ಈ ಬ್ಲಾಗ್ ಅನ್ನು ಹುಡುಕಿ

ಗುರುವಾರ, ಜುಲೈ 20, 2017

ಬ್ರಹ್ಮಕಮಲ ಅರಳುವ ಸಮಯ
ಇದು ಹೂವು,
ರಾತ್ರಿಯ ರಾಣಿ ಮೌನ ವಾಣಿ
ವಿಷ್ಣುವಿನ ನಾಭಿಯಲಿ
ಬ್ರಹ್ಮನ ದರ್ಶನ ತಂದು
ಇರುಳು ಲೋಕದಿ
ಚಂದ್ರ ರೂಪ ತಾರೆ

ಬ್ರಹ್ಮ ಕಮಲ ಅರಳುವ ಸಮಯ
ಸ್ವರ್ಗರೂಪವೇ ತೆರೆಯುವ ಮಾಯ
ವಿಶ್ವ ಲೋಕ ನಾಭಿ
ದಳದ ಎಳೆಯಲಿ ಅಣುವಿನ ಕಣಗಳ
ಕಾಮ ಕಾವ್ಯ ಕವಿಸಮಯ

ಪತ್ರದ ಪುತ್ರ ಏನೀ ಸೂತ್ರ
ಪತ್ರದಿಂದಲೇ ಪೂರ್ಣ ಪವಿತ್ರ
ಔಷಧ ರೂಪ, ದೈವ ಸ್ವರೂಪ
ಕುಬೇರನ ತರುವ ಜೀವ ದ್ರವ್ಯ
ಹಿಮಾಲಯ ಎಲ್ಲೇ
ನೀ ಇಲ್ಲಿ ಅಲ್ಲಲ್ಲಿ..
- ಅಂಕುರ


1 ಕಾಮೆಂಟ್‌:

Anitha anukruthi ಹೇಳಿದರು...

ಪ್ರಕೃತಿಯಲ್ಲಿನ ವಿಸ್ಮಯಗಳಲ್ಲಿ ಬ್ರಹ್ಮಕಮಲ ವಿಶೇಷ ವಾದುದು.ಈ ರಾತ್ರಿರಾಣಿಯ ಕುರಿತ ಕವಿವಾಣಿ ಅರ್ಥಪೂರ್ಣವಾಗಿದೆ.