ಈ ಬ್ಲಾಗ್ ಅನ್ನು ಹುಡುಕಿ

ಭಾನುವಾರ, ಆಗಸ್ಟ್ 13, 2017

ಓ ಪಾರಿಜಾತ

ಓ ಪಾರಿಜಾತ...



ಸೂರ್ಯನಿಲ್ಲದ ವೇಳೆ
ಕೃಷ್ಣ ತಂದನು ಹೂ
ಪಾರಿಜಾತ ಇವಳು ಭಗ್ನಪ್ರೇಮಿ!
ಸತ್ಯಭಾಮೆಯ ಮನೆಯ
ಅಂಗಳವು ಇನ್ನು ವಿರಹ ಕಾಂತಿಯ
ಕಥೆಗೆ ಕೃಷ್ಣಲೀಲೆ!


ಕೇಸರಿಯ ಕಾಂಡದಲಿ
ಬಿಳಿಯ ಚಂದನಲೀಲೆ
ಪರಿಮಳಕೆ ಪ್ರೇಮವು
ರಾತ್ರಿ ರೂಪ
ಬುದ್ಧನ ಸ್ತೂಪದಲೂ
ನಿನ್ನ ಹಾಸಿದ ಅರಿವೆ
ಶಾಂತಿಯಲಿ ಬಂದ ಪ್ರೇಮ ಬಾಲೆ!
ಕ್ಷೀರಸಾಗರದಲ್ಲಿ
ಮಥನದ ಯುದ್ಧಗಳು

ದೇವತೆಗೂ ರಾಕ್ಷಸರ ಪಾಠವಾಯ್ತು.


ಸುರಭಿ, ವಾರಿಣಿಯ ಗೆಳತಿ
ಸುಂದರ ಮಧುಕನ್ಯೆ
ಬಂದಳು ಪ್ರೇಮದಲಿ ಪಾರಿಜಾತ
ಇಂದ್ರನ ಮೋಹದಲಿ
ವಿಷ್ಣುವಿನ ದಾಹದಲಿ
ಪ್ರೇಮ ಮಂದಿರ ವೃಕ್ಷ
ನಿನ್ನ ಜನ್ಮ ಲೀಲೆ!


ಭರತ ಭೂಮಿಯ ಮಗಳೆ
ಕೋಮಲಾಂಗಿಯ ಕನ್ಯೆ
ಪಂಪನ ಕಾವ್ಯಕೂ ಕೈಪಿಡಿಯ
ವರ್ಣನೆ ಓ ಕಬ್ಬಿಗನ ಮಗಳೇ
ಪ್ರಕೃತಿಗೆ ನಿನ್ನ ಸುಗಂಧ ಲೀಲೆ!

ಮಾತೆಂಬ ಮೈಲಿಗೆ...


 

          ಭಾರತ ಸಂವಿಧಾನವು ಪ್ರಾರಂಭವಾಗುವುದೇ ‘ನಾವು ಭಾರತೀಯ ಜನರು’ ಎಂಬ ತತ್ತ್ವದ ಅಡಿಪಾಯದಲ್ಲಿ ಆದ್ದರಿಂದ ಇಲ್ಲಿ ಪ್ರತಿಯೊಬ್ಬರಿಗೂ ಮನುಷ್ಯ ಗುಣವಿದೆ. ಅದನ್ನು ಕಾಪಾಡುವುದು ಪ್ರತಿಯೊಬ್ಬರ ಜವಬ್ದಾರಿ.
          ಅಕ್ಷರಗಳಿಗಿರುವ ಮೌಲ್ಯ, ಮಾತಿಗೆ ದೊರಕದೇ ಇರುವುದು ಇಂದು ವಿಪರ್ಯಾಸ. ಯೇಸು ಶಿಲುಬೆಯಲ್ಲಿ ಹೇಳಿದ ಕೊನೆಯ ದನಿ ‘ಅಪರಾಧಿಗಳನ್ನು ಕ್ಷಮಿಸು’ ಎಂಬ ಮಹತ್ವದ ಮಾತು ಇಲ್ಲಿ ಅನಿವಾರ್ಯ.

           ಸಮಾಜದ ಜನತೆಗೆ ತಮ್ಮ ಇರುವಂತಿಕೆಯನ್ನು ಗುರ್ತಿಸಿಕೊಳ್ಳುವ ಜವಬ್ದಾರಿ ಅಗತ್ಯವಿದೆ. ನಾವು ಕೂಡ ಈ ಸಮಾಜದ ಒಂದು ಭಾಗ. ಅದರೊಳಗೆ ನಮ್ಮ ಪಾತ್ರವೇನು ಎಂಬ ಅಂಶವನ್ನು ಸ್ವಯಂ ಕಲಿಕೆಯ ಪ್ರಾಮಾಣಿಕತೆ ಅಗತ್ಯವಿದೆ. ಮನುಷ್ಯನು ಮನುಷ್ಯನನ್ನೇ ದೈಹಿಕವಾಗಿ ಹಾಗೂ ಮಾನಸಿಕವಾಗಿ ಹಿಂಸೆಯ ಪ್ರವೇಶ ಪಡೆಯುವುದಾದರೆ ಭಾರತೀಯ ಸಂಸ್ಕøತಿಯ ಅರ್ಥವೇನು? ಮನುಷ್ಯ ಸದಾ ಇರುವಂತಿಕೆಯನ್ನು ಗುರ್ತಿಸಿಕೊಳ್ಳುವಾಗ ತಾನು ಯಾವ ಹಾದಿ ಹಿಡಿದಿರುವೆ ಎಂಬ ಚಿಂತನೆ ಅಗತ್ಯವಿದೆ. ಸಮಾಜವನ್ನು ರೂಪಿಸುವ ಅದರಲ್ಲೂ ಶಿಕ್ಷಣದ ನೈತಿಕ ಜವಬ್ದಾರಿಯನ್ನು ಪೂರೈಸಿದ ಕೆಲವು ಮುಖಗಳು ಸಮಾಜದ ಜ್ಞಾನವನ್ನು ಮುಸುಕಿನಲ್ಲಿ ದರ್ಶನಮಾಡಿಸುವ ಹೊಣೆ ಹೊತ್ತಿರುವುದು ವಿಪರ್ಯಾಸ!
          ಈ ಲೇಖನದಲ್ಲಿ ಎರಡು ಅಂಶಗಳನ್ನು ಚರ್ಚಿಸುವ ಪ್ರವೇಶಿಕೆಯನ್ನು ಕಾಣುತ್ತಿದ್ದೇನೆ ನೀವು ಇದನ್ನು ವಿಸ್ತರಿಸಬಹುದು.


ನಿರೂಪಕರಿಗೆ ನಿರ್ಣಯಿಸುವ ಸ್ವಾತಂತ್ರ್ಯ ನೀಡಿದವರಾರು?
ಮಾಧ್ಯಮಗಳಲ್ಲಿ ಇಂದು ನಿರೂಪಕರ ಸಂಖ್ಯೆ ಗಂಟೆ ಲೆಕ್ಕದ ಕೂಲಿಯಾಗಿದೆ. ಆದರೆ ತಮ್ಮ ಕರ್ತವ್ಯದ ದಿಕ್ಕನ್ನೇ ಮರೆತ ಇವರು ಪ್ರತಿನಿತ್ಯ ಜರುಗುವ ಘಟನೆಗಳಲ್ಲಿ ರೆಕ್ಕೆ ಪುಕ್ಕಗಳು ದೊರೆತ ಅರೆಬರೆ ವಿಷಯಗಳನ್ನು ವಿಸ್ಮಯದಂತೆ ಹಾರಿಸುವ ನೈತಿಕ ಜವಬ್ದಾರಿಯಲ್ಲಿ ಇವರಿಗೆ ದಕ್ಕಿರುವ ಜ್ಞಾನವಾದರೂ ಎಷ್ಟು! ಒಂದು ಘಟನೆಗೆ ಸಾಕ್ಷಿಯೇ ಇನ್ನೂ ತನಿಕೆಯ ಕಾರ್ಯದಲ್ಲಿ ತೊಡಗಿರುವಾಗಲೇ ನಿರ್ಣಯಿಸುವುದು ಎಷ್ಟು ಸಮಂಜಸ. ಸಮೂಹ ಮಾಧ್ಯಮವೆಂಬುದು ನಾಲ್ಕನೆಯ ಅಂಗವೆಂದು ಕರೆದುಕೊಂಡು ಸ್ವಯಂ ಘೋಷಿತರು ಸಂವಿಧಾನ ಪಾಲನೆಯೊಂದಿಗೆ ಜನರ ರಕ್ಷಣೆಯ ಹೊಣೆಯೇನು? ಸಂವಿಧಾನದಲ್ಲಿ ವಾಕ್ ಸ್ವಾತಂತ್ರ್ಯವನ್ನು ಎಷ್ಟು ಜನರು ಅಧ್ಯಯನ ಮಾಡಿ ಬಳಸುತ್ತಿದ್ದಾರೆ. ಆಸ್ಪತ್ರೆಗೆ ಬಂದವರೆಲ್ಲಾ ರೋಗಿಯೇ! ಮಾಧ್ಯಮದವರಿಗೆ ಮಾಹಿತಿಯನ್ನು ಪೂರ್ಣ ಪರಿಶೀಲನೆಯೊಂದಿಗೆ ಪಡೆದು ಜನರಿಗೆ ನ್ಯಾಯಬದ್ಧವಾಗಿ ತಲುಪಿಸುವ ಜವಬ್ದಾರಿಯೇ ಹೊರೆತು ಬ್ರೇಕಿಂಗ್ ನ್ಯೂಸ್‍ಗಳ ಮೂಲಕ ಬಣ್ಣ ಹಚ್ಚುವ ಟಿ ಆರ್ ಪಿ ಸಂಸ್ಕøತಿಯಲ್ಲ. ಇದು ಆಡಳಿತ ವಲಯಕ್ಕೆ ತಿಳಿಯದೇ ಕೀಲಿ ಗೊಂಬೆಯಾಗಿರುವ ಅಧಿಕಾರಿಗಳ ವರ್ಗವನ್ನು ಕಂಡು ನಾಚುವ ಕಾಲ ಕಣ್ಣೆದುರಿದೆ. ಅಧಿಕಾರದಲ್ಲಿರುವ ಉತ್ತಮ ಆಡಳಿತಗಾರನನ್ನು ವ್ಯಂಗ್ಯವಾಗಿ ಬಿಂಬಿಸುವ ಮಾಧ್ಯಮಗಳು ಜನರ ತಿಳುವಳಿಕೆಗೆ ಯಾವ ಅಂಶವನ್ನು ನೀಡುತ್ತಿದ್ದೇವೆ ಎಂಬ ಅರಿವನ್ನು ಯೋಚಿಸುವುದಿಲ್ಲವೇಕೆ! ಅನಗತ್ಯವನ್ನು ಬಿಂಬಿಸುವಷ್ಟು ಅಗತ್ಯವನ್ನು ತಲುಪಿಸುತ್ತಿಲ್ಲವೇಕೆ? 


ಯುವಕರಿಗೆ ದೊರೆತ ಮಾತಿನ ಮೈಲಿಗೆ..
ಯುವಕರೆಂದರೆ ಬೆಂಕಿಯ ರೂಪಗಳು, ಸಮಾಜದ ಹೊಸರೂಪಗಳು ಎಂಬ ಆಶಾಭಾವನೆಯನ್ನು ನಮ್ಮ ಹಿರಿಯ ವರ್ಗ ನೀಡಿತಾದರೂ ನಾವು ಏಕೆ ಅಳಿಸಲೆತ್ನಿಸುವ ಅಜ್ಞಾನವನ್ನು ತೋರುತ್ತಿದ್ದೇವೆ. ಮಾಧ್ಯಮವು ಸುಲಭವಾಗಿ ಕೈಗೆ ದೊರಕಿತೆಂಬ ಅಹಂ ಇಂದು ಯುವಕರಿಗೆ ಪೂರ್ಣ ಸ್ವಾತಂತ್ರ್ಯದ ಹಕ್ಕು ದೊರೆತಂತಾಗಿ ಮನುಷ್ಯ ಪದಕ್ಕೆ ಬೆಲೆಯೇ ಇಲ್ಲದಂತೆ ವರ್ತನೆಗಳು ಪ್ರಾರಂಭವಾಗಿವೆ. ಮೌಲ್ಯವೇ ಇಲ್ಲದಂತೆ ಮಾತನಾಡುವ, ವರ್ತಿಸುವ ಎಲ್ಲಾ ಬೆಳವಣಿಗೆಗಳು ಮಾತು, ಸಂದೇಶ, ನಡವಳಿಕೆಯಲ್ಲಿ ಕಂಡುಬರುತ್ತಿವೆ. ಕುಟುಂಬ, ಶಿಕ್ಷಣ, ಸಮಾಜವೆಂಬುದು ತನಗಿಷ್ಟದ ನೆಪವಾಗುತ್ತಿರುವ ವೇಳೆಯಲ್ಲಿ ಇವರಿಗೆ ಈ ಸ್ವಾತಂತ್ರ್ಯ ನೀಡಿದವರಾರು..
    ವಿಚಾರದ ಅಧ್ಯಯನವನ್ನೇ ಮಾಡದೇ ಪೂರ್ವಗ್ರಹಿತರಾಗಿ ಚಳುವಳಿ ಮಾಡುವ, ಬೆಂಬಲ ನೀಡುವ ಶಿಕ್ಷಣವನ್ನು ಯಾರು ನೀಡಿದ್ದಾರೆ.  ಸಂಘಟನೆಗಳೆಂದರೇನು... ಸಮಸ್ಯೆಗಳನ್ನು ಹುಡುಕುವುದೇ! ಪರಿಹಾರ ಹುಡುಕುವುದೇ! ಬೆಂಬಲ ಸೂಚಿಸುವುದೇ! ಏಕೆ ಈ ಅಂಶಗಳು ಅರ್ಥವಾಗುತ್ತಿಲ್ಲ. ಸಮಾಜದ ದ್ರೋಹಗಳೆಲ್ಲಾ ಹಣವೆಂಬ ನೆಪದಲ್ಲಿ ಸುಲಭ ಮಾರ್ಗಗಳನ್ನು ಅಲೋಚಿಸುತ್ತಾ ರಕ್ತ ಹೀರುವ ಸದ್ಗುಣರೂಪಗಳ ದರ್ಶನವು ಈ ಸಮಾಜಕ್ಕೆ ತಿಳಿಯುವುದೆಂದು?

  • ನ್ಯಾಯಾಲಯಕ್ಕೆ ಇಬ್ಬರೂ ಬಂದರು..
       ಸತ್ಯ ಹಾಗೂ ಸುಳ್ಳು ಇಬ್ಬರೂ ನ್ಯಾಯಾಲಯಕ್ಕೆ ಬರುವಾಗಲೇ ತಾನು ಬೆತ್ತಲೆ ಎಂಬುದು ಸುಳ್ಳಿಗೆ ತಿಳಿದಿರುತ್ತದೆ. ಆದರೂ ಭೂಷಣ ಪ್ರವೃತ್ತಿಯನ್ನು ಅದೆಂದಿಗೂ ಬಿಡಲಾರದು. ಒಬ್ಬ ವ್ಯಕ್ತಿ ಪೂರ್ಣವಾಗಿ ನ್ಯಾಯಕ್ಕೆ ಬದ್ಧವೆಂದ ಮೇಲೆ ಆ ವ್ಯಕ್ತಿಯ ಕುರಿತು ತನಗೆ ಸುಲಭವಾಗಿ ಲಭ್ಯವಾಗುವ ಅಕ್ಷರ, ಮಾತು, ಕ್ರಿಯೆಗಳಲ್ಲೆಲ್ಲಾ ಅಪೂರ್ಣ ಅನರ್ಥಗಳನ್ನು ಸೃಷ್ಟಿಸುವ ನೈತಿಕ ಸ್ವಾತಂತ್ರ್ಯವನ್ನು ಈ ಸಮಾಜಕ್ಕೆ ನೀಡಿದವರಾರು? ರಕ್ಷಕರು, ನ್ಯಾಯಧೀಶರು ಎಂಬೆಲ್ಲಾ ವ್ಯವಸ್ಥೆಗಳು ಇರುವುದಾದರೂ ಏಕೆ? ನಮ್ಮ ಮನೆಯೇ ನಮಗೆ ಪೂರ್ಣವಾಗಿ ಅರ್ಥವಾಗದಿರಲು ಕಾರಣ ನಮಗೆ ಪರಿಸರದ ಅನುಭವದ ಕೊರತೆ ಆದರೆ ಒಂದು ಸ್ಥಳವನ್ನು ನೋಡದೆ, ಎಂದೋ ನೋಡಿದ ಕಲ್ಪನೆಯಲ್ಲೇ, ಇನ್ನೊಬ್ಬರ ಹೇಳಿಕೆಯಲ್ಲಿ ನಾವು ನಮ್ಮದೇ ನಿರ್ಧಾರಗಳನ್ನು ಸುಲಭವಾಗಿ ಮಾರಿಕೊಂಡರೆ ನಮ್ಮ ಅಸ್ತಿತ್ವದ ಪ್ರಶ್ನೆಯಾದರೂ ಏನು? ನಾವು ಒಬ್ಬ ಮನುಷ್ಯನಿಗೆ ಸಹಾಯ ಮಾಡಲಾಗದ ಶಕ್ತಿ ಇಲ್ಲದ ಮೇಲೆ ಆತನನ್ನು ನಿಂದಿಸುವ ಯಾವ ನೈತಿಕತೆಯೂ ನಮಗೆ ಇರಲಾರದು ಎಂಬ ಬುದ್ಧನ ನುಡಿಗೆ ಅರ್ಥವಿಲ್ಲವೇ.. ಅಕ್ಷರ ಕಲಿತವರ ಗೊಸಂಬಿತನಗಳಿಗೆ ಅನಕ್ಷರಸ್ಥ ಬಲಿಯಾಗುತ್ತಿದ್ದಾನೆ. ಮಕ್ಕಳು ಬದುಕನ್ನು ಅರ್ಥವಿಲ್ಲದ ಅಯನದಲ್ಲಿ ಉಸಿರುಗಟ್ಟುತ್ತಾ ನಾಳೆಯ ವ್ಯವಹಾರದ ದಾಳಗಳಾಗುವುದು ಇಂದಿನ ಅನಿವಾರ್ಯ ಸ್ವರೂಪಿ ಜಗತ್ತಿನ ಲೀಲೆ!
     ಈ ನಿಟ್ಟಿನಲ್ಲಿ ಸಮಾಜದ ಪ್ರತಿಯೊಬ್ಬರೂ ಯೋಚಿಸಬೇಕಾದುದು ಇಲ್ಲಿ ಯಾವುದು ಅಗತ್ಯ, ಹಾಗೂ ಅನಗತ್ಯವಾದುದನ್ನು ಮುಂದುವರೆಸಬೇಕೆ? ನಮ್ಮ ಎಂತಹ ರಾಜಕೀಯ ನಾಯಕರು ಬೇಕು, ಯಾವ ರೀತಿಯ ಸಾಂಸ್ಕøತಿಕ ಚಿಂತಕರು ಬೇಕು.. ಹಾಗೂ ಮೊದಲು ನಾವು ಯಾರು, ಇಲ್ಲಿ ನಮ್ಮ ಅಸ್ಥಿತ್ವವೇನು? ನಾವು ಮಾತನಾಡುವ ನುಡಿಯ ಶುದ್ಧತೆ ಹೇಗಿರಬೇಕು. ನಮ್ಮ ಒಪ್ಪಿಕೊಳ್ಳುವ ಸಮಾಜ ಹೇಗಿದೆ. ನಾವು ಸ್ವತಂತ್ರರೇ! ಇಷ್ಟೆಲ್ಲಾ ಪ್ರಶ್ನೆಗಳಿಗೆ ಮಾನಸಿಕವಾದ ನಮ್ಮದೇ ಉತ್ತರ ಕಂಡುಕೊಂಡರೆ ನಾಶವಾಗುತ್ತಿರುವ ಭಾರತೀಯ ಅಂತಃಸತ್ವ ಉಳಿಯುತ್ತದೆ. ನುಡಿದರೆ ಮುತ್ತಿನ ಹಾರದಂತಿರಬೇಕು.. ಮಾತೆಂಬುದು ಜ್ಯೋತಿರ್ಲಿಂಗ.. ಮೊದಲಾದ ನುಡಿಗಳಿಗೆ ಅಂಟಿದ ಮೈಲಿಗೆಯನ್ನು ಕಳಚುವ ಪ್ರಯತ್ನ ಮಾಡಬಹುದು. 
ಶ್ರೇಷ್ಟವಾದುದು ಯಾವಾಗಲೂ ಶಾಶ್ವತವಾಗಿ ಉಳಿಯುತ್ತದೆ ಹಾಗೂ ಇದನ್ನು ಕುರಿತು ಯೋಚಿಸುವಾಗ ನಮ್ಮ ಜ್ಞಾನದ ಅರ್ಹತೆಯನ್ನು ನಾವು ಪರಿಶೀಲಿಸಿಕೊಳ್ಳಲೇಬೇಕು

ಭಾನುವಾರ, ಆಗಸ್ಟ್ 6, 2017

            ಸ್ನೇಹಕ್ಕೆ ಒಂದು ಸಂವಿಧಾನ


         ಸ್ನೇಹವನ್ನು ಬಾಲ್ಯ ಮತ್ತು ವೃದ್ಧಾಪ್ಯದಲ್ಲಿ ಕಂಡಷ್ಟು ನಿರ್ಮಲವಾಗಿ ಯೌವನದಲ್ಲಿ ಕಾಣುವುದು ಕಷ್ಟ. ಯೌವನವೆಂಬುದು ಕ್ರಿಯೆಯ ಕಾಲದ ಚೋದ್ಯ. ಅಲ್ಲಿ ಪ್ರವೇಶಿಸುವ ಪ್ರೇಮವು ಪ್ರೀತಿಯ ತಾತ್ತ್ವಿಕತೆ ಪಡೆದು ಮನುಷ್ಯನ ಇರುವಂತಿಕೆಯನ್ನೇ ಪ್ರಶ್ನಿಸುತ್ತದೆ. ಆಗ ನಾವು ಸೋಲುತ್ತೇವೆ. ಬಾಲ್ಯ ಬೆಳವಣಿಗೆ ಕಾಣುತ್ತಾ ಯೌವನದ ವೇಳೆಗೆ ನಿರ್ಮಿಸಿಕೊಳ್ಳುವ ಜಗತ್ತು ತನ್ನ ಆಯ್ಕೆಯ ಪ್ರಪಂಚ ಇಲ್ಲಿ ಸದಾ ‘ನಾನು’ ಎಂಬ ಇರುವಂತಿಕೆಯನ್ನು ಗುರ್ತಿಸಿಕೊಳ್ಳುವಾಗ ಸ್ವಾರ್ಥ ಸಹಜವಾಗಿ ನೆರವಾಗುತ್ತದೆ. ಅದಕ್ಕಾಗಿ ವ್ಯಕ್ತಿತ್ವವು ಸ್ನೇಹ, ಪ್ರೀತಿ ಮೊದಲಾದ ಅಸ್ತ್ರ ಬಳಸಿ ಮಾನಸಿಕ ಸಾಂತ್ವಾನ ತಂದುಕೊಳ್ಳುವುದು. ಆಚರಣೆ, ಸಂಭ್ರಮಗಳಲ್ಲಿ ಪರಸ್ಪರ ಕಾಣುವ ಸಾಮೂಹಿಕ ವಿಶ್ವಪ್ರಜ್ಞೆ ನಿತ್ಯ ಕಾಣಲಾಗದು. 
ಸ್ನೇಹವೆ
ಪರಸ್ಪರ ಕಾಣುವ ವ್ಯಕ್ತಿ ಗೌರವ. ಯಾರೂ ಮೇಲಲ್ಲ ಎಂಬ ಗುಣದ ಜೊತೆಗೆ ಇಲ್ಲಿ ಎಲ್ಲರೂ ಮುಖ್ಯವೆಂಬ ಧೀಮಂತಿಕೆ. ಮುಗ್ಧಹಂಚಿಕೆ, ಪರಸ್ಪರ ಪೂರ್ಣ ಅರ್ಪಿಸಿಕೊಳ್ಳುವ ನೈತಿಕ ಜವಬ್ದಾರಿ. ಇನ್ನೊಬ್ಬರನ್ನು ಗೆಲ್ಲಿಸಬೇಕಂಬ ಹಪಾಹಪಿ.

ಸ್ನೇಹದ ಬದ್ಧತೆ..


          ಮನುಷ್ಯ ಸ್ವಾರ್ಥವಾಗುತ್ತಾ ತಾನು ಗಳಿಸಿಕೊಂಡ ಆಪ್ತತೆಯನ್ನು ಕಳಿಚಿಕೊಳ್ಳುವನು. ಕಾರಣ, ಅವನು ಗೆಲ್ಲುವ ದಿಕ್ಕಿನಲ್ಲಿ ತನ್ನ ಸಕಲ ಚಿಂತನೆಗೂ ಬೆಂಬಲ ಇಲ್ಲದಿರುವುದು. ಒಮ್ಮೆ ನಂಬಿಕೆಯನ್ನು ಒಪ್ಪಿಕೊಂಡ ಮೇಲೆ ಅದನ್ನು ಸೂಕ್ಷ್ಮ ಎಳೆಯಲ್ಲೂ ಅನುಮಾನಿಸದೇ ಕಾಪಾಡುವುದೇ ಸ್ನೇಹ ಬದ್ಧತೆಯ ಜವಬ್ದಾರಿ.

                  ಹೀಗೆ ಕಂಡಾಗ..

ಇಂದು ಮಾಧ್ಯಮಗಳೊಂದಿಗೆ ಕಟ್ಟಿಕೊಂಡ ಜವಬ್ದಾರಿಯುತ ಸಂಬಂಧಗಳಲ್ಲಿ ಸ್ನೇಹ ಪ್ರಾಥಮಿಕ ಹಾಗೂ ಫಲಿತ ಗೆಲುವೂ ಕೂಡ. ಪರಿಚಯ ನಿಧಾನವಾಗಿ ಸ್ನೇಹಕ್ಕೆ ಸಿಲುಕುವಾಗ ಬರೀ ಸಂದೇಶವಾಗಿ ಉಳಿದಿರುವ ತೋರಿಕೆಯ ವಾಸ್ತವತೆಯೂ ದರ್ಶನವಾಗುತ್ತದೆ.

       ಸ್ನೇಹವನ್ನು ಮೊದಲು ನಾಶಮಾಡುವ ಅಸ್ತ್ರ ನಂಬಿಕೆಯ ಪ್ರಶ್ನೆ. ಹಣವೇ ಮತ್ತೊಂದು ಮಾರ್ಗದ ಶ್ಮಶಾನ. ಪ್ರೀತಿಗೆ ಹಂಬಲಿಸುವ ಮನೋವಿಕಾರಗಳ ಸಂತೆಯಲ್ಲಿ ಕಾಮವೂ ಒಂದು ನಿಲ್ದಾಣ. ಜವಾಬ್ದಾರಿಗಳಿದಂತೆ ಪಡೆದುಕೊಳ್ಳುವ ಸಮಯ ಸಾಧಕತನ ಪೂರ್ಣ ಕೈಗೊಂಬೆಯಾಗಿ ಆತ್ಮವನ್ನು ಕಳಚಿ ಬಿಡುತ್ತದೆ. ಇಲ್ಲೆಲ್ಲಾ ಸ್ನೇಹ ಸುಂದರ ಹಾಳೆಯಾಗಿ ಬಂದು ನೆನೆಪುಗಳ ಶಾಹಿಯಲಿ ಮಿಂದು ಮತ್ತೆ ನೋಡದ, ಎಂದೂ ಕೂಡದ ಹಿತಶತ್ರು ವ್ಯಾಖ್ಯಾನದಲಿ ಚೂರಾಗುತ್ತದೆ.
ಉಳಿದದ್ದು..

        ಅದೊಂದು ಪೂರ್ಣ ವೃತ್ತಾಕಾರ. ಯಾರೋ ಹೇಗೆ ತಿರುಗಿಸಿದರೂ ಸುಂದರವಾಗಿ ಕಾಣುವ ವಿನೋದ ಶೈಲಿ. ಇಲ್ಲಿ ನಂಬಿಕೆ ರಕ್ತಗತವಾಗಿರುವುದರಿಂದ ಅದನ್ನು ತೋರ್ಪಡಿಸುವ ಅಗತ್ಯ ಇರದು. ಹಾಸ್ಯ ರಸದಲಿ ಹೊರಡುವ ಇದರ ಅಂತರ್ಯಾನವು ಆನಂದದಲ್ಲಿಯೇ ತೇಲುತ್ತಾ ಸುಖಿಸುತ್ತದೆ. ದುಃಖದಲ್ಲಿ ತನ್ನ ಜವಬ್ದಾರಿಯನ್ನು ನಿಭಾಯಿಸುತ್ತಾ ಪೂರ್ಣ ಹೊರೆ ಹೊರುತ್ತದೆ. ಈ ಸ್ನೇಹಕ್ಕೆ ಫಲಾಪೇಕ್ಷೆಯ ನಿರೀಕ್ಷೆ ಇರಲಾರದು. 


         ಜಗತ್ತು ಸ್ನೇಹದ ಹೆಗಲಾದರೆ ಕೂತು ಸವಾರಿಮಾಡುವ ಮನಸುಗಳು ಬೇಕಿದೆ ಬನ್ನಿ ವಯಸಿನ ಅಂತರವಿಲ್ಲ, ಮನಸಿನ ಮಂತ್ರವೇ ಎಲ್ಲ.


ಯಾವುದು ಸದಾ ಸಂತೋಷ ನೀಡುವುದೋ, ಶಾಶ್ವತವಾಗಿ ಉಳಿಯುವುದೋ ಅದೇ ‘ಒಳ್ಳೆಯ’ದು – ಡಿವಿಜಿ

ಸೋಮವಾರ, ಜುಲೈ 31, 2017

                 ಸಾರವೀ ವಿಚಾರ!
ಮೌನದ ರಾಗವನಾಡು ಬಾ
ಮಾತಿನ ದನಿ ಮರೆತು
ಧ್ಯಾನದ ಯೋಗವ ನೋಡು ಬಾ 
ಈ ನನ್ನ ಮನ ಅರಿತು - ಅಂಕುರ

ಬುಧವಾರ, ಜುಲೈ 26, 2017

            ಸ್ನೇಹಕ್ಕೆ ಒಂದು ಸಂವಿಧಾನ  

                                                        -  ಅಂಕುರ


         ಸ್ನೇಹವನ್ನು ಬಾಲ್ಯ ಮತ್ತು ವೃದ್ಧಾಪ್ಯದಲ್ಲಿ ಕಂಡಷ್ಟು ನಿರ್ಮಲವಾಗಿ ಯೌವನದಲ್ಲಿ ಕಾಣುವುದು ಕಷ್ಟ. ಯೌವನವೆಂಬುದು ಕ್ರಿಯೆಯ ಕಾಲದ ಚೋದ್ಯ. ಅಲ್ಲಿ ಪ್ರವೇಶಿಸುವ ಪ್ರೇಮವು ಪ್ರೀತಿಯ ತಾತ್ತ್ವಿಕತೆ ಪಡೆದು ಮನುಷ್ಯನ ಇರುವಂತಿಕೆಯನ್ನೇ ಪ್ರಶ್ನಿಸುತ್ತದೆ. ಆಗ ನಾವು ಸೋಲುತ್ತೇವೆ. ಬಾಲ್ಯ ಬೆಳವಣಿಗೆ ಕಾಣುತ್ತಾ ಯೌವನದ ವೇಳೆಗೆ ನಿರ್ಮಿಸಿಕೊಳ್ಳುವ ಜಗತ್ತು ತನ್ನ ಆಯ್ಕೆಯ ಪ್ರಪಂಚ ಇಲ್ಲಿ ಸದಾ ‘ನಾನು’ ಎಂಬ ಇರುವಂತಿಕೆಯನ್ನು ಗುರ್ತಿಸಿಕೊಳ್ಳುವಾಗ ಸ್ವಾರ್ಥ ಸಹಜವಾಗಿ ನೆರವಾಗುತ್ತದೆ. ಅದಕ್ಕಾಗಿ ತಾನು ಸ್ನೇಹ, ಪ್ರೀತಿ ಮೊದಲಾದ ಅಸ್ತ್ರ ಬಳಸಿ ಮಾನಸಿಕ ಸಾಂತ್ವಾನ ತಂದುಕೊಳ್ಳುತ್ತಾನೆ. ಆಚರಣೆ, ಸಂಭ್ರಮಗಳಲ್ಲಿ ಪರಸ್ಪರ ಕಾಣುವ ಸಾಮೂಹಿಕ ವಿಶ್ವಪ್ರಜ್ಞೆ ನಿತ್ಯ ಕಾಣಲಾಗದು. 
ಸ್ನೇಹವೆ
ಪರಸ್ಪರ ಕಾಣುವ ವ್ಯಕ್ತಿ ಗೌರವ. ಯಾರೂ ಮೇಲಲ್ಲ ಎಂಬ ಗುಣದ ಜೊತೆಗೆ ಇಲ್ಲಿ ಎಲ್ಲರೂ ಮುಖ್ಯವೆಂಬ ಧೀಮಂತಿಕೆ. ಮುಗ್ಧಹಂಚಿಕೆ, ಪರಸ್ಪರ ಪೂರ್ಣ ಅರ್ಪಿಸಿಕೊಳ್ಳುವ ನೈತಿಕ ಜವಬ್ದಾರಿ. ಇನ್ನೊಬ್ಬರನ್ನು ಗೆಲ್ಲಿಸಬೇಕಂಬ ಹಪಾಹಪಿ.

ಸ್ನೇಹದ ಬದ್ಧತೆ..


          ಮನುಷ್ಯ ಸ್ವಾರ್ಥವಾಗುತ್ತಾ ತಾನು ಗಳಿಸಿಕೊಂಡ ಆಪ್ತತೆಯನ್ನು ಕಳಿಚಿಕೊಳ್ಳುವನು. ಕಾರಣ, ಅವನು ಗೆಲ್ಲುವ ದಿಕ್ಕಿನಲ್ಲಿ ತನ್ನ ಸಕಲ ಚಿಂತನೆಗೂ ಬೆಂಬಲ ಇಲ್ಲದಿರುವುದು. ಒಮ್ಮೆ ನಂಬಿಕೆಯನ್ನು ಒಪ್ಪಿಕೊಂಡ ಮೇಲೆ ಅದನ್ನು ಸೂಕ್ಷ್ಮ ಎಳೆಯಲ್ಲೂ ಅನುಮಾನಿಸದೇ ಕಾಪಾಡುವುದೇ ಸ್ನೇಹ ಬದ್ಧತೆಯ ಜವಬ್ದಾರಿ.

                                         ಹೀಗೆ ಕಂಡಾಗ..

ಇಂದು ಮಾಧ್ಯಮಗಳೊಂದಿಗೆ ಕಟ್ಟಿಕೊಂಡ ಜವಬ್ದಾರಿಯುತ ಸಂಬಂಧಗಳಲ್ಲಿ ಸ್ನೇಹ ಪ್ರಾಥಮಿಕ ಹಾಗೂ ಫಲಿತ ಗೆಲುವೂ ಕೂಡ. ಪರಿಚಯ ನಿಧಾನವಾಗಿ ಸ್ನೇಹಕ್ಕೆ ಸಿಲುಕುವಾಗ ಬರೀ ಸಂದೇಶವಾಗಿ ಉಳಿದಿರುವ ತೋರಿಕೆಯ ವಾಸ್ತವತೆಯೂ ದರ್ಶನವಾಗುತ್ತದೆ.

       ಸ್ನೇಹವನ್ನು ಮೊದಲು ನಾಶಮಾಡುವ ಅಸ್ತ್ರ ನಂಬಿಕೆಯ ಪ್ರಶ್ನೆ. ಹಣವೇ ಮತ್ತೊಂದು ಮಾರ್ಗದ ಶ್ಮಶಾನ. ಪ್ರೀತಿಗೆ ಹಂಬಲಿಸುವ ಮನೋವಿಕಾರಗಳ ಸಂತೆಯಲ್ಲಿ ಕಾಮವೂ ಒಂದು ನಿಲ್ದಾಣ. ಜವಬ್ದಾರಿಗಳಿದಂತೆ ಪಡೆದುಕೊಳ್ಳುವ ಸಮಯ ಸಾಧಕತನ ಪೂರ್ಣ ಕೈಗೊಂಬೆಯಾಗಿ ಆತ್ಮವನ್ನು ಕಳಚಿ ಬಿಡುತ್ತದೆ. ಇಲ್ಲೆಲ್ಲಾ ಸ್ನೇಹ ಸುಂದರ ಹಾಳೆಯಾಗಿ ಬಂದು ನೆನೆಪುಗಳ ಶಾಹಿಯಲಿ ಮಿಂದು ಮತ್ತೆ ನೋಡದ, ಎಂದೂ ಕೂಡದ ಹಿತಶತ್ರು ವ್ಯಾಖ್ಯಾನದಲಿ ಚೂರಾಗುತ್ತದೆ.
ಉಳಿದದ್ದು..

        ಅದೊಂದು ಪೂರ್ಣ ವೃತ್ತಾಕಾರ. ಯಾರೋ ಹೇಗೆ ತಿರುಗಿಸಿದರೂ ಸುಂದರವಾಗಿ ಕಾಣುವ ವಿನೋದ ಶೈಲಿ. ಇಲ್ಲಿ ನಂಬಿಕೆ ರಕ್ತಗತವಾಗಿರುವುದರಿಂದ ಅದನ್ನು ತೋರ್ಪಡಿಸುವ ಅಗತ್ಯ ಇರದು. ಹಾಸ್ಯ ರಸದಲಿ ಹೊರಡುವ ಇದರ ಅಂತರ್ಯಾನವು ಆನಂದದಲ್ಲಿಯೇ ತೇಲುತ್ತಾ ಸುಖಿಸುತ್ತದೆ. ದುಃಖದಲ್ಲಿ ತನ್ನ ಜವಬ್ದಾರಿಯನ್ನು ನಿಭಾಯಿಸುತ್ತಾ ಪೂರ್ಣ ಹೊರೆ ಹೊರುತ್ತದೆ. ಈ ಸ್ನೇಹಕ್ಕೆ ಫಲಾಪೇಕ್ಷೆಯ ನಿರೀಕ್ಷೆ ಇರಲಾರದು. 


         ಜಗತ್ತು ಸ್ನೇಹದ ಹೆಗಲಾದರೆ ಕೂತು ಸವಾರಿಮಾಡುವ ಮನಸುಗಳು ಬೇಕಿದೆ ಬನ್ನಿ ವಯಸಿನ ಹಂತರವಿಲ್ಲ, ಮನಸಿನ ಮಂತ್ರವೇ ಎಲ್ಲ.


ಯಾವುದು ಸದಾ ಸಂತೋಷ ನೀಡುವುದೋ, ಶಾಶ್ವತವಾಗಿ ಉಳಿಯುವುದೋ ಅದೇ ‘ಒಳ್ಳೆಯ’ದು – ಡಿವಿಜಿ

ಸೋಮವಾರ, ಜುಲೈ 24, 2017

    ರಂಗಭೂಮಿಯೆಂಬ ವಿಶ್ವರೂಪಕ 





ರಂಗಭೂಮಿ ಇಂದು ಶ್ರೀಮಂತಗೊಂಡಿದೆ. ಆಸ್ವಾದಿಸುವ ಪ್ರೇಕ್ಷಕನನ್ನು, ಸಮೃದ್ದಿಯ ವಿನ್ಯಾಸದೊಂದಿಗೆ ನಟನೆಯನ್ನು ಹೊಂದಿರುವ ಪ್ರಸ್ತುತ ಕಾಲಘಟ್ಟದ ಕಲೆಯಾಗಿದೆ. ಸಾಹಿತ್ಯ ಅಧ್ಯಯನ ಸ್ವರೂಪಿಯಾದ ಈ ಮನೋರಂಜನಾ ಕಲೆಗಳು ಬದುಕನ್ನು ಬದಲಿಸುವಲ್ಲಿ ಯಶಸ್ವಿಯಾಗಿವೆ, ಆಧುನಿಕ ನೋಟಗಳಿಗೂ ರಸದೌತಣ ಮಾಡುವ ಕಲೆ ಬದಲಾವಣೆಯ ನೈತಿಕತೆಯನ್ನು ನಿರ್ವಹಿಸುತ್ತಿದೆ. ಕರ್ನಾಟಕದಲ್ಲಿ ರಂಗಭೂಮಿಯ ಚಾಪು ಅನನ್ಯವಾದುದು.  ಬಿ.ವಿ ಕಾರಂತ, ಕೆವಿ ಸುಬ್ಬಣ್ಣನಂತಹ  ಕಲಾಚಿಂತಕರು ಸೃಷ್ಟಿಸಿದ ಕಲೆಯ ಬೀಜಗಳು ಈ ಮಣ್ಣಿನಲ್ಲಿ ಬೀಳಲು ಎಲ್ಲಾ ದಿಕ್ಕುಗಳಿಗೂ ಹಬ್ಬಿ, ಗಾಳಿಯಲ್ಲಿ ತೂರಿ, ನೀರಿನಲ್ಲಿ ತೇಲಿ ಇಂದು ರಂಗಭೂಮಿ ಎಂಬುದು ಒಂದು ಅಕಾಡೆಮಿಕ್ ಆದ ಚಿಂತನೆಯಾಗಿದೆ.
    ಪ್ರದರ್ಶನವೆಂಬುದು  ಹಲವು ಶ್ರಮಗಳ ಫಲ. ಒಂದು ನಾಟಕ ಸಿದ್ಧಗೊಳ್ಳಲು ಬೇಕಾದ ಪೂರ್ಣಪ್ರಯತ್ನವೆಂಬುದು ಪಾತ್ರದೊಳಗೆ ಪ್ರವೇಶಿಸುವ ಕಲಾವಿದನ ರಸಯಾತ್ರೆ, ಪರಕಾಯ ಪ್ರವೇಶದ ನೈತಿಕ ಬದ್ಧತೆ. ಹೆಜ್ಜೆಹೆಜ್ಜೆಗೂ ಪ್ರೇಕ್ಷಕನ ಚಿಂತನೆಯಲ್ಲಿ ನಡೆಸುವ ಸಂಶೋಧನಾ ಹೊಸರೂಪತೆ. ಇಂತಹ ರಂಗಭೂಮಿ ಚಿಂತನೆ ಕುರಿತು ಹಲವು ಲೇಖನಗಳಿವೆ. ಏಕೆಂದರೆ ರಂಗಭೂಮಿ ಕಲೆ ಪಸರಿಸಿರುವ ಪರಿ ವಿಶ್ವರೂಪಕವಾದುದು. ಗ್ರೀಕ್ ಚಿಂತನೆಯಿಂದ, ರೋಮ್‍ನ ಪ್ರಯೋಗಗಳಿಂದ ಸಾಹಿತ್ಯದ ಜೊತೆ ಪ್ರದರ್ಶನವನ್ನೂ ಹೊತ್ತು ತಂದ ಈ ಕಲೆ ಇಂದು ದೇಸಿಯ ಕಲೆಯೊಂದಿಗೆ ಜನಪದ ನಂಟನ್ನು ಬೆಸೆದು ದೇಶ-ಕಾಲ-ಕಲೆಯ ತ್ರಿಕೂಟವನ್ನು ಎಲ್ಲಾ ಕಡೆಯಿಂದಲೂ ಪಸರಿಸಿದೆ. ಮಾಧ್ಯಮವೂ ಇದರ ಒಂದು ಅಂಗವಾಗಿದೆ. ಧ್ವನಿ ಮೊದಲ ಪದಿಯಾದರೆ, ನಟನೆ ಅದರ ಅಂಗ. ಬೆಳಕು ಹಾಗೂ ಸಂಗೀತ, ವೇಶದ ವಿನ್ಯಾಸದಂತೆ ಬಹುಮುಖ್ಯ ಜೀವನಾಡಿಗಳು.
    ರಂಗಭೂಮಿ ಎಂಬ ಕಲೆ ಕರ್ನಾಟಕದಲ್ಲಿ ಎಲ್ಲಾ ಭಾಗದಲ್ಲೂ ಮೂಡಿಬರುತ್ತಿರುವ ಈ ಹೊತ್ತಿನಲ್ಲಿ ನೀನಾಸಂನಂತಹ, ರಂಗಾಯಣದಂತಹ ಕೇಂದ್ರಗಳು ಹಲವು ಕಲಾವಿದರನ್ನು ಮುಕ್ತವಾಗಿ ನೀಡುತ್ತಾ ಬಂದಿವೆ. ಹಲವು ಕಲಾವಿದರು ರಂಗಭೂಮಿಯಲ್ಲೇ ಮುಂದುವರೆದರೆ, ಕೆಲವು ಕಲಾವಿದರು ಸಿನಿಮಾ ಕ್ಷೇತ್ರದಲ್ಲಿ ತೊಡಗಿದ್ದಾರೆ. ಇಲ್ಲೆಲ್ಲಾ ಕಲಾವಿದರಾಗಿ ಉಳಿಯುವ ಜೊತೆಯಲ್ಲಿ ಕಲೆಯನ್ನು ವಿಸ್ತರಿಸಿಕೊಳ್ಳುವ ಪ್ರಯೋಗ ಇವರದು. ಗುರುವಾಗಿ, ವಿನ್ಯಾಸಕರಾಗಿ ನಿರ್ದೇಶನ ಜಗತ್ತನ್ನು ತಮ್ಮದೇ ಆದ ರಂಗಭೂಮಿ ಕ್ಷೇತ್ರವನ್ನು ಸ್ಥಾಪಿಸುವಷ್ಟು ವಿಸ್ತಾರವಾದ ಜಗತ್ತು ಇವರದಾಗಿದೆ.
ಒಂದು ಜಗತ್ತಿನೊಳಗೆ ನಿಮ್ಮನ್ನು ಆಹ್ವಾನಿಸುವುದಾದರೆ ಆಳ್ವಾಸ್ ಶಿಕ್ಷಣ ಸಂಸ್ಥೆಯು ರಂಗಭೂಮಿ ಅಧ್ಯಯನವನ್ನೂ ತುಂಬಾ ತಾತ್ವಿಕವಾಗಿ ನೀಡುತ್ತಿದೆ. ಉತ್ತಮ ಪ್ರಯೋಗಗಳು ಪ್ರೇಕ್ಷಕವರ್ಗಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ನೀಡುತ್ತಾ ಬಂದಿದೆ. ಇಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೂ ಅದರ ರಸಚಿಂತನೆಯ ನೋಟ ಸದಾ ಲಭಿಸುತ್ತದೆ. ನುಡಿಸಿರಿಯಂತಹ ಅಂತರಾಷ್ಟ್ರೀಯ ಪ್ರೇಕ್ಷಕವರ್ಗವನ್ನು ಸಂಪಾದಿಸಿದ ಕಾರ್ಯಕ್ರಮದಲ್ಲೂ ರಂಗಭೂಮಿ ಒಂದು ಭಾಗ. ನಿರ್ದೇಶಕರಾದ ಜೀವನರಾಂ ಸುಳ್ಯ ಅವರ ನೂರಾರು ಪ್ರದರ್ಶನಗಳನ್ನು ಕಂಡ ಎಲ್ಲಾ ಸಾಹಿತ್ಯ ನಾಟಕಗಳು ರಂಗಭೂಮಿಯಲ್ಲೇ ಒಂದು ಮೈಲಿಗಲ್ಲು. ಅದಕ್ಕೆ ಉತ್ತಮ ಉದಾಹರಣೆಯಾಗಿ ಹೇಳುವುದಾದರೆ ಅವರ ನಿರ್ದೇಶನದಲ್ಲಿ ಮಾಡುವ ಹೊಸಪ್ರಯೋಗಗಳು. 
ಜೀವನರಾಂ ಸುಳ್ಯ

      ದಕ್ಷಿಣ ಕನ್ನಡ ಭಾಗದ ಸಾಂಸ್ಕøತಿಕ ಚಿಂತನೆಯ ಹೊಸ ಪ್ರಯೋಗಾತ್ಮಕ ಮಿಳಿತಗಳನ್ನು ನೋಡುವುದರಲ್ಲೇ ಗ್ರಹಿಸಬೇಕು. ಮಹಾಮಾಯಿ, ಧಾಂಧೂಂ ಸುಂಟರಗಾಳಿಯಂತಹ ಪ್ರಯೋಗಗಳನ್ನೇ ಹೇಳುವುದಾದರೆ ಅಲ್ಲಿನ ಪ್ರತಿ ನಟರ ಶ್ರಮ, ಅವರ ನಿತ್ಯ ಪ್ರಯೋಗದೊಂದಿಗೆ ಒಳಗೊಳ್ಳುವ ಪರಕಾಯ ಪ್ರವೇಶ, ಬೆಳಕಿನ ವಿನ್ಯಾಸ, ಧ್ವನಿಯ ಸಾಪೇಕ್ಷತೆ, ಪ್ರತಿಯೊಬ್ಬರೂ ಒಪ್ಪಿಕೊಳ್ಳಬೇಕಾದ ಕಲಾವಿದರೆ! ನಿರ್ದೇಶಕರು ಹಾಗೂ ಇವರಲ್ಲಿ ಹಲವು ರಂಗ ತಾಂತ್ರಿಕರು ಪ್ರತ್ಯೇಕ ಲೇಖನಕ್ಕೇ ಅರ್ಹರು. ಇಲ್ಲಿ ಹೆಚ್ಚು ಹೇಳಲಾರೆ ಇವರನ್ನು ಮೊದಲ ಪದಿಯಲ್ಲೇ ಕೂತು “ನಾಟಕವನ್ನು ಮುಂದೆ, ಸಿನಿಮಾವನ್ನು ಹಿಂದೆ ನೋಡು” ಎಂಬಂತೆ ನೋಡಿದಾಗ ದಕ್ಕುವ ಸಾಹಿತ್ಯ ರಸ ದೌತಣ ಮರೆಯದ ಮೌಲ್ಯತಮ ನೆನಪು. - @ಅಂಕುರ

ಶನಿವಾರ, ಜುಲೈ 22, 2017

*ಸಿ. ಇ. ಟಿ ಸೂಕ್ಷ್ಮತೆಯಲಿ ಕನ್ನಡಕೂ ಕನ್ನಡಿ!*

ಕನ್ನಡ ಸಾಹಿತ್ಯ ಕುರಿತು ಅಧ್ಯಯನಗಳು ವಿಶೇಷವಾಗಿ ಗರಿಬಿಚ್ಚಿವೆ. ಅಧ್ಯಯನ ಎಂಬ ಪದದ ಮೂಲಾರ್ಥವೇ ಅಂಕದ ಸವಾರಿ ಎನಿಸಿದೆ.
ಸಿಇಟಿ ಎಂಬ ಪದವೇ ನೆನಪಿನ ಹಾಗೂ ಯೋಚಿಸಿ ಅರಿವನ್ನು ಪಡೆಯುವ ಜ್ಞಾನವಾಗಿ ಬೆಳವಣಿಗೆಯಾಗುತ್ತಿದೆ.
ಉದ್ಯೋಗ ಸ್ಥಾನಗಳು ಲಾಭಾಂಶದ ಬಿಳಿನೆರಳಾಗುತ್ತಿರುವ ಸಂದರ್ಭದಲ್ಲಿ ಆಶ್ರಯದ ಕೂಸಗಳದೆಷ್ಟೋ!
ಗೆಲ್ಲಬೇಕಾದವರು ವಿದ್ಯೆ ಕಲಿತವರಲ್ಲ, ಉದ್ಯೋಗ ನಿಮಿತ್ತರು. ಬಡತನ, ಅಧ್ಯಯನ ನಿಮಿತ್ತ, ವೃತ್ತಿ, ಪ್ರವೃತ್ತಿ ಮೊದಲಾದ ಅಂಶಗಳನ್ನು ಹೊಂದಿದವರಾಗಿ ಗೆಲ್ಲುವ ಅನಿವಾರ್ಯತೆ ಇದೆ ಇವರೇ ಬಂಡವಾಳ..

ಕನ್ನಡ ಸಾಹಿತ್ಯ ಕೂಡ ಸಿ ಇ ಟಿಗೆ ದಕ್ಕಿದಾಗ ಅದರ ಉಳಿವು ಅಳಿವಿನ ರಾಜಕೀಯ ಬೆಳವಣಿಗೆ ಚಿಂತನಾರ್ಹ.
ಉದ್ಯೋಗ ಸಲುವಾಗಿ ಅರ್ಹತೆಯನ್ನು ಹೊಂದಿದ ಸದ್ಯದ ೨೧.೦೦೦ಕ್ಕೂ ಮಿಗಿಲಾಗಿ ಸಾಹಿತ್ಯ ಅಭ್ಯರ್ಥಿಗಳು ಬಂಡವಾಳದ ಪ್ರತ್ಯೇಕ ಮಾದರಿಗಳು. ಗೆದ್ದವರ ಅರಿವು ತರಬೇತಿಯ ವಿವಿಧ ರೂಪಗಳನ್ನು ಪ್ರಾರಂಭಿಸಿದರೆ, ಪ್ರಕಾಶಕರು ಮತ್ತು ಪುಸ್ತಕದ ವ್ಯಾಪಾರಿಗಳು ಸುಮಾರು ೧೦_೦೦೦ ದಷ್ಟು ಪ್ರತಿಗಳ ಮುದ್ರಣ ಹಾಗೂ ಮಾರಾಟದ ವಹಿವಾಟಿಗೆ ನಿಂತು ಮೂಲಪ್ರತಿ, ಹೋಲಿಕೆ ಪ್ರತಿ ಹೀಗೆಲ್ಲಾ ಮುದ್ರಿಸಲು ಪ್ರಾರಂಭಿಸುತ್ತಿದ್ದಾರೆ. ಆದರೆ ರೆಡಿಮೆಡ್ ಯುಗದಲ್ಲಿ ಇಂತಹ ತಯಾರಿಸಿದ ಸಿಲಬಸ್ ಪೂರ್ಣತೆಯ ಪುಸ್ತಕಗಳು ಸಿದ್ಧಮಾದರಿಯಲ್ಲಿ ದೊರೆತರೆ ಹೇಗೆ! ಹೌದು ಈಗ ಇವುಗಳ ಹಾವಳಿಯೇ ಹೆಚ್ಚು. ಪ್ರಾಣಹೋಗುವವನ ದಾಹದಾಟದ ದಾಳಗಳು. ಹತ್ತಾರು ಜನರ ಅಧ್ಯಯನವನ್ನು ಕದ್ದುಕೊಲೆಗಯ್ಯುವ ಕೌತ್ಸುಕಾಭರಣಗಳೂ ಇದ್ದಾವೆ. ಇರಲಿ :ವ್ಯಾಪಾರಂ ದ್ರೋಹ ಚಿಂತನಂ' ಅಲ್ಲವೇ..

ಉತ್ತಮ ಚಿಂತನೆ ಎಂದರೆ ಇದೇ ವ್ಯವಹಾರ ಹಲವರಿಗೆ ಸಾಹಿತ್ಯದ ಆಳ ಅಗಲ ಪರಿಚಯಿಸಿದ ಪರಿ ಅನನ್ಯವಾದುದು.

ಪ್ರಾಧ್ಯಾಪಕರ ಹುದ್ದೆಗೆ ಮೊದಲು ಇದರ ಬಿಸಿ ತುಪ್ಪದ ಅರಿವು ಎಲ್ಲರಿಗೂ ದಕ್ಕಿತು. ಇಲ್ಲಿ ಎಚ್ಚರಗೊಂಡವರು ಪಿಯು ಉಪನ್ಯಾಸಕ ಹುದ್ದೆಗೆ ಬೇಕಾದ ತುಪ್ಪ ಕಾಸಲು ಪ್ರಾರಂಭಿಸಿದರು. ಗೆದ್ದವರು ಜ್ಞಾನಿಗಳೇನೂ ಅಲ್ಲ, ಸೋತವರು ಅಜ್ಞಾನಿಗಳಲ್ಲ..

ಈ ನಿಟ್ಟಿನಲ್ಲಿ ಸ್ಪರ್ಧಾ ಶ್ರೇಯಸ್ಸು, ಏಣಿ ಈ ಸಿಇಟಿ ಮಾದರಿಯ ಪುಸ್ತಕಗಳ ಕಥೆ ಭಿನ್ನವಾಗಿದೆ. ಇದರ ಸಂಪಾದಕರು ಇದುವರೆಗೂ ಎಲೆಮರೆಯ ಕಾಯಿಯಂತೆ ಸಾಹಿತ್ಯ ಅಧ್ಯಯನ ಮಾಡಿದ್ದಾರೆ, ಹಲವರ ತಪ್ಪುಗಳ ಗ್ರಹಿಸಿದ್ದಾರೆ, ದೀರ್ಘವಾದ ಅಧ್ಯಯನವನ್ನು ಓದುಗರಿಗೆ ಒಪ್ಪಿಸುವ ಕೆಲಸ ಮಾಡಿದ್ದಾರೆ ಅನಿಸುತ್ತದೆ, ಯಾವುದೇ ವ್ಯಾಕರಣ ದೋಷವಿಲ್ಲದ ಈ ಕೃತಿಗಳು ಕೆಲವು ಸಣ್ಣ ಕೊರೆತೆಗಳ ಹೊರತುಪಡಿಸಿ ಉತ್ತಮ ಸಾಹಿತ್ಯ ಸೇತುವೆಗಳೆನ್ನಬಹುದು. ವ್ಯವಹಾರವನ್ನು ವಸ್ತುನಿಷ್ಠವಾಗಿ ಮಾಡುವ ಕ್ರಮ ಇಲ್ಲಿ ಗಮನಿಸಬಹುದು.

ಅಕ್ಷರಗಳ ಪುಟದೊಡಲಿನಲಿ ಅಕ್ಷಯರೂಪದ ಮಹಿಮೆ ಅಧ್ಯಯನ ಸ್ವರೂಪಿಯಾದುದು.  ಅರ್ಥವಂತಿಕೆ ಮಾತ್ರ ಜೀವನ ರೂಪಿಸುತ್ತದೆ ವ್ಯವಹಾರಿಕರ ಹಿನ್ನಲೆಯ ಬಿಳಿನೆರಳಲ್ಲ..
ಬನ್ನಿ ಯೋಗ್ಯವಾದುದನ್ನು ಆರಿಸಿಕೊಳ್ಳುವ.- ಅಂಕುರ

ಬುದ್ಧಿವಂತ ಯೋಚಿಸುತ್ತಾನೆ, ದಡ್ಡನಾದವ ಅನ್ವಯಿಕೊಳ್ಳುತ್ತಾನೆ- ಹಿರಿಯರ ಮಾತು

ಗುರುವಾರ, ಜುಲೈ 20, 2017

ಬ್ರಹ್ಮಕಮಲ ಅರಳುವ ಸಮಯ
ಇದು ಹೂವು,
ರಾತ್ರಿಯ ರಾಣಿ ಮೌನ ವಾಣಿ
ವಿಷ್ಣುವಿನ ನಾಭಿಯಲಿ
ಬ್ರಹ್ಮನ ದರ್ಶನ ತಂದು
ಇರುಳು ಲೋಕದಿ
ಚಂದ್ರ ರೂಪ ತಾರೆ

ಬ್ರಹ್ಮ ಕಮಲ ಅರಳುವ ಸಮಯ
ಸ್ವರ್ಗರೂಪವೇ ತೆರೆಯುವ ಮಾಯ
ವಿಶ್ವ ಲೋಕ ನಾಭಿ
ದಳದ ಎಳೆಯಲಿ ಅಣುವಿನ ಕಣಗಳ
ಕಾಮ ಕಾವ್ಯ ಕವಿಸಮಯ

ಪತ್ರದ ಪುತ್ರ ಏನೀ ಸೂತ್ರ
ಪತ್ರದಿಂದಲೇ ಪೂರ್ಣ ಪವಿತ್ರ
ಔಷಧ ರೂಪ, ದೈವ ಸ್ವರೂಪ
ಕುಬೇರನ ತರುವ ಜೀವ ದ್ರವ್ಯ
ಹಿಮಾಲಯ ಎಲ್ಲೇ
ನೀ ಇಲ್ಲಿ ಅಲ್ಲಲ್ಲಿ..
- ಅಂಕುರ


ಮಂಗಳವಾರ, ಜುಲೈ 18, 2017



ಜೀವನ ಪ್ರೀತಿಯ ಸತ್ಯಗಳಲ್ಲಿ ಕುವೆಂಪು ಅವರ ಪಕ್ಷಿಕಾಶಿಯ ಅನನ್ಯತೆ! 
-ಅಂಕುರ
ಈ ಕಿರುಬರಹದ ಧನ್ಯತೆಯನ್ನು ನಮ್ಮ ನಡುವಿನ ಸಾಧಕರತ್ನ ಡಾ.ಕೆ.ಎನ್ ಬಸವರಾಜು ಅವರಿಗೆ ಸಹೃದಯ ಅರ್ಪಣೆ.

ಪ್ರಕೃತಿಯೊಂದಿಗೆ ಆಧ್ಯಾತ್ಮ ಚಿಂತನೆಗಳನ್ನು ಸಮೃದ್ಧಗೊಳಿಸಿದ ಕನ್ನಡದ ಶ್ರೀ ಸಾಮಾನ್ಯ ಚಿಂತನೆಯ ಕವಿ ಕುವೆಂಪು.
ಜಗತ್ತನ್ನು ನಿಸರ್ಗದೊಂದಿಗೆ ಅನುಸಂಧಾನ ಮಾಡುತ್ತಾ ಮನುಷ್ಯನ ಬದುಕಿನ ಅರ್ಥಗಳನ್ನು ನಿರೂಪಿಸಿದವರು. ಅಂತಹ ಒಂದು ಕವಿತೆ ಪಕ್ಷಿಕಾಶಿಯಲ್ಲಿ ಕವಿಯ ಕಾವ್ಯ ಸಾಮರ್ಥ್ಯದ ನೈಜ ಕೈಪಿಡಿ ರೂಪಿಸಿದೆ ಅದೇ ಆನಂದ ಮಯ ಈ ಜಗ ಹೃದಯವೆನ್ನುವ ಸಾರ.
ಪ್ರತಿಯೊಬ್ಬ ಶ್ರೀ ಸಾಮಾನ್ಯನೂ ನಿಸರ್ಗದೊಂದಿಗೆ ಬದುಕನ್ನು ಸವಿಯುವ ಸುಂದರ ಚೈತನ್ಯ ಶಕ್ತಿ ಇಲ್ಲಿದೆ.
ನಿಸರ್ಗವೆಂಬುದು ಹಗಲಿನ ಸೂರ್ಯ ಬೆಳಕಲ್ಲಿ, ಚಂದ್ರನ ಇರುಳು ತಂಪಿನಲ್ಲಿ ಅಮೂರ್ತವಾದ ಆನಂದಧಾಮ. ಇದರಲ್ಲಿ ಸಕಲ ಜೀವಿಗಳೂ ಬದುಕುತ್ತಿವೆ, ಆಹಾರ ಹುಡುಕುವ, ಸಂತಾನ ಹಾಗೂ ವಂಶೋಭಿವೃದ್ಧಿಯ, ಹಾಗೂ ಮುಪ್ಪಿನ ನಿಸರ್ಗ ತಹ ಜನನದಂತೆ ಮರಣವನ್ನು ಕಾಣುವ ಆಹಾರ ಸರಪಳಿಯ ರೂಪವಿದೆ. ಮನುಷ್ಯನೂ ಒಂದು ಜೀವಿ! ಆದರೆ ಈತನ ಬದುಕು ಮಾತ್ರ ಸವಿಯುವ ಸೌಜನ್ಯತೆಯಿಂದಿಲ್ಲ. ಅದಕ್ಕೆ ಕವಿತೆ ಬದುಕುವ ಕಲೆಯ ಪಾಠವನ್ನು ಹೇಳುತ್ತಿದೆ. ನಿಸರ್ಗದಲ್ಲಿ ಅಭಿವ್ಯಕ್ತಗೊಳ್ಳುವ ಯಾವ ಬಗೆಯೂ ಅಪಾಯಕಾರಿಯಾದುದಲ್ಲ, ವಿಕೋಪವೂ ಅಲ್ಲ ಅದೊಂದು ಸಹಜ ಕ್ರಿಯೆ ಅದರೊಂದಿಗೆ ಹೊಂದಿಕೆಯ ಅನುಸಂಧಾನ ಮುಖ್ಯವೆಂದಿದ್ದಾರೆ.ಅದನ್ನೇ ಸೂರ್ಯನು ಬರಿ ರವಿಯಲ್ಲ ಅವನೊಂದು ವಿಜ್ಞಾನದ ಬೀಜ, ನಕ್ಷತ್ರ ಸ್ವರೂಪಿ, ಬೆಳಕಿನ ಅಭೇದ್ಯ ನೈಸರ್ಗಿಕ ಸೃಷ್ಠಿ ಆ ಭ್ರಾಂತಿಯನ್ನು ಅರಿಯುವ ಅಗತ್ಯವಿದೆ.
ರವಿವದನವಾದ ಈ ಜಗತ್ತಿನಲ್ಲಿ ಶಿವ ಸಾಕ್ಷಾತ್ಕಾರವಿದೆ. ಇಲ್ಲಿ ಶಿವ ಹಾಗೂ ಈಶ್ವರ ಬೇರೆ ಬೇರೆ. ಶಿವನೆಂದರೆ ಸರ್ವ ದೈವ ಸ್ವರೂಪಿ. ಅವನಿಗೆ ಪೋರೋಹಿತ ಬಂಧನವಿಲ್ಲ, ಆಡಂಬರದ ಶ್ರೀಮಂತಿಕೆಯಿಲ್ಲ, ಹೆಣ್ಣು ಗಂಡೆಂಬ ಲಿಂಗಭೇದವಿಲ್ಲ. ಸ್ಥಾವರವಿದ್ದರೂ ಅದೊಂದು ನಿಸರ್ಗರೂಢವಾದುದು. ಅದು ಕಲೆಯ ಬಲೆಯು.. ಕಲಾವೃತವಾದ ಕವಿಸಮಯ ಸ್ವರೂಪಿ. ಪ್ರತಿಜೀವಿಯೂ ಅದರ ಅಂಗ. ಇದು ಈ ರೀತಿ ಆಳದ ಸೌಂದರ್ಯವನ್ನು ಸಾಕ್ಷೀಭೂತವಾಗಿಸಿದೆ. ಆದರೆ ಅದನ್ನು ನೋಡುವ ಕಣ್ಣು ಕವಿಸಮಯದ ಕೈಪಿಡಿಯ ದರ್ಶನದಂತಿರಬೇಕು. ಸಾಮಾನ್ಯ ನೋಟಕ್ಕೆ ಇಲ್ಲಿ ಯಾವ ಸೌಂದರ್ಯವೂ ದಕ್ಕದು ಅದೊಂದು ಶವಮುಖದಂತೆ. ಸದಾ ಹಸನ್ಮಖಿ ಆದರೆ ನಿರ್ಜೀವ ಸಾಕ್ಷಿ. ಅದು ಮನುಷ್ಯ ಬದುಕಿನ ಸ್ವರೂಪವಲ್ಲ. 
ಉದಯವೆಂಬುದು ಕುವೆಂಪು ಕಾವ್ಯಕ್ಕೆ ಅನ್ವರ್ಥ. ಇಲ್ಲಿನ ಉದಯ ಕಾಣುವ ಬಗೆಯನ್ನು ತಿಳಿಸುತ್ತದೆ. ನಿಸರ್ಗದ ಪ್ರತಿಕ್ಷಣವೂ ಹಲವು ಉದಯಗಳ ಪ್ರಾರಂಭವನ್ನು ಸಂಖ್ಯೇತಿಸುತ್ತದೆ. ಅದನ್ನು ಕಾಣುವ ಹೃದಯ ನಮಗಿರಬೇಕು ಅದನ್ನು ಒಳಗಣ್ಣು, ಆತ್ಮ (ಮನಸ್ವರೂಪ) ಎನ್ನಬಹುದು. ಕವಿ ಈ ಜಗತ್ತಿನ ವ್ಯಾಪಾರವನ್ನು ರಸೋವೈಶಃವಾಗಿ ಕಾವ್ಯದ ಕಣ್ಣನ್ನು ತೆರೆದಿದ್ದಾರೆ.ಇದನ್ನು ಅಮೃತದ ಹಣ್ಣಾಗಿಸಲು ಪ್ರತಿ ಚರಾಚರದಲ್ಲೂ ಶಿವನ ಕಾಣುವ ಸೌಜನ್ಯತೆಬೇಕು ಏಕೆಂದರೆ ಈ ಜಗತ್ತು ಶಿವನ ಸದನ ನಾವೆಲ್ಲಾ ಇಲ್ಲಿ ಸದಸ್ಯರು, ಭಕ್ತರು, ಶ್ರೀ ಸಾಮಾನ್ಯ ಸಹೃದಯರು ಕಣ್ ತೆರೆದು ಕಲೆಯನ್ನು ವಿಜ್ಞಾನದೊಡನೆ ಮೇಳೈಸಿ ಕಾಣಬೇಕು. ಆನಂದಮಯ ಈ ಜಗಹೃದಯ ನೀ ಹರ್ಷಕಾಣು ಭಯವೇಕೆ ಅನಂತತಮನಾಗು ಎನ್ನುವರು ಕವಿ ಕುವೆಂಪು. ಇಂತಹ ಕಾವ್ಯ ವೈಖರಿ ಹೃದಯದೊಳಗಿನ ಪಕ್ಷಿಗೆ ಅಕ್ಷಿಯ ನೋಟವನ್ನು ತೆರೆದು ಕಾಶಿಯನ್ನೇ ಕೈಲಾಸವಾಗಿಸಿದ ನಮ್ಮ ನಿಸರ್ಗವನ್ನು ನಾವೆಲ್ಲಾ ಏಕತಾನತೆಯಲ್ಲಿ ಸವಿಯೋಣ!
ಸವಿಯ ಸಿಂಚನದಲ್ಲಿ ಹಲವು ಸಾಧಕರ ಕಿರಣ ಸ್ವರೂಪಿ ಕೃಷಿ ತತ್ವ ನಮ್ಮ ನಡುವೆ ದಾರಿ ದೀಪಗಳ ಸಹ ಇರುವುದು ಹರ್ಷನೀಯ  - ಅಂಕುರ





ಸೋಮವಾರ, ಜುಲೈ 17, 2017

ಜೀವನಪ್ರೀತಿ ಅನುಸರಿಸುವ ಹಕ್ಕು

ಜೀವನಪ್ರೀತಿ ಅನುಸರಿಸುವ ಹಕ್ಕು

ಮನುಷ್ಯನಿಗೆ ಸ್ವಾಭಿಮಾನ ಮುಖ್ಯವಾಗಿ ತನ್ನ ಸಖ್ಯದ ಬದುಕನ್ನು ತಂತಿಯ ಮೇಲೋ
ಮುಳ್ಳಿನ ಮೇಲೋ ಸಾಗಿಸುತ್ತಾನೆ.

ಇಲ್ಲಿ ಸಂಬಂಧ, ಜಾತಿ, ರೀತಿ ನೀತಿಗಳನ್ನು ಮೀರಲಾಗದ, ಮೀರಿದ್ದೇ ಮಹಾ ಹೀನಾಯವಾಗುವ ಜಡಬೇರುಗಳು ಕೂಡ ಇವನ ಹೆಗಲೇರುತ್ತವೆ.

ಇಂತಹ ಸಂದರ್ಭದಲ್ಲಿ ಹಳೆಯಬೇರುಗಳಿಗೆ ನಲುಗಿಹೋದ ಹೊಸ ಚಿಗುರುಗಳು ಇಂತಹ ಸಾಕ್ಷ್ಯಾಧಾರ.

ಇಲ್ಲಿ ಹೆಣ್ಣು ಗಂಡು ಮದುವೆ ಆಗಲೇಬೇಕಾ! ಆಗದಿದ್ದವರ ಕಥೆಗಳೇನು..
ಮನಸ್ಸಿನ ತೀರ್ಮಾನಗಳೇನು! ಅಬ್ಬಾ! ನಾವು ಗೋಡೆ ಬರಹಗಳಾಗಿದ್ದೇವೆ ಓದಲು ಚೆಂದ ಅದರಲ್ಲಿ ಬದುಕಿನ ಆನಂದ ಸಖ್ಯ ಸ್ವಲ್ಪ ಕಷ್ಟತಮ.

ಬದುಕನ್ನು ಹೋರಾಟದ ವಿಧಿ ನಾದದಲ್ಲಿ ಕೊಂಡೊಯ್ಯುವ ಹಕ್ಕಿರುವ ಪ್ರತಿ ಮನುಷ್ಯ ಸಮಾಜದ ಕೊಂಕಿಗಳಿಗೆ ಹೆದರುವ ಅಗತ್ಯವಿಲ್ಲ. ಸಮಾಜ ರೂಪಿಸಲ್ಪಟ್ಟಿದ್ದೇ  ಹೊರೆತು ಸೃಷ್ಟಿ ಅಲ್ಲ. ಮದುವೆ ಒಂದು ಉತ್ತಮ ಆಯ್ಕೆ, ಸ್ಪಷ್ಟವಾದ ಅಲೋಚನೆ ಅದರ ವಿಧಿ..
ಜಾತಿ ನೆಪಗಳಲ್ಲಿ ಇನ್ನು ಬೇಯುವ ಅಗತ್ಯವಿಲ್ಲ. ದುಡಿಯುವ ಮನಸ್ಸಿಗೆ ಬದುಕುವ ಕಲೆಗೆ ಜಾತಿ ಎಂದಿಗೂ ನೆರವಾಗಿಲ್ಲ.. ಆಗಂತ ಜಾತಿ ಕೆಟ್ಟದ್ದು ಅಲ್ಲ, ಅದೊಂದು ಹಿಂದಿನಿಂದ ಆಚರಿಸಲ್ಪಟ್ಟದ್ದು. ಅದಕ್ಕೆ ಶರಣಾಗುತ್ತಾ ಸಾಗುವ ಹೆಜ್ಜೆ ಹೆಜ್ಜೆಯ ಸಂಬಂಧಗಳಲ್ಲೂ ಊಹಿಸಲಾರದಷ್ಟು ಗಾಯಗಳಿವೆ..
ಬದುಕು ಒಂದು ಆಯ್ಕೆ. ಗೆಲ್ಲುವ ಧೀಮಂತಿಕೆ ನಮ್ಮನ್ನು ಸದಾ ಹರ್ಷಗೊಳಿಸುತ್ತದೆ. ಸೋಲನ್ನು ಎಂದಿಗೂ ಒಪ್ಪಿಕೊಳ್ಳುವ ಅಗತ್ಯಕ್ಕೆ ಸಿಲುಕಬಾರದು..
ಕೆಲವೊಮ್ಮೆ ಕೆಲವು ಅನಿವಾರ್ಯಗಳಿಗೆ ರಾಜಿಯಾಗುತ್ತಾ ಅದರಾಚೆಗೆ ಅತಿಬೇಗ ಬರುವ ಲಘಿಮಾಕೌಶಲ ಕಲೆಯ ಅರಿವು ಬೇಕು.

ಸೋತ ಕಗ್ಗಸಾರ, ನುಡಿಯಾದ ಗುರುಪಾಠ ಇವೆಲ್ಲವೂ ಪ್ರಮಾಣಿಕತೆಗೆ ಒದಗಿದ ಅತ್ಯಂತ ಹೀನಾಯ ಸೋಲುಗಳು. ಆದರೆ ನಿಜವಾಗಿಯೂ ಸಮಾಜ ಗೆದ್ದಿರುವುದು ಸ್ವತಂತ್ರ ಆಯ್ಕೆಯ ಪ್ರಾಮಾಣಿಕ ಸತ್ವದಲ್ಲಿ ಮಾತ್ರ.
ಅದನ್ನು ಜೀವನಪ್ರೀತಿ ಎನ್ನೋಣ...
ಯಾವುದೇ ಜೀವಿ ಇಲ್ಲಿ ಸುಂದರವಾಗಿ ಬದುಕನ್ನು ಸಾಗಿಸುತ್ತಿದೆ ಎಂದು ಗಮನಿಸಿದಾಗ ಅದಕ್ಕೆ ಜೀವನಪ್ರೀತಿಯೇ ಮೂಲಾಧಾರ. ಈ ಜಾತಿ, ಅಪ್ರಮಾಣಿಕ ಹಠಗಳು, ಹಿರಿತನದ ಜಡ್ಡು ಕಟ್ಟಳೆಗಳು ಬದುಕನ್ನು ರೂಪಿಸಲಾರವು ಅವು ನಮ್ಮನ್ನು ಸದಾ ಒಂದು ಬಂಧನದೊಳಗೆ ಕಾಣಲು ಯತ್ನಿಸುವ ಅಚರಣೆಗಳಾಗಿವೆ ಅಷ್ಟೇ.
ಬದುಕಿಗೆ ಜೀವನಪ್ರೀತಿ ಮೂಲತಳಹದಿ. ಇದರಿಂದ ಆಯ್ಕೆ ನಮ್ಮ ಸ್ವತಂತ್ರ, ಅಲೋಚನಾ ಪರವಾದ ಹಕ್ಕು. ಅನಿವಾರ್ಯತೆಯಲ್ಲ.

ಉದ್ಯೋಗ, ಆನಂದ, ನೆಮ್ಮದಿಯ ನಲ್ಮೆತನಗಳಿಗೆ ಜೀವನಪ್ರೀತಿ ಒದಗಿಸೋಣ ಇಲ್ಲಿ ಗೆದ್ದವರಿಗೆ, ಪ್ರಮಾಣಿಕತೆಗೆ ಎಂದಿಗೂ ಗೌರವ ಇದೆ.

ಹೀಗೂ ಸಾಗೋಣ ಬನ್ನಿ - ಅಂಕುರ

ಬುಧವಾರ, ಜೂನ್ 21, 2017

ಅವಳೆಂದರೆ..
ಅವಳೆಂದರೆ ಗರಿಕೆಯ ಹಾಗೆ
ಕಸವೆಂದರೂ ಪೂಜಿಸುವ
ಅಲಂಕಾರ ದ್ರವ್ಯ,
ಕಿತ್ತರೂ ಚಿಗುರುವ
ಜೀವಂತಕಾವ್ಯ.
-ಅಂಕುರ

ಭಾನುವಾರ, ಜನವರಿ 15, 2017

ಅನ್ನದೇಗುಲದೊಳಗೆ
ನಿನ್ನ ನಾ ಕಾಣುತಿಹೆ
ನಿನ್ನೊಳಗೂ ನಾ ಕಾಣಬಹುದೇ!

ನನ್ನೆದೆಯ ಇತಿಹಾಸ
ನಿನ್ನೆದೆಗೆ ಮಧುಪ್ರಾಸ
ಬಡತನವೆ ಇರಲಿ
ಬಾಳ ಕೊನೆಗೆ..

ಎಲ್ಲದೇವರನಿಲ್ಲಿ
ಆಯ್ದು ಹುಡುಕುತಲಿರುವೆ
ನನ್ನ ಜೀವದ ದೇವ
ನೀನೆ ಇಲ್ಲಿ..

ಕುರುಡೆಂಬ ಕತ್ತಲೆಗೆ
ಬರಡು ಬೀಜವ ಬಿತ್ತಿ
ಇದು ಜೀವದೆರಡು
ಸೊಲ್ಲು ಕೇಳು ಇಲ್ಲಿ

ನಾ ನಿನಗೆ ನೀ ನನಗೆ
ನಿನ್ನಾಗೆ ನನ್ನನಗೆ
ಇರಲಿ ಬಿಡು ಬೆವರೂಟ
ಈ ಬಾಳ ಪದಿಗೆ..
- ಅಂಕುರ

*ಎನಿಸುತ್ತದೆ*

 ಒಬ್ಬನೇ ಏಕಾಂತ
ವಹಿಸೋಣ
ಎನಿಸುತ್ತದೆ,

ಯಾರಿಗೂ ಅರ್ಥವಾಗದ
ದನಿಯ ನಿಲ್ಲಿಸೋಣ
ಎನಿಸುತ್ತದೆ,

ನಮ್ಮನ್ನೇ ನಾವು
ನೀಡುತ್ತಾ ಬೇಡುತ್ತಾ
ನನ್ನನಿಮ್ಮೊಳಗೆ
ಕಾಣಲೊರಟ ಎನಗೆ
ನನ್ನ ತನವನ್ನೇ
ಕ್ಷಣ ನೋಡದೆ, ಕಾಡದೆ..
ನಮ್ಮವರೆಲ್ಲ
ದೂರವಾಗುವಾಗ
ನನಗೆ ನಾನೇ
ಅನರ್ಥ
ಎನಿಸುತ್ತದೆ

ಆ ಕಾಡಿನ ಆ ಕೂಗಲಿ
ಒಬ್ಬನೇ ಸುತ್ತುವ ಪರಿಯು
ನೀರಲಿ ಬೆರಳುಗಳ
ಅರಳಿಸುವ ಆ ಹೊಳಪು
ನನ್ನ ಪೂರ್ಣ ರಾಜ್ಯ
*ನಾನಲ್ಲಿ ಮೌನಿ, ಚಿರಸುಖಿ*.
-ಅಂಕುರ

ಸೋಮವಾರ, ಅಕ್ಟೋಬರ್ 3, 2016

@4
ರನ್ನ ಕವಿ ಪ್ರಶಸ್ತಿ
ಪ್ರಸ್ತುತ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಗೊಳಿಸಿರುವ ಈ ಕೃತಿಯನ್ನು 1928ರ ಕಾಲಘಟ್ಟದಲ್ಲಿ ಮೈಸೂರಿನ ವಿಶ್ವವಿದ್ಯಾಲಯ ಸಂಘ ಪ್ರಕಟಗೊಳಿಸಿತ್ತು. ಈ ಕೃತಿಗೆ ತನ್ನದೇ ಆದ ಐತಿಹಾಸಿಕ ಮಹತ್ವವಿದೆ. ಒಬ್ಬ ಕವಿಯನ್ನು ಕುರಿತು ಹಲವು ಸಾಹಿತ್ಯ ವಿದ್ವಾಂಸರು ಲೇಖನಗಳನ್ನು ರಚಿಸಿ ಮೊದಲಬಾರಿಗೆ ಕವಿ ಹಾಗೂ ಕೃತಿ ಕೇಂದ್ರಿತ ವಿಮರ್ಶೆಯನ್ನು ಮಂಡಿಸಿದ್ದಾರೆ. ಅಂತಹ ಅಧ್ಯಯನಕ್ಕೆ ಒಳಗಾದ ಕನ್ನಡದ ಮೊದಲ ಕವಿ ರನ್ನನಾಗಿದ್ದಾನೆ. ಪಂಪ ಕವಿ ಕುರಿತು ಇದೇ ಮಾರ್ಗದಲ್ಲಿ ಮುಳಿಯ ತಿಮ್ಮಪ್ಪಯ್ಯ 1938ರಲ್ಲಿ ನಾಡೋಜ ಪಂಪ ಕೃತಿ ಹೊರತಂದರು.  ಮುಖ್ಯವಾಗಿ ಕೃತಿ ವಿಮರ್ಶೆ ನೀಡುವುದು  ಇಲ್ಲಿನ ಉದ್ದೇಶವಲ್ಲ. ಮುಖ್ಯವಾಗಿ ರನ್ನಕವಿ ಪ್ರಶಸ್ತಿ ಕೃತಿಗೆ ಬರೆದಿರುವ ಮುನ್ನುಡಿ ಬರಹ ಶತಮಾನಕೂ ಸಲ್ಲುವ ಸಾಹಿತ್ಯ ವ್ಯಾಖ್ಯಾನವನ್ನು ಬಿ.ಎಂ.ಶ್ರೀ ಕಂಠಯ್ಯ ನೀಡಿದ್ದಾರೆ. ವಿಮರ್ಶೆ ಎಂದರೇನು?, ವಿಮರ್ಶಕನು ಯಾವ ಜ್ಞಾನವನ್ನು ಹೊಂದಿರಬೇಕು?, ಸಾಹಿತ್ಯ ಸೃಷ್ಠಿಗೆ ಇರಬೇಕಾದ ಭಾಷಾ ಚಿಂತನೆ., ಉತ್ತಮ ಸಾಹಿತ್ಯ ಗುರ್ತಿಸುವಲ್ಲಿ ವಿಮರ್ಶಕನ ಪಾತ್ರ, ಈ ಅಂಶಗಳು ಚರ್ಚೆಯಾಗಿವೆ. “ಕನ್ನಡ ಕಾವ್ಯ ರಾಶಿಯನ್ನು ಹೊರಕ್ಕೆ ತಂದು ಹೆಮ್ಮೆಪಟ್ಟದ್ದಾಯಿತು. ಈಗ ಬೇಕಾಗಿರುವುದು ಅದರ ಯೋಗ್ಯತೆಯನ್ನು ಗೊತ್ತು ಮಾಡುವ ವಿಮರ್ಶೆ. ಜಳ್ಳನ್ನು ತೂರಿ, ಕಾಳನ್ನು ತುಂಬಿಕೊಳ್ಳಬೇಕಾಗಿದೆ ಈಗ, ಸಾಹಿತ್ಯ ಕಲಾ ಪುತ್ರರ ಆತ್ಮ ಪುಷ್ಟಿಗಾಗಿ”.
(ಕೃತಿ ಕುರಿತ ಅಧ್ಯಯನ ನನ್ನ ‘ವಿಮರ್ಶೆಯ ಕಾವು’ ಲೇಖನದಲ್ಲಿ ತಿಳಿಯಬಹುದು)

 ಕೈಬುಟ್ಟಿಯ ಕ ನಸುಗಳು


ವಿನಃ ನಾಯಕ
      ವಿನಾಯಕನನ್ನು ದೇವರಿಗೆಲ್ಲಾ ಮೊದಲ ಪೂಜಿತನೆಂದುನೆಂದು ಧರ್ಮ ರೂಪಿಸಿಕೊಂಡಿದ್ದೇವೆ. ಅಂತೆಯೇ ವರ್ಷಕ್ಕೊಮ್ಮೆ ತಾಯಿ ಮಗನ ಪೂಜಿಸಿ ಹರ್ಷ ಪಡುತ್ತೇವೆ.
     ಅತ್ಯಂತ ಹೆಚ್ಚಾಗಿ ಸಮಾನ ಭಕ್ತಿ, ಶ್ರದ್ಧೆ ಪಡೆಯುವ ದೇವರು ವಿನಾಯಕನೇ ಇರಬೇಕು. ಆದರೇ ಕಡುಕಷ್ಟವಯ್ಯಾ ನಿನ್ನ ಆರಾಧನೆಯೆಂದು ಒಂದು, ಮೂರು, ಐದು, ಹನ್ನೊಂದು ಮತ್ತೆ ಊರಿನ ಭಕ್ತರು ಕಾಣಿಕೆ ಹೆಚ್ಚಿದಂತೆ ಬೆಸಸಂಖ್ಯೆಯ ದಿನದೂಡಿ ಸಂಭ್ರಮಿಸಿ, ಕೆಲವು ಕಡೆ ಆಟ, ಹಾಡು ಎಂದಾದರೆ ಮತ್ತೆ ಅದೇ ಮಹನೀಯರು ಸಿನಿಮಾ ಹಾಡಿಗೆ ಹುಚ್ಚರಂತೆ ಒನ್ಸಮೋರ್ ತೆಲುಗು ಅನ್ನುವ, ನಿದ್ರೆಯ ಪಾನಂಧತೆಯಲ್ಲೇ ನೀರಿನೊಳಗೆ ಗಣಪತಿ ಬಪ್ಪ ಮೋರಿ ಯಾ ಅನ್ನುವ ಭಕ್ತರ ಬೇಡಿದ್ದನೇ ಕೊಡುವ ಈ ವಿನಾಯಕ ವಿನಃ ನಾಯಕನೇ ಇರಬೇಕು. ಎ. ಎನ್ ಮೂರ್ತಿರಾವ್ ದೇವರು ಕೃತಿ ರಚಿಸಿದ್ದು ಸಾರ್ಥಕವೇ? ಅದನ್ನು ಓದಿ ಚೆಂದ ಈ ಚಂದ ಲೈಫ್ ಅನ್ನುಕೊಂಡವರ ಅವರವರ ವಿನಾಯಕನೇ ಕಾಪಡಬೇಕು.
ತಿಲಕ್ ಅವರಿಗೆ ಕಾಲಜ್ಞಾನ ತಿಳಿದಿದ್ದರೆ ಸ್ವಾತಂತ್ರ್ಯ ಸಂಘಟನೆಗೆ ಬೇರೆಯೇ ಯೋಚಿಸುತ್ತಿದ್ದರು ಅಲ್ಲವೇ!
ಗುರುಸಮಾಜ ಪರಿವರ್ತನ
       ಸಂವಿಧಾನದ ಪೀಠಿಕೆಯಲ್ಲೇ ಜಾತ್ಯಾತೀತ ಘೋಷಿಸಿಕೊಂಡ ಸರ್ವಧರ್ಮ ಅಭಿವೃದ್ಧಿಶೀಲ ಭಾರತೀಯರು ನಾವು.
ಜಾತಿ ಕಾಲಂ ಇಲ್ಲದ ಯಾವುದಾದರೂ ಅಪ್ಲಿಕೇಷನ್ ಉಂಟೇ! ಜಾತಿ ಸಂಬಂಧ ಅನ್ನೋ ಕರಳು ಜೀವಾತ್ಮಕ ಒಗ್ಗಟ್ಟಿನ ಸಂಕೇತವಾಗಿ ಪರಂಪರೆಯಿಂದ ಬಂದಿರೊದು ಸಹಜ.
ಜಾತಿ ನಾಶವಾಯಿತು
ತೊಡುವ ವೇಷವಾಯಿತು
ಅನ್ನೋ ತರಾ ತರಗತಿ ಗುರುಗಳ ಬದುಕು ಕೂಡ. ಜಾತಿ ಧರ್ಮದ ಆಚೆ ನಿಂತು ಯೋಚಿಸೋ ಪಾಠಗಳನ್ನೇ ಭ್ರಮಾಪತಂಗಗಳಿಗೆ ರಸವತ್ತಾಗಿ ಉಣಬಡಿಸೊ ಗುರುಗಳು ‘ಎಸ್ಸಿ ಎಸ್ಟಿಯರೋ ಸ್ವಲ್ಪ ಎದ್ದು ನಿಲ್ರಪ್ಪಾ ನಿಮ್ಮ ಲಿಸ್ಟ್ ಬರಕೋಬೇಕು’ ಅನ್ನೋ ಜ್ಯಾತ್ಯತೀತತೆ ಗುರುವೃತ್ತಿ ಸಮೀಕ್ಷೆ ಫಾರಂ ಹೊತ್ತು ಮನೆ ಮನೆ ಅಲೆದು ಜಾತಿ ಆದಾಯ ಬರೆದು ಸುಸ್ತಾದವರ ಕಥೆಯನ್ನಾದರೂ ಪಠ್ಯ ಮಾಡಬಾರದೆ!
ಜಾತಿನೂ ಕೆಲವರಿಗೆ ಲಾಭ ಮಾಡೋದಾದ್ರೆ ಬಲಿ ಆಗೋ ಪ್ರಾಣಿ ಯಾವುದಾದ್ರೆನು.. ಅಲ್ಲವೇ!
ಆತ್ಮ -ಜ್ಞಾನ
      ಆತ್ಮ ಎಂಬ ವಿಚಾರ ಒಂದು ಪಂಥಕ್ಕೆ ಅನ್ನುವ ಮಾತಾಗಿದೆ. ಸದಾ ವೃತ್ತಿಯಲ್ಲೆ ತೊಡಗಿ ಆ ಜಂಜಾಟಕ್ಕೆ ಲೀನವಾದವರ ಮುಂದೆ ಇದೊಂದು ಒಣ ಹರಟೆ. ಆದರೆ ಅವರ ಬದುಕೆ ನಿಜವಾದ ಆತ್ಮಜ್ಞಾನ ಅಂತ ತಿಳಿಸೋದು ಹೇಗೆ! ನಮ್ಮ ಭಾಷಣಕಾರರು ವೇದಿಕೆಯಲ್ಲೇ ಚಿಂತಿಸೋದು ಆದ್ರೆ ಆತ ಇಲ್ಲಿಗೆ ಬರಲಾರ.
ಸಿನಿಮಾ ಹಿಂದೆ
      ಸಿನಿಮಾ ಅನ್ನೋ ಬಣ್ಣದ ಲೋಕದ ಹಿಂದೆ ಸಾವಿರಾರು ಜನ ಪರಿಶ್ರಮ ಇದೆ ಅಂತ ಎಲ್ಲರಿಗೂ ಗೊತ್ತಾಗಬಹುದು. ಆದ್ರೆ ಅವರ್ಯಾರು ಮುಖ್ಯ ಆಗ್ಲೇಯಿಲ್ಲ. ಕೆಲವರು ಕಾಣ್ತಾರೆ ಕೆಲವರು ಕಾಣೋಲ್ಲ. ಇವರೆಲ್ಲಾ ಕಾವಲುಗಾರ ಇದ್ದಾಂಗೆ ದೇಶ ಆಗ್ಲಿ ಮನೆ ಆಗ್ಲಿ. ಬಿ.ಎಂ ಪುಟ್ಟಯ್ಯ ಗುರುಗಳು ಪಾಠದಲ್ಲಿ ಹೇಳಿದ್ದು ನೆನಪಿದೆ ರಾಜನ ಹೊತ್ತು ಕುದುರೆ ಬರುತ್ತೆ ಹೊರೆತು ರಾಜ ಎಂದಿಗೂ ಬರಲಾರ ಅವನು ಕುಳಿತಿರುತ್ತಾನೆ. ಸಮಾಜದ ರಚನೆಯೇ ಹೀಗೆ ಕಾಣುತ್ತೆ ಅನಿಸುತ್ತದೆ.
ಭಾಷೆ
     ನಾವು ಕಲಿಯುವ ಭಾಷೆಗೆ ಇದೇ ಸರಿಯಾದ ಉತ್ತರ ಅಂತ ಹೇಳಿಕೊಂಡು ಬರಲಾಗುತ್ತಿದೆ. ನಾವು ಕೊದುವ ಹೆಸರು, ಸಂಖೇತ, ಕಾರ್ಯ ಇದೆಲ್ಲಾ ನಾವು ಗ್ರಹಿಸಿರೋ ರೀತಿ ಅಲ್ಲವೆ, ಇದು ತಿಳಿದಿದ್ದರೂ ಪರಂಪರೆಯಂತೆ ಮುಂದುವರೆಸುತ್ತಿದ್ದೇವೆ. ಗ್ರಹಿಕಯಲ್ಲೇ ವಿಶ್ವದ ವಿಶ್ವಾಸ ಗಳಿಸೋ ಅದಷ್ಟೋ ಅಂಧರ ಗ್ರಹಿಕೆಗಳಿಗೆ ನಮ್ಮ ಕಲ್ಪನಾ ಭ್ರಮೆಗಳನ್ನೇ ಹೇರುತ್ತಿದ್ದೇವೆ ಅನಿಸುವುದಿಲ್ಲವೇ. ಬದಲಿ ಯೋಚಿಸಬಹುದು ಅನಿಸಿದರೂ ಅದು ಕೂಡ ಅಮುಖ್ಯ ಅನಿಸಬಹುದು ಎಕೆಂದರೆ ಕಾರ್ಯ ಮುಖ್ಯವೇ ಹೊರೆತು ವಸ್ತು.ವ್ಯಕ್ತಿ.ಹೆಸರು ಇವೆಲ್ಲಾ ಈ ಅಲೋಚನೆಯಲ್ಲಿ ಶೂನ್ಯ ಆಗಬಹುದು.
ಮಗುವಿನ ಆಯ್ಕೆ
      ಮಕ್ಕಳ ಆಯ್ಕೆಯ ಸ್ವಾತಂತ್ರವನ್ನು ನಾವು ದೊಡ್ಡವರು, ತಿಳಿದವರು, ಏನೇನೆಲ್ಲಾ ಭಾವನೆಗಳೊಂದಿಗೆ ಕಿತ್ತುಕೊಂಡು ನಮ್ಮ ಭ್ರಮೆಗಳನ್ನೆ ಹೇರುತ್ತಿದ್ದೇವೆ ಅನಿಸುತ್ತದೆ. ಮಕ್ಕಳು ತಮಗಿಷ್ಟದ ಹೆಸರು, ಧರ್ಮ-ಜಾತಿ, ಬದುಕುಗಳನ್ನು ಸಮಾಜಮುಖಿಯಾಗಿ ಪ್ರೌಢವಾಸ್ಥೆಯ ನಂತರ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ ನೀಡಬಹುದಲ್ಲವೇ.. ಮನುಷ್ಯ ಪ್ರಾಣಿ ಬಿಟ್ಟು ಉಳಿದೆಲ್ಲಾ ಪ್ರಾಣಿಗಳು ಸಾಮಾನ್ಯವಾಗಿ ನೀಡಿರಬಹುದೆನಿಸುತ್ತದೆ. ಆದರೆ ಇತ ಮನುಷ್ಯ, ಸೃಷ್ಠಿಕರ್ತ ಅಷ್ಟಾದರೂ ಹಕ್ಕು ಬೇಡವೆ! ಹೀಗೂ ಅನಿಸಬಹುದು. ಕೆಲವರಿಗೆ ಇದು ಕರ್ತವ್ಯ.. ಹಲವರಿಗಿದು ಸಮಾಜ ಪ್ರಕ್ರಿಯೆ ಸತ್ಯ ಯಾವುದೋ ಇರಬೇಕು. ತಮ್ಮ ಹೆಸರನ್ನೂ ಮಕ್ಕಳ ಹೆಸರಿನೊಂದಿಗೆ ಪರಂಪರೆಯಂತೆ ಮುಂದುವರೆಸುವಾಗ ಅದೆಷ್ಟು ದಿನ ಈ ಬಾಲಲೀಲೆಯನ್ನು ಹೊತ್ತು ಸಾಗಬೇಕೋ ಈ ಮಕ್ಕಳು!.
ಕೃತಿ
     ಇದೊಂದು ಶಾಶ್ವತ ರೂಪ. ವಿಶ್ವಾಸದ ವಿಶ್ವ. ಬರಹ, ದನಿ ನೋಟ ರೂಪಗಳು ಬೇರೆ ಇರಬಹುದು. ಜಗತ್ತಿನಲ್ಲಿ ಯಾವುದು ಪೂರ್ಣ ಕೃತಿ ಅಲ್ಲ ಅನಿಸಬಹುದು. ಆದರೆ ಆ ಕ್ಷಣಕ್ಕೆ ಪೂರ್ಣವಾಗಿ ಒಪ್ಪಿಕೊಳ್ಳುತ್ತೇವೆ. ಅದಕ್ಕೆ ನಂಬಿಕೆ, ಸತ್ಯ, ತೃಪ್ತಿ ಎನೆಲ್ಲಾ ಭಾವ ಕೀಲಿಕೈಗಳನ್ನು ರಿಪೇರಿ ಮಾಡಿರುತ್ತೇವೆ. ಹಾಗದ್ರೆ ಅಪೂರ್ಣ ಇರಬಹುದಾದುದು ಅದು ಕೊರತೆ, ನೋವು ಈ ಹೆಸರುಗಳನ್ನು ಪಡೆದಿರಬಹುದು. ಅಯ್ಯೋ! ದೇವರೇ ಅಪೂರ್ಣ. ನಾಸ್ತಿಕ ಜಗತ್ತು ನಾನು ನನ್ನಾಸೆಯೇ ಅಪೂರ್ಣ. ಇದು ಶ್ಲೋಕದಿಂದಲೇ ಅರ್ಥವಾಗಬೇಕು ಎಂದೇನು ಅಲ್ಲ, ಅನಕ್ಷರಸ್ಥನಾಗಿಯೂ ಈ ವಿಚಾರದಲ್ಲಿ ಉತ್ತಮವಾಗಿ ಮಾತನಾಡಬಹುದು.
ಜ್ಞಾನಂ ವಿಜ್ಞಾನಂ  
ಶೋಧನೆಯ ಸರಿಗಮದಲ್ಲಿರುವ ವಿಜ್ಞಾನವೇ ತನ್ನ ಪರಿಧಿಗಳನ್ನು ಬದಲಾವಣೆಯೊಂದಿಗೆ ಒಪ್ಪಿಸುತ್ತಾ, ಒಪ್ಪಿಕೊಳ್ಳುತ್ತಾ ತಾತ್ಕಾಲಿಕ ಸತ್ಯಗಳನ್ನು ಸಮನ್ವಯಗೊಳಿಸುತ್ತಿದೆ. ಶಾಸ್ತ್ರವೆಂಬುದು ಈಗಾಗಲೇ ಗುರಿಮುಟ್ಟಿರುವ ಅಂತಿಮ ಫಲಶೃತಿಯಲ್ಲಿ ನಾನ ವೇಷಗಳಲ್ಲಿ ಜನರಿಗೆ ದರ್ಶನವಾಗುತ್ತಿದೆ. ಶಾಸ್ತ್ರವೂ ಸುಳ್ಳಿನ ಕಂತೆಯೆಂದು ಶಾಸ್ತ್ರಕ್ಕೆ ತಿಳಿದು ದೇವರು, ದೆವ್ವ, ಗೌರವ-ನಂಬಿಕೆಗಳ ಭಯದಲ್ಲೇ ಸಮಾಜವನ್ನು ನಿಯಂತ್ರಿಸುತ್ತಿದೆ. ಇದು ಅಕ್ಷರದ ಕೊರತೆಯಲ್ಲ. ಬಾವಿಯೊಳಗಿನ ಕಪ್ಪೆಗಳ ಗುರುಕುಲ ತಂತ್ರ ! ಹಾಗಾದರೆ ವಿಜ್ಞಾನವನ್ನು ಒಪ್ಪಿಕೊಳ್ಳಬೇಕೆ, ಇಲ್ಲ ಶಾಸ್ತ್ರ ಸಾರುವುದೆಲ್ಲಾ ಸತ್ಯವೇ! ಉತ್ತರ ಹುಡುಕಾಡಿದರೆ ಯೋಚಿಸಬೇಕು ಎಂಬುವವರೆ ಜಾಸ್ತಿ ! ಇವರಿಗೆ ಸಾಮಾನ್ಯವಾಗಿ ಭಯವೇ ಬುನಾದಿ ಇಲ್ಲವೇ ಭದ್ರ.

ಶುಕ್ರವಾರ, ಸೆಪ್ಟೆಂಬರ್ 30, 2016

                        @2

                    ಕನಕದಾಸರ ಮರು ಓದು: ಏಕೆ? ಹೇಗೆ?

ಕನಕ ರೂಪಿಸಿದ ಚಿಂತನೆ ಮತ್ತು ಕರ್ನಾಟಕದ ಪರಂಪರೆಯ ಮುಖಾಮುಖಿಯ ನೆಲೆಗಳು

    ಕರ್ನಾಟಕವೂ ಮೂಲತಃ ಜನಪದ ಪರಂಪರೆಯ ಬೇರಿನಿಂದಲೇ ಉದಿಸಿತು. ಇಲ್ಲಿಯ ಎಲ್ಲಾ ಸಾಂಸ್ಕøತಿಕ ಆಯಾಮಗಳು ಇಂತಹ ಪಲ್ಲಟಗಳಿಂದಲೇ ಉತ್ತರ ಕಂಡುಕೊಳ್ಳುವ ಪ್ರಯತ್ನಗಳನ್ನು ಮಾಡುತ್ತಿವೆ. ಸಾಹಿತ್ಯದ ಅಭಿವ್ಯಕ್ತಿಯ ಕ್ರಮವೇ ವಿಭಿನ್ನವಾದುದು. ಇದೇ ದೃಷ್ಠಿಯಿಂದ ಸಂಗೀತ ವಾಙ್ಮಯವು ಶಾಸ್ತ್ರೀಯದಂತೆ ಜನಪದರ ನೆಲೆಯಲ್ಲೂ ಮೂಡಿ ಸಾಹಿತ್ಯವನ್ನು ಉದುಗಿಸಿಕೊಂಡಿತ್ತು. ಅಂತಹ ಸಾಹಿತ್ಯದ ಎಳೆಗಳು ವಚನ, ಕೀರ್ತನೆ, ಹಾಡುಗಳ ರೂಪದಲ್ಲಿ ಪ್ರಸರಣಗೊಂಡು ಅದು ನೀತಿಯೋಪಾದಿಯಲ್ಲಿ ಶಕ್ತಿ ಹಾಗೂ ಭಕ್ತಿಯ ಸಮನ್ವಯ ಮಾರ್ಗವನ್ನು ಕುರಿತು ಇಪ್ಪತ್ತನೆಯ ಶತಮಾನದವರೆಗೂ ಒಂದು ಪರಂಪರೆಯ ರೀತಿ ಬೆಳೆದು ತುಂಬಾ ವಿಸ್ತಾರವಾದ ಆಯಾಮವನ್ನು ಪಡೆಯುತ್ತಿವೆ.
    15ನೇ ಶತಮಾನದಲ್ಲಿ ರಚನೆಗೊಂಡಿರಬಹುದೆಂಬ ಸಾಹಿತ್ಯದ ಆಧಾರದ ಮೇಲೆ ಕನಕದಾಸರ ಕಾಲಮಾನ ತನ್ನ ಪೂರ್ವಕ್ಕೂ ಹಾಗೂ ಪ್ರಸ್ತುತತೆಗೂ ಒಂದು ಪರಂಪರೆಯನ್ನೇ ರೂಪಿಸಿದೆ ಎಂದು ಅಭಿಪ್ರಾಯಪಡಬಹುದು. ಇಲ್ಲಿ ಪರಂಪರೆಯನ್ನು ಬೇರೆ ಬೇರೆ ರೀತಿಯಲ್ಲಿ ನೋಡುವುದಾದರೂ ಕನಕದಾಸರ ಸಾಹಿತ್ಯ ಮತ್ತು ಅವರ ಆದಿಕೇಶವನ ಭಕ್ತಿ ಎಲ್ಲದಕ್ಕೂ ಅನ್ವಯಗೊಳ್ಳುತ್ತಲೇ ಬೆಳೆವಣಿಗೆ ಸಾಧಿಸುತ್ತಾ ಮತ್ತೆ ಮರು ಓದುವಿಗೆ ದಕ್ಕುತ್ತಿರುವುದು “ಶ್ರೇಷ್ಠ ಸತ್ವ” ಎಂದೇ ಕಾಣುತ್ತದೆ.
    ಕನಕದಾಸರ ಸಾಹಿತ್ಯದ ಮೇಲೆ ಉಂಟಾಗಿರುವ ಅಧ್ಯಯನಗಳನ್ನು ಗಮನಿಸಿದರೆ ಸಂಶೋಧನೆಗಳು, ಗಣಕಾನ್ವಯ, ದರ್ಶನ ಸಂಪುಟಗಳು ಇವೆಲ್ಲಾ ಶಿಸ್ತು ಬದ್ಧವಾಗಿಯೇ ನಡೆದಿವೆ. ಇನ್ನೂ ಕೀರ್ತನೆಗಳಂತೂ ಸಾಮಾನ್ಯರ ಹಾಡುಗಳಾಗಿ ಬೆಳೆದು ಬಂದು ದೇವರ ಸನ್ನಿಧಿಯ ಡಾಳಗಳಾಗಿವೆ ಎಂದು ಬಾಹ್ಯ ನೋಟದಲ್ಲಿ ಗಮನಿಸಬಹುದು. ಆದರೆ ದಾಸಪರಂಪರೆಯ ಸಾಹಿತ್ಯ ನಿರ್ಮಿತಿಯು ವಚನ ಸಾಹಿತ್ಯದಷ್ಟು ಜನರ ಬಳಿ ಸಾಗದೇ ಇರುವುದು ಅದರ ದೌರ್ಬಲ್ಯವಲ್ಲ, ಮಿತಿಯು ಅಲ್ಲ, ಅದು ಹೊಂದಿರುವ ಭಕ್ತಿ ಮಾರ್ಗ. ಸಾಹಿತ್ಯದಲ್ಲಿ ಯಾವುದೇ ಪರಂಪರೆ ಮುಖ್ಯವಾಗಿ ನಿಲ್ಲದೇ ಅಮುಖ್ಯವಾಗಿ ಮರೆಯಾಗದೇ ವಿಶ್ವಮಾನವತ್ವಕ್ಕೆ ಸ್ವಯಂ ಏಣಿಗಳನ್ನು ನಿರ್ಮಿಸುವ ಪ್ರಕ್ರಿಯೆಯೇ ನಿಜವಾದ ಬೆಳವಣಿಗೆ. ಇದೊಂದು ಕನ್ನಡ ಸಾಹಿತ್ಯದ ವೈಶಿಷ್ಟ್ಯ.
    ‘ರಾಮಧಾನ್ಯ ಚರಿತೆ’ ಕನಕದಾಸರ ಕಥನರೂಪದ ಕಾವ್ಯ. ಇದು ತನ್ನೊಡಲ ಕಥೆಯಿಂದಲೇ ಪ್ರಸಿದ್ಧಿ. ಕನ್ನಡ ಕಾವ್ಯ ಪರಂಪರೆಯಲ್ಲಿ ಎರಡು ಮುಖ್ಯ ನೆಲೆಗಳಿವೆ. ಲಿಖಿತ ಹಾಗೂ ಮೌಖಿಕ ಕಾವ್ಯವೆಂಬ ಗ್ರಹಿಕೆಗಳು. ಈ ಎರಡೂ ನೆಲೆಯಲ್ಲಿ ಕನಕದಾಸರು ಸಾಹಿತ್ಯವನ್ನು ಗಮನಿಸಿದ್ದಾರೆ. ಕನ್ನಡ ಪ್ರಾದೇಶಿಕ ಸಂಸ್ಕøತಿಯ ಆವರಣದಲ್ಲಿ ಸಂಸ್ಕøತ ಕಾವ್ಯ, ಛಂದಸ್ಸುಗಳ ಸಮೇತವಾಗಿ ದೀರ್ಘ ಜ್ಞಾನವನ್ನು ಪಡೆದ ಈ ಕವಿಗೆ ಜನಸಾಮಾನ್ಯರ ಅರಿವಿನ ಕಾರ್ಯವೇ ಬಹುಮುಖ್ಯ ನೆಲೆಯಾಗಿತ್ತು. ಆದ್ದರಿಂದಲೇ ಕೀರ್ತನೆಗಳು, ನಳಚರಿತೆ, ಮೋಹನ ತರಂಗಿಣಿ, ಹರಿಭಕ್ತಿಸಾರದಂತಹ ಕೃತಿಗಳು ರಚನೆಗೊಂಡವು.
    ದಾಸ ಪರಂಪರೆಯ ಹಿನ್ನಲೆಯಲ್ಲಿ ಇವರೊಬ್ಬ ಕೀರ್ತನಾಕಾರರು. ಕವಿದೃಷ್ಟಿಕೋನದಲ್ಲಿ ಲಕ್ಷ್ಮೀಶ, ಕುಮಾರವ್ಯಾಸರ ಸಾಲಿನಲ್ಲಿ ಧೀಮಂತವಾಗಿ ಕೂರುವ ಕನ್ನಡ ಪಂಡಿತ. ಇವರ ಸಾಹಿತ್ಯ ಶೈಲಿಯಲ್ಲಿ ಜನಪದ ತತ್ವದ ಸತ್ವವನ್ನು ಪಡೆದು ತನ್ನ ಪ್ರಾದೇಶಿಕ ವಸ್ತು, ಪ್ರಾಣಿ, ಪಕ್ಷಿ, ಸಸ್ಯ, ಧಾನ್ಯ ಸಂಪತ್ತು ಸಾಹಿತ್ಯಕ್ಕೆ ಪ್ರಮುಖ ವಸ್ತುಗಳಾಗಿ ವಚನಕಾರರ ಮೌಖಿಕ ನೆಲೆಗಟ್ಟಿನ ಆಶಯವನ್ನು ಒಂದು ಪರಂಪರೆಯಂತೆ ಮುಂದುವರೆಸಿರುವುದನ್ನು ಕಾಣಬಹುದು. ರಾಮಧಾನ್ಯ ಚರಿತೆಯಂತಹ ಕೃತಿಯು 158 ಪದ್ಯಗಳ ಭಾಮಿನಿ ಷಟ್ಪದಿಯ ರಚನೆಯನ್ನು ಹೊಂದಿದ್ದು, ಸರಳ ನಿರೂಪಣೆ, ಪಾರಾಯಣ ಪರಿಕಲ್ಪನೆಗೂ ದಕ್ಕುವ ಜನಮಾನಸ ಅಂತರ್ವಿಕ್ಷಣೆಯನ್ನು ಹೊಂದಿದೆ. ಕಥೆ ಹೇಳುವ ಜನಪದ ಸೊಗಡು ದೇಶಿಕಾವ್ಯಗಳಾದ ರಾಮಾಯಣ ಹಾಗೂ ಮಹಾಭಾರತದೊಳಗೆ ನಿಂತು ಶಾಂಡಿಲ್ಯಮುನಿಯು ಧರ್ಮ, ನೀತಿಯ ಅಭಿಪ್ರೇರಕನಾದ ಯುಧಿಷ್ಟಿರನಿಗೆ ಕನ್ನಡ ಮಣ್ಣಿನ ಕಥೆ ಹೇಳುವ ಕೌಶಲವೇ ನಮ್ಮ ಸಾಹಿತ್ಯದಲ್ಲಿ ಮೊದಲ ಪ್ರಯತ್ನವೆನ್ನಬಹುದು.     ಕಥೆಯೆಂದರೆ ರಾಗಿ ಭತ್ತಗಳೆಂಬ ಮೇಲು ಕೀಳಿನ ಬರಿ ವಿಡಂಬನೆಯ ವೈರುಧ್ಯದ ಸೊಗಸಷ್ಟೇ ಅಲ್ಲ. ಈ ಕಥೆಯೊಳಗೆ ಒಂದು ವಿಶ್ವ ಮಾನವತ್ವ ಇದೆ. ‘ಯಾರೂ ಮುಖ್ಯರಲ್ಲ; ಯಾರೂ ಅಮುಖ್ಯರಲ್ಲ’ ಎಂಬ ಅಂಶವನ್ನು ಸಹಜವಾಗಿಯೇ ನಿರೂಪಿಸುವ ಕಾವ್ಯವಿದು. ವರ್ಣಭೇದದೊಳಗೆ ಹುಟ್ಟಿಕೊಳ್ಳುವ ಪ್ರಶ್ನೆ ವರ್ಗಭೇದದೊಳಗೆ ಇಂದು ಐಕ್ಯವಾಗುವ ಪ್ರಸ್ತುತ ಸಮಾಜದ ಕನ್ನಡಿಗೆ ಇದೊಂದು ಮಾದರಿ ಕಥೆ. ಉಳ್ಳವರು ಶಿವಾಲಯವ ಮಾಡುವರು ನಾನೇನ ಮಾಡಲಿ ಬಡವನಯ್ಯ ಎಂಬ ಬಡತನದಲ್ಲಿ ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಶವಯ್ಯ ಎಂಬ ವಚನಕಾರರ ತಾತ್ವಿಕ ಶ್ರೇಷ್ಠತೆಯು ಪ್ರಸ್ತುತ ಬಡತನವನ್ನು ಪ್ರೀತಿಸುವ ಮದ್ಯಮ ಹಾಗೂ ಕೆಳವರ್ಗಗಳಿಗೆ ಈ ಕಥೆ ಶಕ್ತಿಯನ್ನು ತುಂಬುತ್ತದೆ. ಅದಕ್ಕೆ ರಾಘವನಲ್ಲೇ ರಾಗಿಯ ಮಹಿಮೆಯ ಹೊಗಳಿಕೆಯೊಳಗೆ ಉತ್ತರವಿದೆ. “ಮರುಳೆ ಬಾರೈ ವ್ರಿಹಿಯೆ ಮನದಲಿ ಕೊರಗಿ ಚಿಂತಿಸಲೇಕೆ ನಾವೀ ನರೆದಲಗನತಿಶಯವ ಮಾಡಿದೆವೆಂದು ಕನಲಿದೆಯ ಧರೆಗೆ ಹೊದ್ದಿದ ಕ್ಷಾಮಗಾಲದಿ ಕರುಣದಿಂ ನಡೆತಂದು ಲೋಕವ ಹೊರೆವನದು ಕಾರಣವೆ ಪತಿಕರಿಸಿದೆವು ಕೇಳೆಂದ” ಎಂಬ ರಾಮನ ಸಮನ್ವಯ ತೀರ್ಪು ಲೋಕದ ರಕ್ಷಣೆಯ ಬಹುಮುಖ್ಯ ಜವಬ್ದಾರಿ ಯಾರಮೇಲಿದೆ ಅಗತ್ಯವಾಗಿ ನಾವು ಯಾರನ್ನು ಪ್ರೀತಿಯಿಂದ ಕಾಣಬೇಕೆಂಬ ಸಾರ್ವಕಾಲಿಕ ಸತ್ಯ ಮುಖ್ಯವೆನಿಸುತ್ತದೆ.
    ಇಲ್ಲಿ ಕನಕದಾಸರು ಕಾವ್ಯದ ವಸ್ತು, ಛಂದೋ ಬಂಧ, ಕಥಾ ಹಂದರದ ಜವಾಬ್ದಾರಿಯ ಜೊತೆಗೆ ದೇಸಿ ಚಿಂತನೆಯನ್ನು, ಕನ್ನಡ ಸಂಸ್ಕøತಿಯೊಳಗೆ ಕಟ್ಟಿಕೊಡುವ ಕ್ರಿಯೆ ವಿಶೇಷವಾದುದು. ಆದ್ದರಿಂದಲೇ ಕಿ.ರಂ ನಾಗರಾಜ ಅವರ ಅವರ ರಂಗ ಕಲ್ಪನೆಗೆ ಕಾಲಜ್ಞಾನಿ ಕನಕನಂತೆ ಕಂಡಿರುವುದು. ಈ ದೃಷ್ಟಿ ಕೋನದಲ್ಲಿ ಒಂದು ಪೀಠಿಕೆಯಾಗಿ ಗಮನಿಸುತ್ತಾ ಈಗಾಗಲೇ ನಡೆದಿರುವ ಸಂಶೋಧನೋಪಾದಿಯ ಹಲವು ಬರಹಗಳ ಅಧ್ಯಯನದೊಂದಿಗೆ, ಪ್ರಸ್ತುತ ಸಮಾಜದ ವೈರುಧ್ಯಗಳ ಗ್ರಹಿಕೆಯೊಂದಿಗೆ ರಾಮಧಾನ್ಯ ಚರಿತೆ ಹೊಸ ಓದುವಿಗೆ ದಕ್ಕುತ್ತದೆ. ಧಾನ್ಯಗಳ ಚರಿತ್ರೆ ಒದಗಿಸುವ ಮನುಷ್ಯ ಸಂಬಂಧಿ ಬಿಕ್ಕಟ್ಟಿನ ಪ್ರಶ್ನೆಗಳಿಗಿಂತ ಸತ್ವಶಾಲಿ ಎಂಬ ದರ್ಶನದೊಳಗಿನ ತೀರ್ಪು ಸಮಾಜದ ಎಲ್ಲರಿಗೂ ದಕ್ಕಬೇಕಾದುದು ರಾಮ ಇಲ್ಲಿ ನೆಪ. ಅದೊಂದು ಪಾತ್ರ ಅದನ್ನು ಯಾರೂ ಬೇಕಾದರೂ ನಿರ್ವಹಿಸಬಹುದು. ಏಕೆಂದರೆ ರಾಮನ ಚಿಂತನೆ ಸಮರ್ಥರು ಸದಾ ಗೆಲ್ಲುವರು ಅದಕ್ಕೆ ಸೂಕ್ತ ನೋಟದ ಪರೀಕ್ಷೆ ಮುಖ್ಯ, ಇಲ್ಲಿ ಯಾರನ್ನು ಯಾರೂ ಅಳೆಯಲಾಗದು ಆದ್ದರಿಂದ ಗೌತಮನ ತ್ರಿಮೂರ್ತಿ ನ್ಯಾಯಕ್ಕಿಂತ ಸೆರೆ ಸತ್ಯದಲಿ ಸತ್ವ ಹುಡುಕುವ ಜಾಣ್ಮೆ ಮುಖ್ಯವೆನಿಸುತ್ತದೆ. ಇಲ್ಲಿ ಸತ್ವವೆಂದರೆ ಯಾವುದು ದೀರ್ಘವಾಗಿ, ಶ್ರೇಷ್ಠತೆಯೊಂದಿಗೆ ಇಲ್ಲಿ ಉಳಿಯಬಲ್ಲುದೋ ಅದುವೇ ಆಗಿದೆ. ಡಿ.ವಿ.ಜಿ ಅವರ ಸಾಹಿತ್ಯ ಶಕ್ತಿಯ ಬಹುಮುಖ್ಯ ಚಿಂತನೆ ಇದೇ ಆಗಿದೆ. ಕನಕದಾಸರ ಎಲ್ಲವನೂ ಒಂದರೊಳಗೆ ಅಳವಡಿಸಿಕೊಳುವ ದೇಸಿನೆಲೆಯ ಕಲ್ಪನೆ ಪ್ರಸ್ತುತ ಕೆಲವು ಅರ್ಥಗಳಿಗೆ ಅಖಂಡವೆಂಬ ವಿಶ್ವನೆಲೆ ಸೂಕ್ಷ್ಮವಾಗಿ ಕಾಣಬಹುದು.
                                                                                                                                     -ರವಿಶಂಕರ ಎ.ಕೆ

1. ಕನ್ನಡವೆಂಬ ಹಕ್ಕುಗಾರಿಕೆ

ಒಂದು ಭಾಷೆಯ ಮೇಲೂ ಹಕ್ಕುಗಾರಿಕೆ ಇದೆಯೇ? ಭಾಷೆ ಭಾವನೆಗಳಿಗೆ ಸಂಬಂಧಿಸಿದ ಮಾಧ್ಯಮವೆಂದರೆ ಹಕ್ಕುಗಾರಿಕೆ ಯಾರದು ನೀವೇ ಯೋಚಿಸಿ.

        ಇತ್ತೀಚಿಗೆ ಮಕ್ಕಳ ಮಾತಿನಲ್ಲಿ ಭವಿಷ್ಯದ ಭಯ ಕಾಡುತ್ತಿದೆ. ‘ಕನ್ನಡ ಮಾತಾಡಿದಕ್ಕಾಗಿ ದಂಡ ಕಟ್ಟಿದ ನಮ್ಮ ಖಾಸಗಿ ಶಾಲೆಯ ಮಕ್ಕಳು, ನಮ್ಮ ಶಾಲಾ ಆವರಣ ಪೂರ್ತಿ ಕನ್ನಡ ಮಾತನಾಡುವುದನ್ನು ನಿಷೇಧಿಸಲಾಗಿದೆ ಎನ್ನುವ ಮಕ್ಕಳ ನುಡಿಗಳು, ನಮ್ಮ ಶಾಲೆ ಕನ್ನಡ ವಿಷಯವೇ ಇಲ್ಲ ಆದ್ದರಿಂದ ಊರಿಗೆ ಬಂದಾಗ ಮಾತ್ರ ಕನ್ನಡ ಮಾತನಾಡಬೇಕಿದೆ ಎನ್ನುವ ಮಕ್ಕಳು ಇವರೆಲ್ಲಾ ನಮ್ಮ ಮುಂದೆ ಸಾಕಷ್ಟು ಪ್ರಶ್ನೆಗಳನ್ನು ಇಡುತ್ತಿದ್ದಾರೆ. ಎಕೆ ಈ ದನಿ ನಮಗೆ ಕೇಳುತ್ತಿಲ್ಲ.
           ಸ್ವಲ್ಪ ಯೋಚಿಸೋಣ! ನಿಜವಾಗಿಯೂ ಕರ್ನಾಟಕದಲ್ಲಿ ಕನ್ನಡವೆಂಬ ಹಕ್ಕುಗಾರಿಕೆ ಕಿತ್ತುಕೊಂಡವರಾರು? ಇದುವರೆಗೂ ಯಾವುದಾದರೂ ಮಗುವಿನಿಂದ ಈ ಕನ್ನಡ ಭಾಷೆ ಸರಿಯಿಲ್ಲ ಈ ಭಾಷೆಯನ್ನು ಶಾಲಾ ವಾತಾವರಣದಿಂದಲೇ ತೆಗೆದು ಹಾಕಿ ಎಂಬ ದನಿ, ಕೂಗು, ಕೊರಗು ಈ ಕರ್ನಾಟಕದಲ್ಲಿ ಮೂಡಿದೆಯೇ. ಇಲ್ಲವಲ್ಲ. ಈ ಹಕ್ಕುಗಾರಿಕೆ ಕಿತ್ತುಕೊಂಡ ಹೀನ ಸಂಸ್ಕøತಿ ಮೊದಲು ಹುಟ್ಟಿದ್ದು ನಮ್ಮ ಶಿಕ್ಷಣ ಕಲಿತವರಿಂದಲೇ. ಅದರಲ್ಲೂ ಶಿಕ್ಷಕರಿಂದಲೇ. ಎರಡನೇ ವರ್ಗ ಎಡಬಿಡಂಗಿ ಪೋಷಕರದು. ಇವರು ಮಕ್ಕಳನ್ನು ದುಡ್ಡುಬಿಡುವ ಮರವನ್ನಾಗಿ ಮಾಡುವ ಕನಸು ಕಂಡವರು. ಮಕ್ಕಳಿಗೂ ಒಂದು ಮನಸ್ಸಿದೆ ಎಂದು ಈ ಎರಡೂ ವರ್ಗಕ್ಕೂ ಯಾವತ್ತಿಗೂ ತಿಳಿಯುವುದಿಲ್ಲ ಏಕೆಂದರೆ ಇವರದು ರಿಪೇರಿಯಾಗದ ಮನಸು.
ಇನ್ನು ಸಮಾಜಕ್ಕೆ ಬಂದರೆ ಇದೊಂದು ಮಾರುಕಟ್ಟೆ ಇಲ್ಲಿ ಭಾಷೆಗೆ ಬೆಲೆ ಇರುವಷ್ಟೂ ಬೇರೆಲ್ಲೂ ಇರಲಾರದು. ನೂರು ವರ್ಷದ ಹಿಂದೆ ಕನ್ನಡ ಇಲ್ಲಿ ಹೇಗಿತ್ತೋ ಈಗಲೂ ಹಾಗೆ ಇದೆ. ಇದು ಎಲ್ಲರಿಗೂ ತಿಳಿದ ವಿಚಾರ. ಆದರೆ ಇಲ್ಲಿ ಕೆಲವರು ಕನ್ನಡ ಉಳಿಸುವ ಮುಖವಾಡ ಹಾಕಿಕೊಂಡು ಕುಷ್ಠರೋಗಿಗಳಂತೆ ತಿರುಗುತ್ತಿದ್ದಾರೆ. ಇವರಿಗೆ ಸಂಘವಿದೆ, ಬಳಗವಿದೆ, ಉಕ್ಕಿ ಹರಿಯುವ ಕನ್ನಡ ಪ್ರೀತಿಯೂ ಇದೆ ಎಂದು ನಂಬಿಸಲಾಗಿದೆ. ಇವರು ಹೋರಾಟ, ಅರಿವು, ಜಾತ್ರೆ ಸಾಕಷ್ಟು ಮಾರ್ಗಗಳಿವೆ. ಅಷ್ಟೇ ಯಾಕೆ ಕಷ್ಟ ಪಟ್ಟು ಬರೆದು ನಿದ್ರಿಸುತ್ತಿರುವ ಸಾಹಿತಿಗಳೂ ಇದ್ದಾರೆ ಇವರು ಉಪ್ಪಿನಕಾಯಿಯಂತೆ. ಎನಾದರೂ ಮಾಡಿ ಸರ್ಕಾರದ ಹಣ ದೋಚಲು ಕಾಸಿಗೊಂದರ ಕಜ್ಜಾಯವಿದ್ದಂತೆ. (ಸಾಹಿತಿಗಳೇ ನಿಮ್ಮ ತೂಕದ ಭಾಷಣಕ್ಕೆ ಸಮಾಜ ಎಂದಿಗೂ ಪಾಕವಾಗಲ್ಲಿಲ್ಲ ಸ್ವಾಮಿ ಏಕೆಂದರೆ ಸಮಾಜಕ್ಕೂ ನಿಮಗೂ ಬಸ್ಸು ರೈಲಿನ ಸಂಬಂಧ). ಇವರ ಈ ಹುಚ್ಚುಗಾರಿಕೆಗೆ ಅರ್ಥವಿದೆ, ಸಾಕಷ್ಟು ಹಣವೂ ದೊರಕುತ್ತಿದೆ ಆದರೆ ಇವರ ಪ್ರಯೋಗ ಆರೋಗ್ಯವಂತನ ಮೇಲೆ ಅತಿಯಾದ ಕಾಳಜಿಯಿದ್ದಂತೆ. ನಿಜವಾಗಿ ಸಮಸ್ಯೆಯಿರುವುದು ಔಪಚಾರಿಕ ಕ್ಷೇತ್ರದಲ್ಲೇ. ನಿಮ್ಮ ಪ್ರಯೋಗ ಮೊದಲು ಪ್ರಯೋಗಗೊಳ್ಳಬೇಕಾದುದು ಶಾಲೆಗಳ ಮೇಲೆ. ಹೀಗೆ ಚಿಂತಿಸಿದರೆ ಹಲವು ಕ್ಷೇತ್ರಗಳು ಜೊತೆಯಾಗುತ್ತವೆ.
              ಕಿರು ಚಿಂತನೆಯ ಕೊನೆಯಲ್ಲಿ ಕನ್ನಡ ಬೋಧಿಸುವವರ ಗಮನಿಸೋಣ! (ಸರ್ಕಾರಿ  ಬಡವರ ಬಂಧುಗಳನ್ನು ಇಲ್ಲಿ ಪರಿಗಣಿಸಲಾಗದು) ಇವರು ಆಹಾರದಲ್ಲಿ ತಳ ಒತ್ತಿದ, ಸೀದು ಕಮಟಾದ ಇಲ್ಲವೇ ಆಟಕ್ಕುಂಟು ಲೆಕ್ಕಕ್ಕೆ ಇದ್ದೂ ಇಲ್ಲದ ವಿಧೂಷಕರು(ಕ್ಷಮಿಸಿ ಕಾಳಜಿಯಲ್ಲಿ ಸ್ವಲ್ಪ ಹೊಗಳಿಕೆ ಜಾಸ್ತಿಯಾಗಿರಬಹುದು). ಕನ್ನಡ ವಿಷಯವೆಂದರೆ ವೇಳಾಪಟ್ಟಿ ತಯಾರಕರು ಮೊದಲೇ ನಿರ್ಧರಿಸಿ ಬಿಟ್ಟಿರುತ್ತಾರೆ. ಮಕ್ಕಳಿಗೆ ಕೆಲವು ಬೋಧನೆಯ ನಂತರ ಬೇಸರಕ್ಕೆ ಮೀಸಲಾದ ವಿಷವೇ ಕನ್ನಡವೆಂದು. ಹೌದು ವೇಳೆವಾಳಿಗಳೇ ನಾವೂ ವಿಧೂಷಕರೇ ನಿಮ್ಮ ಅರೆ ಹುಚ್ಚು ಬೋಧನೆಯಿಂದ ನೊಂದ ಮಕ್ಕಳ ಹೃದಯ ಅರಳಿಸುತ್ತೇವೆ ಜೀವ ಚೈತನ್ಯ ನೀಡುತ್ತೇವೆ. ಏಕೆಂದರೆ ಈ ಮಣ್ಣಿನ ಭಾಷೆಗೆ ಈ ಮಕ್ಕಳ ಹೃದಯವಿಹಾರದ ದಾರಿ ಗೊತ್ತು. ಈಗ ಹೇಳಿ ಕನ್ನಡವೆಂಬ ಹಕ್ಕುಗಾರಿಕೆ ಯಾರದೆಂದು..!

ನುಡಿಸು ತಾಯೆ

ಲಿಪಿಮನದಿ ತನಿ ದನಿಯ
ಈ ಕಾಯವ ನಾ ಅರ್ಪಿತ ತಾಯಿ

ಆತ್ಮಾಂತರಾಳದ ಎಲ್ಲಾ ಪರಿಶ್ರದ್ಧೆ
ಪದಪುಂಜವೇ ನಾ ಪುಷ್ಪಾರ್ಪಿತ ತಾಯಿ
ಸಾಲು ಸಂಗಮದೊಳು ಎನ್ನ
ನಿರತೆ ನಿರ್ಮಲದಿ ರಂಜಿಸು ತಾಯಿ
ಆತ್ಮದ ಪದ ತಂತಿಯ ನಾದದಲಿ
ಸರ್ವಮನ ಮಿಡಿತದಲಿ ಎನ್ನ ನುಡಿಸು ತಾಯಿ
ಸಹೃದಯಗಳ ನಂದಾನಂದದ
ಅಂತರಾಳದ ಬೆಳಕ ನಂದಿಸದಿರು ತಾಯಿ
ಕರಕೂಡಿಸಿ ಲಿಪಿಯಾರಿಸಿ ನಿನ್ನಲಿ
ಮೊರೆಯಿಡುತ ಬರೆವೆ ರಕ್ಷಿಸು ತಾಯಿ.