ಈ ಬ್ಲಾಗ್ ಅನ್ನು ಹುಡುಕಿ

ಬುಧವಾರ, ಅಕ್ಟೋಬರ್ 16, 2024

ಇರುವ ಭಾಗ್ಯವ ನೆನೆದು - ಕನ್ನಡ ಭಾಷೆಯಲ್ಲಿ ಆಡಳಿತ ಮಾಡಿದ ರಾಜರು

 ಕನ್ನಡ ನೆಲದಲ್ಲಿ, ಕನ್ನಡ ಭಾಷೆಯಲ್ಲಿ ಆಳ್ವಿಕೆ ಮಾಡಿದ ರಾಜರು




ಮಯೂರ ವರ್ಮ

ಮಯೂರಶರ್ಮ ಅಥವಾ ಮಯೂರವರ್ಮ ( ಆಳ್ವಿಕೆ 345-365 CE)

ತಾಳಗುಂದದ (ಆಧುನಿಕ ಶಿವಮೊಗ್ಗ ಜಿಲ್ಲೆಯಲ್ಲಿ), ಬನವಾಸಿಯ ಕದಂಬ ಸಾಮ್ರಾಜ್ಯದ ಸ್ಥಾಪಕರಾಗಿದ್ದರು , ಇದು ಇಂದಿನ ಆಧುನಿಕ ಕರ್ನಾಟಕ , ಭಾರತದ ರಾಜ್ಯವನ್ನು ಆಳುವ ಆರಂಭಿಕ ಸ್ಥಳೀಯ ಸಾಮ್ರಾಜ್ಯವಾಗಿದೆ ಕದಂಬರ ಉದಯದ ಮೊದಲು, ಭೂಮಿಯನ್ನು ಆಳುವ ಅಧಿಕಾರದ ಕೇಂದ್ರಗಳು ಕರ್ನಾಟಕ ಪ್ರದೇಶದ ಹೊರಗಿದ್ದವು; ಹೀಗೆ ಕದಂಬರು ಸ್ವತಂತ್ರ ಭೌಗೋಳಿಕ-ರಾಜಕೀಯ ಘಟಕವಾಗಿ ಅಧಿಕಾರಕ್ಕೆ ಬಂದದ್ದು, ಮಣ್ಣಿನ ಭಾಷೆಯಾದ ಕನ್ನಡವನ್ನು ಪ್ರಮುಖ ಪ್ರಾದೇಶಿಕ ಭಾಷೆಯಾಗಿ, ಆಧುನಿಕ ಕರ್ನಾಟಕದ ಇತಿಹಾಸದಲ್ಲಿ ಮಯೂರಶರ್ಮ ಪ್ರಮುಖ ಐತಿಹಾಸಿಕ ವ್ಯಕ್ತಿಯಾಗಿ ಒಂದು ಹೆಗ್ಗುರುತಾಗಿದೆ. 

ಕನ್ನಡ ಭಾಷೆಯ ಪ್ರಾಚೀನ ಶಾಸನಗಳು ಬನವಾಸಿಯ ಕದಂಬರಿಗೆ ಸಲ್ಲುತ್ತವೆ. 


ಕಾಕುತ್ಸ್ಥ ವರ್ಮ

ಕಾಕುತ್ಸ್ಥವರ್ಮ ಕದಂಬ ರಾಜಮನೆತನದ ಪ್ರಖ್ಯಾತ ದೊರೆಗಳಲ್ಲೊಬ್ಬ. ಭಗೀರಥನ (365-385) ಮಗ ಮತ್ತು ರಘುವಿನ (385-405) ಸೋದರ. 405 ರಿಂದ 430ರ ವರೆಗೆ ಆಳಿದ. ಇವನ ಕಾಲದಲ್ಲಿ ಕದಂಬರಾಜ್ಯ ವಿಸ್ತಾರಗೊಂಡಿತು. ಈತ ದಕ್ಷಿಣದಲ್ಲಿ ಪಲ್ಲವರೊಂದಿಗೆ ಹೋರಾಡಿದ. ಗಂಗ ಮತ್ತು ವಾಕಾಟಕ ರಾಜವಂಶಗಳವರಿಗೆ ತನ್ನ ಹೆಣ್ಣುಮಕ್ಕಳನ್ನು ಕೊಟ್ಟು ವಿವಾಹ ಮಾಡಿ ರಾಜ್ಯದ ಸುಭದ್ರತೆ ಖ್ಯಾತಿಗಳನ್ನು ಬೆಳೆಸಿದ. ಈತನ ಕಾಲದಲ್ಲಿ ರಾಜ್ಯ ಸುರಕ್ಷಿತವಾಗಿತ್ತು. ರಾಜ್ಯವನ್ನು ತನ್ನ ಮಕ್ಕಳಾದ ಶಾಂತಿವರ್ಮ ಮತ್ತು ಮೊದಲನೆಯ ಕೃಷ್ಣವರ್ಮನಿಗೆ ವಿಭಾಗ ಮಾಡಿ ಕೊಟ್ಟಿದ್ದನೆಂದೂ ಶಾಂತಿವರ್ಮ ಬನವಾಸಿಯಿಂದಲೂ ಕೃಷ್ಣವರ್ಮ ತ್ರಿಪರ್ವತದಿಂದಲೂ ಸ್ವತಂತ್ರರಾಗಿ ಆಳಿದರೆಂದೂ ತಿಳಿದುಬರುತ್ತದೆ.

ದುರ್ವಿನೀತ

ದುರ್ವಿನೀತ ದೊರೆಯು ಗಂಗರಲ್ಲಿ ಅತ್ಯಂತ ಪ್ರಸಿದ್ದ ದೊರೆ. ಈತನ ತಾಯಿ ಜೇಷ್ಠದೇವಿ ಹಾಗೂ ತಂದೆ ಅವಿನೀತ. ಈತ ಜೈನ ಮತಾವಲಂಬಿಯಾಗಿದ್ದನು. ಭಾರವಿಯ ೧೫ನೇ ದಗಂಕ್ಕೆ ಭಾಷ್ಯವನ್ನ ಬರೆದನು.

ಈತ ಗುಣಾಡ್ಯನ “ವಡ್ಡ ಕಥಾ“ವನ್ನು ಪೈಶಾಚಿ ಭಾಷೇಯಿಂದ ಸಂಸ್ಕೃತಕ್ಕೆ ತರ್ಜುಮೆ ಮಾಡಿದರು. ಈತನ ಗುರು -ಪೂಜ್ಯಪಾದ ಅಥವಾ ದೇವಾನಂದಿ.

ದುರ್ವಿನೀತ ದೊರೆಗಿದ್ದ ಬಿರುದುಗಳು - ಅವನೀತ ಸ್ತರ, ಪೂಜಾಲಾಯ, ಅಹೀತ, ಅನೀತ ಹಾಗೂ ಧರ್ಮ ಮಹಾರಾಜ. ಕುಲೋಥರ , ನೀತಿಶಾಸ್ತ್ರ ವಕ್ತ , ಪ್ರಯೋಕ್ಷ ಕುಶಲ. ಈತನ ಗುರು ದೇವಾನಂದಿಯು ಸಂಸ್ಕೃತ ವ್ಯಾಕರಣ “ಶಬ್ದಾವತಾರ“ ಕೃತಿಯನ್ನು ಬರೆದಿದ್ದಾನೆ .


ಇಮ್ಮಡಿ ಪುಲಿಕೇಶಿ

ಇಮ್ಮಡಿ ಪುಲಿಕೇಶಿಚಾಲುಕ್ಯ ವಂಶದ ಪ್ರಸಿದ್ಧ ದೊರೆ.(ಕ್ರಿ.ಶ ೬೧೦-೬೪೨) ಇವನ ಕಾಲದಲ್ಲಿ ಬಾದಾಮಿ ಚಾಲುಕ್ಯರ ಸಾಮ್ರಾಜ್ಯವು ದಖನ್ ಪ್ರಸ್ಥಭೂಮಿಯ ಹೆಚ್ಚಿನ ಪ್ರದೇಶವನ್ನು ಆವರಿಸಿತು. ಬಾದಾಮಿಯ ಚಾಳುಕ್ಯರೆಂದು ಪ್ರಸಿದ್ಧರಾದ ಈ ವಂಶಜರು ಸುಮಾರು ೨೦೦ ವರ್ಷಗಳ ಕಾಲ ತಮ್ಮ ರಾಜ್ಯಭಾರವನ್ನು ಸ್ಥಾಪಿಸಿದ್ದರು."ಇವರು ಮೂಲತಃ ಬನವಾಸಿಯಿಂದ ಬಂದ ಕನ್ನಡದ ಜನಾಂಗದವರು.ಮುಂದೆ ಜೈನ ಸಂಪ್ರದಾಯ ಪಾಲಿಸಿದರು. ಕ್ರಿ.ಶ.ಸು. ೫3೦ರಲ್ಲಿ ಜಯಸಿಂಹನಿಂದ ಪ್ರಾರಂಭವಾದ ಚಾಲುಕ್ಯ ಮನೆತನದ ಆಡಳಿತವು ಕ್ರಿ.ಶ. ೭೫೭ರಲ್ಲಿ ಎರಡನೆಯ ಕೀರ್ತಿವರ್ಮನ ಕಾಲದಲ್ಲಿ ಮುಕ್ತಾಯವಾಯಿತು. ಕ್ರಿ.ಶ. ೭೫೭ರ ರಾಷ್ಟ್ರಕೂಟ 'ದಂತಿದುರ್ಗ'ನು ಚಾಲುಕ್ಯ ಅರಸ 'ಇಮ್ಮಡಿ ಕೀರ್ತಿವರ್ಮ'ನನ್ನು ಯುದ್ಧದಲ್ಲಿ ಸೋಲಿಸಿ ಪ್ರಾಚೀನ ಕರ್ನಾಟಕದ ರಾಜಕೀಯ ವಲಯದಲ್ಲಿ ಚಾಲುಕ್ಯರು ವಿರಮಿಸುವಂತೆ ಮಾಡಿದನು. ಸಾರ್ವಭೌಮರಾಗಿ ಮೆರೆದ ಬಾದಾಮಿ ಚಾಲುಕ್ಯರು ಕರ್ನಾಟಕದಲ್ಲಿ ಸ್ವತಂತ್ರವಾದ ವಿಶಾಲ ಸಾಮ್ರಾಜ್ಯವನ್ನು ಕಟ್ಟಿ ಬೆಳೆಸಿದರು. ಕರ್ನಾಟಕದ ಭೌಗೋಳಿಕ ಗಡಿಗಳನ್ನು ವಿಸ್ತರಿಸಿದ ಕನ್ನಡ ಅರಸರಲ್ಲಿ ಇವರ ಪಾತ್ರ ಮಹತ್ವದ್ದು. ತಮ್ಮ ಆಡಳಿತಾವಧಿಯುದ್ದಕ್ಕೂ ಕಂಚಿ ಪಲ್ಲವರ ಜೊತೆಗೆ ಹಗೆತನ ಸಾಧಿಸಿದ ಬಾದಾಮಿ ಚಾಲುಕ್ಯರು, ಕನ್ನಡದ ಶ್ರೇಷ್ಠ ದೊರೆ 'ಇಮ್ಮಡಿ ಪುಲಕೇಶಿ'(ನೌಕಾಪಡೆಯ ಪಿತಾಮಹ)ಯನ್ನು ಕಳೆದುಕೊಂಡು ಹದಿಮೂರು ವರ್ಷಗಳ ಪರಕೀಯ ಆಡಳಿತದ ಬಿಸಿಯನ್ನು ಸಹಿಸಿದರು. ಆದರೆ ಸೋಲಿನ ಕಹಿ ಅನುಭವವನ್ನು ಇಮ್ಮಡಿ ವಿಕ್ರಮಾದಿತ್ಯನು ಪಲ್ಲವರನ್ನು ಸೋಲಿಸುವುದರ ಮೂಲಕ, ಬಾದಾಮಿ ಚಾಲುಕ್ಯ ಸಾಮ್ರಾಜ್ಯವನ್ನು ಮರುಕಟ್ಟಿದ ಕೀರ್ತಿಗೆ ಪಾತ್ರನಾದನು. ಕರ್ನಾಟಕ ಇತಿಹಾಸದಲ್ಲಿ ನಡೆದು ಹೋದ ಈ ಸೋಲು ಗೆಲುವುಗಳು ದೇಶದ ಸಾಂಸ್ಕೃತಿಕ ಕೊಡು ಕೊಳ್ಳುವಿಕೆಯ ಮೇಲೆ ಅಗಾಧವಾದ ಪರಿಣಾವುವನ್ನು ಬೀರಿದವು. ಮುಖ್ಯವಾಗಿ ಕಲಾ ಸಾಂಸ್ಕೃತಿಕ ಆಯಾಮಗಳು ಬದಲಾವಣೆ ಹೊಂದಿ ಆಚರಣೆಯಲ್ಲಿ ಬಂದವು.


ವಿಜಯಾಧಿತ್ಯ

ಬಾದಾಮಿ ಚಳುಕ್ಯರ ರಾಜರುಗಳ ಪೈಕಿ ಇವನ ಆಳಿಕೆಯ ಕಾಲ ಅತಿ ದೀರ್ಘವಾದುದೂ ಶಾಂತಿ ಮತ್ತು ಸುಭಿಕ್ಷೆಯಿಂದ ಕೂಡಿದ್ದೂ ಆಗಿತ್ತು. ವಿಜಯಾದಿತ್ಯ ತನ್ನ ತಂದೆ ವಿನಯಾದಿತ್ಯನ ರೀತಿಯಲ್ಲೇ ಆಡಳಿತದ ಸುವ್ಯವಸ್ಥೆಗಾಗಿ ರಾಜ್ಯದಲ್ಲಿ ಆಗಿಂದಾಗ್ಗೆ ಸಂಚರಿಸುತ್ತಿದ್ದ ನೆಂದೂ ಹಾಗೂ ತನ್ನ ಆಳಿಕೆಯ ಕಾಲದಲ್ಲಿ ಏಲಾಪುರ, ಹತಂಪುರ, ರಕ್ತಪುರ ಹೀಗೆ ಅನೇಕ ಕಡೆ ಬೀಡು ಬಿಟ್ಟಿದ್ದನೆಂದು ಶಾಸನಗಳಿಂದ ತಿಳಿಯುತ್ತದೆ. ಬಾಣರು, ರೇನಾಡುವಿನ ತೆಲುಗು ಚೋಡರು, ಭೂಪಾದಿತ್ಯ, ಉಪೇಂದ್ರ ಮುಂತಾದ ರಾಜರು ಇವನ ಸಾಮಂತರಾಗಿದ್ದರು.

ವಿಜಯಾದಿತ್ಯನ ಕಾಲ ದೇವಾಲಯ ನಿರ್ಮಾಣಕ್ಕೂ ಪ್ರಸಿದ್ಧವಾಗಿದೆ. ಪಟ್ಟದಕಲ್ಲಿನಲ್ಲಿ ವಿಜಯೇಶ್ವರ ಎಂಬ ಈಶ್ವರ ದೇವಸ್ಥಾನವನ್ನು (ಈಗಿನ ಸಂಗಮೇಶ್ವರ ದೇವಾಲಯ) ಕಟ್ಟಿಸಿದ. ವಿಜಯಾದಿತ್ಯ ಜೈನಧರ್ಮಕ್ಕೂ ತನ್ನ ಗೌರವಾದರವನ್ನು ತೋರಿಸಿ ಅನೇಕ ಜೈನಗುರುಗಳಿಗೆ ದತ್ತಿಗಳನ್ನು ನೀಡಿದ. ಇವನ ಸಹೋದರಿ, ಆಳುಪ ಚಿತ್ರವಾಹನನ ಹೆಂಡತಿ ಕುಂಕುಮ ಮಹಾದೇವಿ ಜೈನಧರ್ಮದಲ್ಲಿ ಅಪಾರ ನಿಷ್ಠೆಯನ್ನು ಹೊಂದಿದ್ದಳು. ಈಕೆ ಲಕ್ಷ್ಮೇಶ್ವರದಲ್ಲಿ ಒಂದು ಜೈನ ದೇವಸ್ಥಾನವನ್ನು ಕಟ್ಟಿಸಿದಳು. ವಿಜಯಾದಿತ್ಯ 733ರಲ್ಲಿ ನಿಧನನಾದ. 



ಮೂರನೇ ಗೋವಿಂದ

ಗೋವಿಂದ III (ರಾಷ್ಟ್ರಕೂಟ)ರಾಷ್ಟ್ರಕೂಟ ವಂಶದ ಪ್ರಖ್ಯಾತ ರಾಜ (ಸು.793-814). ಧ್ರುವನ ಮೂರನೆಯ ಮಗ. ಪ್ರಭೂತವರ್ಷ, ಜಗತ್ತುಂಗ, ಶ್ರೀ ವಲ್ಲಭ, ಕೀರ್ತಿನಾರಾಯಣ, ಜಗತ್ರುದ್ರ, ತ್ರಿಭುವನಧವಳ ಎಂಬ ಬಿರುದುಗಳನ್ನು ಹೊಂದಿದ್ದ.

ತನ್ನ ತಂದೆ ಧ್ರುವನ ಇಚ್ಛೆಯಂತೆ ಅವನ ಅನಂತರ ರಾಷ್ಟ್ರಕೂಟ ಸಿಂಹಾಸನವನ್ನೇರಿದ. ಇವನು ರಾಜನಾದ ಮೇಲೆ ಇವನ ಅಣ್ಣ ರಣಾವಲೋಕ ಸ್ತಂಭ ಸ್ವಲ್ಪಕಾಲ ತೆಪ್ಪಗಿದ್ದರೂ ತಮ್ಮನ ಏಳಿಗೆಯನ್ನು ಸಹಿಸಲಿಲ್ಲ. ತನ್ನನ್ನು ಬಿಟ್ಟು ತಮ್ಮನಿಗೆ ತಂದೆ ಪಟ್ಟಗಟ್ಟಿದುದರಿಂದ ಮೊಳೆತ ಅಸೂಯೆ ಹೆಮ್ಮರವಾಗಿ ಬೆಳೆಯತೊಡಗಿತು. ತಮ್ಮನಿಂದ ಅಧಿಕಾರವನ್ನು ಕಸಿದುಕೊಳ್ಳಲು ಕಂಚಿಯವರೆಗಿನ ಹನ್ನೆರಡು ಮಂದಿ ಸಾಮಂತರನ್ನು ಒಂದುಗೂಡಿಸಿ ಗೋವಿಂದನ ವಿರೋಧವಾಗಿ ಒಂದು ಮಹತ್ತರ ಕೂಟವನ್ನು ರಚಿಸಿದ. ಅವರಲ್ಲಿ ಕಂಚಿಯ ದಂತಿಗ, ನೊಳಂಬವಾಡಿಯ ಚಾರುಪೊನ್ನೇರ ಮತ್ತು ಬನವಾಸಿಯ ಕತ್ತಿಯರ ಮುಖ್ಯರು. ಅಲ್ಲದೆ ಗೋವಿಂದನ ಕೆಲವರು ಮಂತ್ರಿಗಳೂ ಸ್ತಂಭನ ಪರವಾಗಿದ್ದರು. 788ರಲ್ಲಿ ಗಂಗರಾಜ ಶ್ರೀಪುರುಷ ಮರಣಹೊಂದಿದಾಗ ಅವನ ಅನಂತರ ಪಟ್ಟಕ್ಕೆ ಬರಬೇಕಾಗಿದ್ದ ಶಿವಮಾರ ರಾಷ್ಟ್ರಕೂಟ ಕಾರಾಗೃಹದಲ್ಲಿ ಬಂದಿಯಾಗಿದ್ದ. ಗೋವಿಂದ ರಣಾವಲೋಕನನ್ನು ಸದೆಬಡಿಯುವುದಕ್ಕೆ ಅನುಕೂಲವಾಗಲೆಂದು ಶಿವಮಾರನನ್ನು ಬಿಡುಗಡೆಮಾಡಿ ಅವನ ರಾಜ್ಯಕ್ಕೆ ಕಳುಹಿಸಿಕೊಟ್ಟ. ಆದರೆ ಶಿವಮಾರ ರಣಾವಲೋಕ ಸ್ತಂಭನ ಪಕ್ಷಕ್ಕೆ ಸೇರಿಕೊಂಡ. ಗೋವಿಂದ ಸ್ತಂಭನ ದಂಗೆಯನ್ನಡಗಿಸಲು ನಿರತನಾದ. ಸ್ತಂಭನಿಗೆ ಮಿತ್ರರಾಜರಿಂದ ಸಹಾಯ ಬರುವುದಕ್ಕೆ ಮೊದಲೇ ಅವನನ್ನು ಸೆರೆಹಿಡಿದ. ಆದರೆ ಅವನ ತಪ್ಪನ್ನು ಕ್ಷಮಿಸಿ ಪುನಃ ಗಂಗವಾಡಿಯ ಮಾಂಡಲಿಕನನ್ನಾಗಿ ನೇಮಿಸಿದ. ಶಿವಮಾರನನ್ನು ಪುನಃ ಕಾರಾಗೃಹಕ್ಕೆ ತಳ್ಳಿದ. ಅನಂತರ ಗೋವಿಂದ ಕಂಚಿಯ ದಂತಿಗನ ಮೇಲೆ ದಂಡೆತ್ತಿಹೋಗಿ ಅವನನ್ನು ಸೋಲಿಸಿದ; ನೊಳಂಬವಾಡಿಯ ಚಾರುಪೊನ್ನೇರ ಶರಣಾಗತನಾದ. 796ರ ಹೊತ್ತಿಗೆ ಗೋವಿಂದ ಇವೆಲ್ಲ ದಿಗ್ವಿಜಯಗಳನ್ನು ನಿರ್ವಹಿಸಿ ದಕ್ಷಿಣಾಪಥದ ಏಕೈಕ ಪ್ರಭುವಾದ.



ಅಮೋಘವರ್ಷ ನೃಪತುಂಗ 

ಅಮೋಘವರ್ಷ  ಒಬ್ಬ ನಿಪುಣ ಕವಿ ಮತ್ತು ವಿದ್ವಾಂಸ. ಅವರು ಕವಿರಾಜಮಾರ್ಗವನ್ನು ಬರೆದರು (ಅಥವಾ ಸಹ-ಲೇಖಕರು) ಕನ್ನಡದಲ್ಲಿ ಅತ್ಯಂತ ಪ್ರಾಚೀನ ಸಾಹಿತ್ಯ ಕೃತಿ  ಮತ್ತು ಸಂಸ್ಕೃತದಲ್ಲಿ ಧಾರ್ಮಿಕ ಕೃತಿಯಾದ ಪ್ರಶ್ನೋತ್ತರ ರತ್ನಮಾಲಿಕಾ . ಅವರ ಆಳ್ವಿಕೆಯಲ್ಲಿ ಅವರು ನೃಪತುಂಗ , ಅತಿಶಾಧವಲ , ವೀರನಾರಾಯಣ , ರಟ್ಟಮಾರ್ತಾಂಡ ಮತ್ತು ಶ್ರೀವಲ್ಲಭ ಮುಂತಾದ ಬಿರುದುಗಳನ್ನು ಹೊಂದಿದ್ದರು . ಅವರು ರಾಷ್ಟ್ರಕೂಟರ ಆಳ್ವಿಕೆಯ ರಾಜಧಾನಿಯನ್ನು ಇಂದಿನ ಬೀದರ್ ಜಿಲ್ಲೆಯ ಮಯೂರಖಂಡಿಯಿಂದ ಆಧುನಿಕ ಕರ್ನಾಟಕ ರಾಜ್ಯದಲ್ಲಿ ಇಂದಿನ ಕಲಬುರಗಿ ಜಿಲ್ಲೆಯ ಮಾನ್ಯಖೇಟಕ್ಕೆ ಸ್ಥಳಾಂತರಿಸಿದರು . ಅವನು ಸಾಮ್ರಾಜ್ಯಶಾಹಿ ರಾಜಧಾನಿಯನ್ನು "ಭಗವಾನ್ ಇಂದ್ರನಿಗೆ ಹೊಂದಿಸಲು " ನಿರ್ಮಿಸಿದನೆಂದು ಹೇಳಲಾಗುತ್ತದೆ . ರಾಜಮನೆತನದವರಿಗೆ ಅತ್ಯುತ್ತಮವಾದ ಕೆಲಸಗಾರಿಕೆಯನ್ನು ಬಳಸಿಕೊಂಡು ವಿಸ್ತೃತ ವಿನ್ಯಾಸದ ಕಟ್ಟಡಗಳನ್ನು ಸೇರಿಸಲು ರಾಜಧಾನಿಯನ್ನು ಯೋಜಿಸಲಾಗಿತ್ತು. 

ಅರಬ್ ಪ್ರವಾಸಿ ಸುಲೈಮಾನ್ ಅಮೋಘವರ್ಷವನ್ನು "ಜಗತ್ತಿನ ನಾಲ್ಕು ಮಹಾನ್ ರಾಜರು" ಎಂದು ಬಣ್ಣಿಸಿದ್ದಾರೆ. ಅವರ ಧಾರ್ವಿುಕ ಮನೋಧರ್ಮ, ಲಲಿತಕಲೆಗಳು ಮತ್ತು ಸಾಹಿತ್ಯದಲ್ಲಿ ಅವರ ಆಸಕ್ತಿ ಮತ್ತು ಅವರ ಶಾಂತಿ-ಪ್ರೀತಿಯ ಸ್ವಭಾವಕ್ಕಾಗಿ, ಇತಿಹಾಸಕಾರ ಪಂಚಮುಖಿ ಅವರನ್ನು ಚಕ್ರವರ್ತಿ ಅಶೋಕನಿಗೆ ಹೋಲಿಸಿ ಅವರಿಗೆ "ದಕ್ಷಿಣದ ಅಶೋಕ" ಗೌರವವನ್ನು ನೀಡಿದ್ದಾರೆ. ಕವಿರಾಜಮಾರ್ಗ ಪಠ್ಯದಲ್ಲಿ ಸಾಕ್ಷಿಯಾಗಿರುವಂತೆ ಅಮೋಘವರ್ಷವು ಕನ್ನಡ ಜನರ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ಅತ್ಯುನ್ನತವಾದ ಅಭಿಮಾನವನ್ನು ತೋರುತ್ತಿದೆ .

ಮೊದಲನೇ ಅಮೋಘವರ್ಷ
ಅಮೋಘವರ್ಷ
ಕುಮ್ಸಿಯ ವೀರಭದ್ರ ದೇವಸ್ಥಾನದಲ್ಲಿ ರಾಷ್ಟ್ರಕೂಟ ರಾಜ ಅಮೋಘವರ್ಷ I ರ ಹಳೆಯ ಕನ್ನಡ ಶಾಸನ (ಕ್ರಿ.ಶ. 876)
6ನೇ ರಾಷ್ಟ್ರಕೂಟ ಚಕ್ರವರ್ತಿ
ಆಳ್ವಿಕೆಸಿ.  814  - ಸಿ.  878 CE (64 ವರ್ಷಗಳು)
ಪೂರ್ವಾಧಿಕಾರಿಗೋವಿಂದ III
ಉತ್ತರಾಧಿಕಾರಿಕೃಷ್ಣ II
ತಂದೆಗೋವಿಂದ III
ಜನನ800 CE
ಮರಣ878 CE
ಧರ್ಮಜೈನ ಧರ್ಮ [ 1 ]



ಆರನೇ ವಿಕ್ರಮಾದಿತ್ಯ


ಆರನೇ ವಿಕ್ರಮಾದಿತ್ಯನು ಕಲ್ಯಾಣಿ ಚಾಲುಕ್ಯ ರಾಜವಂಶದ‌ ಪ್ರಖ್ಯಾತ ಮತ್ತು ಪರಾಕ್ರಮಿ ದೊರೆ. ಇವನು ತನ್ನ ಅವಧಿಯಲ್ಲಿ ಶಾಲಿವಾಹನ ಶಕೆಯನ್ನು ರದ್ದು ಮಾಡಿ ತನ್ನದೇ ಆದ ವಿಕ್ರಮ ಶಕೆಯನ್ನು ಆರಂಭಿಸುತ್ತಾನೆ. ಇದು ಚಾಲುಕ್ಯ-ವಿಕ್ರಮ ಶಕೆ ಎಂದು ಪ್ರತೀತಿ ಪಡೆಯಿತು. ಇವನ ಆಳ್ವಿಕೆಯ ಕಾಲ ಕ್ರಿ.ಶ.೧೦೭೬-೧೧೨೬. ಈ ೫೦ ವರುಷಗಳು ಇಡಿಯ ಕಲ್ಯಾಣಿ ಚಾಲುಕ್ಯರ ವಂಶಾವಳಿಯಲ್ಲಿ ಅತ್ಯಂತ ಧೀರ್ಘ ಆಳ್ವಿಕೆ. ಈ ೬ನೇ ವಿಕ್ರಮಾದಿತ್ಯನು ತ್ರಿಭುವನಮಲ್ಲನೆಂದು ಬಿರುದಾಂಕಿತನಾಗಿದ್ದನು. ವಿಜಯನಗರ ಸಾಮ್ರಾಜ್ಯದ ಪೂರ್ವಕಾಲದಲ್ಲಿ ದೊರೆತ ಅತಿ ಹೆಚ್ಚು ಶಾಸನಗಳನ್ನು ಇವನ ಆಳ್ವಿಕೆಯಲ್ಲಿ ಬರೆಸಲ್ಪಟ್ಟಿವೆ.[]

ವಿಕ್ರಮಾದಿತ್ಯ ೬
ವಿಕ್ರಮಾದಿತ್ಯ ೬
ಕೈಠಭೇಶ್ವರ ದೇಗುಲ, ಕುಬತೂರು(ಕ್ರಿಶ.೧೧೧೦)
ಕಲ್ಯಾಣಿ ಚಾಲುಕ್ಯ ಅರಸ
ಆಳ್ವಿಕೆಕ್ರಿ.ಶ.೧೦೭೬ -೧೧೨೬(೫೦ ವರ್ಷಗಳು)
ಪೂರ್ವಾಧಿಕಾರಿಸೋಮೇಶ್ವರ ೨
ಉತ್ತರಾಧಿಕಾರಿಸೋಮೇಶ್ವರ ೩
ಗಂಡ/ಹೆಂಡತಿಚಂದಳಾ ದೇವಿ
ಕೇತಲಾ ದೇವಿ
ಸವಳಾ ದೇವಿ
ಸಂತಾನ
ಸೋಮೇಶ್ವರ ೩
ಮನೆತನಕಲ್ಯಾಣಿ ಚಾಲುಕ್ಯ
ತಂದೆಸೋಮೇಶ್ವರ ೧
ಮರಣಕ್ರಿ.ಶ.೧೧೨೬

ಈ ದೊರೆ ವಿಕ್ರಮಾದಿತ್ಯನು ಕಲೆ ಮತ್ತು ಸಂಸ್ಕೃತಿಯ ಪೋಷಣೆಗೆ ಗಮನಾರ್ಹನು.ಇವನ ಆಸ್ಥಾನ ಕನ್ನಡ ಮತ್ತು ಸಂಸ್ಕೃತ ಕವಿ, ಪಂಡಿತರಿಂದ ವಿಜೃಂಭಿಸುತ್ತಿತ್ತು.







ವಿಷ್ಣುವರ್ಧನ

ಸಾಮ್ರಾಜ್ಯದ ಅತ್ಯಂತ ಪ್ರಸಿದ್ಧ ಅರಸು ಬಿಟ್ಟಿಗ, ಈತನ ನಂತರದ ಹೆಸರು ವಿಷ್ಣುವರ್ಧನ (ಆಡಳಿತ: ಸು ೧೧೧೦-೧೧೪೨). ವಿಷ್ಣುವರ್ಧನನ ಆಡಳಿತದ ಕಾಲದಲ್ಲಿ ಹೊಯ್ಸಳ ಸಾಮ್ರಾಜ್ಯ ಇಂದಿನ ಕರ್ನಾಟಕ ರಾಜ್ಯದ ಬಲಿಷ್ಠ ಸಾಮ್ರಾಜ್ಯವಾದದ್ದಲ್ಲದೆ ಪಕ್ಕದ ರಾಜ್ಯಗಳಲ್ಲಿಯೂ ವಿಸ್ತರಿಸಿತು. ವಿಷ್ಣುವರ್ಧನನ ಕಾಲದಲ್ಲಿ ಕಲೆ ಮತ್ತು ಶಿಲ್ಪಕಲೆಗೆ ಬಹಳ ಪ್ರೋತ್ಸಾಹ ನೀಡಲಾಯಿತು. ಈತನ ಪತ್ನಿ ಮತ್ತು ಹೊಯ್ಸಳ ರಾಣಿ ಶಾಂತಲೆ ಪ್ರಸಿದ್ಧ ಭರತನಾಟ್ಯ ನರ್ತಕಿ ಮತ್ತು ಶಿಲ್ಪಕಲೆಯಲ್ಲಿ ಆಸಕ್ತಿಯಿದ್ದವಳೆಂದು ಹೆಸರಾಗಿದ್ದಾಳೆ. ಈ ಕಾಲದಲ್ಲಿಯೇ ಹೊಯ್ಸಳ ಶಿಲ್ಪಕಲೆಯ ಅತ್ಯುನ್ನತ ಉದಾಹರಣೆಗಳು ಮೂಡಿಬಂದವು. ಹಳೆಬೀಡಿನ ಹೊಯ್ಸಳೇಶ್ವರ ದೇವಾಲಯವನ್ನು ಕಟ್ಟಲು ೮೬ ವರ್ಷಗಳು ಬೇಕಾದವು! ಹಾಗೆಯೇ ಬೇಲೂರಿನ ಚೆನ್ನಕೇಶವ ದೇವಸ್ಥಾನಬೇಲೂರಿನ ಚೆನ್ನಕೇಶವ ದೇವಸ್ಥಾನ ೧೦೩ ವರ್ಷಗಳ ಪರಿಶ್ರಮದ ಫಲ.


ಕೃಷ್ಣದೇವರಾಯ

ಕೃಷ್ಣದೇವರಾಯ ಕ್ರಿ.ಶ.೧೫೦೯ ರಿಂದ ೧೫೨೯ ರ ವರೆಗೆ ಆಳಿದ ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿ ಮತ್ತು ವಿಜಯನಗರದ ಅರಸರಲ್ಲಿ ಅತಿ ಪ್ರಮುಖನು. ತುಳುವ ರಾಜವಂಶದ ಮೂರನೆಯ ಅರಸ[]ವಿಜಯನಗರ ಸಾಮ್ರಾಜ್ಯ ಈತನ ಆಳ್ವಿಕೆಯ ಕಾಲದಲ್ಲಿ ಉಚ್ಛ್ರಾಯಕ್ಕೇರಿತು.ಕನ್ನಡ ನಾಡಿನಲ್ಲಿ "ಮೂರುರಾಯರಗಂಡ", "ಕನ್ನಡರಾಜ್ಯ ರಮಾರಮಣ" ಎಂದೂ, ಆಂಧ್ರದಲ್ಲಿ "ಆಂಧ್ರಭೋಜ" ಎಂದೂ, ಸ್ವತಃ ಉತ್ತಮ ಬರಹಗಾರನಾಗಿದ್ದ ಕೃಷ್ಣದೇವರಾಯನು ಸಮಕಾಲೀನ ಕವಿಗಳಿಂದ "ಉರುಕಳ್ ವೈಭವ ನಿವಾಹ ನಿಧಾನ" ಎಂದೂ ಬಿರುದಾಂಕಿತನಾದ ಈತನ ಕಾಲದ ವೈಭವ ಇಂದೂ ಮನೆಮಾತಾಗಿದೆ.

Sri Krishnadevaraya/ ಶ್ರೀ ಕೃಷ್ಣದೇವರಾಯ
ವಿಜಯನಗರ ಸಾಮ್ರಾಟ
ಸಾಮ್ರಾಟ್ ಶ್ರೀ ಕೃಷ್ಣದೇವರಾಯರ ಕಂಚಿನ ಪ್ರತಿಮೆ
ರಾಜ್ಯಭಾರ೨೬ ಜುಲೈ ೧೫೦೯ - ೧೫೨೯[]
ಜನನ೧೬ ಫೆಬ್ರುವರಿ ೧೪೭೧
ಜನ್ಮ ಸ್ಥಳಹಂಪಿ, ಕರ್ನಾಟಕ
ಮರಣ೧೫೨೯ ಅಕ್ಟೋಬರ್‌ ೧೭
ಸಮಾಧಿ ಸ್ಥಳಹಂಪಿ, ಕರ್ನಾಟಕ
ಪೂರ್ವಾಧಿಕಾರಿವೀರ ನರಸಿಂಹರಾಯ
ಉತ್ತರಾಧಿಕಾರಿಅಚ್ಯುತ ದೇವರಾಯ
ಪಟ್ಟದರಸಿಚಿನ್ನಾ ದೇವಿ,
ತಿರುಮಲಾ ದೇವಿ,
ಅನ್ನಪೂರ್ಣಾ ದೇವಿ
ವಂಶತುಳುವ ವಂಶ
ತಂದೆತುಳುವ ನರಸ ನಾಯಕ
ಧಾರ್ಮಿಕ ನಂಬಿಕೆಗಳುಹಿಂದೂ


ಚಿಕ್ಕದೇವರಾಜ ಒಡೆಯರ್

ಚಿಕ್ಕ ದೇವರಾಜ
ಮೈಸೂರಿನ ೧೪ನೇ ಮಹಾರಾಜ
ಆಳ್ವಿಕೆ೧೬೭೩–೧೭೦೪
ಪೂರ್ವಾಧಿಕಾರಿದೊಡ್ಡ ಕೆಂಪದೇವರಾಜ(ತಂದೆಯ ಚಿಕ್ಕಪ್ಪ)
ಉತ್ತರಾಧಿಕಾರಿಕಂಠೀರವ ನರಸರಾಜII (ಮಗ)
ಸಂತಾನ
ಕಂಠೀರವ ನರಸರಾಜ II
ಪೂರ್ಣ ಹೆಸರು
ಚಿಕ್ಕ ದೇವರಾಜ ಒಡೆಯರ್
ತಂದೆದೊಡ್ಡ ದೇವರಾಜ
ಜನನ೨೨ ಸೆಪ್ಟೆಂಬರ್ ೧೬೪೫
ಮರಣ೧೬ ನವೆಂಬರ್ ೧೭೦೪

ದೇವರಾಜ ಒಡೆಯರ್ II (೨೨ ಸೆಪ್ಟೆಂಬರ್ ೧೬೪೫ - ನವೆಂಬರ್ ೧೭೦೪) ೧೬೭೩ ರಿಂದ ೧೭೦೪ ರವರೆಗೆ ಮೈಸೂರು ಸಾಮ್ರಾಜ್ಯದ ಹದಿನಾಲ್ಕನೆಯ ಮಹಾರಾಜರಾಗಿದ್ದರು . ಈ ಸಮಯದಲ್ಲಿ, ಮೈಸೂರು ತನ್ನ ಪೂರ್ವಜರ ನಂತರ ಮತ್ತಷ್ಟು ಗಮನಾರ್ಹ ವಿಸ್ತರಣೆಯನ್ನು ಕಂಡಿತು. ಅವರ ಆಳ್ವಿಕೆಯಲ್ಲಿ, ಕೇಂದ್ರೀಕೃತ ಮಿಲಿಟರಿ ಶಕ್ತಿಯು ಈ ಪ್ರದೇಶಕ್ಕೆ ಅಭೂತಪೂರ್ವ ಮಟ್ಟಕ್ಕೆ ಹೆಚ್ಚಾಯಿತು.





ಈ ಎಲ್ಲಾ ಮಾಹಿತಿಯನ್ನು ವಿಕಿಪೀಡಿಯದಿಂದ ನೇರವಾಗಿ ಪಡೆಯಲಾಗಿದೆ.


ಸಹಕಾರ : ರವಿಕುಮಾರ್, ಇತಿಹಾಸ ಉಪನ್ಯಾಸಕರು

ಸಂಪಾದನೆ - ಡಾ. ರವಿಶಂಕರ್ ಎ.ಕೆ


ಮಂಗಳವಾರ, ಅಕ್ಟೋಬರ್ 15, 2024

ಇರುವ ಭಾಗ್ಯವ ನೆನೆದು - ಗೋವಿನ ಹಾಡು ನಮ್ಮ ಹಿರಿಮೆ

 ಗೋವಿನ ಹಾಡು ನಮ್ಮ ಹಿರಿಮೆ



'ಗೋವಿನ ಕಥೆ'ಯೆಂದರೆ ನಮ್ಮ ಜನರಿಗೆ ಬಲು ಅಕ್ಕರೆ. ಅದನ್ನು ಓದದ, ಹಾಡಿ ಕುಣಿಯದ ಕನ್ನಡದ ಮಕ್ಕಳಿಲ್ಲ. ಅವರ ಮನಸ್ಸನ್ನು ಅದು ಮುಟ್ಟಿ ಕರಗಿಸಿದೆ. ದೊಡ್ಡವರಿಗೆ ಕೂಡ ಮರಳಿ ಓದಿದಾಗ ಹೊಸ ಅರ್ಥ ಹೊಳೆಯುತ್ತದೆ. ಚಿಕ್ಕತನದಲ್ಲಿ ಕಥೆಯ ಸ್ವಾರಸ್ಯಕ್ಕೆ ಮಾತ್ರ ಮೆಚ್ಚಿದ್ದರೆ ಈಗ ಅದರ ಒಳಗಡೆ ಅಡಗಿರುವ ತತ್ವ ಸುಂದರವಾಗಿರುವಂತೆ ಕಂಡುಬಂದು ಕವಿತೆಯಲ್ಲಿ ಹೆಚ್ಚು ಅದರ ಉಂಟಾಗುತ್ತದೆ. ಎಲ್ಲ ತಿಳಿವಿನ ಎಲ್ಲ ಮಟ್ಟದ ಜನರಿಗೂ ಈ ಕವಿತೆ ಸಕ್ಕರೆಯಾಗಿದೆ.

ಈ ಹಾಡನ್ನು ಕಟ್ಟಿದ ಕವಿ ಯಾರೆಂಬುದು ತಿಳಿಯದು, ಅವನು ಯಾವಾಗ ಇದ್ದನೋ ಅದೂ ಗೊತ್ತಿಲ್ಲ. ಹಾಡಿನ ಕೊನೆಯಲ್ಲಿ ಮದ್ದೂರಿನ ನರಸಿಂಹದೇವರ ಹೆಸರು ಇರುವುದರಿಂದ ಅದನ್ನು ಬರೆ ದಾತ ಆ ಊರಿಗೆ ಸೇರಿದವನೋ ಇಲ್ಲವೇ ಆ ದೇವರ ಒಕ್ಕಲಿನವನೋ ಆಗಿರಬೇಕೆಂದು ತೋರುತ್ತದೆ.


ಇಲ್ಲಿ ಹೇಳಿರುವ ಕಥೆ ಬಹಳ ಹಳೆಯದು. ಇತಿಹಾಸ ಸಮುಚ್ಚಯ' ಎಂಬ ಪುರಾಣ ಕಥೆಗಳ ಪುಸ್ತಕದಲ್ಲಿ ಈ ಕಥೆ ಬರುತ್ತದೆ.(ಈ ವಿಷಯವನ್ನು ನನಗೆ ದಯವಿಟ್ಟು ತಿಳಿಸಿದ ಮೈಸೂರು ಓರಿಯಂಟಲ್ ಲೈಬ್ರರಿಯಲ್ಲಿರುವ ವಿದ್ವಾನ್ ಶ್ರೀನಿವಾಸಚಾರರಿಗೆ ಕೃತಜ್ಞನಾಗಿದ್ದೇನೆ) ಈ ಗ್ರಂಥ ಸಂಸ್ಕೃತ ಭಾಷೆಯಲ್ಲಿದೆ. ಇದರ ೩೦ನೆಯ ಅಧ್ಯಾಯಕ್ಕೆ 'ಬಹುಲೋಪಾಖ್ಯಾನ' ಎಂದು ಹೆಸರು.

ಬಹುಲಾ ಎಂಬುದು ಹಸುವಿನ ಹೆಸರು ; ಕಾಮರೂಪಿ ಎಂಬುದು ಹುಲಿಯ ಹೆಸರು. ಕಥೆಯೆಲ್ಲ ಬಹುಮಟ್ಟಿಗೆ ಗೋವಿನ ಹಾಡಿನಲ್ಲಿ ಇರುವಂತೆಯೇ ಇದೆ. ಈ ಕಥೆಯನ್ನು ಮೊದಲು ಭೀಷ್ಮನು ಧರ್ಮ ರಾಜನಿಗೆ ಹೇಳಿದನಂತೆ.


ಬಾಲಪಾಠದ ಪುಸ್ತಕಗಳಲ್ಲಿ ಈ ಹಾಡಿನ ಸಂಗ್ರಹ ಮಾತ್ರ ಸಿಕ್ಕುತ್ತದೆ. ಇದನ್ನು ಮೆಚ್ಚಿರುವವರಿಗೆ ಇದರ ಮೂಲವನ್ನು ನೋಡ ಬೇಕೆಂಬ ಅಪೇಕ್ಷೆ ಬರುವುದು ಸಹಜ. ಪೇಟೆಯಲ್ಲಿ ಮಾರುವ 'ಗೋವಿನ ಹಾಡು' ಎಂಬ ಪುಸ್ತಕವನ್ನು ಅನೇಕರು ನೋಡಿರ ಬಹುದು. ಅದರಲ್ಲಿರುವ ತಪ್ಪುಗಳನ್ನು ಬೇರೆ ಎರಡು ಕೈ ಬರಹದ ಪ್ರತಿಗಳ ಸಹಾಯದಿಂದ ತಿದ್ದಿ ಇಲ್ಲಿ ಮುದ್ರಿಸಿದೆ. ಇದನ್ನು ಮೊದಲು ಹೇಳಿದ ಕವಿ ಇದರಲ್ಲಿ ಎಷ್ಟು ಪದ್ಯಗಳನ್ನು ಬಳಸಿದ್ದನೋ ತಿಳಿಯದು. ಈಚಿನವರು ಅದೇ ಧಾಟಿಯಲ್ಲಿ ಪದ್ಯಗಳನ್ನು ಕಟ್ಟಿ ನಡುನಡುವೆ ಸೇರಿ ಸಿದ್ದಾರೆ. ಹೀಗೆ ಸೇರಿರುವ ಪದ್ಯಗಳು ಯಾವುವು ಎಂದು ಬೆರಳಿಟ್ಟು ತೋರಿಸುವುದಕ್ಕಾಗುವುದಿಲ್ಲವಾದರೂ ಅವು ಇಂಥವೇ ಇರಬೇಕೆಂದು ಊಹಿಸಬಹುದು. ಎಲ್ಲಾ ಸೇರಿ ಈಗ ಒಟ್ಟು ೧೩೭ ಪದ್ಯಗಳು ಈ ಹಾಡಿನಲ್ಲಿವೆ. ಇತರರು ಸೇರಿಸಿರುವುದನ್ನು ಬಿಟ್ಟು ೧೧೪ ಪದ್ಯ ಗಳನ್ನು ಇಲ್ಲಿ ಅಚ್ಚು ಮಾಡಿದೆ. ಬಿಟ್ಟಿರುವ ಪದ್ಯಗಳನ್ನು ಬೇರೆ ಮುದ್ರಿಸಿದೆ.


ಈ ಪುಸ್ತಕವನ್ನು ಮುದ್ದಾಗಿ ಮುದ್ರಿಸಿರುವ ಶಾರದಾಮಂದಿರದ ಒಡೆಯರಿಗೆ ನಾನು ತುಂಬ ಕೃತಜ್ಞನಾಗಿದ್ದೇನೆ.


- ಮುನ್ನುಡಿ - ಡಿ.ಎಲ್. ನರಸಿಂಹಾಚಾರ್

ಗೋವಿನ ಹಾಡು : ಸಂ. ಡಿ.ಎಲ್ ನರಸಿಂಹಾಚಾರ್

ಮೊದಲ ಮುದ್ರಣ - ೧೯೬೦

ಪ್ರಕಟಣೆ : ಶಾರದಾ ಮಂದಿರ, ಮೈಸೂರು

ಬೆಲೆ : ೦.೬೦ ಪೈಸೆ

ಈ ಕೃತಿಯ ಹಲವು ಸಂಪಾದನೆ ಹಾಗೂ ವಿಮರ್ಶೆಗಳು ಈಗಾಗಲೇ ಬಂದಿವೆ.



ಸಾಹಿತ್ಯ ಪರಿಷತ್ತಿನ ಪ್ರಕಟಣೆ

ಸಮುದ್ಯತಾ ಬಳಗದ ಪ್ರಕಟಣೆ

ಮಕ್ಕಳಿಗಾಗಿ ಅಡಕ ಮುದ್ರಿಕೆಗಳು

ಪ್ರೊ. ಕೇಶವಭಟ್ಟರ ಸಂಪಾದನೆ

ಹತ್ತಾರು ಲೇಖನಗಳು, ಚಿಂತನೆಗಳು ವೈವಿದ್ಯಮಯವಾಗಿ ಲಭ್ಯ ಇವೆ.

ಮನಸ್ಸಿಗೆ ಮುದನೀಡುವಂತೆ ಅಮಿತ ರವಿಕಿರಣ ಅವರು ಹಾಡಿದ್ದಾರೆ.
ಲಿಂಕ್ : 


ಧನ್ಯವಾದಗಳು

ಸಂ. ಡಾ. ರವಿಶಂಕರ್ ಎ.ಕೆ

ಸೋಮವಾರ, ಅಕ್ಟೋಬರ್ 14, 2024

ಇರುವ ಭಾಗ್ಯವ ನೆನೆದು - ಜಾಲತಾಣದಲ್ಲಿ ನಮ್ಮ ನಾಡಿನ ಮಾಹಿತಿ

 ಕರ್ನಾಟಕ ಕುರಿತು ಒಂದೇ ಕ್ಲಿಕ್ ನಲ್ಲಿ ಸಂಪೂರ್ಣ ಮಾಹಿತಿಗಳು 




ರ್ನಾಟಕದ ಪರಂಪರೆಯನ್ನು ಸುಲಭವಾಗಿ ತಿಳಿಯಲು ಒಂದು ಅಧಿಕೃತ ಜಾಲತಾಣವಿದೆ. ಅದು ಕರ್ನಾಟಕ ಸರ್ಕಾರದ ಆಡಳಿತ, ಸೇವೆಗಳು ಹಾಗೂ ಎಲ್ಲಾ ಮಾಹಿತಿಯನ್ನು ಸುಲಭವಾಗಿ ದೊರಕಿಸುತ್ತದೆ. 
ಈ ಒಂದು ಜಾಲತಾಣದಲ್ಲಿ ಸರ್ಕಾರದ ಎಲ್ಲಾ ಇಲಾಖೆ, ಸೇವೆ, ಸಂಸ್ಕೃತಿ, ಸಾಹಿತ್ಯ ಮೊದಲಾದಂತೆ ಪ್ರತಿಯೊಂದು ವಿಭಾಗ ಕುರಿತು ಇಲ್ಲಿ ಸುಲಭವಾಗಿ ತಿಳಿಯಬಹುದು.
ಭಾಷೆ, ವ್ಯಾಕರಣ, ಕಲಿಕೆ, ಶಬ್ದಕೋಶ ಮೊದಲಾದಂತೆ ಸಾಹಿತ್ಯ, ಸಂಸ್ಕೃತಿ, ಪ್ರವಾಸ, ಕೃಷಿ, ಆಡಳಿತ, ಮಾಹಿತಿಹಕ್ಕು ಪ್ರತಿಯೊಂದು ಇಲ್ಲಿ ಕಾರ್ಯ ನಿರ್ವಹಿಸುತ್ತವೆ. 
ಕರ್ನಾಟಕ ಕುರಿತು ನಮಗೆ ಕೆಲವು ಪ್ರಾಥಮಿಕ ಮಾಹಿತಿ ತಿಳಿದಿರಲೇಬೇಕು. ಈ ಕಾರಣದಿಂದ ಮತ್ತೆ ಮತ್ತೆ ಈ ತಾಣವನ್ನು ಪರಿಶೀಲಿಸುತ್ತಿರಬೇಕಾಗುತ್ತದೆ. 



ಅಧಿಕೃತ ಜಾಲತಾಣದ ಲಿಂಕ್ :

ಕರ್ನಾಟಕ ಸರ್ಕಾರ


ಉದಾಹರಣೆಯಾಗಿ ಈ ಲಿಂಕ್ ಹೇಗೆ ಕೆಲಸ ಮಾಡುತ್ತಿದೆ ನೋಡೋಣ.

ಶಿಕ್ಷಣ ಕುರಿತು ಕ್ಲಿಕ್ ಮಾಡಿದಾಗ ಕರ್ನಾಟಕ ಸರ್ಕಾರದ ವ್ಯಾಪ್ತಿಯ ಎಲ್ಲಾ ವಿಶ್ವವಿದ್ಯಾಲಯಗಳು ಹಾಗೂ ಅಕಾಡೆಮಿಗಳು/ಪರಿಷತ್ತುಗಳು/ ಪ್ರಾಧಿಕಾರಗಳು  ಹೆಸರುಗಳು ಕಾಣಿಸುತ್ತವೆ. ನೇರವಾಗಿ ವಿಶ್ವವಿದ್ಯಾಲಯಗಳ ಮಾಹಿತಿಯನ್ನು ಇಲ್ಲಿ ಸುಲಭವಾಗಿ ಪಡೆಯಬಹುದು.

ಹಾಗೆಯೇ ,


ವಿಶ್ವವಿದ್ಯಾಲಯಗಳ ಅಧಿಕೃತ ಜಾಲತಾಣಗಳುಅಕಾಡೆಮಿಗಳು/ಪರಿಷತ್ತುಗಳು/ ಪ್ರಾಧಿಕಾರಗಳು
ಈ ಮೊದಲಾದ ಸೇವೆಗಳು ಅದೇ ಜಾಗದಲ್ಲಿ ದೊರೆಯುವುದು ಅರ್ಥಪೂರ್ಣ. ಶಬ್ದಕೋಶ, ಭಾಷಾಂತರ ಮೊದಲಾದ ಸೇವೆಗಳು ಒಂದೇ ಕಡೆ ಲಭ್ಯವಾಗುತ್ತವೆ.



ಪ್ರಮುಖ ಸಮಸ್ಯೆಗಳು 
ಈ ವೆಬ್ ಸೈಟ್ ರಚನೆ ಎಷ್ಟು ಗಂಭೀರವಾಗಿದೆಯೋ ಅದರ ನಿರ್ವಹಣೆಯು ಅಷ್ಟು ಗಂಭೀರವಾಗಿಲ್ಲ. ಸಾಕಷ್ಟು ಕಡೆ ಮಾಹಿತಿ ಇಲ್ಲ, ಕೆಲವು ಕಡೆ ಬದಲಾವಣೆಯಾಗಿಲ್ಲ. ಈ ಕುರಿತು ಸರ್ಕಾರವು ಗಮನಹರಿಸಿ, ಇದಕ್ಕಾಗಿಯೇ ಒಬ್ಬ ಸೂಕ್ತ ವ್ಯಕ್ತಿಯನ್ನು ಉದ್ಯೋಗದಂತೆ ನೇಮಿಸಿದರೆ ನಮ್ಮ ರಾಜ್ಯದ ಮಾಹಿತಿಯು ಸಮರ್ಪಕವಾಗಿ ತಲುಪುತ್ತದೆ. 

ನಾವು ಏನು ಮಾಡಬಹುದು ?
ವಿದ್ಯಾರ್ಥಿಗಳಿಗೆ ಪಠ್ಯದಂತೆ ಈ ವಿಚಾರಗಳನ್ನು ತಲುಪಿಸಬೇಕು. ಕರ್ನಾಟಕದ ಜಿಲ್ಲೆಗಳ ಸಂಖ್ಯೆ ಹೇಳಲು ತಡವರಿಸುವ ಮಕ್ಕಳಿಗೆ ಕರ್ನಾಟಕ ಕುರಿತು ಸಂಪೂರ್ಣ ಮಾಹಿತಿಯು ಒಂದೇ ಕ್ಲಿಕ್ ನಲ್ಲಿ ಲಭ್ಯವಿರುವುದು ನಮ್ಮ ಹಿರಿಮೆಯ ವಿಚಾರ. 
ಮಾಹಿತಿಯನ್ನು ಸರಿಯಾಗಿ ಓದಿ, ಸರ್ಕಾರದ ಸೇವೆಗಳನ್ನು ಪಡೆಯಬೇಕು.
ನಮ್ಮ ಬಿಡುವಿನ ಸಮಯದಲ್ಲಿ ನಮ್ಮ ನಾಡಿನ ವಿಚಾರಗಳನ್ನು ತಿಳಿಯಬೇಕು.
ನಾವು ಮೊದಲು ನಮ್ಮ ಮಣ್ಣಿನ ಕಥೆ, ಬದುಕನ್ನು ಅರಿಯಬೇಕು.

ಧನ್ಯವಾದಗಳು
ಡಾ. ರವಿಶಂಕರ್ ಎ.ಕೆ

ಭಾನುವಾರ, ಅಕ್ಟೋಬರ್ 13, 2024

ಇರುವ ಭಾಗ್ಯವ ನೆನೆದು - ಕನ್ನಡದ ಭಾರತ ರತ್ನ ನಮ್ಮ ಹಿರಿಮೆ

 ಸಿ.ಎನ್.ಆರ್.ರಾವ್ ಎಂದೇ ಪ್ರಸಿದ್ದರಾಗಿರುವ, 'ಚಿಂತಾಮಣಿ ನಾಗೇಶ್ ರಾಮಚಂದ್ರರಾವ್ ವಿಶ್ವವಿಖ‍‍್ಯಾತ ಭಾರತೀಯ ವಿಜ್ಞಾನಿಗಳಲ್ಲೊಬ್ಬರಾಗಿದ್ದಾರೆ. ೨೦೧೩ರ ವರ್ಷದಲ್ಲಿ ಭಾರತದ ಅತ್ಯುನ್ನತ ಗೌರವವಾದ 'ಭಾರತ ರತ್ನ' ಪ್ರಶಸ್ತಿ ಸಂದಿದೆ.



ಇವರು ಕನ್ನಡ ಮಾಧ್ಯಮದಲ್ಲಿ ಓದಿ, ಒಂದು ಸ್ಥಳೀಯ ಭಾಷೆಯ ಸಹಿಯನ್ನು ವಿಶ್ವದ ಪ್ರಮುಖ ಕ್ಷೇತ್ರ ಹಾಗೂ ವಿಶ್ವವಿದ್ಯಾಲಯಗಳಲ್ಲಿ ಮಾನ್ಯವೆಂಬಂತೆ ಸಾಧನೆ ಮಾಡಿದವರು. ಈ ಕನ್ನಡ ಮನಸ್ಸು ನಮ್ಮ ಹೆಬ್ಬಾಳದ ಹತ್ತಿರವಿರುವ ಜಕ್ಕೂರಿನ ಜವಹರಲಾಲ್ ಉನ್ನತ ವಿಜ್ಞಾನ ಅಧ್ಯಯನ ಕೇಂದ್ರದ ಮುಖ್ಯಸ್ಥರಾಗಿ ಈಗಲೂ ಅಧ್ಯಯನಶೀಲರು. 



ಇವರು ನಮ್ಮ ಕನ್ನಡ ಪರಂಪರೆಯ ಹಿರಿಮೆ. ಇವರ ಪ್ರತಿ ಹೆಜ್ಜೆ ಗುರುತುಗಳು, ಸಾಧನೆಗಳು, ಕೃತಿಗಳು ವರ್ತಮಾನದ ಸಾವಿರಾರು ಬದಲಾವಣೆಗಳಿಗೆ, ಅಧ್ಯಯನಗಳಿಗೆ ಮಾರ್ಗದರ್ಶಿ.



ಇವರ ಕುರಿತ ಮಾಹಿತಿ :

ಸಿ.ಎನ್. ಆರ್. ರಾವ್


ಇವರ ಸಂದರ್ಶನ :

ಡಾಕ್ಯುಮೆಂಟರಿ

ಭಾನುವಾರ, ಜೂನ್ 18, 2023

ಮೆಟ್ರೋ ಕಥನ - ೧೦೦

ಮೆಟ್ರೋ ಕಥನ - ೧೦೦

ಸೋತ ಮಗನ ತಲೆಯನ್ನು ಸವರುತ್ತ, ತಂದೆ ಹೀಗೆ ನುಡಿದರು. ನನ್ನ ಬಳಿ ಒಂದು ಗಡಿಯಾರವಿದೆ ನೋಡಿದ್ದೀಯಾ ಅಲ್ಲವೆ. ಅದಕ್ಕೆ ಪ್ರತಿದಿನ ಕೀ ಕೊಡಬೇಕು. ಕ್ರಮವನ್ನು ಅನುಸರಿಸಿದಷ್ಟೂ ಕಾಲ ಸರಿಯಾಗಿ ತೋರಿಸುತ್ತದೆ. ಮನುಷ್ಯ ಕೂಡ ಹಾಗೆಯೆ. ಕಳೆದುಹೋಗುವ ಮುನ್ನ ಕೀ ಕೊಟ್ಟರೆ ಕಾಲದಂತೆ ಕ್ರಮವಾಗಿರಬಹುದು. ಈಗಲೂ ನೀನು ಸೋತಿಲ್ಲ. ಒಂದು ಉತ್ತಮ ಅನುಭವ ಕಲಿತಿರುವೆ. ಸೋಲಿನ ಅರ್ಥ ತಿಳಿದಿರುವೆ" ಎಂದರು. ತನಗೆ ತಂದೆಯ ನುಡಿಗಳೇ ಕೀಲಿ ಎನಿಸಿತು, ಮಗನು ಎಚ್ಚರವಾದನು. - ಅಂಕುರ


ಶನಿವಾರ, ಜೂನ್ 17, 2023

ಮೆಟ್ರೋ ಕಥನ - ೯೯

 ಮೆಟ್ರೋ ಕಥನ - ೯೯

ಒಂದು ಊರು. ನೂರಾರು ಮನೆಗಳು. ಸಾವಿರಾರು ಮನಸುಗಳು. ಜಾತಿಗೊಂದು ಬೀದಿ, ಧರ್ಮಕ್ಕೊಂದು ಕೇರಿ. ಎಲ್ಲರೂ ತಮ್ಮ ಸ್ವಾರ್ಥಕ್ಕಾಗಿ ಇನ್ನೊಬ್ಬರಿಗೆ ಬಳಕೆಯಾಗುತ್ತಿದ್ದರು. ಬಳಸಿಕೊಳ್ಳುತ್ತಿದ್ದರು. ಊರಿನ ಅರಳಿಮರವು ಅರಳಿಕಟ್ಟೆ ಹೆಸರಲ್ಲಿ ಕಲ್ಲಿನ ಕಟ್ಟೆಕಟ್ಟಿ ನೀರಿನ ಸಂಪರ್ಕ ನಿಲ್ಲಿಸಿದ್ದರೂ, ಎಲ್ಲರಿಗೂ ಆಶ್ರಯವಾಗಿತ್ತು. ಊರ ಬಾವಿಗಳು ನಿತ್ಯ ಎಲ್ಲರೂ ಬಂದು ನೀರು ಸೇದಿದರೂ ಜಿನುಗುತ್ತಾ ನೀರು ನೀಡುತ್ತಿತ್ತು. ಊರಾಚೆಯ ಕಾಡು ಕಡಿದು ನಾಶಗೊಳಿಸುತ್ತಿದ್ದರೂ, ತಂಗಾಳಿ ನೀಡುತ್ತಿತ್ತು. ಇದರ ಸುಖಿ ಮನುಷ್ಯ ಮಾತ್ರ ಇದೆಲ್ಲವನ್ನೂ ಪುಸ್ತಕದಲ್ಲಿ ಮಾತ್ರ ಓದುತ್ತಿದ್ದನು.


- ಅಂಕುರ

ಮೆಟ್ರೋ ಕಥನ - ೯೮

 ಮೆಟ್ರೋ ಕಥನ - ೯೮


ಗರಿಕೆಯ ಹುಲ್ಲು ಕೃಷಿಗೆ ಕಸವಾಗಿ ಕಿತ್ತು ಹಾಕುತ್ತಿದ್ದರು. ಹಬ್ಬದ ದಿನ ಮಾತ್ರ ಹುಡುಕಿ, ಕಿತ್ತು ತಂದು ಅಲಂಕಾರಮಾಡಿ ಪೂಜಿಸುತ್ತಿದ್ದರು.  ಕಿತ್ತ ಜಾಗದಲ್ಲೇ ಮತ್ತೆ ಮತ್ತೆ ಚಿಗುರುವ ಗರಿಕೆಯು ಅದೆಷ್ಟೋ ಸೋಲಿಗೆ ಜೀವಂತಕಾವ್ಯಗಳನ್ನು ಹಾಡುತ್ತಿತ್ತು.


- ಅಂಕುರ

ಮೆಟ್ರೋ ಕಥನ - ೯೭

ಮೆಟ್ರೋ ಕಥನ - ೯೭


 ಆನಂದನು ಬಹಳ ಮಾತುಗಾರ. ಎಲ್ಲೇ ತಪ್ಪು ಅನಿಸಿದರೂ ಪ್ರಶ್ನಿಸಿ, ವಿರೋಧಿಸುತ್ತಿದ್ದ. ಎಲ್ಲರೂ ದ್ವೇಷಿಸುತ್ತಿದ್ದರು. ಇವನಿಗೂ ಬೇಸರಗಳೇ ಹೆಚ್ಚಾಗಿ, ಆರೋಗ್ಯ ಹಾಳಾಯಿತು. ಒಮ್ಮೆ ಸಾಧುಗಳನ್ನು ಭೇಟಿಯಾದ. ಸಾಧುಗಳು ಆನಂದದ ಅರ್ಥ ತಿಳಿಸಿ, ಮೌನದ ಪ್ರೀತಿ ಹೇಳಿಕೊಟ್ಟರು. ಆನಂದ ಈಗ ತುಂಬಾ ಮೌನಿಯಾಗಿದ್ದಾನೆ. ಎಲ್ಲಾ ಸಂದರ್ಭದಲ್ಲೂ ನಗುಚೆಲ್ಲಿ ಮುಂದೆ ಸಾಗುತ್ತಾನೆ. ಅವನಿಗೆ ತಿಳಿದಿರುವುದೊಂದೆ! ಲೋಕವನ್ನು ಬದಲಿಸಲಾಗದು, ತಾನು ಬದಲಾದರೆ ಸಾಕು. ಆನಂದನ ವರ್ತನೆಯು ಕೆಲವರಿಗೆ ಲಾಭ ಇರಬಹುದು, ಆದರೆ ಹಲವರು ಬದಲಾಗುತ್ತಿದ್ದಾರೆ.



- ಅಂಕುರ

ಮೆಟ್ರೋ ಕಥನ - ೯೬

 ಮೆಟ್ರೋ ಕಥನ - ೯೬

ಜಗತ್ತಿನ ಎಲ್ಲಾ ವಿಷಯಗಳನ್ನು ಸಂಗ್ರಹಿಸಿರುವ ಅಂತರ್ಜಾಲವನ್ನು ನಂಬಿ ವಿದ್ಯಾರ್ಥಿಗಳು ಖಾಲಿತಲೆಯಲ್ಲಿ ಗಿಣಿಪಾಠಗಳನ್ನು ಓದಿ, ಒಪ್ಪಿಸುತ್ತಿದ್ದರು. ಯಂತ್ರಗಳೇ ಮಾತಾಡುತ್ತಿದ್ದವು. ಮನುಷ್ಯ ಸೋಮಾರಿಯಾಗಿ, ಸುಖದ ಲೋಲುಪತೆಯನ್ನು ಅರಸುತ್ತಿದ್ದನು. ಒಂದು ದಿನ ಅಂತರ್ಜಾಲ ಬಳಕೆಯು ವಿನಾಶ ಹೊಂದಿದ ದುರಂತ ಕೇಳಿ, ಜಗತ್ತೇ ಹುಚ್ಚರ ಸಂತೆಯಾಯಿತು. ಎಲ್ಲಾ ಕೆಲಸಗಳು ನಿಂತವು. ಬೆವರಿನ ಭಾಷೆಯು ಉಸಿರಾಡಿತು. ಬುದ್ದಿಗೆ, ತೋಳಿಗೆ ಕೆಲಸ ಬಂದು ಮನುಷ್ಯನು ಜಗತ್ತನ್ನು ಮರೆತು ಗ್ರಾಮಸ್ವರಾಜ್ಯಕ್ಕೆ‌ ಹೆಜ್ಜೆ ಹಾಕಿದನು.


- ಅಂಕುರ

ಮೆಟ್ರೋ ಕಥನ - ೯೫

 ಮೆಟ್ರೋ ಕಥನ - ೯೫


ವೈದ್ಯರೊಬ್ಬರಿಗೆ ಸೇಬು ಹಣ್ಣು ಬಹಳ ಇಷ್ಟವಾಯಿತು. ಅದನ್ನು ಸ್ಥಳೀಯವಾಗಿ ಬೆಳೆಯುತ್ತಿರಲಿಲ್ಲ. ಅದನ್ನು ವ್ಯಾಪಾರ ಸರಕಾಗಿಸಿದ ಮಾರುಕಟ್ಟೆ ಮುಖ್ಯಸ್ಥನ ಬಳಿ ಸಂಧಾನ ಮಾಡಿಕೊಂಡ ವೈದ್ಯರು, ಸೇಬು ಅತ್ಯಂತ ಪೌಷ್ಟಿಕಾಂಶ ಹೊಂದಿದ ಆರೋಗ್ಯಕರ ಆಹಾರ, ರೋಗಿಗಳಿಗೆ ಚಿಕಿತ್ಸೆಯಂತೆ ಎಂಬ ಸುದ್ದಿಯನ್ನು ನೀಡಿದರು. ಅದು ಕಾಲ ದೇಶಗಳ ಮೀರಿ ಸ್ಥಳೀಯವಾದ ಎಲ್ಲಾ ಹಣ್ಣುಗಳನ್ನು ದುಬಾರಿ ಸ್ಟೇಟಸ್ ನಲ್ಲೇ ತಿಂದು ಹಾಕಿತು.


ಮೆಟ್ರೋ ಕಥನ - ೯೪

 ಮೆಟ್ರೋ ಕಥನ - ೯೪


ಮುಖಪುಟದ ಗೆಳೆಯರೆಲ್ಲಾ ಒಂದು ಕಾರ್ಯಕ್ರಮದಲ್ಲಿ ಭೇಟಿಯಾದರು. ಸತ್ಯನಾಥನು ಹೆಚ್ಚು ಲೈಕ್ ಮತ್ತು ಕಾಮೆಂಟ್ ಮಾಡದವನೆಂದು‌ ಅವನನ್ನು ಅಷ್ಟೇನೂ ಮಾತಾಡಿಸದೆ ಅವರವರೇ ಹೆಚ್ಚು ಆನಂದಿಸುತ್ತಿದ್ದರು.‌ ಎಲ್ಲರ ಮಾತು ನಂಬಿ ಹೋದ ಸತ್ಯನಾಥನಿಗೆ ಮುಖಪುಟವು ಸದಾ ಮುಖಪುಟವೇ ಆಗಿದೆ, ಮನದಪುಟವಲ್ಲವೆಂದು ತಿಳಿದು ಅಲ್ಲಿಂದ ಹೊರಟನು.


- ಅಂಕುರ

ಮೆಟ್ರೋ ಕಥನ - ೯೩

 ಮೆಟ್ರೋ ಕಥನ - ೯೩


ಅನ್ಯಾಯಕಾರಿ ಬ್ರಹ್ಮ ಸುಂದರನನ್ನು ಬ್ರಹ್ಮಚಾರಿ ಮಾಡಿದನೆಂದು ಹೆಣ್ಣು ಮಕ್ಕಳು ಕುಣಿಯುತ್ತಿದ್ದರು. ಇದನ್ನು ವ್ಯಾಖ್ಯಾನ ಮಾಡಿದ ಯುವತಿಯರು ಇಲ್ಲಿ ಸುಂದರರ ಕೊರತೆ ಇದೆ ಎಂದು ನೋವು ತೋಡಿಕೊಂಡರು. ಆದರೆ ಹುಡುಗರು ಮಾತ್ರ ವ್ಯಾಯಾಮಶಾಲೆಯಲ್ಲಿ ಫಿಟ್ ಆಗುತ್ತಿದ್ದರು.

ಮೆಟ್ರೋ ಕಥನ - ೯೨

 ಮೆಟ್ರೋ ಕಥನ - ೯೨


ಬಸ್ಸಿನ ಪ್ರಯಾಣ ಉಚಿತವೆಂದು ಮನೆಯ ಹೆಣ್ಣುಮಕ್ಕಳನ್ನು ಹೊರಗಿನ ವ್ಯವಹಾರಗಳಿಗೆ ಕಳಿಸಲಾಗುತ್ತಿತ್ತು. ಇದರಿಂದ ಜವಾಬ್ದಾರಿಯನ್ನು ಕಲಿಯುವ ಹೆಣ್ಣುಮಕ್ಕಳು ಮನೆಯ ಯಜಮಾನಿಕೆ ಕುರಿತು ಹಲವು ಅನುಭವ ಕಲಿತರು. ಆ ಪ್ರದೇಶದ ಕುಟುಂಬಗಳು ಸಮಾನತೆಯ ಕಡೆಗೆ ಸಾಗಲು ಒಂದು ಯೋಜನೆಯು ಅನುಕೂಲವಾಯಿತೆಂದು ವಿದ್ಯಾರ್ಥಿನಿ ಪರೀಕ್ಷೆಯಲ್ಲಿ ಪ್ರಬಂಧ ಬರೆದಳು.


- ಅಂಕುರ

ಮೆಟ್ರೋ ಕಥನ - ೯೧

 ಮೆಟ್ರೋ ಕಥನ - ೯೧


ಒಣಗಿದ ಭೂಮಿಯು ಮೊದಲ ಮಳೆಗೆ ತಂಪಾದಂತೆ ಕಂಡಿತು. ಆದರೆ ಭೂಮಿಯೊಳಗಿನ ಕಾವು ಆಗ ಪ್ರಾರಂಭವಾಯಿತು. ಮಿಡತೆಗಳು, ಕಪ್ಪೆ, ಹಾವು ಎಲ್ಲವೂ ಕಾವು ತಡೆಯಲಾರದೆ ಮೇಲೆ ಬಂದವು. ಆಗ ತಾನೆ ಚಿಗುರುತ್ತಿದ್ದ ಹಸಿರು ಹುಲ್ಲನ್ನು ಮಿಡತೆಗಳು ತಿಂದವು. ಈ ಮಿಡತೆಗಳನ್ನು ಕಪ್ಪೆ ತಿಂದಿತು. ಕಪ್ಪೆಯನ್ನು ಹಾವು ನುಂಗಿತು. ಈ ಹಾವಿಗೂ ಹದ್ದಿನ ಕಣ್ಣಿತ್ತು. ಇದನ್ನೆಲ್ಲಾ ಯೋಚಿಸಿದ ತಿಮ್ಮನು ತನ್ನ ಬದುಕು ನೆನಪಾಯಿತು.

ಬಾಲ್ಯದಲ್ಲಿ ತಿಮ್ಮನಾಗಿ ಊರೆಲ್ಲಾ ಬಾಯಲ್ಲಿ ಕೆಲಸಮಾಡಿದೆ. ಬೆಳೆಯುತ್ತಾ ತಿಮ್ಮಣ್ಣನಾಗಿ ಕೆಲಸಮಾಡಿದೆ. ನಗರಕ್ಕೆ ಹೋಗಿ ತಿಮ್ಮೇಶನಾದೆ. ನಾನೂ ಒಂದು ರೀತಿಯ ಆಹಾರ ಚಕ್ರದಲ್ಲಿ ಬಲಿಯಾದವನೇ! ನನ್ನದೇ ಬದುಕು, ನನ್ನದೇ ಚಕ್ರ. ಇದು ತಿಮ್ಮನು ಬರೆದ ಜಗದ ಕಥೆ.


- ಅಂಕುರ

ಮೆಟ್ರೋ ಕಥನ - ೯೦

 ಮೆಟ್ರೋ ಕಥನ - ೯೦


ಫಲಿತಾಂಶ ಬಂದಾಗ ರಮೇಶನು ಅದೇಕೋ ಹೀಗೆ ಹೇಳುತ್ತಿದ್ದನು. ಎಲ್ಲಾ ಬರೀ ಮೋಸ, ತಗೊಂಡು ವ್ಯವಹಾರ ಮಾಡ್ತಾರೆ. ನಮ್ಮಂತರು ಎಷ್ಟೆ ಓದಿರೂ ನ್ಯಾಯ ಸಿಗಲ್ಲ. ಓದೋದಕ್ಕಿಂತ ಕೆಲಸಕ್ಕೆ ಹೋಗೋದು ಮೇಲು ಎಂದು ಬೇಸರ ವ್ಯಕ್ತಪಡಿಸುತ್ತಿದ್ದನು. ಉಮೇಶನು ಇದರ ವಿರುದ್ಧವಿತ್ತು. ಅತ್ಯಂತ ಪ್ರಾಮಾಣಿಕ ಪರೀಕ್ಷೆ ಇದು. ನನ್ನ ಶ್ರಮಕ್ಕೆ ಫಲ ಸಿಕ್ಕಿದೆ. ಅದೆಷ್ಟು ನಿದ್ರೆ, ಸಂಬಂಧಗಳ ಕಳಚಿ ಏಕಾಂಗಿಯಾಗಿ ಸಂಘರ್ಷ ಮಾಡಿದುದರ ಫಲ ಇದು ಎಂದನು.


ವಿಶೇಷ ಅಂದರೆ ಇಬ್ಬರೂ ಒಂದೇ ಕೇಂದ್ರ, ಒಂದೇ ಕೊಠಡಿಯಲ್ಲಿ ಪರೀಕ್ಷೆ ಬರೆದಿದ್ದರು.



- ಅಂಕುರ

ಮೆಟ್ರೋ ಕಥನ -೮೯

 ಮೆಟ್ರೋ ಕಥನ -೮೯


ಸೂರ್ಯಕಾಂತಿ ಗಿಡದಲ್ಲಿ ಮೊಗ್ಗಾಗಿ, ಹೂವರಳಿ, ತೆನೆ ಬಲಿತು ತಲೆದೂಗುತ್ತಿತ್ತು. ಗಿಳಿಗಳು ಬಂದು ತೆನೆಯಲ್ಲಿ ಕುಕ್ಕಿ ಕುಕ್ಕಿ ತಿಂದು ಹಾರಿಹೋದವು. ಇದನ್ನು ನೋಡಿದ ಸನ್ಯಾಸಿಯೊಬ್ಬರು ತನ್ನ ಶಿಷ್ಯರಿಗೆ ಈ ರೀತಿಯಲ್ಲಿ ಪುರಾಣ ಬಿಗಿದರು. ಈ ತೆನೆಯು ಆ ಗಿಳಿಗಳಿಗಾಗಿಯೇ ಹುಟ್ಟಿತ್ತು. ಆ ಗಿಳಿಗಳು ಇದನ್ನು ತಿಂದು ಈ ಗಿಡಕ್ಕೆ ಮೋಕ್ಷ ನೀಡಿದವು ಎಂದರು. ಖಾಲಿ ತೆನೆಯೊಂದು ಮಡಿಲು ಕಳಚಿದ ಅನಾಥಪ್ರಜ್ಞೆಯಲ್ಲಿ ನೋಡುತ್ತಿತ್ತು.


- ಅಂಕುರ

ಮೆಟ್ರೋ ಕಥನ - ೮೮

 ಮೆಟ್ರೋ ಕಥನ - ೮೮


ಸಾಲುಮರದ ತಿಮ್ಮಕ್ಕನ ಎದುರು ಸಾಲು ಸಾಲು ಪ್ರಶಸ್ತಿಗಳು, ನೆನಪಿನ ಕಾಣಿಕೆಗಳು. ಮರದಲ್ಲಿ ಮಾಡಿದ್ದ ನೆನಪಿನ ಕಾಣಿಕೆಗಳೆಲ್ಲಾ ಅಜ್ಜಿ ಎದುರು ಬಿಕ್ಕಿ ಬಿಕ್ಕಿ ಅಳುತ್ತಿದ್ದವು. ಅಸಹಾಯಕತೆಯ ಅಜ್ಜಿ, ಬಂದವರಿಗೆಲ್ಲಾ ನಗುತ್ತಲೇ ಆಶೀರ್ವಾದ ಮಾಡುತ್ತಿತ್ತು.


- ಅಂಕುರ

ಮೆಟ್ರೋ ಕಥನ - ೮೭

 ಮೆಟ್ರೋ ಕಥನ - ೮೭


ಭಾರಿ ಮಳೆಯು ಹಲವಾರು ತೊಂದರೆಗಳನ್ನು ಸೃಷ್ಟಿಸಿತು. ಮರಗಳು, ಮನೆಗಳು ಉರುಳಿದರೆ, ರಸ್ತೆ ಹಾಳಾಗಿ ಕಾಲುವೆ ಒಡೆದು, ಹಳ್ಳಗಳು ತೇಲಿ, ಕೆರೆ ಕೋಡಿ ಬಿದ್ದಿತು. ರಾತ್ರಿಯ ಈ ಆರ್ಭಟದಿಂದ ತತ್ತರಿಸಿ ಬೆಳಗ್ಗೆ ತೋಟ ನೋಡಲು ಹೋದೆ. ಇರುವೆ, ರೆಕ್ಕೆಹುಳ, ಗೆದ್ದಲು ನಿಧಾನವಾಗಿ ಭೂಮಿಯಿಂದ ಹಸಿಮಣ್ಣು ತೆಗೆದು ಆಚೆ ಬರುತ್ತಿವೆ. ಹಾಳಾಗದೆ ಉಳಿದ ನಿಸರ್ಗವೆಲ್ಲಾ ನಗುತ್ತಿದೆ. ಕಪ್ಪೆಗಳು ನೀರಿನಲ್ಲಿ ಜೈಕಾರಮಾಡುತ್ತಿವೆ. ಇದನ್ನೆಲ್ಲಾ ನೋಡಿ, ಇರುವ ಭಾಗ್ಯವ ನೆನೆದು ಡಿವಿಜಿ ಸಾಲು ನೆನಪಾಗಿ ಖುಷಿಯಾದೆನು.


- ಅಂಕುರ

ಮೆಟ್ರೋ ಕಥನ - ೮೬

 ಮೆಟ್ರೋ ಕಥನ - ೮೬


ಸರ್ಕಾರದ ಯೋಜನೆಯನ್ನು ಟೀಕಿಸಿದ ಸರ್ಕಾರಿ ನೌಕರರಿಗೆ ನೋಟಿಸು ಕಳಿಸಿದರು. ಇದನ್ನು ತಿಳಿದ ಇನ್ನೊಬ್ಬ ನೌಕರನು ಹೀಗೆಂದನು. ಸರ್ಕಾರಿ ಉದ್ಯೋಗ ಅಂದರೆ ಸ್ವಾತಂತ್ರ್ಯ ಕಳೆದುಕೊಳ್ಳುವುದು ಎಂದರ್ಥ. ನಾವೆಲ್ಲಾ ಮೌನವಾಗಿಲ್ವ, ಏಕೆ ಬೇಕಿತ್ತು ಇವರಿಗೆ ನಮ್ಮ ಜನ ಇನ್ನೂ ಸ್ಮಾರ್ಟ್ ಆಗಬೇಕು ಎಂದು ನಕ್ಕರು. ಅಜಾದಿ ಕೀ ಅಮೃತ್ ಮಹೋತ್ಸವ ಎಂಬ ಅಕ್ಷರಗಳು ಗೋಡೆಯಲ್ಲಿ ಮಾಸುತ್ತಿದ್ದವು.


- ಅಂಕುರ

ಸೋಮವಾರ, ಜೂನ್ 12, 2023

ಮೆಟ್ರೊ ಕಥನ - ೮೫

 ಮೆಟ್ರೊ ಕಥನ - ೮೫


ಅರೆಕಾಲಿಕ ಉದ್ಯೊಗಿ ಹೆಂಗಸು ಖುಷಿಯಿಂದ ಬಂದಳು. ಏನಮ್ಮ ಇಷ್ಟು ಖುಷಿಯಾಗಿದ್ದೀಯಾ ಎಂದಾಗ ಏನಿಲ್ಲ ಸಾ.. ನಿಜವಾಗಿಯೂ ಇವತ್ತಿಂದ ಬಸ್ ಚಾರ್ಜ್ ತೆಗೆದುಕೊಳ್ಳಲಿಲ್ಲ. ಬರೋ  ಸಂಬಳದಲ್ಲಿ ಸಾವಿರದೈನೂರು ಚಾರ್ಜೆ ಆಗ್ತಿತ್ತು. ಇನ್ಮೆಲೆ ಇದನ್ನಾದರೂ ಉಳಿಸಬಹುದು ಎಂದಳು. ಈಕೆ ಖುಷಿಯಲ್ಲಿ ಯಾವ ಸರ್ಕಾರ, ಯಾವ ಮಂತ್ರಿ ಏನೂ ಮುಖ್ಯವಾಗದೆ ತನ್ನ ಬಡತನವಷ್ಟೆ ಮಾತಾಡಿಸುತ್ತಿತ್ತು.


- ಅಂಕುರ

ಮೆಟ್ರೊ ಕಥನ - ೮೪

 ಮೆಟ್ರೊ ಕಥನ - ೮೪

ಮೆಟ್ರೋ ಕಥನ 


ಸರ್ಕಾರಿ ಉದ್ಯೋಗಿಯೊಬ್ಬ, ತನ್ನ ನೆಮ್ಮದಿಯ ಜೊತೆಯಲ್ಲಿ  ನಿರುದ್ಯೋಗಿಗಳಿಗೆ ಸೇವೆ ಮಾಡಲು ಪ್ರಾರಂಭಿಸಿದನು. ಆರಂಭದಲ್ಲಿ ತನ್ನ ಸೇವೆಗೆ ಆಸಕ್ತರ ಪ್ರತಿಕ್ರಿಯೆ ಲಕ್ಷ ಜನರ ತಲುಪಿತು. ಖುಷಿಯೂ ಆಯಿತು. ತನ್ನ ಶ್ರಮಕ್ಕೆ ಪ್ರತಿಫಲವಾಗಿ ಹೀಗೆ ಆಲೋಚಿಸುವಾಗ ಒಬ್ಬೊಬ್ಬರಿಂದ ಒಂದೊಂದು ರೂ ಸಂಗ್ರಹಿಸೋಣ ಸಾಕು ಎನಿಸಿ, ಉಪಾಯ ಹುಡುಕಿದ. ಅದರ ಫಲವಾಗಿ ಲಕ್ಷಾಂತರ ಹಣ ದೊರೆಯಿತು. ಸೇವೆ ಉದ್ಯಮವಾಯಿತು. ಈಗ ನೌಕರಿಯನ್ನೇ ಬಿಡುವ ಆಲೋಚನೆ ಮಾಡಿದ್ದಾನೆ.


- ಅಂಕುರ


ಮೆಟ್ರೋ ಕಥನ - ೮೩

 ಮೆಟ್ರೋ ಕಥನ - ೮೩

ನಮ್ಮೂರ ಎಲ್ಲಾ ಹೆಣ್ಮಕ್ಕಳಿಗೆ ದುಡ್ಡಿಲ್ಲದೆ ಅರಾಮಾಗಿ ಸರ್ಕಾರಿ ಬಸ್ಸಲ್ಲಿ ತಿರುಗಾಡುವ ಯೋಗ ದೊರೆಯಿತು. ಅಕ್ಕಿ, ಬೇಳೆ, ಎಣ್ಣೆ,ಗ್ಯಾಸು ಅದು ಇದು ಅಂತ ಸಿಟ್ಟಿಗೆದ್ದವರೆಲ್ಲಾ ತಣ್ಣಗಾದರು. ಸ್ವಸಹಾಯ ಹಾಗೂ ಸಾವಿತ್ರಿ, ಅಕ್ಕ, ಅಮ್ಮ ಸಂಘದ ಮಹಿಳೆಯರೆಲ್ಲಾ ಪ್ರವಾಸ ಹೊರಟರು. ಧರ್ಮಸ್ಥಳ, ಕುಕ್ಕೆ, ಕಟೀಲು, ಮುರುಡೇಶ್ವರ, ಸಿಗಂಧೂರು, ಜೋಗ, ಹೊರನಾಡು, ಶೃಂಗೇರಿ ಒಂದು ಸುತ್ತು ಹೋಗಬೇಕು ಅಂತ ಯೋಚ್ನೆ ಮಾಡ್ತಾವ್ರೆ. ಫುಲ್ ಟೈಟಾಗಿ ಇದನ್ನೆಲ್ಲಾ ಗಮನಿಸುತ್ತಿದ್ದ ಪರಮೇಶಿಯು ಈ ಸರ್ಕಾರ ಸರಿ ಇಲ್ಲ ಎಂದನು.

- ಅಂಕುರ 

ಮೆಟ್ರೋ ಕಥನ -೮೨

 ಮೆಟ್ರೋ ಕಥನ -೮೨

ಇತ್ತೀಚಿನ ಸಚಿವ ದೇವಾಲಯಕ್ಕೆ ಲಕ್ಷ ನೀಡಿದ್ದು, ಮನೆಯಲ್ಲಿ ಹೋಮ ಮಾಡಿಸಿದ್ದು, ಇವತ್ತು ಅಲ್ಲೆಲ್ಲೊ ಹರಕೆ ತೀರಿಸಿದ್ದು ಕುರಿತು ಅರಳಿಕಟ್ಟೆ ಮಾತು ಜೋರಾಗಿ ನಡೆದಿತ್ತು. ಕೇಳುವ ತನಕ ಕೇಳಿ ರಾಜಣ್ಣ ಹೀಗೆ ನುಡಿದನು. ದುಡ್ಡು ಇರೋರು ಕಥೆ ಒಂತರಾ, ಇಲ್ಲದೆ ಇರೋರು ಕತೆ ಇನ್ನೊಂತರ. ಅಲ್ಲೋಡು ಶ್ಯಾಮಣ್ಣ ಕಾಸಿಲ್ಲದೆ  ಹಾಗೇ ಮರೆಲಿ ಹೋಗ್ತಾ ಇದಾನೆ. ಇಲ್ಲೋಡು ಲಕ್ಷ್ಮಮ್ಮ ಯಾರಾದರೂ ಒಂದು ಮೊಳ ಹೂ ಕೊಳ್ಳಲಿ ಅಂತ ನಾಲ್ಕು ದಿಕ್ಕು ನೋಡ್ತಾವ್ಳೆ. ಆ ನಿಂಗಮ್ಮ ಹಣ ಮಾಡೋ ಆಸೆಲಿ ದಿನಕ್ಕೆ ಒಂದೊತ್ತು ಊಟ ಮಾಡುತ್ತೆ, ಇದೆ ಪ್ರಪಂಚ. ಅವರವರ ಅವರವರ ದೃಷ್ಟಿಯಲ್ಲಿ ಅವರು ಮಾಡಿದ್ದೆಲ್ಲ ಸರಿನೆ.


- ಅಂಕುರ

ಮೆಟ್ರೋ ಕಥನ - ೮೧

ಮೆಟ್ರೋ ಕಥನ - ೮೧ 

ಹಣವು ಜೇಬಿನಿಂದ ಜೇಬಿಗೆ ಸಾಗುತ್ತಿತ್ತು. ಅದು ಯಾವುದೇ ಮೈಲಿಗೆ ಇಲ್ಲದೆ ಮೌಲ್ಯ ಪಡೆಯುತ್ತಿತ್ತು. ಸುಳ್ಳು ಹೇಳಿಸಿತು. ಮೋಸ ಮಾಡಿಸಿತು. ಅನ್ಯಾಯ, ಅಧರ್ಮ, ಅತ್ಯಾಚಾರ ಎಲ್ಲಕ್ಕೂ ಕಾರಣವಾಯಿತು. ಒಟ್ಟಾರೆ ಬೆವರಲ್ಲಿ ತೃಪ್ತಿ ಕಂಡಿತು. ಕಾರಣಕ್ಕಿಂತ ಕಾರ್ಯದಲ್ಲಿ ಸಾಗಿತು.

ಮೆಟ್ರೋ ಕಥನ - ೮೦

 ಮೆಟ್ರೋ ಕಥನ - ೮೦


ರಾತ್ರೋರಾತ್ರಿ ವೈರಲ್ ಮೂಲಕ ಪ್ರಚಲಿತವಾದ ಹೆಣ್ಣೊಬ್ಬಳು ನಾಳೆಯೇ ನಟಿಯಾಗುವ ಕನಸು ಕಂಡಳು. ಕರೆದಲ್ಲೆಲ್ಲಾ ಸನ್ಮಾನ, ಗೌರವ ಪಡೆದಳು. ಆಕೆಯ ಅಜ್ಜಿ 'ತಾಳಿದವಳು ಬಾಳಿಯಾಳು' ಅಷ್ಟೆಲ್ಲಾ ಕನಸು ಕಾಣಬೇಡಮ್ಮ ನಿಧಾನವಾಗಿ ಹೆಜ್ಜೆ ಇಡು ಎಂದಿತು. ಅಜ್ಜಿ, ಸಿಗುವಾಗ ಪಡೆಯದವರು ಮೂರ್ಖರು ಎಂದು ಸಮಾಧಾನ ಮಾಡಿದಳು. ಆಕೆಯ ಕನಸು, ವೇಗ ಎಲ್ಲವೂ ವಿಚಿತ್ರವಾಗಿತ್ತು. ಸಿನಿಮಾ, ಧಾರವಾಹಿ, ತೆರೆಯ ಮೇಲಿನ ಎಲ್ಲಾ ಕಾರ್ಯಕ್ರಮಗಳಲ್ಲೂ ಆಕೆಯೆ. ಆದರೆ ದಿನ ಕಳೆದಂತೆ ಅವಕಾಶ ಕಡಿಮೆಯಾದವು. ಜ್ಞಾನವಿಲ್ಲದ ಕಾರಣ, ಕಲಿಕೆಯ ಆಸಕ್ತಿಗಿಂತ ಪ್ರಸಿದ್ದಿಯ ಹುಚ್ಚು ಇರುವ ಕಾರಣ ಅವಕಾಶ ಇಲ್ಲವಾದವು. ಈಗ ಮನೆಯಿಂದ ಆಚೆ ಬರುವುದೇ ಕಷ್ಟವಾಗಿದೆ. ಚಿಕ್ಕಪುಟ್ಟ ಖರ್ಚಿಗೂ ಕಷ್ಟವಿದೆ. ದೇಹಮಾರುವ ಹಂತಕ್ಕೆ ಬಂದಳು. ಆದರೆ ಸಮಾಜವು ಆ ತರಹ ಇರಲಿಲ್ಲ. ಈಗ ಅವಳ ಬದುಕು ಅಜ್ಜಿಯ ಮಾತನ್ನು ಆಲೋಚಿಸುತ್ತಿದೆ. ಅಜ್ಜಿ ಈಗ ಗೋಡೆಯ ಮೇಲೆ ಚಿತ್ರದಲ್ಲಿ ನಗುತ್ತಿದೆ.

- ಅಂಕುರ

ಮೆಟ್ರೋ ಕಥನ - ೭೯

ಮೆಟ್ರೋ ಕಥನ - ೭೯ 

ಫೋಟೋದಲ್ಲಿ ಕಾಣುತ್ತಿದ್ದ ಗಾಂಧಿ ಮತ್ತು ಬೋಸ್ ಪರಸ್ಪರ ಮಾತನಾಡುತ್ತಿದ್ದರು. ನೋಡಿ ಗಾಂಧಿಯವರೇ ಸರಿಯಾಗಿ ಓದದೇ ಇದ್ದರೆ ತಮ್ಮ ಕರ್ತವ್ಯ ಮರೆತು ತಿಲಕ, ಶಾಲು, ಧರ್ಮ, ಜಾತಿ ಅಂತ ಅಧಿಕಾರಿಗಳೇ ಅವಿದ್ಯೆ ಪ್ರದರ್ಶನ ಮಾಡ್ತಾರೆ ಎಂದರು. ಗಾಂಧಿ ಅದಕ್ಕೆ ಉತ್ತರವಾಗಿ ಹೌದದು ಮೂರ್ತಿ, ಜಯಂತಿ, ಮೆರವಣಿಗೆ ಅಂತ ವಿದ್ಯೆ ಕಲಿತವರೆ ನಮ್ಮ ಹೆಸರುಗಳನ್ನು ಬಳಸಿ ಲಾಭಿ ಮಾಡ್ತಾ ಇದ್ದಾರೆ. ನಾವು ಎಂದಾದರೂ ಇಂತಹ ಅನಾಗರಿಕತೆ ಬಯಸಿದ್ದೆವಾ? ಎಂದಾಗ ಬೋಸ್ ಅವರು 'ನಾವು ಇಲ್ಲ ಅಂತ ಅವರಿಗೆ ಈಗಾಗಲೇ ಗೊತ್ತಿದೆ' ಎಂದು ನಕ್ಕರು.

- ಅಂಕುರ

ಮೆಟ್ರೋ ಕಥನ - ೭೮

ಮೆಟ್ರೋ ಕಥನ - ೭೮ 

ಚಂದ್ರನೆಂದರೆ ಶಾಂತಿ, ನೆಮ್ಮದಿ ಎಂದರ್ಥ. ತಂಪು ಕಾಂತಿ ನೀಡುವ ಚಂದ್ರನ ಬೆಳಕಲ್ಲಿ ಅದೆಷ್ಟೋ ಜನಪದ ಕಥೆಗಳು ತಲೆಯಿಂದ ತಲೆ ನುಡಿಯಾಗಿದ್ದವು. ಕಥೆಯೊಂದಿಗೆ ಊಟ, ಕೆಲವೊಮ್ಮೆ ಕೆಲಸಗಳು ಹೀಗೆ ಕೃಷಿ- ಖುಷಿ ಎರಡೂ ಇತ್ತು. ಕಣದ ಬಣವೆ ಹುಲ್ಲಿನ ಗುಡಿಸಲು ಕಟ್ಟಿ ಆಕಾಶ ನೋಡುತ್ತಾ ಮಲಗುವ ಸ್ವರ್ಗವೇ ಹಾಲು ಚೆಲ್ಲುವ ಹಾದಿ. ಈಗ ನಮಗೆ ಚಂದ್ರನ ಸಹಾಯವೆಂದರೆ ಎಲ್ಲರ ಮೊಬೈಲ್ ನಲ್ಲೂ ತೊಂದರೆ ಕೊಡಬೇಡಿ ಎಂಬ ಬಟನ್ ಮೂಲಕ ನೆಮ್ಮದಿಯ ಸಂಕೇತವಾಗಿದೆ.


- ಅಂಕುರ

ಬುಧವಾರ, ಜೂನ್ 7, 2023

ಮೆಟ್ರೋ ಕಥನ - ೭೭

 ಮೆಟ್ರೋ ಕಥನ - ೭೭


ಇಲಿಯನ್ನು ಕೊಲ್ಲಲು ಬೋನು ತಂದರು. ಆಲೋಚಿಸದ ಆತುರದ ಇಲಿಗಳೆಲ್ಲಾ ಸಾಯುತ್ತಿದ್ದವು. ಅಗಲ ಕಿವಿಯ ಹಿರಿ ಇಲಿಯೊಂದು ಈ ಮನುಷ್ಯನ ಬುದ್ದಿ ತಿಳಿದಿತ್ತು. ನಿಧಾನವಾಗಿ ಯೋಚಿಸುತ್ತಾ ಬರುವಾಗ ಯುವ ಇಲಿಯೊಂದು ದೊಪ್ಪನೆ ಬೋನಿನಲ್ಲಿ ಬಿದ್ದಿತು. ಹಿರಿ ಇಲಿ ಬಂದು ಬೋನನ್ನೆಲ್ಲಾ ಪರಿಶೀಲಿಸಿ ನಾಳೆ ತಾನೇ ಬೋನಿಗೆ ಹೋಗಲು ಸಿದ್ದವಾಯಿತು. ಕತ್ತಲಾದ ಕ್ಷಣ ಬೋನನ್ನೆ ಹುಡುಕಿತು. ನಿಧಾನವಾಗಿ ಬೋನಿನೊಳಗೆ ಹೋಗಿ, ಮನುಷ್ಯನ ತಂತ್ರ ತಿಳಿದು, ಪರಿಶೀಲಿಸಿ ಆಚೆ ಬಂದಿತು. ಬರುವ ಇಲಿಗಳಿಗೆಲ್ಲಾ ಸೂಚನೆ ನೀಡಿ, ಮನೆಯನ್ನೇ ಲೂಟಿ ಮಾಡಿಸಿತು. ಈಗ ಇಲಿಗಳು ಬೋನಿಗೆ ಹೆದರುವುದಿಲ್ಲ.


- ಅಂಕುರ

ಮೆಟ್ರೋ ಕಥನ - ೭೬

 ಮೆಟ್ರೋ ಕಥನ - ೭೬

ತಂಪು ಕಾಂತಿ ನೀಡುವ ಚಂದ್ರನ ಬೆಳಕಲ್ಲಿ ಅದೆಷ್ಟೋ ಜನಪದ ಕಥೆಗಳು ತಲೆಯಿಂದ ತಲೆಗೆ ನುಡಿಗಳಾಗಿದ್ದವು. ಕಥೆಯೊಂದಿಗೆ ಊಟ, ಕೆಲವೊಮ್ಮೆ ಕೆಲಸಗಳು ಹೀಗೆ ಕೃಷಿ- ಖುಷಿ ಎರಡೂ ಇತ್ತು. ಕಣದ ಬಣವೆ ಹುಲ್ಲಿನ ಗುಡಿಸಲು ಕಟ್ಟಿ ಆಕಾಶ ನೋಡುತ್ತಾ ಮಲಗುವ ಸ್ವರ್ಗವೇ ಹಾಲು ಚೆಲ್ಲುವ ಹಾದಿ. ಈಗ ನಮಗೆ ಚಂದ್ರನ ಸಹಾಯವೆಂದರೆ ಎಲ್ಲರ ಮೊಬೈಲ್ ನಲ್ಲೂ ತೊಂದರೆ ಕೊಡಬೇಡಿ ಎಂಬ ಬಟನ್ ಮೂಲಕ ನೆಮ್ಮದಿಯ ಸಂಕೇತವಾಗಿದೆ.


- ಅಂಕುರ


ಮೆಟ್ರೋ ಕಥನ - ೭೫

 ಮೆಟ್ರೋ ಕಥನ - ೭೫


ಶಾಲೆಯೊಂದರಲ್ಲಿ ಇಂಗ್ಲಿಷ್ ಭಾಷೆಯನ್ನು ಕ್ಯಾಂಪಸ್ ಲಾಂಗ್ವೇಜ್‌ ಮಾಡಿದ್ದರು. ಆದರೆ ಅದರೊಳಗೆ ನಗು, ಅಳುವೆಲ್ಲಾ ಆಯಾ ಮಾತೃಭಾಷೆಯಲ್ಲಿ ನಡೆದಿತ್ತು. ಮನುಷ್ಯನ ಭಾವನೆಗಳನ್ನು ಬಂಧಿಸಲಾಗದೆಂದು ತಿಳಿದ ಪ್ರಾಂಶುಪಾಲರು, ಆಡಳಿತ ಭಾಷೆ, ಮಾತೃಭಾಷೆ, ನಾಡಿನ ಭಾಷೆ ಎಂಬ ತ್ರಿಭಾಷೆಯ ಸ್ವಾತಂತ್ರ್ಯ ಘೋಷಿಸಿದರು. 


- ಅಂಕುರ

ಸೋಮವಾರ, ಜೂನ್ 5, 2023

ಮೆಟ್ರೋ ಕಥನ - ೭೪

 ಮೆಟ್ರೋ ಕಥನ - ೭೪

ಮೆಟ್ರೋ ಕಥನ - ೭೩

 ಮೆಟ್ರೋ ಕಥನ - ೭೩


ಅವಳು ಸಿಗರೇಟು ಸೇದುತ್ತಿದ್ದಾಳೆ, ಅವಳ ಅಣ್ಣ ಹೊಸ ಬೈಕು ಕೊಂಡನು. ಅಪ್ಪನ ಹಳೆಯ ಬಜಾಜ್ ರಿಪೇರಿ ಬಂದರೂ ಓಡಿಸುತ್ತಿದ್ದಾರೆ. ಅಮ್ಮ ದೂರದರ್ಶನದಲ್ಲೇ ಮುಳುಗಿದ್ದಾರೆ. ಆದರೆ ಮನೆಯ ಎದುರೇ ಇರುವ ಹಳೆಯ ಶಾಲೆಯಲ್ಲಿ ಇಂದು ಪರಿಸರ ದಿನಾಚರಣೆ ಕಾರ್ಯಕ್ರಮ. ಮಕ್ಕಳು ಸಡಗರದಿಂದ ಹೂ ಕಿತ್ತು ಕಟ್ಟಿ ಮುಡಿದ್ದಾರೆ.  ಮೇಷ್ಟ್ರು ಗೂಗಲ್ ನಲ್ಲಿ ಸುಲಭವಾಗಿ ಸಿಕ್ಕ ಸಾಲುಮರದ ತಿಮ್ಮಕ್ಕನ ಚಿತ್ರ ಮುದ್ರಿಸಿ ಆದರ್ಶವಾಗಿ ಇಟ್ಟು, ತಿಮ್ಮಕ್ಕನ ಸಾಹಸಗಳನ್ನು ಹೇಳುತ್ತಿದ್ದಾರೆ. ಲೆಕ್ಕಕ್ಕೆ ಎಲ್ಲೆಲ್ಲೂ ಒಂದೊಂದು ಗಿಡ ನೆಡುವಂತೆ ನೆಡುತ್ತಿದ್ದಾರೆ. ವಾರದ ನಂತರ ಆ ಗಿಡಗಳು ಅನಾಥವಾಗಲು ಸಿದ್ಧವಾಗಿವೆ.

ಇಲ್ಲಿಗೆ ಪರಿಸರ ದಿನಾಚರಣೆ ಮುಗಿಯಿತು.


- ಅಂಕುರ

ಮೆಟ್ರೊ ಕಥನ - ೭೨

 ಮೆಟ್ರೋ ಕಥನ - ೭೨

ರೈಲುಗಳು ಢಿಕ್ಕಿ ಹೊಡೆದು ಸಾವಿರಾರು ಗಾಯಾಳುಗಳು, ನೂರಾರು ಸಾವುಗಳು. ರಕ್ತ ನೀಡಲು ಜನ ಸಾಲುಗಟ್ಟಿ ನಿಂತಿದ್ದಾರೆ. ಇವರ ನಡುವೆ ಮಾಹಿತಿ ಹೆಸರಲ್ಲಿ, ಯ್ಯೂಟ್ಯೂಬ್ ಹೆಸರಲ್ಲಿ ನಿಧಿ ಎತ್ತುವ ಹೆಸರಲ್ಲಿ ದುಡ್ಡು ಮಾಡುವ ಪಾಪಿಗಳ ಕಂಡು ಬೂದಿಯಾದ ಹೆಣವೊಂದು ನಗುತ್ತಿದೆ.


- ಅಂಕುರ


ಶನಿವಾರ, ಜೂನ್ 3, 2023

ಮೆಟ್ರೋ ಕಥನ - ೭೧

 ಮೆಟ್ರೋ ಕಥನ - ೭೧


ಅಂದನು ಮುಂಗಾರಿನ ಹೆಸರಲ್ಲಿ ಮಳೆ ಬಿದ್ದ ನೆಲದಲ್ಲಿ, ಖುಷಿಯಿಂದ ಬೀಜಗಳನ್ನು ಬಿತ್ತಿದನು. ದಿನವಿಡೀ ಶ್ರಮವನ್ನು, ಬೀಜಗಳ ಹಸಿವನ್ನು, ರಾತ್ರಿಯ ಮಳೆಯು ತೇಲಿಸಿತ್ತು. ಕಳೆದೆಂಟು ದಿನದಲ್ಲಿ ಹುಟ್ಟಿದ್ದು ಬರಿಕಸವು, ಅಂದನಿಗೆ ಇದು ಹೊಸತೇನೂ ಅಲ್ಲ. ಮತ್ತೆ ಹೊಲವನ್ನು ಹದ ಮಾಡಿ ಬಿತ್ತಿದನು. ಹಠದಂತೆ ಬಂದ ಮಳೆಯು ಮತ್ತೆ ನಾಶದ ಯುದ್ಧ ಮಾಡಿತು. ರೈತನಾದ ಅಂದನಿಗೆ ತಾಳ್ಮೆ ಇದೆ, ಬೇಸರಿಸದೆ ಹಿಂಗಾರು ಮಳೆಗಾಗಿ ಈಗ ಹೊಲವನ್ನು ಹದ ಮಾಡುತ್ತಿದ್ದಾನೆ.

- ಅಂಕುರ

ಮೆಟ್ರೋ ಕಥನ - ೭೦

 ಮೆಟ್ರೋ ಕಥನ - ೭೦


ನೀಲಗಿರಿ ಮರವೊಂದು ತಾನೆಷ್ಟು ಎತ್ತರಕ್ಕೆ ಹೋಗುವುದೋ, ಬೇರುಗಳನ್ನು ಅಷ್ಟೇ ಆಳವಾಗಿ ನೆಲಕ್ಕಿಳಿಸುವ ಪರಿಯಲ್ಲಿ ವಿಜ್ಞಾನದ ಸಿದ್ಧಾಂತವಿದೆ. ಸಂಶೋಧಕನ ಈ ಪತ್ತೇಪರಿಗೆ ರೈತನೊಬ್ಬ ಈ ನೀಲಗಿರಿ ಇದ್ರೆ ಭೂಮಿಯೆಲ್ಲಾ ಬರಡಾಗುತ್ತೆ, ಆದ್ರೆ ಜೌಗು ನೆಲ ಇದ್ರೆ ನೀರು ನಿಲ್ಲಲ್ಲ  ಸ್ವಾಮಿ, ಸೊಳ್ಳೆ ಜೊತೆಗೆ ಸಾಕಷ್ಟು ಈ ಬೆಳೆ ಕೀಟ ಬರಲ್ಲ ಸ್ವಾಮಿ ಒಂತರಾ ಒಳ್ಳೆದೇ ಈ ಮರ ಎಂದನು. ವಿಜ್ಞಾನಿಗೆ ಕುತೂಹಲ ಹೆಚ್ಚಾಗಿ ಅಧ್ಯಯನಗಳನ್ನ ಹುಡುಕಿದಾಗ ಇದೇ ಉತ್ತರವಿತ್ತು.


- ಅಂಕುರ

ಶುಕ್ರವಾರ, ಜೂನ್ 2, 2023

ಮೆಟ್ರೋ ಕಥನ - ೬೯

 ಮೆಟ್ರೋ ಕಥನ - ೬೯


ಅವನು ಮಾತಿನ ಮೋಡಿಗಾರ. ಮೌನವನ್ನೂ ನಾಜೂಕಿನಿಂದ ಮಾತನಾಡಿಸಬಲ್ಲ. ಸುಳ್ಳನ್ನು ಸತ್ಯದಂತೆ ನಂಬಿಸಬಲ್ಲ. ಎಲ್ಲರಿಗೂ ಅವನ ಬರುವಿಕೆಯೇ ಕಾತುರ. ಇರುವಿಕೆಯಂತೂ ಹರ್ಷದಬ್ಬ. ಏಕೆಂದರೆ ಅವನು ರೇಡಿಯೋ ನಿರೂಪಕ.


- ಅಂಕುರ


ಮೆಟ್ರೋ ಕಥನ - ೬೮

 ಮೆಟ್ರೋ ಕಥನ - ೬೮


ಮೇಷ್ಟ್ರು ಹೇಳಿದರು,

ದಿನ ಎರಡು ನಿಮಿಷ ನಿಮ್ಮ ಬೆಸ್ಟ್ ಪ್ರೆಂಡ್ ಗೆ ಸಮಯಕೊಡಿ. ನಿಮ್ಮನ್ನು ಬೌದ್ಧಿಕವಾಗಿ ಗೆಲ್ಲಿಸುತ್ತಾನೆ ಎಂದರು.

ಸರ್ ಸಾಕಷ್ಟು ಸಮಯ ಕೊಡ್ತಿವಿ ಸರ್, ಫ್ರೆಂಡ್ಸ್ ಜೊತೆಯಲ್ಲೇ ವಾಸ ಸರ್, ಜೊತೆಯಲ್ಲಿಯೇ ತಿಂಡಿ-ಊಟ ಸರ್ ಒಬ್ಬೊಬ್ಬರು ಒಂದೊಂದು ಹೇಳಿದರು. 

ಬೆಸ್ಟ್ ಫ್ರೆಂಡ್ ಎಂದರೆ ಸುದ್ದಿ ಪತ್ರಿಕೆಗಳು ನೀವು ಇವರಿಗಾಗಿ ಅಷ್ಟು ಸಮಯ ಕೊಡ್ತಿರಾ ಎಂದು ಮೇಷ್ಟ್ರು ಆಶ್ಚರ್ಯವಾದಾಗ, ವಿದ್ಯಾರ್ಥಿಗಳು ನಾಚಿ ನೀರಾದರು.

ಪರಿಣಾಮವೆಂಬಂತೆ ಪತ್ರಿಕೆಗಳ ಓದು ಹೆಚ್ಚಾಯಿತು. ಅದೇ ವಿದ್ಯಾರ್ಥಿಗಳು ಸಾಧಿಸಿ, ಅದೇ ಪತ್ರಿಕೆಯಲ್ಲಿ ವಿದ್ಯಾರ್ಥಿಗಳು ಬೆಸ್ಟ್ ಫ್ರೆಂಡ್ ಕಥೆ ಹೇಳಿದ್ದರು.


- ಅಂಕುರ

ಮೆಟ್ರೋ ಕಥನ - ೬೭

 ಮೆಟ್ರೋ ಕಥನ - ೬೭


ಹೆಣ್ಣು ಹುಡುಗಿಯು ಕುರಿಯನ್ನು ಕತ್ತರಿಸಿದ ಬಗೆಗೆ ಎಲ್ಲರೂ ವಾವ್! ಎಂದರು. ಪವರ್ ಅಂದ್ರೆ ಇದು ಎಂದರು. ಆದರೆ, ಯಾವ ಬಲಿಯನ್ನೂ ಕೊಡದೆ, ಮನೆಯನ್ನು ಸ್ವಚ್ಛ ಮಾಡಿ, ಮನಸ್ಸುಗಳನ್ನು ಶುದ್ಧಮಾಡಿ, ಬೆಂದು-ಬೇಯಿಸಿ ಎದೆಗೆ ಅಕ್ಷರವಿತ್ತ ಹೆಣ್ಣನ್ನು ಕಂಡು ಯಾರೂ ವಾವ್ ಎನ್ನಲಿಲ್ಲ. ಅದು ಬಳೆ ತೊಟ್ಟುಕೊಂಡ ಹೇಡಿ ಎಂದೆ ಪ್ರಚಾರವಾಯಿತು. 

ಸಾಹಿತಿಗಳು ಬರೆದದ್ದು ಅಕ್ಷರದಲ್ಲೆ ಉಳಿಯಿತು. ಏಕೆಂದರೆ ಸ್ಥಿತ್ಯಂತರ ಹೊಂದದಿರುವವರು ಎಂದಿಗೂ ಓದುವುದೇ ಇಲ್ಲ.


- ಅಂಕುರ

ಮೆಟ್ರೋ ಕಥನ - ೬೬

 ಮೆಟ್ರೋ ಕಥನ - ೬೬


ಯುವಕನ ಸಾವಿಗೆ ಎಲ್ಲರೂ ಮಮ್ಮಲ ಮರುಗಿದರು. ಓಂ ಶಾಂತಿ, ಮತ್ತೆ ಹುಟ್ಟಿ ಬಾ, ಇದು ತುಂಬಲಾರದ ನಷ್ಟ ಹೀಗೆ ಹಲವಾರು ನೊಂದ ನುಡಿಗಳ ಸಿಕ್ಕಲ್ಲೆಲ್ಲಾ ಬರೆದರು. ಹುಡುಗನ ತಾಯಿ ಆಸ್ಪತ್ರೆಯಲ್ಲಿ ಬಿಲ್ಲು ಕಟ್ಟಲಾಗದೆ, ತಾಳಿ ಮಾರಿ ಹೆಣ ತಂದಳು. ಸಂಸ್ಕಾರಕ್ಕೆ ಹಣ ಇಲ್ಲದೆ, ಸಿಕ್ಕಸಿಕ್ಕವರಲ್ಲಿ ಅಂಗಲಾಚಿ ಮಣ್ಣು ಮಾಡಿದಳು. ಆದರೆ ಮಾಧ್ಯಮ ಇನ್ನೂ ಮಾತಾಡುತ್ತಲೆ ಇತ್ತು. ಇದ್ದಾಗ ಮಾತಾಡಿಸದ, ಕಷ್ಟ ಎಂದಾಗ ಕೈ ಹಿಡಿಯದ ಜನರೆಲ್ಲಾ ಎಲ್ಲದನ್ನೂ ಸೂತಕದಂತೆ ಕಳುಚುತ್ತಾರೆ. ಮಾತು ಕೃತಿಯಾಗಲಿಲ್ಲ.


- ಅಂಕುರ

ಮೆಟ್ರೋ ಕಥನ - ೬೫

 ಮೆಟ್ರೋ ಕಥನ - ೬೫


ಮೇಷ್ಟ್ರು ಹೇಳಿದರು,

ನೀವು ನಿತ್ಯವೂ ಬಿಟ್ಟುಕೊಡುವುದರಲ್ಲಿ ಖುಷಿ ಕಾಣುತ್ತಿರಿ. ಪಡೆದುಕೊಳ್ಳುವ ಖುಷಿ ಕಾಣಬೇಕು ಎಂದರು.

ಈ ಬಿಟ್ಟುಕೊಡುವುದು ಎಂದರೇನು ಸರ್ ಎಂದನು ವಿದ್ಯಾರ್ಥಿ.

ನನ್ನ ಆಸಕ್ತಿ, ಕ್ಷೇತ್ರ, ವಿಷಯ ಎಂದು ಬೇಲಿ ಹಾಕಿಕೊಂಡು ಕಲಿಕೆಯನ್ನು ಮಿತಗೊಳಿಸಿಕೊಳ್ಳುತ್ತಿದ್ದೇವೆ. ನಮಗೆ ಮನುಷ್ಯ ಕಲಿಯುವ ಎಲ್ಲದನ್ನೂ ಕಲಿಯುವ ಶಕ್ತಿ ಇದೆ. ಸಾಯುವವರೆಗೂ ಕೇವಲ ೨೦% ಅಷ್ಟೇ ನಮ್ಮ ಮಿದುಳಿನ ಬಳಕೆಯಾಗುವುದು ಎಂದರು ಮೇಷ್ಟ್ರು.

ವಿದ್ಯಾರ್ಥಿಗಳಿಗೆ ತಮ್ಮ ಶಕ್ತಿಯ ಕುರಿತು ಆಶ್ಚರ್ಯವಾಯಿತು.


- ಅಂಕುರ

ಮೆಟ್ರೋ ಕಥನ - ೬೪

 ಮೆಟ್ರೋ ಕಥನ - ೬೪

ಗಂಡ ಹೆಂಡತಿಗೆ ಜಗಳವಾಗಿ ತನ್ನ ಊರಿನ ಅಜ್ಜಿಯ ಬಳಿ ಹೋದರು‌. ಇಬ್ಬರೂ ಸಾಕಷ್ಟು ದೂರು ಹೇಳಿಕೊಂಡರು. ಅಜ್ಜಿ ಕೇಳುವ ತನಕ ಕೇಳಿ, ಕೊನೆಗೆ ಒಂದೇ ಒಂದು ಮಾತು ಹೇಳಿತು. 'ಗಂಡಿಗೆ ಚಟ, ಹೆಣ್ಣಿಗೆ ಹಠ' ಇಲ್ಲದೆ ಇದ್ರೆ, ನೀವೆ ಬಂಗಾರ ಆಗ್ತಿರಿ. ಅರ್ಥಮಾಡಿಕೊಂಡು ಬದುಕಿ ಅಂತು. ಇಬ್ಬರೂ ಮೌನವಾಗಿ ಮನೆಗೆ ಬಂದರು. ಎನೋ ಅರ್ಥವಾದಂತಾಗಿ ಮೆಲ್ಲಗೆ ನಕ್ಕರು.


- ಅಂಕುರ

ಮೆಟ್ರೋ ಕಥನ - ೬೩

 ಮೆಟ್ರೋ ಕಥನ - ೬೩

ಒಂದು ಊರಿನ ಜನರು ಸಿಗುವ ಆಸೆಗಾಗಿ ಕಳೆದುಕೊಂಡ, ಕೊಳ್ಳುವ ಎಲ್ಲವನ್ನೂ ಮರೆತರು. ೧ರೂ ಪಡೆದುಕೊಂಡು ೧೦೦ಕ್ಕಿಂತಲೂ ಹೆಚ್ಚು ದಂಡ ತೆರುವ ಲೆಕ್ಕಾಚಾರ ಕುರಿತು ಯಾವ ಅರಳಿಕಟ್ಟೆಯಲ್ಲೂ ಚರ್ಚೆಯಾಗಲಿಲ್ಲ. ಏಕೆಂದರೆ ಅವರ ರಾಜನು ಅವರಿಗೆಲ್ಲಾ ದೇವರು. ದೇವರ ಕುರಿತು ಕನಸಿನಲ್ಲೂ ಪ್ರಶ್ನಿಸಬಾರದೆಂಬ ನಂಬಿಕೆಯ ಮೂರ್ಖರಾಗಿದ್ದರು.


- ಅಂಕುರ

ಮೆಟ್ರೋ ಕಥನ - ೬೨

 ಮೆಟ್ರೋ ಕಥನ - ೬೨


ಮೊಲವೊಂದು ಮಕ್ಕಳನ್ನು ಮಣ್ಣಿನ ಗೂಡಿನಲ್ಲಿ ಮಡಗಿತ್ತು. ಆಹಾರ ಹುಡುಕಿ, ಹೊಟ್ಟೆ ತುಂಬಿಸಿಕೊಂಡು ಬಂದು ಮಣ್ಣು ತೆಗೆದು ಗೂಡಿನಿಂದ ಬರುವ ಮಕ್ಕಳಿಗೆ ಹಾಲುಣಿಸುತ್ತಿತ್ತು. ಎಂದಿನಂತೆ ಆಹಾರಕ್ಕೆ ಹೋದ ಮೊಲವು ತಿಂದದ್ದು ಚಿಗುರೆಲೆ, ಗರಿಕೆ ಅಷ್ಟೇ. ಆದರೆ ಆಚೆ ಬರುವಾಗ ಉರುಳಿಗೆ ಸಿಕ್ಕಿ ನರಳಾಡಿ ಸತ್ತಿತು.  ಉರುಳು ಬಿಟ್ಟ ನಾಗರಾಜನ ಮನೆಯಲ್ಲಿ ಮೊಲದ ಮಾಂಸ ಕುದಿಯುತ್ತಿದೆ. ತಾಯಿ ಬರುವ ಆಸೆಯಿಂದ ಮಕ್ಕಳು ಕಾಯುತ್ತಿವೆ.

ಕಾಡಿನಲ್ಲಿ ಅದೆಷ್ಟೋ ತಾಯಿಗಳು ಅನ್ನಕ್ಕಾಗಿ ಹೋಗಿ, ಮತ್ತೊಂದು ಪ್ರಾಣಿಗೆ ಅನ್ನವಾಗುತ್ತವೆ.


ಉರುಳು - ಉಳ್ಳು ಎಂದು ಕರೆಯುವರು. ತೆಳುವಾದ ತಂತಿಯಲ್ಲಿ ನೇಣಿನಂತೆ ಚಿಕ್ಕ ಚಿಕ್ಕ ವೃತ್ತಾಕಾರಗಳ ಜೋಡಣೆಯ ಬಲೆ


- ಅಂಕುರ

ಮೆಟ್ರೋ ಕಥನ - ೬೧

 ಮೆಟ್ರೋ ಕಥನ - ೬೧

ಖಾಸಗಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಕನಿಗೆ ಹೆಣ್ಣು ಕೊಡಲಿಲ್ಲ. ಸರ್ಕಾರಿ ಉದ್ಯೋಗಿಯನ್ನೇ ಹುಡುಕಿ ಮದುವೆಯಾದ ದಂಪತಿಗಳು, ತಮ್ಮ ಮಗುವನ್ನು ಶಾಲೆಗೆ ಸೇರಿಸಲು ಖಾಸಗಿ ಶಾಲೆಯನ್ನೇ ಹುಡುಕಿ ಬಂದರು.  


- ಅಂಕುರ

ಮೆಟ್ರೋ ಕಥನ - ೬೦

 ಮೆಟ್ರೋ ಕಥನ - ೬೦

ಇವಳು ಯಾವಾಗಲೂ ಹುಡುಕುತ್ತಲೇ ಇದ್ದಾಳೆ. ಅವಳ ಕಣ್ಣೀರು ಹೇಳಿಕೊಳ್ಳಲು ಒಂದು ನಂಬಿಕೆಯ ಜೀವ ಬೇಕಿದೆ. ಮುಖವಾಡಗಳೇ ಸ್ವಾರ್ಥದ ವೇಗದಲ್ಲಿ ಸಾಗುವಾಗ ಅವಳು ನಿತ್ಯ ಮೌನಿಯಾಗಿದ್ದಾಳೆ. ಎಲ್ಲರೊಂದಿಗೂ ಹರಟುವ, ತಿನ್ನುವ, ಸಾಗುವ ಇವಳಿಗೆ ಒಂದು ಸಾಂಗತ್ಯದ ಅಗತ್ಯವಿದೆ. ತಂದೆಯಲ್ಲಿ ಹುಡುಕಿದರೆ ವ್ಯವಹಾರದಲ್ಲೇ ಕಳೆದುಹೋಗಿದ್ದಾರೆ. ತಾಯಿಯೋ ತನ್ನದೇ ಲೋಕಕ್ಕಾಗಿ ಹಪಾಹಪಿಸುತ್ತಿದ್ದಾರೆ‌. ಸ್ನೇಹಿತರೋ ಒಬ್ಬೊಬ್ಬರು ಒಂದೊಂದು ರೀತಿ. ಲಾಭವೋ, ಸ್ವಾರ್ಥವೋ, ಕಾಮವೋ ಎನೋ ಉಪಯೋಗಿ ಮನಸ್ಸುಗಳ ಕಂಡು ಬೇಸತ್ತಿದ್ದಾಳೆ.

ಇವಳಿಗೆ ಇವಳದೇ ಮನಸ್ಸಿನ ಮತ್ತೊಂದು ಆಲೋಚನೆಯ ಮನಸ್ಸು ಬೇಕಿದೆ. ಇವಳು ಎಲ್ಲಾ ಕಡೆಯೂ ಇದ್ದಾಳೆ. ಎಲ್ಲರೊಳಗೂ ಇದ್ದಾಳೆ.


- ಅಂಕುರ

ಮೆಟ್ರೋ ಕಥನ - ೫೯

 ಮೆಟ್ರೋ ಕಥನ - ೫೯

ಕ್ಷೌರ ಮಾಡುತ್ತಿದ್ದ ಹುಡುಗ ಬಹಳ ಮಾತುಗಾರ. ಏನೇನೋ ಕೇಳಿದ. ನಾನು ಸ್ವಲ್ಪ ಮಾತು ಇಷ್ಟ ಪಡುವ ಕಾರಣ ಕೇಳಿದ್ದಕ್ಕೆಲ್ಲಾ ಹೇಳುತ್ತಿದ್ದೆ. ಎಲ್ಲಿ ತನಕ ಓದು ನಿಲ್ಲಿಸಿದೆ ಎಂದೆ. ಅದಕ್ಕೆ ಓದಲಿಲ್ಲ ಸಾರ್, ಎಂಟನೆ ತರಗತಿಗೆ ಹೋಗಲೇ ಇಲ್ಲ ಎಂದನು. ಹಾಗೇ ಮುಂದುವರೆಸುತ್ತಾ... ಸಾರ್ ಇದೆಲ್ಲಾ ಸುಮ್ಮನೆ ಕೆಲಸ ಮಾಡೋದು.. ನಾನೇನಿದ್ರು ಡೀಲಿಂಗ್ ಜಾಸ್ತಿ ಸಾರ್. ಆಗಂತ ದುಡ್ಡಿಗಾಗಿ ಮಾಡಲ್ಲ. ನನಗೆ ದೋಸ್ತಿಗಳು ಜಾಸ್ತಿ. ನಾವು ಯಾರು ತಂಟೆಗೂ ಹೋಗಲ್ಲ, ನಮ್ ತಂಟೆಗೆ ಬಂದ್ರೆ ಸುಮ್ಮನೆ ಬಿಡಲ್ಲ ಅಷ್ಟೇ. ಸಾರ್ ಒಂದು ವಿಚಾರ ಗೊತ್ತಾ! ನಮ್ಮದೆ ತಪ್ಪು ಜಾಸ್ತಿ ಇದ್ರೆ ಸೀದಾ ಸ್ಟೇಷನ್ ಗೆ ಹೋಗಿ ತಪ್ಪು ಒಪ್ಕೊತಿವಿ. ತಪ್ಪಿಲ್ಲ ಅಂದ್ರೆ ಯಾರೇ ಬಂದ್ರು ಫೈಟ್ ಮಾಡ್ತಿವಿ. ನಮಗೆ ಒಬ್ಬ ಅಣ್ಣ ಇದಾನೆ ಸಾರ್. ಯಾವಾಗಲೂ ಆತನೆ ನಮಗೆಲ್ಲ ದಾರಿ. ಸುಮ್ಮನೆ ಇರಬಾರದಲ ಅದಕೆ ಈ ಕೆಲಸ ಮಾಡ್ತಿನಿ ಎಂದ.

ಮಾತಾಡುತ್ತಲೇ ಬ್ಲೇಡು ಒತ್ತಿ, ಅಮ್ಮಾ! ಎಂದೆ. ಅಯ್ಯೋ, ನೋವಾಯ್ತ ಸಾರ್ ಎಂದನು. ಹಾಗೇನಿಲ್ಲ, ನೀವು ಕೊಲೆ ಮಾಡುವಾಗ ಪಾಪ! ಅದೆಷ್ಟು ನೋವಾಗಬಹುದು ಅಂತ ಭಯ ಆಯ್ತು ಅಂದೆ.

ಹೌದಲ್ವ ಸಾರ್ ಆದರೆ ಆ ತರ ಯೋಚನೆ ಬರಲಿಲ್ಲ ಎಂದನು.

ಅಂತೂ ಕ್ಷೌರ ಮುಗಿದು ಬರುವಾಗ, ಯೋಚನೆ ಮಾಡಪ್ಪ! ನೋವು ಚಿಕ್ಕದಾದ್ರೆನು, ದೊಡ್ಡದಾದ್ರೆನು..

ಬರ್ತಿನಿ ಎಂದು ಹೊರಟೆ.


- ಅಂಕುರ