ಜೀವನ ಪ್ರೀತಿ

ಸಾಹಿತ್ಯವು ಜೀವನದ ಸಂಸ್ಕೃತಿ

ಈ ಬ್ಲಾಗ್ ಅನ್ನು ಹುಡುಕಿ

ಬುಧವಾರ, ಜನವರಿ 15, 2020








ಕುವೆಂಪು ಕುರಿತು ಮಾಹಿತಿ










ಕುವೆಂಪು
ಕನ್ನಡದ ಎರಡನೇ ರಾಷ್ಟ್ರಕವಿ


ಕುವೆಂಪು, ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ (ಡಿಸೆಂಬರ್ ೨೯, ೧೯೦೪[೧] - ನವೆಂಬರ್ ೧೧, ೧೯೯೪), ಕನ್ನಡದ ಅಗ್ರಮಾನ್ಯ ಕವಿ, ಕಾದಂಬರಿಕಾರ, ನಾಟಕಕಾರ, ವಿಮರ್ಶಕ ಮತ್ತು ಚಿಂತಕರಾಗಿದ್ದರು
ಕುವೆಂಪು

ಶ್ರೀ ಕೆ. ವಿ. ಪುಟ್ಟಪ್ಪ
ಜನನಡಿಸೆಂಬರ್ ೨೯, ೧೯೦೪
ಹಿರೇಕೊಡಿಗೆ, ಕೊಪ್ಪ ತಾಲ್ಲೂಕು, ಚಿಕ್ಕಮಗಳೂರು ಜಿಲ್ಲೆ
ಮರಣನವೆಂಬರ್ 11, 1994
ಮೈಸೂರು, ಕರ್ನಾಟಕ, ಭಾರತ
ಅಂತ್ಯ ಸಂಸ್ಕಾರ ಸ್ಥಳಕುಪ್ಪಳಿ, ಶಿವಮೊಗ್ಗ ಜಿಲ್ಲೆ
ಕಾವ್ಯನಾಮಕುವೆಂಪು
ವೃತ್ತಿಕವಿ, ಲೇಖಕ, ಪ್ರಾಧ್ಯಾಪಕ, ಪ್ರಾಂಶುಪಾಲ, ಕುಲಪತಿ
ರಾಷ್ಟ್ರೀಯತೆಭಾರತೀಯ
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆಮೈಸೂರು ವಿಶ್ವವಿದ್ಯಾನಿಲಯ
ಕಾಲ20ನೆಯ ಶತಮಾನ
ಪ್ರಕಾರ/ಶೈಲಿಸಣ್ಣಕತೆ, ಕವಿತೆ, ಕಾದಂಬರಿ, ನಾಟಕ, ವಿಮರ್ಶೆ, ಆತ್ಮಕಥೆ, ಜೀವನ ಚರಿತ್ರೆ, ಮಹಾಕಾವ್ಯ
ವಿಷಯಪ್ರೇಮ, ದೇಶಪ್ರೇಮ, ಪ್ರಕೃತಿ, ಅಧ್ಯಾತ್ಮ, ವಿಚಾರ
ಸಾಹಿತ್ಯ ಚಳುವಳಿನವೋದಯ
ಪ್ರಮುಖ ಪ್ರಶಸ್ತಿ(ಗಳು)ಜ್ಞಾನಪೀಠ ಪ್ರಶಸ್ತಿ, ಪದ್ಮ ವಿಭೂಷಣ ಪ್ರಶಸ್ತಿ, ಕರ್ನಾಟಕ ರತ್ನ ಪ್ರಶಸ್ತಿ, ಪಂಪ ಪ್ರಶಸ್ತಿ
ಬಾಳ ಸಂಗಾತಿಹೇಮಾವತಿ
ಮಕ್ಕಳುಪೂರ್ಣಚಂದ್ರ ತೇಜಸ್ವಿ, ಕೋಕಿಲೋದಯ ಚೈತ್ರ, ಇಂದುಕಲಾ, ತಾರಿಣಿ
ಸಂಬಂಧಿಗಳುಚಿದಾನಂದ ಗೌಡ

ಪ್ರಭಾವಗಳು
  • ಕುಮಾರವ್ಯಾಸ, ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸ, ಮಹಾತ್ಮ ಗಾಂಧಿ, ರವೀಂದ್ರನಾಥ ಟಾಗೋರ್ ಮಿಲ್ಟನ್, ವರ್ಡ್ಸ್ ವರ್ತ್,

ಪ್ರಭಾವಿತರು
  • ದೇ. ಜವರೇಗೌಡ, ಜಿ. ಎಸ್. ಶಿವರುದ್ರಪ್ಪ

ಸಹಿ

www.kuvempu.com
ಕುವೆಂಪು
ಜನನ29 ಡಿಸೆಂಬರ್ ೧೯೦೪
ಹಿರೇಕೊಡಿಗೆ, ಕೊಪ್ಪ, ಚಿಕ್ಕಮಗಳೂರು
ನಿಧನ೧೧ ನವೆಂಬರ್ ೧೯೯೪
ರಾಷ್ಟ್ರೀಯತೆಭಾರತೀಯ
Other namesಕೆ.ವಿ. ಪುಟ್ಟಪ್ಪ
ವೃತ್ತಿಕವಿ
Known forಕವಿತೆಗಳು
Notable work
ರಾಮಾಯಣ ದರ್ಶನಂ
ಇಪ್ಪತ್ತನೆಯ ಶತಮಾನ ಕಂಡ ದೈತ್ಯ ಪ್ರತಿಭೆ. ವರಕವಿ ಬೇಂದ್ರೆಯವರಿಂದ 'ಯುಗದ ಕವಿ ಜಗದ ಕವಿ' ಎನಿಸಿಕೊಂಡವರು. ವಿಶ್ವಮಾನವ ಸಂದೇಶ ನೀಡಿದವರು. ಕನ್ನಡದ ಎರಡನೆಯ 'ರಾಷ್ಟ್ರಕವಿ. ಜ್ಞಾನಪೀಠ ಪ್ರಶಸ್ತಿಯನ್ನೂ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನೂ ಮೊದಲ ಬಾರಿಗೆ ಕನ್ನಡಕ್ಕೆ ತಂದುಕೊಟ್ಟವರು. ಕರ್ನಾಟಕ ಸರ್ಕಾರ ಕೊಡಮಾಡುವ ಕರ್ನಾಟಕ ರತ್ನ ಪ್ರಶಸ್ತಿ ಹಾಗೂ ಪಂಪ ಪ್ರಶಸ್ತಿಗಳನ್ನು ಮೊದಲ ಬಾರಿಗೆ ಪಡೆದವರು.

ಜೀವನ

ಸಾಹಿತ್ಯ ಕೃಷಿ

ಕೃತಿಗಳು








ಮಹಾಕಾವ್ಯ

  1. ಶ್ರೀ ರಾಮಾಯಣ ದರ್ಶನಂ (1949)

ಖಂಡಕಾವ್ಯಗಳು

  1. ಚಿತ್ರಾಂಗದಾ (1936)

ಕವನ ಸಂಕಲನಗಳು

  1. ಕೊಳಲು (1930)
  2. ಪಾಂಚಜನ್ಯ (1933)
  3. ನವಿಲು (1934)
  4. ಕಲಾಸುಂದರಿ (1934)
  5. ಕಥನ ಕವನಗಳು (1937)
  6. ಕೋಗಿಲೆ ಮತ್ತು ಸೋವಿಯಟ್ ರಷ್ಯಾ (1944)
  7. ಪ್ರೇಮ ಕಾಶ್ಮೀರ (1946)
  8. ಅಗ್ನಿಹಂಸ (1946)
  9. ಕೃತ್ತಿಕೆ (1946)
  10. ಪಕ್ಷಿಕಾಶಿ (1946)
  11. ಕಿಂಕಿಣಿ (ವಚನ ಸಂಕಲನ) (1946)
  12. ಷೋಡಶಿ (1946)
  13. ಚಂದ್ರಮಂಚಕೆ ಬಾ ಚಕೋರಿ (1957)
  14. ಇಕ್ಷುಗಂಗೋತ್ರಿ (1957)
  15. ಅನಿಕೇತನ (1963)
  16. ಜೇನಾಗುವ (1964)
  17. ಅನುತ್ತರಾ (1965)
  18. ಮಂತ್ರಾಕ್ಷತೆ (1966)
  19. ಕದರಡಕೆ (1967)
  20. ಪ್ರೇತಕ್ಯೂ (1967)
  21. ಕುಟೀಚಕ (1967)
  22. ಹೊನ್ನ ಹೊತ್ತಾರೆ (1976)
  23. ಕೊನೆಯ ತೆನೆ ಮತ್ತು ವಿಶ್ವಮಾನವ ಸಂದೇಶ(1981)

ಕಥಾ ಸಂಕಲನ

  1. ಸಂನ್ಯಾಸಿ ಮತ್ತು ಇತರ ಕಥೆಗಳು (1936)
  2. ನನ್ನ ದೇವರು ಮತ್ತು ಇತರ ಕಥೆಗಳು (1940)

ಕಾದಂಬರಿಗಳು

  1. ಕಾನೂರು ಹೆಗ್ಗಡತಿ (1936)
  2. ಮಲೆಗಳಲ್ಲಿ ಮದುಮಗಳು (1967)

ನಾಟಕಗಳು

  1. ಯಮನ ಸೋಲು (1928)
  2. ಜಲಗಾರ (1928)
  3. ಬಿರುಗಾಳಿ (1930)
  4. ವಾಲ್ಮೀಕಿಯ ಭಾಗ್ಯ (1931)
  5. ಮಹಾರಾತ್ರಿ (1931)
  6. ಸ್ಶಶಾನ ಕುರುಕ್ಷೇತ್ರಂ (1931)
  7. ರಕ್ತಾಕ್ಷಿ (1933)
  8. ಶೂದ್ರ ತಪಸ್ವಿ (1944)
  9. ಬೆರಳ್‍ಗೆ ಕೊರಳ್ (1947)
  10. ಬಲಿದಾನ (1948)
  11. ಚಂದ್ರಹಾಸ (1963)
  12. ಕಾನೀನ (1974)

ಪ್ರಬಂಧ

  1. ಮಲೆನಾಡಿನ ಚಿತ್ರಗಳು (1933)

ವಿಮರ್ಶೆ

  1. ಕಾವ್ಯವಿಹಾರ (1946)
  2. ತಪೋನಂದನ (1950)
  3. ವಿಭೂತಿಪೂಜೆ (1953)
  4. ದ್ರೌಪದಿಯ ಶ್ರೀಮುಡಿ (1960)
  5. ರಸೋ ವೈ ಸಃ (1963)
  6. ಇತ್ಯಾದಿ (1970)

ಆತ್ಮಕಥೆ

  1. ನೆನಪಿನ ದೋಣಿಯಲ್ಲಿ: ಕುವೆಂಪು ಮದುವೆ ಪ್ರಸಂಗ

ಜೀವನ ಚರಿತ್ರೆಗಳು

  1. ಸ್ವಾಮಿ ವಿವೇಕಾನಂದ
  2. ರಾಮಕೃಷ್ಣ ಪರಮಹಂಸ

ಅನುವಾದ

  1. ಗುರುವಿನೊಡನೆ ದೇವರಡಿಗೆ (ಭಾಗ 1, 2) (1954)
  2. ಕೊಲಂಬೋ ಇಂದ ಆಲ್ಮೋರಕೆ

ಭಾಷಣ-ಲೇಖನ

  1. ಸಾಹಿತ್ಯ ಪ್ರಚಾರ (1930)
  2. ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ (1944)
  3. ಷಷ್ಠಿನಮನ (1964)
  4. ಮನುಜಮತ-ವಿಶ್ವಪಥ (1971)
  5. ವಿಚಾರ ಕ್ರಾಂತಿಗೆ ಆಹ್ವಾನ (1976)

ಶಿಶು ಸಾಹಿತ್ಯ

  1. ಅಮಲನ ಕಥೆ (1924)
  2. ಮೋಡಣ್ಣನ ತಮ್ಮ (ನಾಟಕ) (1926)
  3. ಹಾಳೂರು (1926)
  4. ಬೊಮ್ಮನಹಳ್ಳಿಯ ಕಿಂದರಿಜೋಗಿ (1928)
  5. ನನ್ನ ಗೋಪಾಲ (ನಾಟಕ) (1930)
  6. ನನ್ನ ಮನೆ (1946)
  7. ಮೇಘಪುರ (1947)
  8. ಮರಿವಿಜ್ಞಾನಿ (1947)
  9. ನರಿಗಳಿಗೇಕೆ ಕೋಡಿಲ್ಲ (1977)

ಇತರೆ

  1. ಜನಪ್ರಿಯ ವಾಲ್ಮೀಕಿ ರಾಮಾಯಣ

ಆಯ್ದ ಸಂಕಲನಗಳು

  1. ಕನ್ನಡ ಡಿಂಡಿಮ (1968)
  2. ಕಬ್ಬಿಗನ ಕೈಬುಟ್ಟಿ (1973)
  3. ಪ್ರಾರ್ಥನಾ ಗೀತಾಂಜಲಿ (1972)


ಶೂದ್ರ ತಪಸ್ವಿ
- ಕುವೆಂಪು
ಶೂದ್ರ ತಪಸ್ವಿ ಕುವೆಂಪುರವರ ಪ್ರಸಿದ್ಧ ನಾಟಕ ಕೃತಿ. ಮೂಲ ರಾಮಾಯಣದ ಕಥೆ ಆಧರಿಸಿ ಅಲ್ಪ, ಸ್ವಲ್ಪ ಬದಲಾವಣೆಗಳೊಂದಿಗೆ ಈ ನಾಟಕವನ್ನು ಸಿದ್ದಪಡಿಸಲಾಗಿದೆ. ಗುಣಕ್ಕೆ ಮಾತ್ಸರ್ಯ ಇರಬಾರದು. ಒಳ್ಳೆಯದು ಎಲ್ಲಿದ್ದರೂ ಅದನ್ನು ಗೌರವಿಸ ಬೇಕೆಂಬ ತತ್ವ್ತದ ಅಡಿಯಲ್ಲಿ ನಾಟಕ ರೂಪುಗೊಂಡಿರುವುದನ್ನು ಕಾಣಬಹುದಾಗಿದೆ.

ಶೂದ್ರ ತಪಸ್ವಿ, ವಸ್ತು ವಿಷಯ
ರಾಮಾಯಾಣದ ಉತ್ತರಾಕಾಂಡದಲ್ಲಿ ಬರುವ ಪ್ರಕ್ಷಿಪ್ತ ಭಾಗದಲ್ಲಿ ಬರುವ ಕಥೆ. ಶಂಬೂಕ ವಧಾ ಪ್ರಸಂಗ.
ರಾಮನು ರಾಜ್ಯಭಾರ ಮಾಡುವ ಸಂದರ್ಭದಲ್ಲಿ ಒಮ್ಮೆ ಬ್ರಾಹ್ಮಣನ ಮಗನು ಸತ್ತು ಹೋಗುತ್ತಾನೆ. ಇದಕ್ಕೆ ಕಾರಣ ಶೂದ್ರನೊಬ್ಬ ತಪಸ್ಸು ಮಾಡುವುದು ಎಂದು ಬ್ರಾಹ್ಮಣ ರಾಮನ ಬಳಿ ಬಂದು ಆರೋಪಿಸಿ ರಾಮರಾಜ್ಯದಲ್ಲಿ ತನ್ನ ಮಗು ಅಕಾಲಿಕ ಮರಣಕ್ಕೆ ತುತ್ತಾಗಿರುವುದರಿಂದ ನ್ಯಾಯ ಕೊಡಬೇಕೆಂದು ಪರಿಪರಿಯಾಗಿ ಬೇಡುತ್ತಾನೆ. ರಾಮ ಬ್ರಾಹ್ಮಣನ ಮನವೊಲಿಸಲು ಪ್ರಯತ್ನಿಸಿ ಸೋಲುತ್ತಾನೆ.
ಕಡೆಗೆ ಶೂದ್ರ ತಪಸ್ವಿ ತಪಸ್ಸು ಮಾಡುವ ಜಾಗಕ್ಕೆ ಬ್ರಾಹ್ಮಣನೊಂದಿಗೆ ರಾಮನೂ ಬಂದು, ಅವನ ಮನಸ್ಸಿನ ಸಮಾಧಾನಕ್ಕೋಸ್ಕರ ಶೂದ್ರ ತಪಸ್ವಿಯನ್ನು ಸಂಹರಿಸಲು ಮುಂದಾಗಿ ಬಾಣವನ್ನು ಹೂಡುತ್ತಾನೆ. ಆದರೆ ಆ ಭಾಣ ಶೂದ್ರ ತಪಸ್ವಿಯನ್ನು ಪ್ರದಕ್ಷಿಣೆ ಹಾಕಿ, ಬ್ರಾಹ್ಮಣನನ್ನು ಕೊಲ್ಲಲು ಧಾವಿಸಿದಾಗ, ಬ್ರಾಹ್ಮಣ ಕಂಗಾಲಾಗುತ್ತಾನೆ. ನಂತರ ರಾಮನ ಅನುಜ್ಞೆಯಂತೆ ಶೂದ್ರ ತಪಸ್ವಿಗೆ ವಂದಿಸುತ್ತಾನೆ. ತನ್ನ ಪ್ರಾಣ ಮತ್ತು ಮಗುವಿನ ಪ್ರಾಣ ಎರಡನ್ನು ಕಾಪಾಡಿಕೊಳ್ಳುತ್ತಾನೆ.
ಶೂದ್ರ ತಪಸ್ವಿ ೧೯೪೪ರಲ್ಲಿ ಕುವೆಂಪು ರಚಿಸಿದ ‘ಶೂದ್ರ ತಪಸ್ವಿ’ ನಾಟಕಕ್ಕೆ ರಾಮಾಯಣದ ಒಂದು ತುಣುಕನ್ನು ಕಥೆಯಾಗಿ ಆಯ್ದುಕೊಂಡಿದ್ದಾರೆ. ಶೂದ್ರ ತಪಸ್ವಿ ನಾಟಕ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಬಹುಮುಖ್ಯವಾಗಿದ್ದು ಶೋಷಿತರ ಗಟ್ಟಿದನಿಯಾಗಿ ಹೊರಹೊಮ್ಮುತ್ತಲೇ ಅಂದಿನ ಮೇಲ್ವರ್ಗದ ಘಟಾನುಘಟಿ ಸಾಹಿತಿ, ಟೀಕಾಕಾರರ ವಾಗ್ಧಾಳಿ ಮತ್ತು ಅಸಡ್ಡೆಗಳನ್ನು ಧೂಳಿಪಟ ಮಾಡಿ ಒಂದು ಅದ್ಭುತ ಕೃತಿಯಾಗಿ, ಕೆಳವರ್ಗದ ಜನತೆಯ ಆತ್ಮಸ್ಥೈರ್ಯವಾಗಿ ನಿಂತಿದೆ.

ಶೂದ್ರ ಶಂಬೂಕನ ತಲೆ ಉರುಳಿಸುವ ಮೂಲ ರಾಮಾಯಣ: ಮೂಲ ರಾಮಾಯಣ ಕಾವ್ಯದಲ್ಲಿ ಶ್ರೀರಾಮ ಸೀತೆಯನ್ನು ಕಾಡಿಗಟ್ಟಿದ ನಂತರ ವೃದ್ದ ಬ್ರಾಹ್ಮಣನೊಬ್ಬ ತನ್ನ ಮೃತ ಬಾಲಕನನ್ನು ಹೊತ್ತು ತಂದು ರಾಮನ ಅರಮನೆಯ ಮುಂದೆ ಗೋಳಿಡುತ್ತಾನೆ. ರಾಮ ರಾಜ್ಯದಲ್ಲಿ ಶೂದ್ರ ಶಂಬೂಕನು ತಪಸ್ಸು ಮಾಡುತ್ತಿರುವುದರಿಂದಲೇ ತನ್ನ ಮಗನಿಗೆ ಸಾವುಂಟಾಗಿದೆ ಎನ್ನುತ್ತಾನೆ. ರಾಮ ಶೂದ್ರ ಶಂಬೂಕನನ್ನು ಹುಡುಕಿ ತನ್ನ ಖಡ್ಗದಿಂದ ಶಂಬೂಕನ ತಲೆ ಕಡಿಯುತ್ತಾನೆ. ಈ ಕಾರ್ಯವನ್ನು ಗಮನಿಸಿ ಇಂದ್ರಾದಿಗಳೆಲ್ಲಾ ರಾಮನ ಧರ್ಮಪಾಲನೆಗಾಗಿ ಮನಮೆಚ್ಚಿ, ರಾಮನಿಗೆ ವರ ನೀಡುತ್ತಾರೆ. ರಾಮ ಆ ವರದಿಂದ ಸತ್ತಿರುವ ಬ್ರಾಹ್ಮಣ ಬಾಲಕನನ್ನು ಬದುಕಿಸಿಕೊಳ್ಳುತ್ತಾನೆ.

ಶೂದ್ರ ತಪಸ್ವಿಯ ಹಿಂದಿರುವ ಸೃಜನಶೀಲ ಪ್ರತಿಭೆ: ಕುವೆಂಪು ಮೂಲ ರಾಮಾಯಣದಲ್ಲಿರುವ ರಾಮನನ್ನು ಜೀವ-ವಿರೋಧಿ ಮನೋಗುಣದಿಂದ ಶೂದ್ರ ತಪಸ್ವಿಯಲ್ಲಿ ಬಿಡುಗಡೆಗೊಳಿಸಿ ರಾಮ ಮತ್ತು ಬ್ರಾಹ್ಮಣನ ಮನ:ಪರಿವರ್ತನೆಗೊಳಿಸುತ್ತಾರೆ. ಮೃತ್ಯುವನ್ನು ಅಥವಾ ಮನುಷ್ಯ-ವಿರೋಧಿ ಧರ್ಮವನ್ನು ಮನುಷ್ಯ ಧರ್ಮ ಗೆಲ್ಲಬೇಕು ಎಂಬ ನಾಟಕ ಆಶಯ ಭಿತ್ತಿಗೊಳ್ಳುತ್ತದೆ. ಕುವೆಂಪು ಜಾತಿಯ ವಿಷ ಬೀಜ ಬಿತ್ತುವ ಮೂಲ ರಾಮಾಯಣಕ್ಕೆ ವಿಶ್ವಪಥದ ಉಸಿರು ತುಂಬುತ್ತಾರೆ. ನಾಟಕದ ಪ್ರಮುಖ ಮೂರು ದೃಶ್ಯಗಳಲ್ಲಿ ಮೊದಲಿಗೆ, ಮೃತ್ಯುವು ಕೂಡ ಒಂದು ಪಾತ್ರವಾಗಿ ಬರುವ, ಅರಣ್ಯ ಕಾಯುವ ವೃಕ್ಷ ಭೈರವನೊಂದಿಗೆ ಸಂಘರ್ಷಿಸುವ ದೃಶ್ಯ ರೋಚಕವಾಗಿ ಮೂಡಿಬಂದಿದೆ. ಶೂದ್ರ ಶಂಬೂಕ ಋಷಿಯು ತಪಸ್ಸು ಮಾಡುತ್ತಿರುವ ಅರಣ್ಯದೊಳಕ್ಕೆ ಪ್ರವೇಶಿಸುವ ಮೃತ್ಯುವನ್ನು ಅರಣ್ಯ ರಕ್ಷಕ ತಾನೆಂದು ಅಪ್ಪಣೆಯಿಲ್ಲದೆ ಪ್ರವೇಶಿಸಕೂಡದೆಂದು ವೃಕ್ಷ ಭೈರವ ತಡೆಯುತ್ತಾನೆ. ಶೂದ್ರ ತಪಗೈಯುತ್ತಿರುವುದು ಅಧರ್ಮವೆಂಬಂತೆ ಬ್ರಾಹ್ಮಣ ಬಾಲಕ ಅದನ್ನು ನೋಡಿರುವುದರಿಂದ ಮೃತ್ಯುವು ಒಳಹೋಗುವುದು ಅನಿವಾರ್ಯವೆನ್ನುತ್ತಾ ಮೆಲ್ಲ ಮೆಲ್ಲನೆ ಕರಿಮಂಜಾಗಿ ಆಶ್ರಮದ ಕಡೆ ಚಲಿಸುತ್ತದೆ. ಭೈರವನಿಗೆ ರೋಷವುಕ್ಕಿ ‘ಶಿವ ಶಿವಾ! ಏನ್ ಭಯಂಕರಂ ಪಾಪಂ, ಶ್ರೀರಾಮನಾಳು ತಿರ್ಪ್ಪೀ ಧರ್ಮರಾಜ್ಯದೊಳ್!’ ಎಂದು ಹಲುಬುತ್ತಾನೆ. ಎರಡನೆಯ ದೃಶ್ಯದಲ್ಲಿ ಬ್ರಾಹ್ಮಣನೊಬ್ಬ ರೋದಿಸುತ್ತಾ ಶ್ರೀ ರಾಮಚಂದ್ರನ ಅಯೋಧ್ಯೆಯ ಬಳಿಯ ಉದ್ಯಾನವನದಲ್ಲಿ, ಮಗನ ದುರ್ಮರಣ ರಾಮರಾಜ್ಯದಲ್ಲಿ ಅಧರ್ಮವನ್ನು ಹುಟ್ಟು ಹಾಕುತ್ತಿದೆ ಎಂದು ಬೊಬ್ಬಿಡುತ್ತಾನೆ. ಅಲ್ಲಿಗೆ ಬರುವ ರಾಮ ಬ್ರಾಹ್ಮಣನನ್ನುದ್ದೇಶಿಸಿ ‘ನೀಂ ಏನಾದೊಡಂ ಅಪೂಜ್ಯಗೆಯ್ದಿರೇನ್’ ಎಂದಾಗ ಬ್ರಾಹ್ಮಣ ಹೆದರಿ ತೊದಲುತ್ತಾ, ಈ ಅಪರಾಧಕ್ಕೆ ಮೂಲ ರಾಮನೇ ಎನ್ನುತ್ತಾನೆ. ಶೂದ್ರ ತಪಸ್ವಿಯ ದರ್ಶನದ ಫಲವಾಗಿ ನನ್ನ ಮಗನಿಗೆ ಮರಣ ಉಂಟಾಗಿದೆ ಎನ್ನುತ್ತಾನೆ. ರಾಮರಾಜ್ಯದಲ್ಲಿ ತಪಸ್ಸು, ವೇದಾಧ್ಯಯನ, ದರ್ಶನ ಎಲ್ಲವೂ ತನ್ನ ವರ್ಗಕ್ಕೆ ಮಾತ್ರ ಮೀಸಲು, ಶೂದ್ರ ತಪಸ್ಸು ಒಂದು ಅಧರ್ಮ ಎನ್ನುವುದು ಬ್ರಾಹ್ಮಣನ ಅಭಿಪ್ರಾಯ. ಕುವೆಂಪುರವರ ರಾಮ ಬ್ರಾಹ್ಮಣನ ಮಾತಿಗೆ ಪ್ರತ್ಯುತ್ತರವನ್ನು ಮನಸ್ಸಿನಲ್ಲಿ ಯೋಚಿಸುತ್ತಾನೆ: “ವರ್ಣಗರ್ವಾಂಧಂಗೆ ಈ ಶಾಸ್ತ್ರ ಮೂರ್ಖಂಗೆಂತು ಬುದ್ದಿಗಲಿಪೆನ್!’. ಅವನ ಒಡಗೂಡಿ ಪುಷ್ಪಕ ವಿಮಾನವೇರಿ ಹೊರಡುತ್ತಾನೆ. ಮೂರನೆಯ ದೃಶ್ಯದಲ್ಲಿ, ಮಹಾತಪ್ಪಸ್ಸಿನಲ್ಲಿರುವ ಶಂಬೂಕ ಮಹರ್ಷಿ ಆಶ್ರಮಕ್ಕೆ ಶ್ರೀರಾಮ, ಬ್ರಾಹ್ಮಣನ ಪ್ರವೇಶವಾಗುತ್ತದೆ. ತಪೋಗುಣ, ಶಾಂತಿನೆಲೆಸಿರುವ ವಾತಾವರಣ ಕಂಡು ಶ್ರೀರಾಮ ಭಾವಪರವಶನಾಗಿ ಶಂಬೂಕ ಋಷಿಗೆ ಶ್ರೀರಾಮ ಕೈಮುಗಿಯುತ್ತಿದ್ದರೆ, ರೋಷವುಕ್ಕಿದ ಬ್ರಾಹ್ಮಣ ರೋದಿಸುವ ನಾಟಕವಾಡುತ್ತಾ ಶಂಬೂಕನ ಶಿರಚ್ಛೇದ ಮಾಡಬೇಕೆಂದು ಅಲವತ್ತು ಮಾಡುತ್ತಾನೆ. ರಾಮ ಬ್ರಾಹ್ಮಣನಿಗೆ ಕೆಲ ಪ್ರಶ್ನೆ ಹಾಕುತ್ತಾನೆ: ತಪಸ್ಸುಗೈಯುವವನು ಪೂಜ್ಯನಲ್ಲವೇ? ಈ ತಪಸ್ವಿಯಂ ಕೊಲ್ವುದುಂ ಪಾಪಮಾಗದೆ? ಅದಕ್ಕೆ ಬ್ರಾಹ್ಮಣ ‘ನಾಯಿಯ ಹಾಲಿಗೆ ಈ ಶೂದ್ರನ ತಪಸ್ಸು ಸಮ’ ಎಂದಾಗ ರಾಮ ವ್ಯಂಗ್ಯದಿಂದ ‘ಸಾರ್ಥಕವಾಯ್ತು ನೀ ಕಲಿತ ವಿದ್ಯೆ ಆಚಾರ್‍ಯ’ ಎನ್ನುತ್ತಾನೆ. ಬ್ರಾಹ್ಮಣನನ್ನು ಸಂತೈಸಲು ರಾಮ ಶಸ್ತ್ರ ಹೂಡಲು ನಿರ್ಧರಿಸಿದಾಗಲೂ, ತೊಡುವುದಿದ್ದರೆ ಬ್ರಹ್ಮಾಸ್ತ್ರವನ್ನೇ ತೊಡಬೇಕು ಎಂದು ಬ್ರಾಹ್ಮಣ ಪಟ್ಟು ಹಾಕುತ್ತಾನೆ. ಕುವೆಂಪು ರಾಮನ ಜಿಜ್ಞಾಸೆಯನ್ನು ಇಲ್ಲಿ ಪರಿಹರಿಸುವ ಪರಿಯೇ ವಿಶಿಷ್ಟ. ತಾನು ಹೂಡುವ ಬ್ರಹ್ಮಾಸ್ತ್ರ ಅಧರ್ಮದ ವಿರುದ್ದ ಹೋರಾಡಲಿ ಎನ್ನುತ್ತಾ ರಾಮ ಶಸ್ತ್ರ ಹೂಡುತ್ತಾನೆ. ಬ್ರಹ್ಮಾಸ್ತ್ರವು ಶಂಬೂಕ ತಪಸ್ವಿಯ ಬಳಿ ತೆರಳಿ ತಪೋಮಹಿಮೆಗೆ ನಮಿಸುತ್ತದೆ. ನಂತರ ಬ್ರಾಹ್ಮಣನೆಡೆಗೆ ತಿರುಗಿ ಧಾವಿಸತೊಡಗಿದಾಗ ಅಧರ್ಮಿ ಯಾರು ಎಂಬುದು ಬ್ರಾಹ್ಮಣನಿಗೆ ಅರಿವಾಗಿ ರಕ್ಷಣೆಗಾಗಿ ಬೊಬ್ಬಿಡುತ್ತಾನೆ. ಅಂತಿಮವಾಗಿ ಬ್ರಹ್ಮಾಸ್ತ್ರವನ್ನು ಹಿಂಪಡೆಯುವ ವೇಳೆಗೆ ಬಾಲಕ ಬ್ರಾಹ್ಮಣನನ್ನು ಹುಡುಕುತ್ತಾ ಬರುತ್ತಾನೆ. ತನ್ನ ತಾತನೊಂದಿಗೆ ಹೂವು ತರಲು ಕಾಡಿಗೆ ಬಂದ ತಾನು ಮೂರ್ಛೆ ಹೋಗಿ ಪ್ರಜ್ಞೆ ಬರುವಷ್ಟರಲ್ಲಿ ದಾರಿ ತಪ್ಪಿದೆ ಎನ್ನುತ್ತಾನೆ ಬಾಲಕ. ಬಾಲಕ ಮತ್ತು ಬ್ರಾಹ್ಮಣರಿಬ್ಬರು ಶೂದ್ರ ಶಂಬೂಕ ತಪಸ್ವಿಗೆ ನಮಿಸುವ ದೃಶ್ಯದೊಂದಿಗೆ ನಾಟಕ ಮುಕ್ತಾಯಗೊಳ್ಳುತ್ತದೆ. ಮೂಲ ರಾಮಾಯಣದಲ್ಲಿ ಶೂದ್ರ ಶಂಬೂಕನ ಮೇಲೆ ಧಾಳಿ ಮಾಡಿ ಜೀವ-ವಿರೋಧಿಯಂತೆ ರಾಮ ಅವನನ್ನು ಕೊಂದಿದ್ದರೆ, ಇಲ್ಲಿ ಕುವೆಂಪುರವರ ರಾಮ ಜೀವ-ಪರನಂತೆ, ಸತ್ಯದ ಅಸ್ತ್ರವಿಡಿದು ಮನ:ಪರಿವರ್ತನೆಗೆ ಸಾಕ್ಷಿಯಾಗುತ್ತಾನೆ.

ಶೂದ್ರತಪಸ್ವಿಯಲ್ಲಿ ಬರುವ ಧಾರ್ಮಿಕ ವಿಚಾರಶೀಲತೆ. ಇಲ್ಲಿ ಬ್ರಾಹ್ಮಣ –ಶೂದ್ರ ಪ್ರಜ್ಞೆಗಳು ಧರ್ಮಾಧರ್ಮದ ಪ್ರಶ್ನೆಯಾಗಿ ರಾಮನಿಗೆ ಉಧ್ಭವಿಸುತ್ತವೆ. ಇದನ್ನು ಅರಿತ ರಾಮ, ಬ್ರಾಹ್ಮಣನಿಗೆ ತಮ್ಮ ಮೇಲು ಕೀಳುಗಳ ಅಹಮಿಕೆಯ ಅರಿವೆಯನ್ನು ಮನವರಿಕೆಯಾಗುವಂತೆ ಮಾಡುತ್ತಾನೆ. ಇಲ್ಲಿ ಬ್ರಾಹ್ಮಣ ಮತ್ತು ಶಂಬೂಕ ಇಬ್ಬರ ಘನತೆ, ಧರ್ಮದ ಔನತ್ಯ ಮಾತು ಶ್ರೀ ರಾಮನ ಮಹೋನ್ನತ ವ್ಯಕ್ತಿತ್ವ ಏಕಕಾಲಕ್ಕೆ ಅನಾವರಣವಾಗುವಂತೆ ಕುವೆಂಪುರವರು ವ್ಯಾಖ್ಯಾನಿಸುವ ರೀತಿಯಲ್ಲಿ ಅವರ ವೈಚಾರಿಕತೆ ಹೊಮ್ಮುತ್ತದೆ.



ಶೂದ್ರ ತಪಸ್ವಿ ನಾಟಕ
ಯೂಟ್ಯೂಬ್ ಲಿಂಕ್ ಗಳು
ಮೂಲನಾಟಕದ ಕೃತಿಭಾಷೆಯಲ್ಲಿ
https://youtu.be/uzUH8HH_974


BEL ಸಾಹಿತ್ಯ ಕೂಟ ಅಭಿನಯಿಸಿದ ಸರಳಗನ್ನಡದಲ್ಲಿ
ಒಟ್ಟು ಐದು ಭಾಗಗಳು
ಭಾಗ ೧

https://youtu.be/wArgbW3GVkk

ಭಾಗ ೨
https://youtu.be/N-WZSmb--Iw

ಭಾಗ ೩
https://youtu.be/aGO9ZwJGkI4

ಭಾಗ ೪
https://youtu.be/XDu4UFroN2U


ಈ ಲಿಂಕ್ ಗಳನ್ನು ಆಯ್ಕೆಮಾಡಿಕೊಂಡು ಯೂಟ್ಯೂಬ್ ನಲ್ಲಿ ನೋಡಬಹುದು.

ಈ ಎಲ್ಲಾ ಮಾಹಿತಿಯನ್ನು ಅಧ್ಯಯನ ದೃಷ್ಟಿಯಿಂದ ಗೂಗಲ್ ಮೂಲಕ ವಿಕಿಪೀಡಿಯ ಸಹಾಯದಿಂದ ಸಂಗ್ರಹಿಸಲಾಗಿದೆ

ಧನ್ಯವಾದಗಳು
Posted by ಡಾ. ರವಿಶಂಕರ್ ಎ.ಕೆ. ಅಂಕುರ on ಜನವರಿ 15, 2020 ಕಾಮೆಂಟ್‌ಗಳಿಲ್ಲ:
ಇದನ್ನು ಇಮೇಲ್ ಮಾಡಿಇದನ್ನು ಬ್ಲಾಗ್ ಮಾಡಿ!X ಗೆ ಹಂಚಿಕೊಳ್ಳಿFacebook ಗೆ ಹಂಚಿಕೊಳ್ಳಿPinterest ಗೆ ಹಂಚಿಕೊಳ್ಳಿ
ಡಾ. ರವಿಶಂಕರ್ ಎ.ಕೆ. ಅಂಕುರ
ಸಹೃದಯ ಓದು ಮತ್ತು ಬರಹದಲ್ಲಿ ಜೀವನ ಪ್ರೀತಿ ಕಾಣುವೆ
ನವೀನ ಪೋಸ್ಟ್‌ಗಳು ಹಳೆಯ ಪೋಸ್ಟ್‌ಗಳು ಮುಖಪುಟ
ಇದಕ್ಕೆ ಸಬ್‌ಸ್ಕ್ರೈಬ್‌ ಆಗಿ: ಕಾಮೆಂಟ್‌ಗಳು (Atom)

ಬರಹವೆಂಬ ಬೆವರು...

ನನ್ನ ಫೋಟೋ
ಡಾ. ರವಿಶಂಕರ್ ಎ.ಕೆ. ಅಂಕುರ
ಸಹೃದಯ ಓದು ಮತ್ತು ಬರಹದಲ್ಲಿ ಜೀವನ ಪ್ರೀತಿ ಕಾಣುವೆ
ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ

ಬ್ಲಾಗ್ ಆರ್ಕೈವ್

  • ಸೆಪ್ಟೆಂ 30 (3)
  • ಅಕ್ಟೋ 03 (2)
  • ಜನ 15 (2)
  • ಜೂನ್ 21 (1)
  • ಜುಲೈ 17 (1)
  • ಜುಲೈ 18 (1)
  • ಜುಲೈ 20 (1)
  • ಜುಲೈ 22 (1)
  • ಜುಲೈ 24 (1)
  • ಜುಲೈ 26 (1)
  • ಜುಲೈ 31 (1)
  • ಆಗ 06 (1)
  • ಆಗ 13 (2)
  • ಆಗ 20 (1)
  • ಆಗ 27 (1)
  • ಅಕ್ಟೋ 09 (1)
  • ಆಗ 24 (1)
  • ಸೆಪ್ಟೆಂ 02 (2)
  • ಡಿಸೆಂ 25 (1)
  • ಜನ 14 (1)
  • ಫೆಬ್ರ 12 (1)
  • ಮೇ 15 (1)
  • ಜೂನ್ 26 (1)
  • ಜುಲೈ 31 (1)
  • ಆಗ 08 (1)
  • ಆಗ 12 (1)
  • ಆಗ 16 (1)
  • ಆಗ 23 (3)
  • ಜನ 15 (1)
  • ಜನ 19 (1)
  • ಜನ 22 (1)
  • ಫೆಬ್ರ 08 (1)
  • ಫೆಬ್ರ 22 (1)
  • ಏಪ್ರಿ 05 (1)
  • ಏಪ್ರಿ 08 (1)
  • ಮೇ 25 (1)
  • ಜೂನ್ 13 (1)
  • ಜೂನ್ 15 (1)
  • ಜೂನ್ 19 (2)
  • ಜೂನ್ 29 (1)
  • ಜುಲೈ 04 (1)
  • ಆಗ 11 (2)
  • ಆಗ 14 (1)
  • ಆಗ 20 (1)
  • ಅಕ್ಟೋ 13 (1)
  • ಅಕ್ಟೋ 27 (1)
  • ಫೆಬ್ರ 26 (1)
  • ಮಾರ್ಚ್ 21 (1)
  • ಮೇ 17 (1)
  • ಮೇ 24 (1)
  • ಅಕ್ಟೋ 14 (1)
  • ಜನ 26 (1)
  • ಮೇ 31 (1)
  • ಜೂನ್ 01 (1)
  • ಜುಲೈ 02 (1)
  • ಜುಲೈ 04 (1)
  • ಜುಲೈ 17 (1)
  • ಅಕ್ಟೋ 02 (1)
  • ಅಕ್ಟೋ 25 (1)
  • ಅಕ್ಟೋ 26 (1)
  • ಮೇ 08 (1)
  • ಮೇ 09 (1)
  • ಮೇ 10 (1)
  • ಮೇ 11 (1)
  • ಮೇ 18 (7)
  • ಮೇ 20 (2)
  • ಮೇ 22 (2)
  • ಜೂನ್ 02 (15)
  • ಜೂನ್ 03 (2)
  • ಜೂನ್ 05 (3)
  • ಜೂನ್ 07 (3)
  • ಜೂನ್ 12 (8)
  • ಜೂನ್ 17 (14)
  • ಜೂನ್ 18 (1)
  • ಅಕ್ಟೋ 12 (2)
  • ಅಕ್ಟೋ 13 (1)
  • ಅಕ್ಟೋ 14 (1)
  • ಅಕ್ಟೋ 15 (1)
  • ಅಕ್ಟೋ 16 (1)
  • ಅಕ್ಟೋ 21 (1)
  • ಅಕ್ಟೋ 24 (1)
  • ಡಿಸೆಂ 18 (1)
  • ಏಪ್ರಿ 12 (1)
  • ಮೇ 10 (1)
  • ಜೂನ್ 17 (2)
  • ಅಕ್ಟೋ 14 (1)
  • ಜನ 25 (1)

ಸಾಹಿತ್ಯ ಕಾರ್ಯ

  • ಇರುವ ಭಾಗ್ಯವ ನೆನೆದು
  • ಬೇಂದ್ರೆ
  • ಬೇರು ತೇರು
  • ಮೆಚ್ಚುವ ಕಾರ್ಯವಿದು
  • ಮೆಟ್ರೋ ಕಥನ

ನಿಂದನೆ ವರದಿ ಮಾಡಿ

ಲೇಬಲ್‌ಗಳು

  • ಇರುವ ಭಾಗ್ಯವ ನೆನೆದು
  • ಬೇಂದ್ರೆ
  • ಬೇರು ತೇರು
  • ಮೆಚ್ಚುವ ಕಾರ್ಯವಿದು
  • ಮೆಟ್ರೋ ಕಥನ

ಈ ಬ್ಲಾಗ್ ಅನ್ನು ಹುಡುಕಿ

ಪುಟಗಳು

  • ಮುಖಪುಟ

ಆಧ್ಯಾತ್ಮದೊಂದಿಗೆ ಗಣರಾಜ್ಯದ ಚಿಂತನೆಗಳು

ಜೀವನ ಪ್ರೀತಿ

ಸಾಹಿತ್ಯವು ಜೀವನದ ಸಂಸ್ಕೃತಿ

ಪ್ರಚಲಿತ ಪೋಸ್ಟ್‌ಗಳು

  • ವಚನಗಳ ನಿರ್ವಚನ
    ವಚನಗಳ ನಿರ್ವಚನ     ದಾಸಿಮಯ್ಯ ಎಂಬುದು ಶ್ರದ್ಧೆ, ಭಕ್ತಿ, ಸೂಕ್ಷ್ಮತೆಯ ಸಂಕೇತ. ವಚನ ಸಾಹಿತ್ಯದಲ್ಲಿ ಅತ್ಯಂತ ಸರಳವಾಗಿ ವಚನಗಳನ್ನು ತಿಳಿಸಿ ಸಮಾಜದ ಆರೋಗ್ಯಕ್ಕಾಗ...
  • 'ಪಂಚಗವ್ಯ' ಎಂಬ ಹೊಸ ರಂಗನಾಟಕ ಪ್ರಯೋಗ...
      ಪಂಚಗವ್ಯ ಎಂಬ ಹೊಸ ರಂಗನಾಟಕ  ಪ್ರಯೋಗ...    ಪುರಾಣದೊಳಗೆ ಪ್ರವೇಶ ಮಾಡುವ ಪಂಚಗವ್ಯ ನಾಟಕವು ವಿಭಿನ್ನ ಮನೋಭಿತ್ತಿಯ ಪ್ರಯೋಗ. ಅಧ್ಯಯನ, ಪ್ರಯೋಗಗಳ ಮೂಲಕ ಇದುವರೆಗೂ ಹಲವ...
  • ವಿಹಾರಿಕಾ ಎಂಬ ಪ್ರವಾಸ ಪರಿಧಿ
      ವಿಹಾರಿಕಾ ಎಂಬ ಪ್ರವಾಸ ಪರಿಧಿ ಏನು ಸವಿಯೊ ಅದನೆ ಕುಡಿ ನಿನ್ನ ರುಚಿಯ ಹದವ ಹಿಡಿ ನನ್ನನೇನು ಕೇಳುವೆ,  ಆದರೂನು ಹೇಳುವೆ -ದ.ರಾ ಬೇಂದ್ರೆ ಪ್ರವಾಸವು ಮನುಷ್ಯನ ಉಗಮದಿಂದಲ...

ಕ್ಲಿಕ್ ಮಾಡಿ ಜೀವನ ಪ್ರೀತಿಯ ಬರಹಗಳನ್ನು ತಕ್ಷಣ ಪಡೆಯಿರಿ.

ಪೋಸ್ಟ್‌ಗಳು
Atom
ಪೋಸ್ಟ್‌ಗಳು
ಕಾಮೆಂಟ್‌ಗಳು
Atom
ಕಾಮೆಂಟ್‌ಗಳು
ಆಸಮ್‌‌ ಇಂಕ್‌. ಥೀಮ್. molotovcoketail ಅವರಿಂದ ಥೀಮ್ ಚಿತ್ರಗಳು. Blogger ನಿಂದ ಸಾಮರ್ಥ್ಯಹೊಂದಿದೆ.