ಈ ಬ್ಲಾಗ್ ಅನ್ನು ಹುಡುಕಿ

ಶುಕ್ರವಾರ, ಆಗಸ್ಟ್ 24, 2018

ಪತ್ರಿಕೆಯ ಪ್ರಕಟಣೆಗಾಗಿ...
ಸಾಧನಕೇರಿ ಸಾಹಿತ್ಯ ಮತ್ತು ಸಾಂಸ್ಕøತಿಕ ಪ್ರತಿಷ್ಠಾನ, ಬೆಂಗಳೂರು ಇವರು ದಿನಾಂಕ 26 ಆಗಸ್ಟ್ 2018ರಂದು ಸಮಯ 9.30ಘಂಟೆಗೆ ಶ್ರೀ ಕೃಷ್ಣರಾಜ ಮಂದಿರ, ಕನ್ನಡ ಸಾಹಿತ್ಯ ಪರಿಷತ್, ಚಾಮರಾಜಪೇಟೆ ಇಲ್ಲಿ ಸಾಧನಕೇರಿ ಸಾಹಿತ್ಯ ಮತ್ತು ಸಾಂಸ್ಕøತಿಕ ಪ್ರತಿಷ್ಠಾನದ ಉದ್ಘಾಟನೆ ಹಾಗೂ ಧ್ವನಿಸಾಂದ್ರಿಕೆ ಮತ್ತು ಸಾಹಿತ್ಯ ಕೃತಿಗಳ ಲೋಕಾರ್ಪಣೆ ಸಮಾರಂಭ ಹಮ್ಮಿಕೊಂಡಿದ್ದಾರೆ. ಕನ್ನಡ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಡಾ.ಅರವಿಂದ ಮಾಲಗತ್ತಿಯವರು ಈ ಕಾರ್ಯಕ್ರಮವನ್ನು ಉದ್ಘಾಟಿಸುತ್ತಾರೆ. ಹಿರಿಯ ಸಾಹಿತಿಗಳು ಮತ್ತು ಸಾಧನಕೇರಿ ಸಾಹಿತ್ಯ ಮತ್ತು ಸಾಂಸ್ಕøತಿಕ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಡಾ. ಸಿದ್ಧಲಿಂಗಯ್ಯನವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
  ಸಾಧನಕೇರಿ ಸಾಹಿತ್ಯ ಮತ್ತು ಸಾಂಸ್ಕøತಿಕ ಪ್ರತಿಷ್ಠಾನದ ಅಧ್ಯಕ್ಷರಾದ ವತ್ಸಲ ಸುರೇಶ್ ಅವರು ಕಾರ್ಯಕ್ರಮ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡುವರು. ಸಾಧನಕೇರಿ ಸಾಹಿತ್ಯ ಮತ್ತು ಸಾಂಸ್ಕøತಿಕ ಪ್ರತಿಷ್ಠಾನದ ಉಪಾಧ್ಯಕ್ಷರಾದ ಪ್ರಕಾಶ್ ಜೈನ್, ಖಜಾಂಚಿಗಳಾದ ಡಿ. ಎಸ್. ಮಂಜುನಾಥ್, ಕಾರ್ಯಕಾರಿ ಸಮಿತಿಯ ಸದಸ್ಯರಾದ ಡಾ. ಶಿವಕುಮಾರ ಮಾಲಿ ಪಾಟೀಲ್, ಪ್ರಸಾದ್ ನಾಯಕ್, ಹಿರಿಯ ರಂಗಕರ್ಮಿ, ನಟ, ನಿರ್ದೇಶಕರಾದ ಸೇತುರಾಂ, ಕಲ್ಲುಬಾಳು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಬಸವರಾಜು, ನಿರಂತರ ಪ್ರಕಾಶನದ ಪ್ರವೀಣ್ ಜಾಗಟ ಮತ್ತು ಚಂದ್ರಕೀರ್ತಿ, ಸಾಹಿತಿಗಳಾದ ವಾಸುದೇವ್ ನಾಡಿಗ್ ಮೊದಲಾದವರು ಉಪಸ್ಥಿತರಿರುತ್ತಾರೆ. ಈ ಕಾರ್ಯಕ್ರಮದಲ್ಲಿ ‘ಒಲವನಾದ’, ‘ಭಾವದಲೆಗಳು’, ‘ಭಾವತೀರದಲ್ಲಿ’ ಈ ಮೂರು ಧ್ವನಿಸಾಂದ್ರಿಕೆಗಳು ಮತ್ತು ಬಣ್ಣದ ಗರಿ(ಕವನಸಂಕಲನ), ಬಣವೆ(ಕಥಾ ಸಂಕಲನ), ಅಡಿಗಲ್ಲು(ಲೇಖನ ಸಂಕಲನ) ಸಾಹಿತ್ಯ ಕೃತಿಗಳು ಸಾಧನಕೇರಿ ಸಾಹಿತ್ಯ ಮತ್ತು ಸಾಂಸ್ಕøತಿಕ ಪ್ರತಿಷ್ಠಾನದ ಸದಸ್ಯರೆಲ್ಲಾ ಸೇರಿ ರಚಿಸಿದ ಈ ಎಲ್ಲಾ ಸಾಹಿತ್ಯ ಕೃತಿಗಳು ಲೋಕಾರ್ಪಣೆಗೊಳ್ಳಲಿವೆ. ಕಾರ್ಯಕ್ರಮದಲ್ಲಿ ಕುಮಾರಿ ಪ್ರಜ್ಞ ಮರಾಠೆ ಮತ್ತು ಶ್ರೀ ಚೇತನ್ ರಾಮ್ ಅವರು ಗೀತ ಗಾಯನ ನಡೆಸಿಕೊಡಲಿದ್ದಾರೆ. ಕಾರ್ಯಕ್ರಮದಲ್ಲಿ ಸಾಧನಕೇರಿಯ ಸರ್ವ ಸದಸ್ಯರೂ ಹಾಗೂ ಸಹೃದಯರು ಭಾಗವಹಿಸಲಿದ್ದಾರೆ. ಕಾರ್ಯಕ್ರಮವನ್ನು ಶಿವಾನಂದ ಬಡಿಗೇರ್ ಅವರು ಸ್ವಾಗತಿಸುತ್ತಾ, ಶ್ರೀ ಲೋಕೇಶ್ ಅವರು ವಂದನಾರ್ಪಣೆ ನಡೆಸಿಕೊಡಲಿದ್ದಾರೆ. ಈ ಕಾರ್ಯಕ್ರಮವನ್ನು ಶ್ರೀಮತಿ ಅನಿತ ಕೆ.ವಿ ಹಾಗೂ ರವಿಶಂಕರ್ ಎ.ಕೆ ಅವರು ನಿರೂಪಿಸಿ ನಿರ್ವಹಿಸಲಿದ್ದಾರೆ.




ಇದೇ ಕಾರ್ಯಕ್ರಮದಲ್ಲಿ ಬಣವೆ ಸಂಕಲನದಲ್ಲಿ ನನ್ನ ಮೊದಲ ಕಥಾ ಬರಹ ಮಂದಣ್ಣ ಎಂಬ ಸೃಜನಶೀಲ ಬರಹ ನಿಮಗೆ ನೀಡುತ್ತಿದ್ದೇನೆ.
ಪ್ರಕಟಗೊಳ್ಳುವ ನನ್ನ ಸಾಹಿತ್ಯ
*ಕವಿತೆಗಳು- ಮೆಲುಕು, ತಂಗಾಳಿ ಕೂಗಿದಾಗ(ಬಣ್ಣದ ಗರಿ)
ಕಥೆ- ಮಂದಣ್ಣ(ಬಣವೆ)
ವಿಮರ್ಶೆ-ಪಂಪನ ಸಾಹಿತ್ಯದಲ್ಲಿ ಪ್ರಕೃತಿ
ಬಸವಣ್ಣನ ವಚನಗಳಲ್ಲಿ ವೈಚಾರಿಕತೆ

ನನ್ನ ಎಲ್ಲಾ ಆತ್ಮೀಯರಿಗೂ ಸಹೃದಯ ಸ್ವಾಗತ..

ಕಾಮೆಂಟ್‌ಗಳಿಲ್ಲ: