ಈ ಬ್ಲಾಗ್ ಅನ್ನು ಹುಡುಕಿ

ಶನಿವಾರ, ಜೂನ್ 17, 2023

ಮೆಟ್ರೋ ಕಥನ - ೯೦

 ಮೆಟ್ರೋ ಕಥನ - ೯೦


ಫಲಿತಾಂಶ ಬಂದಾಗ ರಮೇಶನು ಅದೇಕೋ ಹೀಗೆ ಹೇಳುತ್ತಿದ್ದನು. ಎಲ್ಲಾ ಬರೀ ಮೋಸ, ತಗೊಂಡು ವ್ಯವಹಾರ ಮಾಡ್ತಾರೆ. ನಮ್ಮಂತರು ಎಷ್ಟೆ ಓದಿರೂ ನ್ಯಾಯ ಸಿಗಲ್ಲ. ಓದೋದಕ್ಕಿಂತ ಕೆಲಸಕ್ಕೆ ಹೋಗೋದು ಮೇಲು ಎಂದು ಬೇಸರ ವ್ಯಕ್ತಪಡಿಸುತ್ತಿದ್ದನು. ಉಮೇಶನು ಇದರ ವಿರುದ್ಧವಿತ್ತು. ಅತ್ಯಂತ ಪ್ರಾಮಾಣಿಕ ಪರೀಕ್ಷೆ ಇದು. ನನ್ನ ಶ್ರಮಕ್ಕೆ ಫಲ ಸಿಕ್ಕಿದೆ. ಅದೆಷ್ಟು ನಿದ್ರೆ, ಸಂಬಂಧಗಳ ಕಳಚಿ ಏಕಾಂಗಿಯಾಗಿ ಸಂಘರ್ಷ ಮಾಡಿದುದರ ಫಲ ಇದು ಎಂದನು.


ವಿಶೇಷ ಅಂದರೆ ಇಬ್ಬರೂ ಒಂದೇ ಕೇಂದ್ರ, ಒಂದೇ ಕೊಠಡಿಯಲ್ಲಿ ಪರೀಕ್ಷೆ ಬರೆದಿದ್ದರು.



- ಅಂಕುರ

ಕಾಮೆಂಟ್‌ಗಳಿಲ್ಲ: