ಈ ಬ್ಲಾಗ್ ಅನ್ನು ಹುಡುಕಿ

ಶನಿವಾರ, ಜೂನ್ 17, 2023

ಮೆಟ್ರೋ ಕಥನ - ೯೧

 ಮೆಟ್ರೋ ಕಥನ - ೯೧


ಒಣಗಿದ ಭೂಮಿಯು ಮೊದಲ ಮಳೆಗೆ ತಂಪಾದಂತೆ ಕಂಡಿತು. ಆದರೆ ಭೂಮಿಯೊಳಗಿನ ಕಾವು ಆಗ ಪ್ರಾರಂಭವಾಯಿತು. ಮಿಡತೆಗಳು, ಕಪ್ಪೆ, ಹಾವು ಎಲ್ಲವೂ ಕಾವು ತಡೆಯಲಾರದೆ ಮೇಲೆ ಬಂದವು. ಆಗ ತಾನೆ ಚಿಗುರುತ್ತಿದ್ದ ಹಸಿರು ಹುಲ್ಲನ್ನು ಮಿಡತೆಗಳು ತಿಂದವು. ಈ ಮಿಡತೆಗಳನ್ನು ಕಪ್ಪೆ ತಿಂದಿತು. ಕಪ್ಪೆಯನ್ನು ಹಾವು ನುಂಗಿತು. ಈ ಹಾವಿಗೂ ಹದ್ದಿನ ಕಣ್ಣಿತ್ತು. ಇದನ್ನೆಲ್ಲಾ ಯೋಚಿಸಿದ ತಿಮ್ಮನು ತನ್ನ ಬದುಕು ನೆನಪಾಯಿತು.

ಬಾಲ್ಯದಲ್ಲಿ ತಿಮ್ಮನಾಗಿ ಊರೆಲ್ಲಾ ಬಾಯಲ್ಲಿ ಕೆಲಸಮಾಡಿದೆ. ಬೆಳೆಯುತ್ತಾ ತಿಮ್ಮಣ್ಣನಾಗಿ ಕೆಲಸಮಾಡಿದೆ. ನಗರಕ್ಕೆ ಹೋಗಿ ತಿಮ್ಮೇಶನಾದೆ. ನಾನೂ ಒಂದು ರೀತಿಯ ಆಹಾರ ಚಕ್ರದಲ್ಲಿ ಬಲಿಯಾದವನೇ! ನನ್ನದೇ ಬದುಕು, ನನ್ನದೇ ಚಕ್ರ. ಇದು ತಿಮ್ಮನು ಬರೆದ ಜಗದ ಕಥೆ.


- ಅಂಕುರ

ಕಾಮೆಂಟ್‌ಗಳಿಲ್ಲ: