ಈ ಮನೋರಂಜನಾ ಕಲೆಗಳು ಬದುಕನ್ನು ಬದಲಿಸುವಲ್ಲಿ ಯಶಸ್ವಿಯಾಗಿವೆ, ಆಧುನಿಕ ನೋಟಗಳಿಗೂ ರಸದೌತಣ ಮಾಡುವ ಕಲೆ ಬದಲಾವಣೆಯ ನೈತಿಕತೆಯನ್ನು ನಿರ್ವಹಿಸುತ್ತಿದೆ. ಕರ್ನಾಟಕದಲ್ಲಿ ರಂಗಭೂಮಿಯ ಚಾಪು ಅನನ್ಯವಾದುದು.  ಬಿ.ವಿ ಕಾರಂತ, ಕೆವಿ ಸುಬ್ಬಣ್ಣನಂತಹ  ಕಲಾಚಿಂತಕರು ಸೃಷ್ಟಿಸಿದ ಕಲೆಯ ಬೀಜಗಳು ಈ ಮಣ್ಣಿನಲ್ಲಿ ಬೀಳಲು ಎಲ್ಲಾ ದಿಕ್ಕುಗಳಿಗೂ ಹಬ್ಬಿ, ಗಾಳಿಯಲ್ಲಿ ತೂರಿ, ನೀರಿನಲ್ಲಿ ತೇಲಿ ಇಂದು ರಂಗಭೂಮಿ ಎಂಬುದು ಒಂದು ಅಕಾಡೆಮಿಕ್ ಆದ ಚಿಂತನೆಯಾಗಿದೆ.
    ಪ್ರದರ್ಶನವೆಂಬುದು  ಹಲವು ಶ್ರಮಗಳ ಫಲ. ಒಂದು ನಾಟಕ ಸಿದ್ಧಗೊಳ್ಳಲು ಬೇಕಾದ ಪೂರ್ಣಪ್ರಯತ್ನವೆಂಬುದು ಪಾತ್ರದೊಳಗೆ ಪ್ರವೇಶಿಸುವ ಕಲಾವಿದನ ರಸಯಾತ್ರೆ, ಪರಕಾಯ ಪ್ರವೇಶದ ನೈತಿಕ ಬದ್ಧತೆ. ಹೆಜ್ಜೆಹೆಜ್ಜೆಗೂ ಪ್ರೇಕ್ಷಕನ ಚಿಂತನೆಯಲ್ಲಿ ನಡೆಸುವ ಸಂಶೋಧನಾ ಹೊಸರೂಪತೆ. ಇಂತಹ ರಂಗಭೂಮಿ ಚಿಂತನೆ ಕುರಿತು ಹಲವು ಲೇಖನಗಳಿವೆ. ಏಕೆಂದರೆ ರಂಗಭೂಮಿ ಕಲೆ ಪಸರಿಸಿರುವ ಪರಿ ವಿಶ್ವರೂಪಕವಾದುದು. ಗ್ರೀಕ್ ಚಿಂತನೆಯಿಂದ, ರೋಮ್‍ನ ಪ್ರಯೋಗಗಳಿಂದ ಸಾಹಿತ್ಯದ ಜೊತೆ ಪ್ರದರ್ಶನವನ್ನೂ ಹೊತ್ತು ತಂದ ಈ ಕಲೆ ಇಂದು ದೇಸಿಯ ಕಲೆಯೊಂದಿಗೆ ಜನಪದ ನಂಟನ್ನು ಬೆಸೆದು ದೇಶ-ಕಾಲ-ಕಲೆಯ ತ್ರಿಕೂಟವನ್ನು ಎಲ್ಲಾ ಕಡೆಯಿಂದಲೂ ಪಸರಿಸಿದೆ. ಮಾಧ್ಯಮವೂ ಇದರ ಒಂದು ಅಂಗವಾಗಿದೆ. ಧ್ವನಿ ಮೊದಲ ಪದಿಯಾದರೆ, ನಟನೆ ಅದರ ಅಂಗ. ಬೆಳಕು ಹಾಗೂ ಸಂಗೀತ, ವೇಶದ ವಿನ್ಯಾಸದಂತೆ ಬಹುಮುಖ್ಯ ಜೀವನಾಡಿಗಳು.
    ರಂಗಭೂಮಿ ಎಂಬ ಕಲೆ ಕರ್ನಾಟಕದಲ್ಲಿ ಎಲ್ಲಾ ಭಾಗದಲ್ಲೂ ಮೂಡಿಬರುತ್ತಿರುವ ಈ ಹೊತ್ತಿನಲ್ಲಿ ನೀನಾಸಂನಂತಹ, ರಂಗಾಯಣದಂತಹ ಕೇಂದ್ರಗಳು ಹಲವು ಕಲಾವಿದರನ್ನು ಮುಕ್ತವಾಗಿ ನೀಡುತ್ತಾ ಬಂದಿವೆ. ಹಲವು ಕಲಾವಿದರು ರಂಗಭೂಮಿಯಲ್ಲೇ ಮುಂದುವರೆದರೆ, ಕೆಲವು ಕಲಾವಿದರು ಸಿನಿಮಾ ಕ್ಷೇತ್ರದಲ್ಲಿ ತೊಡಗಿದ್ದಾರೆ. ಇಲ್ಲೆಲ್ಲಾ ಕಲಾವಿದರಾಗಿ ಉಳಿಯುವ ಜೊತೆಯಲ್ಲಿ ಕಲೆಯನ್ನು ವಿಸ್ತರಿಸಿಕೊಳ್ಳುವ ಪ್ರಯೋಗ ಇವರದು. ಗುರುವಾಗಿ, ವಿನ್ಯಾಸಕರಾಗಿ ನಿರ್ದೇಶನ ಜಗತ್ತನ್ನು ತಮ್ಮದೇ ಆದ ರಂಗಭೂಮಿ ಕ್ಷೇತ್ರವನ್ನು ಸ್ಥಾಪಿಸುವಷ್ಟು ವಿಸ್ತಾರವಾದ ಜಗತ್ತು ಇವರದಾಗಿದೆ.
ಒಂದು ಜಗತ್ತಿನೊಳಗೆ ನಿಮ್ಮನ್ನು ಆಹ್ವಾನಿಸುವುದಾದರೆ ಆಳ್ವಾಸ್ ಶಿಕ್ಷಣ ಸಂಸ್ಥೆಯು ರಂಗಭೂಮಿ ಅಧ್ಯಯನವನ್ನೂ ತುಂಬಾ ತಾತ್ವಿಕವಾಗಿ ನೀಡುತ್ತಿದೆ. ಉತ್ತಮ ಪ್ರಯೋಗಗಳು ಪ್ರೇಕ್ಷಕವರ್ಗಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ನೀಡುತ್ತಾ ಬಂದಿದೆ. ಇಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೂ ಅದರ ರಸಚಿಂತನೆಯ ನೋಟ ಸದಾ ಲಭಿಸುತ್ತದೆ. ನುಡಿಸಿರಿಯಂತಹ ಅಂತರಾಷ್ಟ್ರೀಯ ಪ್ರೇಕ್ಷಕವರ್ಗವನ್ನು ಸಂಪಾದಿಸಿದ ಕಾರ್ಯಕ್ರಮದಲ್ಲೂ ರಂಗಭೂಮಿ ಒಂದು ಭಾಗ. ನಿರ್ದೇಶಕರಾದ ಜೀವನರಾಂ ಸುಳ್ಯ ಅವರ ನೂರಾರು ಪ್ರದರ್ಶನಗಳನ್ನು ಕಂಡ ಎಲ್ಲಾ ಸಾಹಿತ್ಯ ನಾಟಕಗಳು ರಂಗಭೂಮಿಯಲ್ಲೇ ಒಂದು ಮೈಲಿಗಲ್ಲು. ಅದಕ್ಕೆ ಉತ್ತಮ ಉದಾಹರಣೆಯಾಗಿ ಹೇಳುವುದಾದರೆ ಅವರ ನಿರ್ದೇಶನದಲ್ಲಿ ಮಾಡುವ ಹೊಸಪ್ರಯೋಗಗಳು. 
ಜೀವನರಾಂ ಸುಳ್ಯ

      ದಕ್ಷಿಣ ಕನ್ನಡ ಭಾಗದ ಸಾಂಸ್ಕøತಿಕ ಚಿಂತನೆಯ ಹೊಸ ಪ್ರಯೋಗಾತ್ಮಕ ಮಿಳಿತಗಳನ್ನು ನೋಡುವುದರಲ್ಲೇ ಗ್ರಹಿಸಬೇಕು. ಮಹಾಮಾಯಿ, ಧಾಂಧೂಂ ಸುಂಟರಗಾಳಿಯಂತಹ ಪ್ರಯೋಗಗಳನ್ನೇ ಹೇಳುವುದಾದರೆ ಅಲ್ಲಿನ ಪ್ರತಿ ನಟರ ಶ್ರಮ, ಅವರ ನಿತ್ಯ ಪ್ರಯೋಗದೊಂದಿಗೆ ಒಳಗೊಳ್ಳುವ ಪರಕಾಯ ಪ್ರವೇಶ, ಬೆಳಕಿನ ವಿನ್ಯಾಸ, ಧ್ವನಿಯ ಸಾಪೇಕ್ಷತೆ, ಪ್ರತಿಯೊಬ್ಬರೂ ಒಪ್ಪಿಕೊಳ್ಳಬೇಕಾದ ಕಲಾವಿದರೆ! ನಿರ್ದೇಶಕರು ಹಾಗೂ ಇವರಲ್ಲಿ ಹಲವು ರಂಗ ತಾಂತ್ರಿಕರು ಪ್ರತ್ಯೇಕ ಲೇಖನಕ್ಕೇ ಅರ್ಹರು. ಇಲ್ಲಿ ಹೆಚ್ಚು ಹೇಳಲಾರೆ ಇವರನ್ನು ಮೊದಲ ಪದಿಯಲ್ಲೇ ಕೂತು “ನಾಟಕವನ್ನು ಮುಂದೆ, ಸಿನಿಮಾವನ್ನು ಹಿಂದೆ ನೋಡು” ಎಂಬಂತೆ ನೋಡಿದಾಗ ದಕ್ಕುವ ಸಾಹಿತ್ಯ ರಸ ದೌತಣ ಮರೆಯದ ಮೌಲ್ಯತಮ ನೆನಪು. - @ಅಂಕುರ