ಈ ಬ್ಲಾಗ್ ಅನ್ನು ಹುಡುಕಿ

ಸೋಮವಾರ, ಮೇ 17, 2021

ಸಾವು ಮತ್ತು ಬುದ್ಧ

 ಸಾವು ಮತ್ತು ಬುದ್ಧ



ಸಾವಿಲ್ಲದ ಮನೆಯ ಸಾಸಿವೆಯ ತರಬಹುದೆ,

ಸಾವಿನುತ್ತರಕೆ ಶತಮಾನಗಳೇ ಬರಿದು.

ನೊಂದವರಿಗಷ್ಟೆ ಗೊತ್ತು ನೋವಿನ ಬೆಲೆಯು

ಭಯದಲ್ಲೇ ಬರಿದಾಗುತಿದೆ ಸಾವಿನ ನೆಲೆಯು.


ಇದ್ದವರದೊಂದು ಕೂಡಿಡುವ ಚಿಂತೆ

ಜೀವವೆಂದರೆ ಲಾಭ ತುಂಬಿಡುವ ಸಂತೆ

ಸೂತಕದ ಮನೆಯಲ್ಲಿ ದೀಪವೇ ಹೇಳುವುದು

ತಲೆಮಾರು ಕಳೆದರೂ ಅಳಿಸದ ಕಲೆಯೆಂದು


ಸಾಲು ಸಾವುಗಳಲ್ಲಿ, ಚಿತೆಯ ಬೆಂಕಿಯ ಕಥೆಯು

ಮಣ್ಣಲ್ಲಿ ಮಣ್ಣಾದ ಶೋಕ ಸ್ಮಶಾನದ ವ್ಯಥೆಯು


ನೋವೆಂದರೇನು?

ಬರಿಯ ಭ್ರಮೆಯೆ, 

ಅನುಭವದ ಮನೆಯೆ, 

ಹಾಸ್ಯ ಆನಂದಕ್ಕಾಗಿ 

ತುಡಿದ ಜೀವಗಳೆಲ್ಲಾ 

ಒಟ್ಟಿಗೆ ಅಳುವುದು, ಕಷ್ಟ ಶಿವನೆ.


ಕಳೆದ ಕಾಲದ ನೆನಪು

ನನಗೂ ನಿನಗೂ ಸಾವು ಅನಿವಾರ್ಯ.

ಸತ್ಯವನು ಮೊದಲು ತಿಳಿ

ಭ್ರಮೆಗಳನು ಕಳಚಿ ನಡೆ

ಬದುಕು ಹೋರಾಟ. 

ಸತ್ಯದಾಟದಲಿ ನಮದೊಂದು ಪಾತ್ರವಷ್ಟೆ.

- ಅಂಕುರ ೧೬.೦೫.೨೧

1 ಕಾಮೆಂಟ್‌:

Suma Ramesh ಹೇಳಿದರು...

ವಾಸ್ತವದ ಅನಾವರಣ..ಉತ್ತಮ ಅಭಿವ್ಯಕ್ತಿ..👌👌