ಈ ಬ್ಲಾಗ್ ಅನ್ನು ಹುಡುಕಿ

ಭಾನುವಾರ, ಮಾರ್ಚ್ 21, 2021

ಕವಿತೆ

 ಕವಿತೆ ...



ಚೆಲುವನ್ನೇ ಪೋಣಿಸಿ

ಬೆರಳ ಲೆಕ್ಕದಲಿ ಗುಣಿಸಿ, ಬಾಗಿಸಿ

ಅಕ್ಷರದ ದಾರಿಯಲಿ ಶಿಸ್ತಾಗಿ 

ನಿಲ್ಲಿಸಿದ ಬೆಳಕು ಕಂಬದಂತೆ.


ಕಾಲವನ್ನು ಕೃಷಿಮಾಡಿ

ಮನಸ್ಸಿನ ರೆಕ್ಕೆಗಳಿಗೆ 

ಅನುಭವಗಳ ನೆಯ್ಗೆಯಲಿ

ಹದವಿಟ್ಟ ಪಲ್ಲವಿ


ಅವರಿವರ ನೆನಪುಗಳ

ಶಾಖ ಸಮ್ಮೋಹಕೆ ಸಿಲುಕಿ

ನೇತುಬಿದ್ದ ಸಾಲುಗಳು

ಬಣ್ಣ ಬಳಿದ ಮೂಕಾಭಿನಯ


ಈಗ ಕಾಣುವಾಸೆಯ ಬಿತ್ತಿ

ಇರುವಾಸೆಗಳನೆಲ್ಲಾ ತೊರೆದು

ಅವರಿವರ ಇವರವರ ನೆಚ್ಚಿ

ತನ್ನನ್ನೇ ಮಾರಿಕೊಳ್ಳವ ಹಪಾಹಪಿ


ಏನೇ ಆಗಲಿ,


ಮನಸ್ಸಿಗೆ ಮುದವನ್ನು

ಕನಸಿಗೆ ಹದವನ್ನು

ನುಡಿ-ಬರಹಕೆ ನಾದವನ್ನು

ಸೃಷ್ಠಿ-ದೃಷ್ಠಿಯಲಿ ತರುವ ಚಾಣಚೂರ್ಣ.

- ಅಂಕುರ ೨೧ ಮಾರ್ಚ್ ೨೧