ಈ ಬ್ಲಾಗ್ ಅನ್ನು ಹುಡುಕಿ

ಭಾನುವಾರ, ಜನವರಿ 19, 2020

ಕ್ರಿಸ್ತು ಜಯಂತಿ ಕಾಲೇಜಿನ *ನೈರತಿ* ನಾಟಕ ಪ್ರದರ್ಶನಕ್ಕೆ ಪ್ರಥಮ ಬಹುಮಾನ


ಮೈಸೂರಿನಲ್ಲಿ ಜರುಗಿದ *ವಿದ್ಯಾರ್ಥಿ ಸಂಸ್ಕೃತಿ ಚಳುವಳಿ ೨* ಕಾರ್ಯಕ್ರಮದಲ್ಲಿ ಕ್ರಿಸ್ತು ಜಯಂತಿ ಕಾಲೇಜಿಗೆ ಪ್ರಥಮ ಬಹುಮಾನ ದೊರಕಿದೆ. *ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯ* ನಮ್ಮ ಕಾಲೇಜನ್ನು ಆಯ್ಕೆಮಾಡಿ ಕಳುಹಿಸಿದ್ದು ಈ ಗೆಲುವಿನ‌ ಸಾರ್ಥಕತೆ ನಮ್ಮ ಕಾಲೇಜಿನಷ್ಟೇ ವಿಶ್ವವಿದ್ಯಾಲಯಕ್ಕೂ ಸಲ್ಲುತ್ತದೆ.

ಕರ್ನಾಟಕದಾದ್ಯಂತ ಸುಮಾರು ಐವತ್ತಕ್ಕೂ ಹೆಚ್ಚು  ಉತ್ತಮ ಟೀಮ್ ಗಳ ಮೂಲಕ ಸ್ಪರ್ಧೆ ಜರುಗಿದೆ.
ನಾನೇ ನಾಲ್ಕೈದು ನಾಟಕಗಳ ಶ್ರಮವನ್ನು ನೋಡಿದ್ದೇನೆ. ಆದರೆ ನಮ್ಮ ನಾಟಕವು ಈ ಎಲ್ಲಾ ಶಕ್ತಿಗಳನ್ನು ಮೀರಿಸಿ, ಕಡಿಮೆ ನೋಡುಗರಿದ್ದರೂ ಹೆಚ್ಚು ಶ್ರಮ ನೀಡಿ ನಿರ್ವಹಿಸಿದರು. ಇಡೀ ನಾಟಕದ ವಿಡಿಯೋ ಕೂಡ ಫೇಸ್ ಬುಕ್ *(ರವಿಶಂಕರ ಎ.ಕೆ ಅಂಕುರ https://m.facebook.com/story.php?story_fbid=1192372967619010&id=100005389539367)* ನಲ್ಲಿ ಲಭ್ಯ ಇದೆ.
ನಮ್ಮ ಕಾಲೇಜಿನ ವಿದ್ಯಾರ್ಥಿಗಳು *ಪ್ರಥಮ  ಬಹುಮಾನ* ಗೆದ್ದದ್ದು ನನಗೂ ಹಿರಿಮೆಯೇ ಆಗಿದೆ.
ನಿರ್ದೇಶನ ಮಾಡಿದ ಪವಿತ್ರ ಮೇಡಂ ಅವರಿಗೂ...
ಅಭಿನಯಿಸಿದ ಕ್ರಿಸ್ತು ಜಯಂತಿ ಕಾಲೇಜಿನ *ರಂಗಾಂತರಂಗ*  ತಂಡಕ್ಕೂ ಅಭಿನಂದನೆಗಳು.
-ಅಂಕುರ

ಕಾಮೆಂಟ್‌ಗಳಿಲ್ಲ: