ಈ ಬ್ಲಾಗ್ ಅನ್ನು ಹುಡುಕಿ

ಶನಿವಾರ, ಜೂನ್ 17, 2023

ಮೆಟ್ರೋ ಕಥನ - ೯೭

ಮೆಟ್ರೋ ಕಥನ - ೯೭


 ಆನಂದನು ಬಹಳ ಮಾತುಗಾರ. ಎಲ್ಲೇ ತಪ್ಪು ಅನಿಸಿದರೂ ಪ್ರಶ್ನಿಸಿ, ವಿರೋಧಿಸುತ್ತಿದ್ದ. ಎಲ್ಲರೂ ದ್ವೇಷಿಸುತ್ತಿದ್ದರು. ಇವನಿಗೂ ಬೇಸರಗಳೇ ಹೆಚ್ಚಾಗಿ, ಆರೋಗ್ಯ ಹಾಳಾಯಿತು. ಒಮ್ಮೆ ಸಾಧುಗಳನ್ನು ಭೇಟಿಯಾದ. ಸಾಧುಗಳು ಆನಂದದ ಅರ್ಥ ತಿಳಿಸಿ, ಮೌನದ ಪ್ರೀತಿ ಹೇಳಿಕೊಟ್ಟರು. ಆನಂದ ಈಗ ತುಂಬಾ ಮೌನಿಯಾಗಿದ್ದಾನೆ. ಎಲ್ಲಾ ಸಂದರ್ಭದಲ್ಲೂ ನಗುಚೆಲ್ಲಿ ಮುಂದೆ ಸಾಗುತ್ತಾನೆ. ಅವನಿಗೆ ತಿಳಿದಿರುವುದೊಂದೆ! ಲೋಕವನ್ನು ಬದಲಿಸಲಾಗದು, ತಾನು ಬದಲಾದರೆ ಸಾಕು. ಆನಂದನ ವರ್ತನೆಯು ಕೆಲವರಿಗೆ ಲಾಭ ಇರಬಹುದು, ಆದರೆ ಹಲವರು ಬದಲಾಗುತ್ತಿದ್ದಾರೆ.



- ಅಂಕುರ

ಕಾಮೆಂಟ್‌ಗಳಿಲ್ಲ: